<p><strong>ಬೆಂಗಳೂರು: </strong>ನಗರದ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡು ಪಾಳ್ಯ ತಂಡದ ಐದು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.<br /> <br /> ವೆಂಕಟೇಶ. ದೊಡ್ಡಹನುಮ, ನಲ್ಲತಿಮ್ಮ, ಮುನಿಕೃಷ್ಣ ಮತ್ತು ಲಕ್ಷ್ಮಿ ಶಿಕ್ಷೆಗೆ ಗುರಿಯಾದವರು. ಈ ಐದೂ ಮಂದಿಗೆ ಈ ಹಿಂದೆ ಹದಿನಾಲ್ಕು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಾಗಿದ್ದು ಇದು ಹದಿನೈದನೇ ಪ್ರಕರಣವಾಗಿದೆ.<br /> <br /> 2000ನೇ ಸಾಲಿನ ಅಕ್ಟೋಬರ್ 22ರಂದು ಮಂಜುಳಾ ಎಂಬುವವರನ್ನು ನಗರದ ಡಿವಿಜಿ ರಸ್ತೆಯ ಅವರ ಮನೆಯಲ್ಲೇ ಈ ತಂಡ ಕೊಲೆ ಮಾಡಿತ್ತು. ಮಂಜುಳಾ ಅವರ ಪತಿ ವಾಯು ವಿಹಾರಕ್ಕೆಂದು ಲಾಲ್ಬಾಗ್ಗೆ ಹೋದ ನಂತರ ಮನೆಯೊಳಗೆ ನುಗ್ಗಿದ್ದ ತಂಡ ಭೀಕರವಾಗಿ ಅವರನ್ನು ಹತ್ಯೆಗೈದಿತ್ತು, ಈ ಬಗ್ಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.<br /> <br /> ಬೆಂಗಳೂರು ನಗರ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಮೂವತ್ತಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಈ ತಂಡ ಭಾಗಿಯಾಗಿತ್ತು. ಒಂಟಿ ಮಹಿಳೆಯರು ಇರುವ ಮನೆಯನ್ನು ದುಷ್ಕರ್ಮಿಗಳು ಗುರುತಿಸುತ್ತಿದ್ದರು. ಮನೆಯೊಳಗೆ ನುಗ್ಗುತ್ತಿದ್ದ ಅವರು ಕತ್ತು ಸೀಳಿ ಕೊಲೆ ಮಾಡಿ ಆಭರಣ, ಹಣ ದೋಚುತ್ತಿದ್ದರು. ಈ ತಂಡದ ಕೃತ್ಯವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು.<br /> <br /> <strong>ಅಪಘಾತ-ಶಿಕ್ಷೆ: </strong>ಪಾದಚಾರಿಗೆ ಕಾರು ಡಿಕ್ಕಿ ಹೊಡೆಸಿ ಆತನ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ನಗರದ ಐದನೇ ಸಂಚಾರಿ ಏಳು ತಿಂಗಳ ಕಠಿಣ ಶಿಕ್ಷೆ ಮತ್ತು ಏಳು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ. <br /> <br /> ಜಯಮಹಲ್ ಬಡಾವಣೆಯ ನಿವಾಸಿ ರಘುನಾಥ್ ಪಾಸ್ವಾನ್ ಶಿಕ್ಷೆಗೆ ಗುರಿಯಾದವರು. ಹಲಸೂರುಗೇಟ್ ಪೊಲೀಸ್ ಠಾಣೆ ಸಮೀಪ 2009, ನ 17ರಂದು ರಸ್ತೆ ದಾಟುತ್ತಿದ್ದ ಹನುಮಂತಪ್ಪ ಅವರಿಗೆ ಕಾರು ಡಿಕ್ಕಿ ಹೊಡೆಸಿದ್ದ ರಘುನಾಥ್ ವಾಹನ ಸಮೇತ ಪರಾರಿಯಾಗಿದ್ದರು. ಆರೋಪಿಯನ್ನು ಪತ್ತೆ ಮಾಡಿದ್ದ ಹಲಸೂರುಗೇಟ್ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಪ್ರಭಾಕರ ಬಯರಿ ಅವರು ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನಗರದ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡು ಪಾಳ್ಯ ತಂಡದ ಐದು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಆದೇಶ ನೀಡಿದೆ.