<p><strong>ಯಶಸ್ವಿ ವ್ಯಕ್ತಿಗಳು ಬೇರೆಯವರು ತಮ್ಮ ಮೇಲೆ ಎಸೆದ ಇಟ್ಟಿಗೆಗಳಿಂದಲೇ ಸುಭದ್ರ ಅಡಿಪಾಯ ಕಟ್ಟಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಈ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡರು.<br /> <br /> ಏಕದಿನ ಕ್ರಿಕೆಟ್ಗೆ ರಾಹುಲ್ ಸೂಕ್ತ ವ್ಯಕ್ತಿ ಅಲ್ಲ ಎನ್ನುತ್ತಿದ್ದರು. ಆದರೆ ಭಾರತ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಯ್ಕೆದಾರರಿಗೆ ನೆನಪಾಗುತ್ತಿದ್ದದ್ದು ಈ ದ್ರಾವಿಡ್.</strong> <br /> <br /> `ಯಾವಾಗಲೂ ಬದ್ಧತೆ ಉಳಿಸಿಕೊಳ್ಳಿ. 100ರಷ್ಟು ಪ್ರಯತ್ನ ಹಾಕಿ. ಯಶಸ್ಸು ಖಂಡಿತ ಸಿಗುತ್ತೆ. ಅದು ಕೆಲವರಿಗೆ ನಿಧಾನ, ಇನ್ನು ಕೆಲವರಿಗೆ ಬೇಗ ಸಿಗುತ್ತೆ ಅಷ್ಟೆ. ಆದರೆ ಅದು ಖಂಡಿತ ಸಿಕ್ಕೇಸಿಗುತ್ತೆ~<br /> <br /> ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಈ ರೀತಿ ಒಂದು ಮಾತು ಹೇಳಿದ್ದರು. ಆ ಮಾತಿಗೆ ಸರಿಯಾಗಿ ನಡೆದುಕೊಂಡವರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು.<br /> ಟೆಸ್ಟ್ಗೆ ಹೊಸ ಭಾಷ್ಯ ಬರೆದ ಈ ಆಟಗಾರನ ಏಕದಿನ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ. <br /> <br /> ಇನ್ನು ಏಕದಿನ ಉಡುಪಿನಲ್ಲಿ ಅವರನ್ನು ನಾವು ಕಾಣಲು ಸಾಧ್ಯವಿಲ್ಲ. ನಿಜ, ಟೆಸ್ಟ್ನಲ್ಲಿ ಸಿಕ್ಕ ಮೆಚ್ಚುಗೆ ಏಕದಿನ ಕ್ರಿಕೆಟ್ನಲ್ಲಿ ಅವರಿಗೆ ಸಿಗಲಿಲ್ಲ. ಬದಲಾಗಿ ಪ್ರತಿ ಹಂತದಲ್ಲೂ ಅವರು ತಮ್ಮ ಸಾಮರ್ಥ್ಯ ತೋರಿಸುತ್ತಾ ಸಾಗಬೇಕಾಯಿತು. ದಾರಿಯುದ್ದಕ್ಕೂ ಟೀಕೆಗಳನ್ನು ಎದುರಿಸಿ ನಿಲ್ಲಬೇಕಾಯಿತು. <br /> <br /> `ಟೆಸ್ಟ್ಗಿಂತ ಏಕದಿನ ಕ್ರಿಕೆಟ್ಗೆ ನಾನು ಹೆಚ್ಚು ಶ್ರಮ ಹಾಕಬೇಕಾಯಿತು~ ಎಂದು ದ್ರಾವಿಡ್ ಹೇಳಿರುವ ಮಾತೇ ಅದಕ್ಕೆ ಸಾಕ್ಷಿ.ಆದರೆ ಭಾರತ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಯ್ಕೆದಾರರಿಗೆ ಹಾಗೂ ನಾಯಕನಿಗೆ ನೆನಪಾಗುತ್ತ್ದ್ದಿದದ್ದು ದ್ರಾವಿಡ್. <br /> <br /> ವೇಗದ ಬೌಲರ್ಗಳಿಗೆ ನೆರವಾಗುವ ವಿದೇಶದ ಪಿಚ್ಗಳಲ್ಲಿ ತಂಡವನ್ನು ಮುಜುಗರದಿಂದ ಪಾರು ಮಾಡಲು ಇವರಿಗೆ ರಾಹುಲ್ ಬೇಕಾಗುತಿತ್ತು. ಹಾಗಾಗಿಯೇ `ವಿದ್ಯುತ್ ಕೈಕೊಟ್ಟಾಗ ಕೈಗೆ ಸಿಗುತಿದ್ದ ಟಾರ್ಚ್ ಈ ದ್ರಾವಿಡ್~ ಎನ್ನಲಾಗುತ್ತದೆ.