<p>ಮಾಲೂರು: ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವ ತುರ್ತು ಹಿಂದಿನ ದಿನಗಳಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಶಾಸಕ ಕೆ.ಎಸ್.ಮಂಜುನಾಥ್ ಪತ್ನಿ ಆರಿದ್ರಾ ಅಭಿಪ್ರಾಯಪಟ್ಟರು.</p>.<p>ಪಟ್ಟಣದಲ್ಲಿ ಭಾನುವಾರ ಚೈತನ್ಯ ಕಲಾನಿಕೇತನ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ, 61ನೇ ತಿಂಗಳ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರನ್ನು ಸಮಾನ ಭಾಗಿದಾರರನ್ನಾಗಿ ಪರಿಗಣಿಸಬೇಕು ಎಂಬ ಅರಿವನ್ನು ಸಮಾಜ ಪಡೆಯಬೇಕಿದೆ ಎಂದರು.<br /> <br /> ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ರಾಜಕೀಯ ಪಕ್ಷಗಳು ಮಹಿಳೆಗೆ ಸಂಬಂಧಿಸಿ ಕೇವಲ ಬಾಯುಪಚಾರದ ಮಾತುಗಳನ್ನಷ್ಟೇ ಆಡುತ್ತಿವೆ. ಅಭಿವೃದ್ಧಿ ಮಂತ್ರ, ಜಾತಿ ಮತ್ತು ಕೋಮುವಾದಿ ರಾಜಕಾರಣದ ರಹಸ್ಯ ಕಾರ್ಯಸೂಚಿಗಳನ್ನು ಮಹಿಳೆಯರು ಮನಗಾಣಬೇಕು ಎಂದರು.<br /> <br /> ದೌರ್ಜನ್ಯದ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧ ವ್ಯಕ್ತಪಡಿಸುವ ಶಕ್ತಿ ಕಳೆದುಕೊಳ್ಳದೆ ಒಗ್ಗಟ್ಟಾಗಿರುವುದು ಅತಿ ಅವಶ್ಯ. ಹೈಟೆಕ್ ತಂತ್ರಜ್ಞಾನದಿಂದ ಹೆಣ್ಣಿನ ಗರ್ಭವು ಮಾರಾಟದ ಸರಕಾಗಿದೆ. ಹೆಣ್ಣು ಶಿಶುವಿಗೆ ತಾಯಿಯ ಗರ್ಭವು ಸುರಕ್ಷಿತ ನೆಲೆಯಾಗಿ ಉಳಿದಿಲ್ಲ ಎಂದು ವಿಷಾದಿಸಿದರು.<br /> <br /> ಸೇವೆ ಹೆಸರಿನಲ್ಲಿ ಜೀತಗಾರರಂತೆ ದುಡಿಯುವ ಗಾರ್ಮೆಂಟ್ಸ್ ಮಹಿಳೆಯರು, ಪೌರಕಾರ್ಮಿಕ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಹೈಟೆಕ್ ಯುಗದ ಕೂಲಿಗಳಾಗಿದ್ದಾರೆ ಎಂದರು.<br /> <br /> ಕವಯಿತ್ರಿ ಬೆಂಗಳೂರಿನ ಕೆ.ಷರೀಫ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಕಲಾನಿಕೇತನದ ಜ.ಮು.ಚಂದ್ರ, ನವ ಸಮಾಜ ಮಹಿಳಾ ಒಕ್ಕೂಟದ ವಿಮಲಮ್ಮ, ಕವಯತ್ರಿಯರಾದ ಎನ್.ಎಸ್.ರಾಜೇಶ್ವರಿ, ವನಿತಾ, ಲಕ್ಷ್ಮಮ್ಮ, ವಿನೋದ್, ಶೀಲಾ, ಮಂಜುಳಾ, ದಾಕ್ಷಾಯಿಣಿ, ರತ್ನಮ್ಮ, ಸುಶೀಲಮ್ಮ, ಬಸಮ್ಮ, ನೊಸಗೆರೆ ಮಂಜುಳಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಲೂರು: ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವ ತುರ್ತು ಹಿಂದಿನ ದಿನಗಳಿಗಿಂತಲೂ ಇಂದು ಹೆಚ್ಚಾಗಿದೆ ಎಂದು ಶಾಸಕ ಕೆ.