<p><strong>ಬೆಂಗಳೂರು: </strong>ಇಎಸ್ಐ ವ್ಯಾಪ್ತಿಗೊಳಪಡುವ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ಭಾಗ ಅಥವಾ ಯಾವುದೇ ಸಮಯದಲ್ಲಿ ಸೂಕ್ತ ವೈದ್ಯಕೀಯ ಕಲ್ಪಿಸುವಂತಹ `ಪಂಚದೀಪ್~ ಕಾರ್ಯಕ್ರಮದಡಿ ದತ್ತಾಂಶವನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಇಎಸ್ಐಸಿ ಮಹಾನಿರ್ದೇಶಕ ಡಾ.ಸಿ.ಎಸ್. ಕೇದಾರ್ ಶನಿವಾರ ಇಲ್ಲಿ ಹೇಳಿದರು.<br /> <br /> ಅಖಿಲ ಭಾರತ ಇಎಸ್ಐಸಿ ಅಧಿಕಾರಿಗಳ ಸಂಘಟನೆ ಹಮ್ಮಿಕೊಂಡಿದ್ದ `ಇಎಸ್ಐಸಿ ಬೆಳವಣಿಗೆಗೆ ಪಾರದರ್ಶಕ ದೂರದರ್ಶಿತ್ವ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕಹೀ ಬಿ ಕಬಿ ಭೀ~ ಎಂಬ ಘೋಷಣೆಯಡಿ ವಿಮಾ ವ್ಯಾಪ್ತಿಗೆ ಒಳಪಡುವ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ಇಎಸ್ಐಸಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ~ ಎಂದು ಅವರು ಹೇಳಿದರು.<br /> <br /> `ಪಂಚದೀಪ್~ ಯೋಜನೆಯಡಿ ವಿಮಾ ವ್ಯಾಪ್ತಿಗೊಳಪಡುವ ಕಾರ್ಮಿಕರುಮತ್ತು ಅವರ ಕುಟುಂಬ ಸದಸ್ಯರ ಮಾಹಿತಿಯನ್ನು `ವಿಪ್ರೊ~ ಕಂಪೆನಿಯ ಮೂಲಕ ಗಣಕೀಕರಣಗೊಳಿಸಲಾಗುತ್ತಿದೆ. ಅರ್ಹ ಎಲ್ಲ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುತ್ತದೆ.ಈ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ಮತ್ತು ಕುಟುಂಬ ಸದಸ್ಯರಿಗೆ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡದೆ ಇಎಸ್ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.<br /> <br /> ಸುಮಾರು 1.6 ಕೋಟಿ ಕಾರ್ಮಿಕರು ಹಾಗೂ 6.2 ಕೋಟಿ ಅವರ ಕುಟುಂಬ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ 160 ಇಎಸ್ಐ ಹಾಗೂ 1600 ಡಿಸ್ಪೆನ್ಸರಿಗಳಲ್ಲಿ ಈ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.<br /> <br /> ಈ ವಿಶಿಷ್ಟ ಗುರುತಿನ ಚೀಟಿಯಿಂದ ಕಾರ್ಮಿಕ, ಅವರ ಕುಟುಂಬ ಸದಸ್ಯರ ಮಾಹಿತಿ, ವಿಮಾ ಮೊತ್ತ ಸೇರಿದಂತೆ ಇತರೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ಕಾರ್ಮಿಕ ದೇಶದ ಯಾವುದೇ ಭಾಗದಲ್ಲಿ ಅಕಾಲಿಕ ಕಾಯಿಲೆಗೆ ತುತ್ತಾದರೂ ಅಲ್ಲಿಯೇ ಕಾರ್ಡ್ `ಸ್ವೈಪ್~ ಮಾಡಿ ಸ್ಥಳೀಯ ಇಎಸ್ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.<br /> <br /> <strong>ಆಧಾರ್ಗಿಂತ ದೊಡ್ಡ ಯೋಜನೆ:</strong> ಕೇಂದ್ರ ಸರ್ಕಾರ ಪ್ರಾರಂಭಿಸಿರುವ `ಆಧಾರ್~ ವಿಶಿಷ್ಟ ಗುರುತಿನ ಚೀಟಿ ಯೋಜನೆಗಿಂತ `ಪಂಚದೀಪ್~ನ ಯೋಜನೆ ದೊಡ್ಡದು. ಏಕೆಂದರೆ `ಆಧಾರ್~ನಲ್ಲಿ ಒಮ್ಮೆ ಮಾಹಿತಿ ಸಂಗ್ರಹಿಸುವ ಕೆಲಸ ಮುಗಿದಲ್ಲಿ ಪ್ರಕ್ರಿಯೆ ಮುಗಿದಂತೆ. ಆದರೆ `ಪಂಚದೀಪ್~ನಲ್ಲಿ ಕಾರ್ಮಿಕ ಚಿಕಿತ್ಸೆ ಪಡೆದಾಗಲೆಲ್ಲಾ ಮಾಹಿತಿಯನ್ನು `ಅಪ್ಡೇಟ್ ಮಾಡಬೇಕಾಗುತ್ತದೆ.