<br /> <br /> ವೆಂಕಟೇಶ. ದೊಡ್ಡಹನುಮ, ನಲ್ಲತಿಮ್ಮ, ಮುನಿಕೃಷ್ಣ ಮತ್ತು ಲಕ್ಷ್ಮಿ ಶಿಕ್ಷೆಗೆ ಗುರಿಯಾದವರು. ಈ ಐದೂ ಮಂದಿಗೆ ಈ ಹಿಂದೆ ಹದಿನಾಲ್ಕು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಯಾಗಿದ್ದು ಇದು ಹದಿನೈದನೇ ಪ್ರಕರಣವಾಗಿದೆ.<br /> <br /> 2000ನೇ ಸಾಲಿನ ಅಕ್ಟೋಬರ್ 22ರಂದು ಮಂಜುಳಾ ಎಂಬುವವರನ್ನು ನಗರದ ಡಿವಿಜಿ ರಸ್ತೆಯ ಅವರ ಮನೆಯಲ್ಲೇ ಈ ತಂಡ ಕೊಲೆ ಮಾಡಿತ್ತು. ಮಂಜುಳಾ ಅವರ ಪತಿ ವಾಯು ವಿಹಾರಕ್ಕೆಂದು ಲಾಲ್ಬಾಗ್ಗೆ ಹೋದ ನಂತರ ಮನೆಯೊಳಗೆ ನುಗ್ಗಿದ್ದ ತಂಡ ಭೀಕರವಾಗಿ ಅವರನ್ನು ಹತ್ಯೆಗೈದಿತ್ತು, ಈ ಬಗ್ಗೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.<br /> <br /> ಬೆಂಗಳೂರು ನಗರ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಮೂವತ್ತಕ್ಕೂ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಈ ತಂಡ ಭಾಗಿಯಾಗಿತ್ತು. ಒಂಟಿ ಮಹಿಳೆಯರು ಇರುವ ಮನೆಯನ್ನು ದುಷ್ಕರ್ಮಿಗಳು ಗುರುತಿಸುತ್ತಿದ್ದರು. ಮನೆಯೊಳಗೆ ನುಗ್ಗುತ್ತಿದ್ದ ಅವರು ಕತ್ತು ಸೀಳಿ ಕೊಲೆ ಮಾಡಿ ಆಭರಣ, ಹಣ ದೋಚುತ್ತಿದ್ದರು. ಈ ತಂಡದ ಕೃತ್ಯವನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು.<br /> <br /> <strong>ಅಪಘಾತ-ಶಿಕ್ಷೆ: </strong>ಪಾದಚಾರಿಗೆ ಕಾರು ಡಿಕ್ಕಿ ಹೊಡೆಸಿ ಆತನ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ನಗರದ ಐದನೇ ಸಂಚಾರಿ ಏಳು ತಿಂಗಳ ಕಠಿಣ ಶಿಕ್ಷೆ ಮತ್ತು ಏಳು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ. <br /> <br /> ಜಯಮಹಲ್ ಬಡಾವಣೆಯ ನಿವಾಸಿ ರಘುನಾಥ್ ಪಾಸ್ವಾನ್ ಶಿಕ್ಷೆಗೆ ಗುರಿಯಾದವರು. ಹಲಸೂರುಗೇಟ್ ಪೊಲೀಸ್ ಠಾಣೆ ಸಮೀಪ 2009, ನ 17ರಂದು ರಸ್ತೆ ದಾಟುತ್ತಿದ್ದ ಹನುಮಂತಪ್ಪ ಅವರಿಗೆ ಕಾರು ಡಿಕ್ಕಿ ಹೊಡೆಸಿದ್ದ ರಘುನಾಥ್ ವಾಹನ ಸಮೇತ ಪರಾರಿಯಾಗಿದ್ದರು. ಆರೋಪಿಯನ್ನು ಪತ್ತೆ ಮಾಡಿದ್ದ ಹಲಸೂರುಗೇಟ್ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಪ್ರಭಾಕರ ಬಯರಿ ಅವರು ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>