<p>ಮೈಸೂರು: ದಸರಾ ಕ್ರೀಡಾಕೂಟ ಉದ್ಘಾಟನೆಯಾದ ಸೆಪ್ಟೆಂಬರ್ 30ರಂದು ಅಥ್ಲೀಟ್ಗಳಿಂದ ತುಂಬಿದ್ದ ಚಾಮುಂಡಿ ವಿಹಾರ ಕ್ರೀಡಾಂಗಣ ಸೋಮವಾರ ಮುಕ್ತಾಯ ಸಮಾರಂಭದಂದು ಬಹುತೇಕ ಖಾಲಿಯಾಗಿತ್ತು!<br /> <br /> ಸಮಾರೋಪ ಸಮಾರಂಭದಲ್ಲಿ ಎಲ್ಲ ವಿಭಾಗಗಳ ಆಟಗಾರರನ್ನು ಸೇರಿಸಿದರೆ 300-400 ಜನರೂ ಇರಲಿಲ್ಲ. ಉದ್ಘಾಟನೆ ಸಮಾರಂಭದಲ್ಲಿ ಎಲ್ಲ ವಿಭಾಗಗಳಿಂದ ಬಂದಿದ್ದ ಸುಮಾರು 2500 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಕೂಟಕ್ಕೆ ಕಳೆ ತಂದಿದ್ದರು. <br /> <br /> ಕೆಲಸಗಳ ತೀವ್ರ ಒತ್ತಡದಲ್ಲಿದ್ದ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕಿ ಲಲಿತಮ್ಮ ಕೂಡ ಹೆಚ್ಚು ಮಾತನಾಡಲಿಲ್ಲ. ಸಮಗ್ರ ಪ್ರಶಸ್ತಿ, ವೈಯಕ್ತಿಕ ಪ್ರಶಸ್ತಿ ಮತ್ತು ತಂಡ ವಿಭಾಗದ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.<br /> <br /> ಕೆಲವು ಪ್ರಶಸ್ತಿಗಳನ್ನು ಕೊಡುವಾಗ ಅದರ ವಿಜೇತರೇ ಸ್ಥಳದಲ್ಲಿರಲಿಲ್ಲ. ಇದರಿಂದಾಗಿ ಮೂರು ದಿನಗಳವರೆಗೆ ಒಂಬತ್ತು ದಾಖಲೆಗಳು ಮೂಡಿ ಬಂದ ಕೂಟದ ಸಮಾರೋಪ ಸಮಾರಂಭ ಮಾತ್ರ ಸಪ್ಪೆಯಾಯಿತು. <br /> <br /> ಭಾನುವಾರ ಸಂಜೆಯೇ ಈಜು, ಜಿಮ್ನಾಸ್ಟಿಕ್ಸ್, ವೇಟ್ಲಿಫ್ಟಿಂಗ್, ದೇಹದಾರ್ಢ್ಯ ಸ್ಪರ್ಧೆಗಳು ಮುಗಿದಿದ್ದು, ಬಹುತೇಕ ಆಟಗಾರರು ತಮ್ಮ ಊರುಗಳಿಗೆ ತೆರಳಿದ್ದರು. <br /> <br /> ಉಪಸಮಿತಿ ಅಧ್ಯಕ್ಷ ದಾಸಯ್ಯ, ಯುವಜನ ಸೇವೆ ಮತ್ತುಕ್ರೀಡಾ ಇಲಾಖೆ ಉಪನಿರ್ದೇಶಕ ಬಿ. ಸುರೇಶ್ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ದಸರಾ ಕ್ರೀಡಾಕೂಟ ಉದ್ಘಾಟನೆಯಾದ ಸೆಪ್ಟೆಂಬರ್ 30ರಂದು ಅಥ್ಲೀಟ್ಗಳಿಂದ ತುಂಬಿದ್ದ ಚಾಮುಂಡಿ ವಿಹಾರ ಕ್ರೀಡಾಂಗಣ ಸೋಮವಾರ ಮುಕ್ತಾಯ ಸಮಾರಂಭದಂದು ಬಹುತೇಕ ಖಾಲಿಯಾಗಿತ್ತು!<br /> <br /> ಸಮಾರೋಪ ಸಮಾರಂಭದಲ್ಲಿ ಎಲ್ಲ ವಿಭಾಗಗಳ ಆಟಗಾರರನ್ನು ಸೇರಿಸಿದರೆ 300-400 ಜನರೂ ಇರಲಿಲ್ಲ. ಉದ್ಘಾಟನೆ ಸಮಾರಂಭದಲ್ಲಿ ಎಲ್ಲ ವಿಭಾಗಗಳಿಂದ ಬಂದಿದ್ದ ಸುಮಾರು 2500 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಕೂಟಕ್ಕೆ ಕಳೆ ತಂದಿದ್ದರು. <br /> <br /> ಕೆಲಸಗಳ ತೀವ್ರ ಒತ್ತಡದಲ್ಲಿದ್ದ ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕಿ ಲಲಿತಮ್ಮ ಕೂಡ ಹೆಚ್ಚು ಮಾತನಾಡಲಿಲ್ಲ. ಸಮಗ್ರ ಪ್ರಶಸ್ತಿ, ವೈಯಕ್ತಿಕ ಪ್ರಶಸ್ತಿ ಮತ್ತು ತಂಡ ವಿಭಾಗದ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು.<br /> <br /> ಕೆಲವು ಪ್ರಶಸ್ತಿಗಳನ್ನು ಕೊಡುವಾಗ ಅದರ ವಿಜೇತರೇ ಸ್ಥಳದಲ್ಲಿರಲಿಲ್ಲ. ಇದರಿಂದಾಗಿ ಮೂರು ದಿನಗಳವರೆಗೆ ಒಂಬತ್ತು ದಾಖಲೆಗಳು ಮೂಡಿ ಬಂದ ಕೂಟದ ಸಮಾರೋಪ ಸಮಾರಂಭ ಮಾತ್ರ ಸಪ್ಪೆಯಾಯಿತು. <br /> <br /> ಭಾನುವಾರ ಸಂಜೆಯೇ ಈಜು, ಜಿಮ್ನಾಸ್ಟಿಕ್ಸ್, ವೇಟ್ಲಿಫ್ಟಿಂಗ್, ದೇಹದಾರ್ಢ್ಯ ಸ್ಪರ್ಧೆಗಳು ಮುಗಿದಿದ್ದು, ಬಹುತೇಕ ಆಟಗಾರರು ತಮ್ಮ ಊರುಗಳಿಗೆ ತೆರಳಿದ್ದರು. <br /> <br /> ಉಪಸಮಿತಿ ಅಧ್ಯಕ್ಷ ದಾಸಯ್ಯ, ಯುವಜನ ಸೇವೆ ಮತ್ತುಕ್ರೀಡಾ ಇಲಾಖೆ ಉಪನಿರ್ದೇಶಕ ಬಿ. ಸುರೇಶ್ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>