<p><strong>ಹೊರನಾಡು (ಕಳಸ): </strong>ಹೊರನಾಡು ಗ್ರಾಮವನ್ನು ಬಲಿಗೆ ಗ್ರಾಮದೊಂದಿಗೆ ಸಂಪರ್ಕಿಸುವ 8 ಕಿ.ಮೀ ರಸ್ತೆ ಕಾಮಗಾರಿ ಕಳೆದ ವರ್ಷವಷ್ಟೇ ಮುಗಿದಿದೆ. ಆದರೆ ಇದೇ ರಸ್ತೆಯ ಆರಂಭದ 2 ಕಿ.ಮೀ ಕಾಮಗಾರಿ ಇದುವರೆಗೂ ನಡೆಯದೆ ಸಂಚಾರಕ್ಕೆ ತೊಡಕುಂಟಾಗಿದೆ.<br /> <br /> ಹೊರನಾಡಿನಿಂದ ಸರ್ಕಾರಿ ಪ್ರೌಢಶಾಲೆ ಬಳಸಿ ಬಲಿಗೆ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ದಶಕದ ಹಿಂದೊಮ್ಮೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಆ ರಸ್ತೆಯೇ ಕೊಚ್ಚಿಹೋಗಿತ್ತು. ಅಂದಿನಿಂದ ಈ ರಸ್ತೆಗೆ ಅನುದಾನವೇ ಬಿಡುಗಡೆ ಆಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.<br /> <br /> ಬಲಿಗೆ ರಸ್ತೆಯನ್ನು ರೂ. 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲಿಂದ ಮೆಣಸಿನಹಾಡ್ಯ ಮೂಲಕ ಹೊರನಾಡು-ಶೃಂಗೇರಿ ಕ್ಷೇತ್ರಗಳ ಸಂಪರ್ಕ ಇದೇ ರಸ್ತೆ ಮೂಲಕ ಸುಲಭ ಆಗುತ್ತದೆ. ಆದರೆ ಆರಂಭದ 2 ಕಿ.ಮೀ ರಸ್ತೆಯನ್ನು ಕಂಡರೆ ಈ ಮಾರ್ಗದಲ್ಲಿ ಯಾವುದೇ ಪ್ರವಾಸಿ ವಾಹನವೂ ಚಲಿಸುವ ಧೈರ್ಯ ಮಾಡುವುದಿಲ್ಲ.<br /> <br /> ರಸ್ತೆ ವಿಸ್ತರಣೆ ಹಾಗೂ ಮರು ಡಾಂಬರೀಕರಣಕ್ಕೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಅದಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿ ಈಗ ಉಳಿದಿರುವುದು ಕೇವಲ ಪ್ರತಿಭಟನೆಯ ಹಾದಿ ಮಾತ್ರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರನಾಡು (ಕಳಸ): </strong>ಹೊರನಾಡು ಗ್ರಾಮವನ್ನು ಬಲಿಗೆ ಗ್ರಾಮದೊಂದಿಗೆ ಸಂಪರ್ಕಿಸುವ 8 ಕಿ.ಮೀ ರಸ್ತೆ ಕಾಮಗಾರಿ ಕಳೆದ ವರ್ಷವಷ್ಟೇ ಮುಗಿದಿದೆ. ಆದರೆ ಇದೇ ರಸ್ತೆಯ ಆರಂಭದ 2 ಕಿ.ಮೀ ಕಾಮಗಾರಿ ಇದುವರೆಗೂ ನಡೆಯದೆ ಸಂಚಾರಕ್ಕೆ ತೊಡಕುಂಟಾಗಿದೆ.<br /> <br /> ಹೊರನಾಡಿನಿಂದ ಸರ್ಕಾರಿ ಪ್ರೌಢಶಾಲೆ ಬಳಸಿ ಬಲಿಗೆ ರಸ್ತೆಯನ್ನು ಸಂಪರ್ಕಿಸುವ ರಸ್ತೆಗೆ ದಶಕದ ಹಿಂದೊಮ್ಮೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಆ ರಸ್ತೆಯೇ ಕೊಚ್ಚಿಹೋಗಿತ್ತು. ಅಂದಿನಿಂದ ಈ ರಸ್ತೆಗೆ ಅನುದಾನವೇ ಬಿಡುಗಡೆ ಆಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.<br /> <br /> ಬಲಿಗೆ ರಸ್ತೆಯನ್ನು ರೂ. 1.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲಿಂದ ಮೆಣಸಿನಹಾಡ್ಯ ಮೂಲಕ ಹೊರನಾಡು-ಶೃಂಗೇರಿ ಕ್ಷೇತ್ರಗಳ ಸಂಪರ್ಕ ಇದೇ ರಸ್ತೆ ಮೂಲಕ ಸುಲಭ ಆಗುತ್ತದೆ. ಆದರೆ ಆರಂಭದ 2 ಕಿ.ಮೀ ರಸ್ತೆಯನ್ನು ಕಂಡರೆ ಈ ಮಾರ್ಗದಲ್ಲಿ ಯಾವುದೇ ಪ್ರವಾಸಿ ವಾಹನವೂ ಚಲಿಸುವ ಧೈರ್ಯ ಮಾಡುವುದಿಲ್ಲ.<br /> <br /> ರಸ್ತೆ ವಿಸ್ತರಣೆ ಹಾಗೂ ಮರು ಡಾಂಬರೀಕರಣಕ್ಕೆ ಅನೇಕ ಬಾರಿ ಅರ್ಜಿ ಸಲ್ಲಿಸಿದ್ದರೂ ಅದಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿ ಈಗ ಉಳಿದಿರುವುದು ಕೇವಲ ಪ್ರತಿಭಟನೆಯ ಹಾದಿ ಮಾತ್ರ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>