<br /> <br /> ಹಾಗೇ, ತಂಡದಲ್ಲಿ ಯಾರಾದರೂ ಗಾಯಗೊಂಡಾಗ ನಾಯಕನಿಗೆ ನೆನಪಾಗುತ್ತ್ದ್ದಿದದ್ದು ದ್ರಾವಿಡ್. ಆರಂಭಿಕ ಬ್ಯಾಟ್ಸ್ಮನ್ ಆಗಿಯೂ ಅವರನ್ನು ಬ್ಯಾಟಿಂಗ್ಗೆ ಕಳುಹಿಸುತ್ತಿದ್ದರು.<br /> <br /> ಒತ್ತಡದ ಸನ್ನಿವೇಶದಲ್ಲಿ ಕೆಳ ಕ್ರಮಾಂಕದಲ್ಲೂ ಬ್ಯಾಟ್ ಮಾಡಲು ಬಂದ ಉದಾಹರಣೆ ಇದೆ. ತಮ್ಮ ಎಂದಿನ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮಾನಸಿಕವಾಗಿ ಸಜ್ಜಾಗಿರುತ್ತಿದ್ದ ಅವರಿಗೆ ಇದು ಕೊಂಚ ಕಿರಿಕಿರಿ ಎನಿಸುತಿತ್ತು. <br /> <br /> ಆದರೆ ತಂಡದ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಹಾಗೇ, ಫೈನಲ್ ತಲುಪಿದ್ದ 2003ರ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರು. <br /> <br /> ದ್ರಾವಿಡ್ ಕ್ರಿಕೆಟ್ ಜೀವನ ಎಂಬುದು ಒಂದು ಚುಕ್ಕೆಯೂ ಇಲ್ಲದ ಬಿಳಿ ಹಾಳೆ ಎನ್ನಬಹುದು. ಅವರದ್ದು ಸ್ವಾರ್ಥ ರಹಿತ ಆಟ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗಬಹುದು. <br /> <br /> ಆದರೆ ದ್ರಾವಿಡ್ ಕ್ರೀಸ್ನಲ್ಲಿದ್ದಾಗ ಏನೋ ಒಂಥರಾ ಭರವಸೆ. `ದ್ರಾವಿಡ್ ಜನಿಸಿದ್ದು ಟೆಸ್ಟ್ ಆಡಲು. ಆದರೆ ಏಕದಿನ ಕ್ರಿಕೆಟ್ಗೂ ಹೊಂದಿಕೊಂಡರು~ ಎಂಬ ಮಾತು ಸತ್ಯ.<br /> ಏಕದಿನ ಕ್ರಿಕೆಟ್ನಲ್ಲಿ ರಾಹುಲ್ ಎಷ್ಟು ಸಲ ಯಾತನದಾಯಕ ಕ್ಷಣಗಳನ್ನು ಎದುರಿಸಿಲ್ಲ ಹೇಳಿ? ಕಾರಣ ಹೇಳದೇ ಅವರನ್ನು ಕೈಬಿಡಲಾಗುತಿತ್ತು. <br /> <br /> ಆದರೆ ಪ್ರತಿ ಬಾರಿ ಫಿನಿಕ್ಸ್ನಂತೆ ಎ್ದ್ದದು ಬರುತಿದ್ದರು. `ನೀವು ನನ್ನನ್ನು ಕೈಬಿಟ್ಟಿದ್ದು ತಪ್ಪು~ ಎಂಬುದನ್ನು ತಮ್ಮ ಪ್ರದರ್ಶನದ ಮೂಲಕವೇ ಹೇಳುತ್ತಿದ್ದರು. ವಿಶ್ವ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿದ್ರಾವಿಡ್ ಏಳನೇ ಸ್ಥಾನದಲ್ಲಿದ್ದಾರೆ. <br /> <br /> ಅದೇ ಅವರ ಶ್ರೇಷ್ಠತೆಗೆ ಸಾಕ್ಷಿ. `ಏಕದಿನ ಕ್ರಿಕೆಟ್ನಲ್ಲಿ ಇಷ್ಟು ಸಾಧನೆ ಮಾಡುತ್ತೇನೆ ಎಂಬುದು ಖಂಡಿತ ನನಗೆ ಗೊತ್ತಿರಲಿಲ್ಲ~ ಎನ್ನುತ್ತಾರೆ ಬೆಂಗಳೂರಿನ ಈ ಬ್ಯಾಟ್ಸ್ಮನ್.