<p><strong>ಬಾಗಲಕೋಟೆ:</strong> ನಗರದ ವಾಸವಿ ಚಿತ್ರಮಂದಿರದ ಸಮೀಪ ಇರುವ ಸೆಟಲ್ಮೆಂಟ್ ಕಾಲೊನಿಯಲ್ಲಿರುವ ದಂಡಿನ ದುರ್ಗಾದೇವಿ ಜಾತ್ರೆಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.<br /> <br /> ದಂಡಿನ ದುರ್ಗಾದೇವಿ ಜಾತ್ರೆಯನ್ನು ಈ ಕಾಲೊನಿ ಜನ ಪ್ರತಿವರ್ಷ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಅದರಂತೆ ಈ ವರ್ಷವೂ ಜಾತ್ರಾಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.<br /> <br /> ನಗರದ ದುರ್ಗಾದೇವಿಯ ದೇವಸ್ಥಾನದಿಂದ ಆರಂಭಗೊಂಡ ದೇವಿಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.<br /> <br /> ಜಾತ್ರಾ ಮಹೋತ್ಸವದ ನಿಮಿತ್ತ ದುರ್ಗಾದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳಿಗ್ಗೆ ದುರ್ಗಾದೇವಿಗೆ ವಿವಿಧ ಹೂವುಗಳು ಹಾಗೂ ಸೀರೆಯಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸಾಲು ಸಾಲಾಗಿ ಆಗಮಿಸಿ ದೇವಿಯ ದರ್ಶನ ಪಡೆದು ನೈವೇದ್ಯ ಸಲ್ಲಿಸಿದರು.<br /> <br /> ನಂತರ ಮಧ್ಯಾಹ್ನ 12 ಗಂಟೆಗೆ ದೇವಿಯ ಆವರಣದಲ್ಲಿ ಅರ್ಚಕರಿಬ್ಬರೂ ತಮ್ಮ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವುದನ್ನು ನೋಡಲು ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದುದು ವಿಶೇಷವಾಗಿದೆ.<br /> <br /> ದಂಡಿನ ದುರ್ಗಾದೇವಿ ಅರ್ಚಕರಾದ ಮನ್ನಪ್ಪ ಚವಾಣ್ 2 ಮತ್ತು ಶಿವಾಜಿ ಮನ್ನಪ್ಪ ಚವಾಣ್ 7 ತೆಂಗಿನ ಕಾಯಿಗಳನ್ನು ತಲೆಗೆ ಒಡೆದುಕೊಂಡರು. `ದೇವಿಯ ಆಶೀರ್ವಾದದಿಂದ ಪ್ರತಿವರ್ಷ 20ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಒಡೆದುಕೊಳ್ಳುತ್ತಿದ್ದೆವು. ಈ ಬಾರಿ ವರ್ಷ ಸ್ವಲ್ಪ ದಿನ ಸರಿಯಾಗಿ ಇಲ್ಲದ ಕಾರಣ ಕಡಿಮೆ ಕಾಯಿಗಳನ್ನು ಒಡೆದುಕೊಂಡೆವು' ಎಂದು ಅವರು ತಿಳಿಸಿದರು.<br /> <br /> ಅಣ್ಣಪ್ಪ ಕಾಳೆ, ಸೀಜಾನಿ ಕಾಳೆ, ಶಂಕರ ಪವಾರ, ಅಪ್ಪಣ್ಣ ಚವಾಣ್, ಕುಮಾರ ಪವಾರ ಮತ್ತಿತರರು ಜಾತ್ರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ನಗರದ ವಾಸವಿ ಚಿತ್ರಮಂದಿರದ ಸಮೀಪ ಇರುವ ಸೆಟಲ್ಮೆಂಟ್ ಕಾಲೊನಿಯಲ್ಲಿರುವ ದಂಡಿನ ದುರ್ಗಾದೇವಿ ಜಾತ್ರೆಯನ್ನು ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.<br /> <br /> ದಂಡಿನ ದುರ್ಗಾದೇವಿ ಜಾತ್ರೆಯನ್ನು ಈ ಕಾಲೊನಿ ಜನ ಪ್ರತಿವರ್ಷ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಅದರಂತೆ ಈ ವರ್ಷವೂ ಜಾತ್ರಾಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.<br /> <br /> ನಗರದ ದುರ್ಗಾದೇವಿಯ ದೇವಸ್ಥಾನದಿಂದ ಆರಂಭಗೊಂಡ ದೇವಿಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.<br /> <br /> ಜಾತ್ರಾ ಮಹೋತ್ಸವದ ನಿಮಿತ್ತ ದುರ್ಗಾದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಬೆಳಿಗ್ಗೆ ದುರ್ಗಾದೇವಿಗೆ ವಿವಿಧ ಹೂವುಗಳು ಹಾಗೂ ಸೀರೆಯಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಸಾಲು ಸಾಲಾಗಿ ಆಗಮಿಸಿ ದೇವಿಯ ದರ್ಶನ ಪಡೆದು ನೈವೇದ್ಯ ಸಲ್ಲಿಸಿದರು.<br /> <br /> ನಂತರ ಮಧ್ಯಾಹ್ನ 12 ಗಂಟೆಗೆ ದೇವಿಯ ಆವರಣದಲ್ಲಿ ಅರ್ಚಕರಿಬ್ಬರೂ ತಮ್ಮ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವುದನ್ನು ನೋಡಲು ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದುದು ವಿಶೇಷವಾಗಿದೆ.<br /> <br /> ದಂಡಿನ ದುರ್ಗಾದೇವಿ ಅರ್ಚಕರಾದ ಮನ್ನಪ್ಪ ಚವಾಣ್ 2 ಮತ್ತು ಶಿವಾಜಿ ಮನ್ನಪ್ಪ ಚವಾಣ್ 7 ತೆಂಗಿನ ಕಾಯಿಗಳನ್ನು ತಲೆಗೆ ಒಡೆದುಕೊಂಡರು. `ದೇವಿಯ ಆಶೀರ್ವಾದದಿಂದ ಪ್ರತಿವರ್ಷ 20ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಒಡೆದುಕೊಳ್ಳುತ್ತಿದ್ದೆವು. ಈ ಬಾರಿ ವರ್ಷ ಸ್ವಲ್ಪ ದಿನ ಸರಿಯಾಗಿ ಇಲ್ಲದ ಕಾರಣ ಕಡಿಮೆ ಕಾಯಿಗಳನ್ನು ಒಡೆದುಕೊಂಡೆವು' ಎಂದು ಅವರು ತಿಳಿಸಿದರು.<br /> <br /> ಅಣ್ಣಪ್ಪ ಕಾಳೆ, ಸೀಜಾನಿ ಕಾಳೆ, ಶಂಕರ ಪವಾರ, ಅಪ್ಪಣ್ಣ ಚವಾಣ್, ಕುಮಾರ ಪವಾರ ಮತ್ತಿತರರು ಜಾತ್ರಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>