<p><strong>ಜಮ್ಮು (ಪಿಟಿಐ): </strong>ದೆಹಲಿಯ ಹೈಕೋರ್ಟ್ ಹತ್ತಿರ ನಡೆದ ಬಾಂಬ್ ಸ್ಫೋಟಕ್ಕೆ ತಾನೆ ಹೊಣೆ ಎಂದು ಹೇಳಿಕೊಂಡು ಹುಜಿ (ಹರ್ಕತ್ -ಉಲ್- ಜಿಹಾದಿ) ಸಂಘಟನೆಯಿಂದ ಮಾಧ್ಯಮಗಳ ಕಚೇರಿಗೆಳಿಗೆ ಬಂದ ಇ- ಮೇಲ್ ಜಮ್ಮು ಕಾಶ್ಮೀರದ ಕಿಷ್ಟಾವರ್ ಜಿಲ್ಲೆಯಿಂದ ಬಂದಿದ್ದು ಎಂದು ತನಿಖಾಧಿಕಾರಿಗಳು ಗುರುವಾರ ಪತ್ತೆ ಹಚ್ಚಿದ್ದಾರೆ.</p>.<p>ದೆಹಲಿಯ ಹೈಕೋರ್ಟ್ ಬಳಿ ಬುಧವಾರ ಬೆಳಿಗ್ಗೆ ನಡೆದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದರು. ಗುರುವಾರ ಇನ್ನೊಬ್ಬರು ಮೃತಪಟ್ಟು ಮೃತರ ಸಂಖ್ಯೆ 12ಕ್ಕೆ ಏರಿದೆ. ಸ್ಫೋಟದಲ್ಲಿ ಗಾಯಗೊಂವರಲ್ಲಿ ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.<br /> <br /> ಬುಧವಾರದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿ ಹೈ ಕೋರ್ಟ್ ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಗುರುವಾರ ಕೋರ್ಟ್ ನಲ್ಲಿ ಎಂದಿನಂತೆ ಕಲಾಪಗಳು ನಡೆಯುತ್ತಿದೆ.</p>.<p>ಈ ನಡುವೆ ಸ್ಫೋಟ ನಡೆದ ಮರುದಿನ ಗುರುವಾರ ಬೆಳಿಗ್ಗೆ ಗೃಹ ಸಚಿವ ಚಿದಂಬರಂ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ), ಬೇಹುಗಾರಿಕಾ ದಳ (ಐಬಿ) ಮತ್ತು ಸಂಶೋಧನ ಮತ್ತು ವಿಶ್ಲೇಸಣಾ ಘಟಕ (ಆರ್ ಎ ಡಬ್ಲ್ಯು)ದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಷ್ಟ್ರೀಯ ಭದ್ರತೆಯ ಕುರಿತು ಚರ್ಚೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು (ಪಿಟಿಐ): </strong>ದೆಹಲಿಯ ಹೈಕೋರ್ಟ್ ಹತ್ತಿರ ನಡೆದ ಬಾಂಬ್ ಸ್ಫೋಟಕ್ಕೆ ತಾನೆ ಹೊಣೆ ಎಂದು ಹೇಳಿಕೊಂಡು ಹುಜಿ (ಹರ್ಕತ್ -ಉಲ್- ಜಿಹಾದಿ) ಸಂಘಟನೆಯಿಂದ ಮಾಧ್ಯಮಗಳ ಕಚೇರಿಗೆಳಿಗೆ ಬಂದ ಇ- ಮೇಲ್ ಜಮ್ಮು ಕಾಶ್ಮೀರದ ಕಿಷ್ಟಾವರ್ ಜಿಲ್ಲೆಯಿಂದ ಬಂದಿದ್ದು ಎಂದು ತನಿಖಾಧಿಕಾರಿಗಳು ಗುರುವಾರ ಪತ್ತೆ ಹಚ್ಚಿದ್ದಾರೆ.</p>.<p>ದೆಹಲಿಯ ಹೈಕೋರ್ಟ್ ಬಳಿ ಬುಧವಾರ ಬೆಳಿಗ್ಗೆ ನಡೆದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ 11 ಮಂದಿ ಮೃತಪಟ್ಟಿದ್ದರು. ಗುರುವಾರ ಇನ್ನೊಬ್ಬರು ಮೃತಪಟ್ಟು ಮೃತರ ಸಂಖ್ಯೆ 12ಕ್ಕೆ ಏರಿದೆ. ಸ್ಫೋಟದಲ್ಲಿ ಗಾಯಗೊಂವರಲ್ಲಿ ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.<br /> <br /> ಬುಧವಾರದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿ ಹೈ ಕೋರ್ಟ್ ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಗುರುವಾರ ಕೋರ್ಟ್ ನಲ್ಲಿ ಎಂದಿನಂತೆ ಕಲಾಪಗಳು ನಡೆಯುತ್ತಿದೆ.</p>.<p>ಈ ನಡುವೆ ಸ್ಫೋಟ ನಡೆದ ಮರುದಿನ ಗುರುವಾರ ಬೆಳಿಗ್ಗೆ ಗೃಹ ಸಚಿವ ಚಿದಂಬರಂ ಅವರು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ), ಬೇಹುಗಾರಿಕಾ ದಳ (ಐಬಿ) ಮತ್ತು ಸಂಶೋಧನ ಮತ್ತು ವಿಶ್ಲೇಸಣಾ ಘಟಕ (ಆರ್ ಎ ಡಬ್ಲ್ಯು)ದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಷ್ಟ್ರೀಯ ಭದ್ರತೆಯ ಕುರಿತು ಚರ್ಚೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>