<p><strong>ನವದೆಹಲಿ(ಪಿಟಿಐ):</strong> ನೈಸರ್ಗಿಕ ಅನಿಲ ದರವನ್ನು ಎರಡು ಪಟ್ಟು ಹೆಚ್ಚಿಸಿರುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದ್ದಾರೆ.<br /> <br /> ರಿಲಯನ್ಸ್ ಇಂಡಸ್ಟ್ರೀಸ್ಗೆ ಸಂಬಂಧಿಸಿದ ಕೆಲವು ಅನಿಲ ಉತ್ಪನ್ನಗಳ ದರವನ್ನಾದರೂ ಈ ಮೊದಲಿನ ಮಟ್ಟದಲ್ಲೇ ಉಳಿಸಿಕೊಳ್ಳಬೇಕು ಎಂಬ ಕೇಂದ್ರ ಹಣಕಾಸು ಸಚಿವಾಲಯದ ಒತ್ತಾಯವನ್ನೂ ಸಚಿವ ಮೊಯಿಲಿ ಪರಿಗಣಿಸಿಲ್ಲ.<br /> <br /> ನೈಸರ್ಗಿಕ ಅನಿಲ ದರ ದುಪ್ಪಟ್ಟು ಏರಿಕೆಗೆ ಸಂಬಂಧಿಸಿದಂತೆ `ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ'(ಸಿಸಿಇಎ) ತೆಗೆದುಕೊಂಡಿರುವ ನಿರ್ಧಾರ ಕುರಿತು ಸರ್ಕಾರ ಮತ್ತೆ ಆಲೋಚಿಸುವ, ಪರಾಮರ್ಶೆ ನಡೆಸುವ ಯಾವುದೇ ಸಾಧ್ಯತೆ ಇಲ್ಲ.</p>.<p>ಈ ವಿಚಾರದಲ್ಲಿ ಅಸ್ಪಷ್ಟತೆಯಾಗಲೀ, ಗೊಂದಲವಾಗಲೀ ಇಲ್ಲ. ನಮ್ಮ ನಿಲುವು ಬಹಳ ಸ್ಪಷ್ಟವಿದೆ. ಮತ್ತೆ ಈ ಕುರಿತು ವ್ಯಾಖ್ಯಾನಿಸುವ ಅಗತ್ಯವೂ ಇಲ್ಲ ಎಂದು ಸಚಿವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.<br /> <br /> ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರ ಏರಿಕೆ ವಿಚಾರವನ್ನು ಜೂನ್ 27ರಂದು ಪ್ರಕಟಿಸಿತು. ಇದು, ಮುಕೇಶ್ ಅಂಬಾನಿ ಒಡೆತನದ `ರಿಲಯನ್ಸ್ ಇಂಡಸ್ಟ್ರೀಸ್ ಲಿ.' ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂಬ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.<br /> <br /> ಈ ಕುರಿತು ಎರಡು ಪತ್ರಿಕೆಗಳಲ್ಲಿನ ಸಂಪಾದಕೀಯಗಳತ್ತ ಗಮನ ಸೆಳೆದಿದ್ದ ಕೇಂದ್ರ ಹಣಕಾಸು ಸಚಿವಾಲಯ, ಜುಲೈ 4ರಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರವನ್ನೂ ಬರೆದಿತ್ತು. ಸಂಪಾದಕೀಯದಲ್ಲಿನ ಸಲಹೆಗಳನ್ನು ಪರಿಗಣಿಸಬಹುದಾಗಿದೆ ಎಂದೂ ಹೇಳಿತ್ತು.<br /> <br /> `ಹಣಕಾಸು ಸಚಿವಾಲಯ ತನ್ನ ಪತ್ರದೊಂದಿಗೆ ಎರಡು ಪತ್ರಿಕೆಗಳ ಸಂಪಾದಕೀಯಗಳನ್ನು ಲಗತ್ತಿಸಿದ್ದುದು ನಿಜ. ಆದರೆ, ಅವನ್ನು ಹಣಕಾಸು ಸಚಿವಾಲಯದ ವಸ್ತುನಿಷ್ಟ ಅಭಿಪ್ರಾಯ ಎಂದೋ, ತಕರಾರು ಎಂದೋ ಪರಿಗಣಿಸಲು ಸಾಧ್ಯವಿಲ್ಲ' ಎಂದು ಮೊಯಿಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ):</strong> ನೈಸರ್ಗಿಕ ಅನಿಲ ದರವನ್ನು ಎರಡು ಪಟ್ಟು ಹೆಚ್ಚಿಸಿರುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದ್ದಾರೆ.