ಇದೊಂದು ನಿರಂತರ ಪ್ರಕ್ರಿಯೆ ಯಾ ಗಿರುವುದರಿಂದ `ಆಧಾರ್~ಗಿಂತ ದೊಡ್ಡ ಯೋಜನೆ ಎನ್ನಬಹುದು ಎಂದರು.<br /> <br /> ವಿಮಾ ಸೌಲಭ್ಯ ಹೊಂದಿರುವ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮೊದಲು ಕಡೆಗಣಿಸಲ್ಪಟ್ಟಿದ್ದ ಇಎಸ್ಐ ಆಸ್ಪತ್ರೆಗಳಿಗೆ ಇದೀಗ ಸರ್ಕಾರ ಕೂಡ ಅಗತ್ಯ ನೆರವು ನೀಡುತ್ತಿದೆ ಎಂದರು.<br /> <br /> ಕಳೆದ ಮೂರು ವರ್ಷಗಳಿಂದ ಇಎಸ್ಐ ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ. 2012ರ ಮಾರ್ಚ್ 15ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಕೇದಾರ್ ತಿಳಿಸಿದರು.<br /> <br /> ವಿಮಾ ವ್ಯಾಪ್ತಿಗೊಳಪಟ್ಟ 90 ಲಕ್ಷ ಮಂದಿ ಕಾರ್ಮಿಕರಿಗೆ ಈಗಾಗಲೇ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.<br /> <br /> ಇಎಸ್ಐಸಿ ಸದಸ್ಯರಾದ ಚಂದ್ರಕಾಂತ್ ಬಿ. ಖೈರೆ, ರಾಮ್ಕಿಶೋರ್ ತ್ರಿಪಾಠಿ, ಚಂದ್ರಪ್ರಕಾಶ್ ಸಿಂಗ್ ಮತ್ತಿತರರು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಇಎಸ್ಐ ವ್ಯಾಪ್ತಿಗೊಳಪಡುವ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ಭಾಗ ಅಥವಾ ಯಾವುದೇ ಸಮಯದಲ್ಲಿ ಸೂಕ್ತ ವೈದ್ಯಕೀಯ ಕಲ್ಪಿಸುವಂತಹ `ಪಂಚದೀಪ್~ ಕಾರ್ಯಕ್ರಮದಡಿ ದತ್ತಾಂಶವನ್ನು ಗಣಕೀಕರಣಗೊಳಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಇಎಸ್ಐಸಿ ಮಹಾನಿರ್ದೇಶಕ ಡಾ.ಸಿ.ಎಸ್. ಕೇದಾರ್ ಶನಿವಾರ ಇಲ್ಲಿ ಹೇಳಿದರು.<br /> <br /> ಅಖಿಲ ಭಾರತ ಇಎಸ್ಐಸಿ ಅಧಿಕಾರಿಗಳ ಸಂಘಟನೆ ಹಮ್ಮಿಕೊಂಡಿದ್ದ `ಇಎಸ್ಐಸಿ ಬೆಳವಣಿಗೆಗೆ ಪಾರದರ್ಶಕ ದೂರದರ್ಶಿತ್ವ~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಕಹೀ ಬಿ ಕಬಿ ಭೀ~ ಎಂಬ ಘೋಷಣೆಯಡಿ ವಿಮಾ ವ್ಯಾಪ್ತಿಗೆ ಒಳಪಡುವ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶದ ಯಾವುದೇ ಇಎಸ್ಐಸಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ~ ಎಂದು ಅವರು ಹೇಳಿದರು.<br /> <br /> `ಪಂಚದೀಪ್~ ಯೋಜನೆಯಡಿ ವಿಮಾ ವ್ಯಾಪ್ತಿಗೊಳಪಡುವ ಕಾರ್ಮಿಕರುಮತ್ತು ಅವರ ಕುಟುಂಬ ಸದಸ್ಯರ ಮಾಹಿತಿಯನ್ನು `ವಿಪ್ರೊ~ ಕಂಪೆನಿಯ ಮೂಲಕ ಗಣಕೀಕರಣಗೊಳಿಸಲಾಗುತ್ತಿದೆ. ಅರ್ಹ ಎಲ್ಲ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುತ್ತದೆ.