<p>ಬೆಂಗಳೂರು: ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳು ಕನ್ನಡದಲ್ಲಿ ಬರಲಿವೆ. <br /> <br /> ಡಾ.ಅಂಬೇಡ್ಕರ್ ಅವರ ಸಮಗ್ರ ಬರಹ ಹಾಗೂ ಭಾಷಣಗಳನ್ನು ಕನ್ನಡಕ್ಕೆ ತಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಈಗ ಉಪಾಧ್ಯಾಯ ಅವರ ಕೃತಿಗಳನ್ನು ಹಿಂದಿ ಮತ್ತು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸುತ್ತಿದೆ.</p>.<p><br /> ಇದೇ 9ರಂದು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ದೀನದಯಾಳ್ ಉಪಾಧ್ಯಾಯ ಅವರ ಬರಹಗಳ ಕನ್ನಡ ಅವತರಣಿಕೆ ಮೊದಲ ಐದು ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ.</p>.<p><br /> ಉಪಾಧ್ಯಾಯ ಅವರ ಕೃತಿಗಳನ್ನು ಕನ್ನಡಕ್ಕೆ ತರುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಈ ಕಾರ್ಯಕ್ಕೆ ರೂ 40 ಲಕ್ಷ ಮಂಜೂರಾಗಿತ್ತು. ಅದರಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ಮೊದಲ ಹಂತದಲ್ಲಿ ಐದು ಸಂಪುಟಗಳನ್ನು ಹೊರತರಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ತಿಳಿಸಿದರು.<br /> <br /> ಉಪಾಧ್ಯಾಯರ ಸಮಗ್ರ ಬರಹ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಸುಮಾರು ಹತ್ತು ಸಂಪುಟಗಳಲ್ಲಿ ಇದು ಪ್ರಕಟವಾಗಲಿದೆ. ಜಾರ್ಖಂಡ್ಇಂತಹ ಪ್ರಯತ್ನ ನಡೆದಿದೆ ಎಂದರು.<br /> <br /> ಉಪಾಧ್ಯಾಯ ಅವರ ಚಿಂತನೆಗಳು ಹಾಗೂ ಮಹಾತ್ಮ ಗಾಂಧೀಜಿ, ಜಯಪ್ರಕಾಶ ನಾರಾಯಣ ಅವರ `ಸಂಪೂರ್ಣ ಕ್ರಾಂತಿ~, ರಾಮ ಮನೋಹರ ಲೋಹಿಯಾ, ಕಾರ್ಲ್ ಮಾರ್ಕ್ಸ್ ಚಿಂತನೆಗಳ ಕುರಿತು ನಡೆದಿರುವ ತೌಲನಿಕ ಅಧ್ಯಯನಗಳ ಆಯ್ದ ಬರಹಗಳೂ ಇದರಲ್ಲಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಬರಹಗಳು ಕನ್ನಡದಲ್ಲಿ ಬರಲಿವೆ. <br /> <br /> ಡಾ.ಅಂಬೇಡ್ಕರ್ ಅವರ ಸಮಗ್ರ ಬರಹ ಹಾಗೂ ಭಾಷಣಗಳನ್ನು ಕನ್ನಡಕ್ಕೆ ತಂದಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಈಗ ಉಪಾಧ್ಯಾಯ ಅವರ ಕೃತಿಗಳನ್ನು ಹಿಂದಿ ಮತ್ತು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿ, ಪ್ರಕಟಿಸುತ್ತಿದೆ.</p>.<p><br /> ಇದೇ 9ರಂದು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ದೀನದಯಾಳ್ ಉಪಾಧ್ಯಾಯ ಅವರ ಬರಹಗಳ ಕನ್ನಡ ಅವತರಣಿಕೆ ಮೊದಲ ಐದು ಸಂಪುಟಗಳನ್ನು ಬಿಡುಗಡೆ ಮಾಡಲಿದ್ದಾರೆ.</p>.<p><br /> ಉಪಾಧ್ಯಾಯ ಅವರ ಕೃತಿಗಳನ್ನು ಕನ್ನಡಕ್ಕೆ ತರುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಈ ಕಾರ್ಯಕ್ಕೆ ರೂ 40 ಲಕ್ಷ ಮಂಜೂರಾಗಿತ್ತು. ಅದರಲ್ಲಿ ರೂ 20 ಲಕ್ಷ ವೆಚ್ಚದಲ್ಲಿ ಮೊದಲ ಹಂತದಲ್ಲಿ ಐದು ಸಂಪುಟಗಳನ್ನು ಹೊರತರಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ತಿಳಿಸಿದರು.<br /> <br /> ಉಪಾಧ್ಯಾಯರ ಸಮಗ್ರ ಬರಹ ಕನ್ನಡದಲ್ಲಿ ಪ್ರಕಟವಾಗುತ್ತಿರುವುದು ಇದೇ ಮೊದಲು. ಸುಮಾರು ಹತ್ತು ಸಂಪುಟಗಳಲ್ಲಿ ಇದು ಪ್ರಕಟವಾಗಲಿದೆ. ಜಾರ್ಖಂಡ್ಇಂತಹ ಪ್ರಯತ್ನ ನಡೆದಿದೆ ಎಂದರು.<br /> <br /> ಉಪಾಧ್ಯಾಯ ಅವರ ಚಿಂತನೆಗಳು ಹಾಗೂ ಮಹಾತ್ಮ ಗಾಂಧೀಜಿ, ಜಯಪ್ರಕಾಶ ನಾರಾಯಣ ಅವರ `ಸಂಪೂರ್ಣ ಕ್ರಾಂತಿ~, ರಾಮ ಮನೋಹರ ಲೋಹಿಯಾ, ಕಾರ್ಲ್ ಮಾರ್ಕ್ಸ್ ಚಿಂತನೆಗಳ ಕುರಿತು ನಡೆದಿರುವ ತೌಲನಿಕ ಅಧ್ಯಯನಗಳ ಆಯ್ದ ಬರಹಗಳೂ ಇದರಲ್ಲಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>