<br /> <br /> ರಿಲಯನ್ಸ್ ಇಂಡಸ್ಟ್ರೀಸ್ಗೆ ಸಂಬಂಧಿಸಿದ ಕೆಲವು ಅನಿಲ ಉತ್ಪನ್ನಗಳ ದರವನ್ನಾದರೂ ಈ ಮೊದಲಿನ ಮಟ್ಟದಲ್ಲೇ ಉಳಿಸಿಕೊಳ್ಳಬೇಕು ಎಂಬ ಕೇಂದ್ರ ಹಣಕಾಸು ಸಚಿವಾಲಯದ ಒತ್ತಾಯವನ್ನೂ ಸಚಿವ ಮೊಯಿಲಿ ಪರಿಗಣಿಸಿಲ್ಲ.<br /> <br /> ನೈಸರ್ಗಿಕ ಅನಿಲ ದರ ದುಪ್ಪಟ್ಟು ಏರಿಕೆಗೆ ಸಂಬಂಧಿಸಿದಂತೆ `ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ'(ಸಿಸಿಇಎ) ತೆಗೆದುಕೊಂಡಿರುವ ನಿರ್ಧಾರ ಕುರಿತು ಸರ್ಕಾರ ಮತ್ತೆ ಆಲೋಚಿಸುವ, ಪರಾಮರ್ಶೆ ನಡೆಸುವ ಯಾವುದೇ ಸಾಧ್ಯತೆ ಇಲ್ಲ.</p>.<p>ಈ ವಿಚಾರದಲ್ಲಿ ಅಸ್ಪಷ್ಟತೆಯಾಗಲೀ, ಗೊಂದಲವಾಗಲೀ ಇಲ್ಲ. ನಮ್ಮ ನಿಲುವು ಬಹಳ ಸ್ಪಷ್ಟವಿದೆ. ಮತ್ತೆ ಈ ಕುರಿತು ವ್ಯಾಖ್ಯಾನಿಸುವ ಅಗತ್ಯವೂ ಇಲ್ಲ ಎಂದು ಸಚಿವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.<br /> <br /> ಕೇಂದ್ರ ಸರ್ಕಾರ ನೈಸರ್ಗಿಕ ಅನಿಲ ದರ ಏರಿಕೆ ವಿಚಾರವನ್ನು ಜೂನ್ 27ರಂದು ಪ್ರಕಟಿಸಿತು. ಇದು, ಮುಕೇಶ್ ಅಂಬಾನಿ ಒಡೆತನದ `ರಿಲಯನ್ಸ್ ಇಂಡಸ್ಟ್ರೀಸ್ ಲಿ.' ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ದರದಲ್ಲಿ ಭಾರಿ ಏರಿಕೆ ಮಾಡಲಾಗಿದೆ ಎಂಬ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.<br /> <br /> ಈ ಕುರಿತು ಎರಡು ಪತ್ರಿಕೆಗಳಲ್ಲಿನ ಸಂಪಾದಕೀಯಗಳತ್ತ ಗಮನ ಸೆಳೆದಿದ್ದ ಕೇಂದ್ರ ಹಣಕಾಸು ಸಚಿವಾಲಯ, ಜುಲೈ 4ರಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರವನ್ನೂ ಬರೆದಿತ್ತು. ಸಂಪಾದಕೀಯದಲ್ಲಿನ ಸಲಹೆಗಳನ್ನು ಪರಿಗಣಿಸಬಹುದಾಗಿದೆ ಎಂದೂ ಹೇಳಿತ್ತು.<br /> <br /> `ಹಣಕಾಸು ಸಚಿವಾಲಯ ತನ್ನ ಪತ್ರದೊಂದಿಗೆ ಎರಡು ಪತ್ರಿಕೆಗಳ ಸಂಪಾದಕೀಯಗಳನ್ನು ಲಗತ್ತಿಸಿದ್ದುದು ನಿಜ. ಆದರೆ, ಅವನ್ನು ಹಣಕಾಸು ಸಚಿವಾಲಯದ ವಸ್ತುನಿಷ್ಟ ಅಭಿಪ್ರಾಯ ಎಂದೋ, ತಕರಾರು ಎಂದೋ ಪರಿಗಣಿಸಲು ಸಾಧ್ಯವಿಲ್ಲ' ಎಂದು ಮೊಯಿಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>