ಈ ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ಮತ್ತು ಕುಟುಂಬ ಸದಸ್ಯರಿಗೆ ಯಾವುದೇ ರೀತಿಯಲ್ಲಿ ತಾರತಮ್ಯ ಮಾಡದೆ ಇಎಸ್ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.<br /> <br /> ಸುಮಾರು 1.6 ಕೋಟಿ ಕಾರ್ಮಿಕರು ಹಾಗೂ 6.2 ಕೋಟಿ ಅವರ ಕುಟುಂಬ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ 160 ಇಎಸ್ಐ ಹಾಗೂ 1600 ಡಿಸ್ಪೆನ್ಸರಿಗಳಲ್ಲಿ ಈ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.<br /> <br /> ಈ ವಿಶಿಷ್ಟ ಗುರುತಿನ ಚೀಟಿಯಿಂದ ಕಾರ್ಮಿಕ, ಅವರ ಕುಟುಂಬ ಸದಸ್ಯರ ಮಾಹಿತಿ, ವಿಮಾ ಮೊತ್ತ ಸೇರಿದಂತೆ ಇತರೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಒಂದು ವೇಳೆ ಕಾರ್ಮಿಕ ದೇಶದ ಯಾವುದೇ ಭಾಗದಲ್ಲಿ ಅಕಾಲಿಕ ಕಾಯಿಲೆಗೆ ತುತ್ತಾದರೂ ಅಲ್ಲಿಯೇ ಕಾರ್ಡ್ `ಸ್ವೈಪ್~ ಮಾಡಿ ಸ್ಥಳೀಯ ಇಎಸ್ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದರು.<br /> <br /> <strong>ಆಧಾರ್ಗಿಂತ ದೊಡ್ಡ ಯೋಜನೆ:</strong> ಕೇಂದ್ರ ಸರ್ಕಾರ ಪ್ರಾರಂಭಿಸಿರುವ `ಆಧಾರ್~ ವಿಶಿಷ್ಟ ಗುರುತಿನ ಚೀಟಿ ಯೋಜನೆಗಿಂತ `ಪಂಚದೀಪ್~ನ ಯೋಜನೆ ದೊಡ್ಡದು. ಏಕೆಂದರೆ `ಆಧಾರ್~ನಲ್ಲಿ ಒಮ್ಮೆ ಮಾಹಿತಿ ಸಂಗ್ರಹಿಸುವ ಕೆಲಸ ಮುಗಿದಲ್ಲಿ ಪ್ರಕ್ರಿಯೆ ಮುಗಿದಂತೆ. ಆದರೆ `ಪಂಚದೀಪ್~ನಲ್ಲಿ ಕಾರ್ಮಿಕ ಚಿಕಿತ್ಸೆ ಪಡೆದಾಗಲೆಲ್ಲಾ ಮಾಹಿತಿಯನ್ನು `ಅಪ್ಡೇಟ್ ಮಾಡಬೇಕಾಗುತ್ತದೆ.ಇದೊಂದು ನಿರಂತರ ಪ್ರಕ್ರಿಯೆ ಯಾ ಗಿರುವುದರಿಂದ `ಆಧಾರ್~ಗಿಂತ ದೊಡ್ಡ ಯೋಜನೆ ಎನ್ನಬಹುದು ಎಂದರು.<br /> <br /> ವಿಮಾ ಸೌಲಭ್ಯ ಹೊಂದಿರುವ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಮೊದಲು ಕಡೆಗಣಿಸಲ್ಪಟ್ಟಿದ್ದ ಇಎಸ್ಐ ಆಸ್ಪತ್ರೆಗಳಿಗೆ ಇದೀಗ ಸರ್ಕಾರ ಕೂಡ ಅಗತ್ಯ ನೆರವು ನೀಡುತ್ತಿದೆ ಎಂದರು.<br /> <br /> ಕಳೆದ ಮೂರು ವರ್ಷಗಳಿಂದ ಇಎಸ್ಐ ಆಸ್ಪತ್ರೆಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ. 2012ರ ಮಾರ್ಚ್ 15ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಕೇದಾರ್ ತಿಳಿಸಿದರು.<br /> <br /> ವಿಮಾ ವ್ಯಾಪ್ತಿಗೊಳಪಟ್ಟ 90 ಲಕ್ಷ ಮಂದಿ ಕಾರ್ಮಿಕರಿಗೆ ಈಗಾಗಲೇ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಇದು ನಿರಂತರ ಪ್ರಕ್ರಿಯೆ ಎಂದು ಹೇಳಿದರು.<br /> <br /> ಇಎಸ್ಐಸಿ ಸದಸ್ಯರಾದ ಚಂದ್ರಕಾಂತ್ ಬಿ. ಖೈರೆ, ರಾಮ್ಕಿಶೋರ್ ತ್ರಿಪಾಠಿ, ಚಂದ್ರಪ್ರಕಾಶ್ ಸಿಂಗ್ ಮತ್ತಿತರರು ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>