<p><strong>ಹೊಳೆನರಸೀಪುರ: </strong>ಕರಾಟೆ, ಜೂಡೋ, ಬಾಕ್ಸಿಂಗ್, ಕುಸ್ತಿ ಮುಂತಾದ ಸಾಹಸ ಕಲೆಗಳನ್ನು ಗೂಂಡಾಗಿರಿಗೆ ಬಳಸದೆ ದೇಶ ರಕ್ಷಣೆ ಹಾಗೂ ಮಾನಪ್ರಾಣ ರಕ್ಷಣೆಗೆ ಬಳಸಿಕೊಂಡು ದೇಶಸೇವೆಗೆ ತೊಡಗಿಸಿಕೊಳ್ಳಬೇಕು ಎಂದು ಎಸ್.ಎಲ್.ಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೊ.ಸು. ರಮೇಶ್ ಸಲಹೆ ನೀಡಿದರು.<br /> <br /> ಪಟ್ಟಣದ ಗೋಜುಖಾನ್ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆದು ಕೊಳ್ಳೆಗಾಲದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಕರಾಟೆಪಟುಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.<br /> <br /> ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಶ್ಮಿತಾಗೆ 2 ಚಿನ್ನ, 1 ಬೆಳ್ಳಿ, ತೇಜಸ್ಗೆ 2 ಚಿನ್ನ, ಸೌಜನ್ಯಾಗೆ 2 ಬೆಳ್ಳಿ, 1 ಕಂಚು, ವಿಭಾಗೆ 1 ಬೆಳ್ಳಿ, 1 ಕಂಚು, ಮನೀಶ್ಗೆ 2 ಕಂಚು, ಪವನ್ಗೆ 2 ಕಂಚು, ಹೇಮಶ್ರೀಗೆ 1 ಬೆಳ್ಳಿ ಪದಕ ಲಭಿಸಿದೆ ಎಂದು ವಿವರಿಸಿದರು.<br /> ಸಹ ಪ್ರಾಧ್ಯಾಪಕ ಪುಟ್ಟಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ ಬಾ.ರಾ. ಸುಬ್ಬರಾಯ, ಚಂದ್ರಕುಮಾರ್, ಕುಮುದಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ: </strong>ಕರಾಟೆ, ಜೂಡೋ, ಬಾಕ್ಸಿಂಗ್, ಕುಸ್ತಿ ಮುಂತಾದ ಸಾಹಸ ಕಲೆಗಳನ್ನು ಗೂಂಡಾಗಿರಿಗೆ ಬಳಸದೆ ದೇಶ ರಕ್ಷಣೆ ಹಾಗೂ ಮಾನಪ್ರಾಣ ರಕ್ಷಣೆಗೆ ಬಳಸಿಕೊಂಡು ದೇಶಸೇವೆಗೆ ತೊಡಗಿಸಿಕೊಳ್ಳಬೇಕು ಎಂದು ಎಸ್.ಎಲ್.ಎನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹೊ.ಸು. ರಮೇಶ್ ಸಲಹೆ ನೀಡಿದರು.<br /> <br /> ಪಟ್ಟಣದ ಗೋಜುಖಾನ್ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆದು ಕೊಳ್ಳೆಗಾಲದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಕರಾಟೆಪಟುಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.<br /> <br /> ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಶ್ಮಿತಾಗೆ 2 ಚಿನ್ನ, 1 ಬೆಳ್ಳಿ, ತೇಜಸ್ಗೆ 2 ಚಿನ್ನ, ಸೌಜನ್ಯಾಗೆ 2 ಬೆಳ್ಳಿ, 1 ಕಂಚು, ವಿಭಾಗೆ 1 ಬೆಳ್ಳಿ, 1 ಕಂಚು, ಮನೀಶ್ಗೆ 2 ಕಂಚು, ಪವನ್ಗೆ 2 ಕಂಚು, ಹೇಮಶ್ರೀಗೆ 1 ಬೆಳ್ಳಿ ಪದಕ ಲಭಿಸಿದೆ ಎಂದು ವಿವರಿಸಿದರು.<br /> ಸಹ ಪ್ರಾಧ್ಯಾಪಕ ಪುಟ್ಟಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ ಬಾ.ರಾ. ಸುಬ್ಬರಾಯ, ಚಂದ್ರಕುಮಾರ್, ಕುಮುದಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>