ಎಸ್.ಮಂಜುನಾಥ್ ಪತ್ನಿ ಆರಿದ್ರಾ ಅಭಿಪ್ರಾಯಪಟ್ಟರು.</p>.<p>ಪಟ್ಟಣದಲ್ಲಿ ಭಾನುವಾರ ಚೈತನ್ಯ ಕಲಾನಿಕೇತನ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ, 61ನೇ ತಿಂಗಳ ಸಾಹಿತ್ಯ, ಸಾಂಸ್ಕೃತಿಕ ಸಂಭ್ರಮ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರನ್ನು ಸಮಾನ ಭಾಗಿದಾರರನ್ನಾಗಿ ಪರಿಗಣಿಸಬೇಕು ಎಂಬ ಅರಿವನ್ನು ಸಮಾಜ ಪಡೆಯಬೇಕಿದೆ ಎಂದರು.<br /> <br /> ಲೋಕಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ರಾಜಕೀಯ ಪಕ್ಷಗಳು ಮಹಿಳೆಗೆ ಸಂಬಂಧಿಸಿ ಕೇವಲ ಬಾಯುಪಚಾರದ ಮಾತುಗಳನ್ನಷ್ಟೇ ಆಡುತ್ತಿವೆ. ಅಭಿವೃದ್ಧಿ ಮಂತ್ರ, ಜಾತಿ ಮತ್ತು ಕೋಮುವಾದಿ ರಾಜಕಾರಣದ ರಹಸ್ಯ ಕಾರ್ಯಸೂಚಿಗಳನ್ನು ಮಹಿಳೆಯರು ಮನಗಾಣಬೇಕು ಎಂದರು.<br /> <br /> ದೌರ್ಜನ್ಯದ ಸಂದರ್ಭದಲ್ಲಿ ಮಹಿಳೆಯರು ಪ್ರತಿರೋಧ ವ್ಯಕ್ತಪಡಿಸುವ ಶಕ್ತಿ ಕಳೆದುಕೊಳ್ಳದೆ ಒಗ್ಗಟ್ಟಾಗಿರುವುದು ಅತಿ ಅವಶ್ಯ. ಹೈಟೆಕ್ ತಂತ್ರಜ್ಞಾನದಿಂದ ಹೆಣ್ಣಿನ ಗರ್ಭವು ಮಾರಾಟದ ಸರಕಾಗಿದೆ. ಹೆಣ್ಣು ಶಿಶುವಿಗೆ ತಾಯಿಯ ಗರ್ಭವು ಸುರಕ್ಷಿತ ನೆಲೆಯಾಗಿ ಉಳಿದಿಲ್ಲ ಎಂದು ವಿಷಾದಿಸಿದರು.<br /> <br /> ಸೇವೆ ಹೆಸರಿನಲ್ಲಿ ಜೀತಗಾರರಂತೆ ದುಡಿಯುವ ಗಾರ್ಮೆಂಟ್ಸ್ ಮಹಿಳೆಯರು, ಪೌರಕಾರ್ಮಿಕ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಹೈಟೆಕ್ ಯುಗದ ಕೂಲಿಗಳಾಗಿದ್ದಾರೆ ಎಂದರು.<br /> <br /> ಕವಯಿತ್ರಿ ಬೆಂಗಳೂರಿನ ಕೆ.ಷರೀಫ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಕಲಾನಿಕೇತನದ ಜ.ಮು.ಚಂದ್ರ, ನವ ಸಮಾಜ ಮಹಿಳಾ ಒಕ್ಕೂಟದ ವಿಮಲಮ್ಮ, ಕವಯತ್ರಿಯರಾದ ಎನ್.ಎಸ್.ರಾಜೇಶ್ವರಿ, ವನಿತಾ, ಲಕ್ಷ್ಮಮ್ಮ, ವಿನೋದ್, ಶೀಲಾ, ಮಂಜುಳಾ, ದಾಕ್ಷಾಯಿಣಿ, ರತ್ನಮ್ಮ, ಸುಶೀಲಮ್ಮ, ಬಸಮ್ಮ, ನೊಸಗೆರೆ ಮಂಜುಳಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>