<br /> <br /> ಆಡಿದ್ದು ಏಕೈಕ ಟ್ವೆಂಟಿ-20 ಪಂದ್ಯ. ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಎತ್ತಿ ಮಿಂಚಿದರು. ಅದು ಟೀಕಾಕಾರರಿಗೆ ನೀಡಿದ ಉತ್ತರ ಕೂಡ. `ಒಬ್ಬ ವ್ಯಕ್ತಿ ಯಾವ ರೀತಿ ಶಿಖರವೇರಿದ ಎಂಬುದು ಯಶಸ್ಸು ಆಗಲಾರದು. <br /> <br /> ಕೆಳಗೆ ಬಿದ್ದಾಗ ಮತ್ತೆ ಮೇಲೆದ್ದು ನಿಲ್ಲುವುದಕ್ಕೆ ನಡೆಸುವ ಪ್ರಯತ್ನವಿದೆಯಲ್ಲ, ಅದು ನಿಜವಾದ ಯಶಸ್ಸು~ ಎನ್ನುವ ನುಡಿಯನ್ನು ದ್ರಾವಿಡ್ ಕ್ರಿಕೆಟ್ ಜೀವನಕ್ಕೆ ಅನ್ವಯಿಸಬಹುದು. <br /> <br /> ದ್ರಾವಿಡ್ ಏಕದಿನ ಕ್ರಿಕೆಟ್ಗೆ 1996ರಲ್ಲಿ ಶ್ರೀಲಂಕಾ ಎದುರು ಪದಾರ್ಪಣೆ ಮಾಡಿದ್ದರು. 344 ಏಕದಿನ ಪಂದ್ಯಗಳಿಂದ 10889 ರನ್ ಗಳಿಸಿದ್ದಾರೆ. ಅದರಲ್ಲಿ 12 ಶತಕ ಹಾಗೂ 83 ಅರ್ಧ ಶತಕಗಳು ಸೇರಿವೆ. <br /> <br /> ಎರಡು ಬಾರಿ 300ಕ್ಕೂ ಅಧಿಕ ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡ್ದ್ದಿದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ. ಟೆಸ್ಟ್ ಪರಿಣತ ರಾಹುಲ್ ಒಮ್ಮೆ 22 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದು ವಿಶೇಷ.<br /> <br /> 79 ಏಕದಿನ ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಸಚಿನ್ಗಿಂತ ಯಶಸ್ವಿ ಬ್ಯಾಟ್ಸ್ಮನ್ ಈ `ವಾಲ್~. <br /> <br /> ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಗಿದ ಏಕದಿನ ಸರಣಿಗೆ ಆಯ್ಕೆ ಆದಾಗ ದ್ರಾವಿಡ್ಗೆ ಅಚ್ಚರಿಯಾಗಿತ್ತು. ಇದೇ ಅವಕಾಶ ಬಳಸಿಕೊಂಡ ಅವರು `ಇದೇ ನನ್ನ ಕೊನೆಯ ಏಕದಿನ ಸರಣಿ~ ಎಂದರು. <br /> <br /> ಅದಕ್ಕೂ ಮುನ್ನ 2009ರ ಸೆಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವೆಸ್ಟ್ಇಂಡೀಸ್ ಎದುರು ಅವರು ಕೊನೆಯ ಪಂದ್ಯ ಆಡಿದ್ದರು. ವಿಶೇಷವೆಂದರೆ ಆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೂಡ ಎರಡು ವರ್ಷಗಳ ಬಳಿಕ ವಾಪಸಾಗಿದ್ದರು. <br /> <br /> ಕಳೆದ ನಾಲ್ಕು ವರ್ಷಗಳಲ್ಲಿ ಅವರು ಆಡಿದ್ದು ಎರಡು ಸರಣಿಗಳಲ್ಲಿ ಮಾತ್ರ. ಆಗಲೇ ಅವರ ಏಕದಿನ ಬದುಕು ಬಹುತೇಕ ಅಂತ್ಯಗೊಂಡಿತ್ತು. ಅದಕ್ಕೆ ಈಗ ಅಧಿಕೃತವಾಗಿ ತೆರೆ ಎಳೆದಿದ್ದಾರೆ ಅಷ್ಟೆ. <br /> <br /> ಒಂದು ಕೊರಗು ಎಂದರೆ ದ್ರಾವಿಡ್ ಅವರಂತಹ ನಂಬಿಕಸ್ತ ಬ್ಯಾಟ್ಸ್ಮನ್ ಈಗ ಕಾಣುತ್ತಿಲ್ಲ. ಅದೇನೇ ಇರಲಿ, ಏಕದಿನ ಹಾಗೂ ಟೆಸ್ಟ್ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಪೇರಿಸಿರುವ ದ್ರಾವಿಡ್ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಅವರ ಆಟವನ್ನು ಇನ್ನು ಟೆಸ್ಟ್ನಲ್ಲಿ ಸವಿಯೋಣ...<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಶಸ್ವಿ ವ್ಯಕ್ತಿಗಳು ಬೇರೆಯವರು ತಮ್ಮ ಮೇಲೆ ಎಸೆದ ಇಟ್ಟಿಗೆಗಳಿಂದಲೇ ಸುಭದ್ರ ಅಡಿಪಾಯ ಕಟ್ಟಿಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಈ ರಾಹುಲ್ ದ್ರಾವಿಡ್ ಕೂಡ ಒಬ್ಬರು. ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡರು.<br /> <br /> ಏಕದಿನ ಕ್ರಿಕೆಟ್ಗೆ ರಾಹುಲ್ ಸೂಕ್ತ ವ್ಯಕ್ತಿ ಅಲ್ಲ ಎನ್ನುತ್ತಿದ್ದರು. ಆದರೆ ಭಾರತ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಯ್ಕೆದಾರರಿಗೆ ನೆನಪಾಗುತ್ತಿದ್ದದ್ದು ಈ ದ್ರಾವಿಡ್.</strong> <br /> <br /> `ಯಾವಾಗಲೂ ಬದ್ಧತೆ ಉಳಿಸಿಕೊಳ್ಳಿ. 100ರಷ್ಟು ಪ್ರಯತ್ನ ಹಾಕಿ. ಯಶಸ್ಸು ಖಂಡಿತ ಸಿಗುತ್ತೆ. ಅದು ಕೆಲವರಿಗೆ ನಿಧಾನ, ಇನ್ನು ಕೆಲವರಿಗೆ ಬೇಗ ಸಿಗುತ್ತೆ ಅಷ್ಟೆ. ಆದರೆ ಅದು ಖಂಡಿತ ಸಿಕ್ಕೇಸಿಗುತ್ತೆ~<br /> <br /> ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಈ ರೀತಿ ಒಂದು ಮಾತು ಹೇಳಿದ್ದರು. ಆ ಮಾತಿಗೆ ಸರಿಯಾಗಿ ನಡೆದುಕೊಂಡವರಲ್ಲಿ ರಾಹುಲ್ ದ್ರಾವಿಡ್ ಕೂಡ ಒಬ್ಬರು.<br /> ಟೆಸ್ಟ್ಗೆ ಹೊಸ ಭಾಷ್ಯ ಬರೆದ ಈ ಆಟಗಾರನ ಏಕದಿನ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ. <br /> <br /> ಇನ್ನು ಏಕದಿನ ಉಡುಪಿನಲ್ಲಿ ಅವರನ್ನು ನಾವು ಕಾಣಲು ಸಾಧ್ಯವಿಲ್ಲ. ನಿಜ, ಟೆಸ್ಟ್ನಲ್ಲಿ ಸಿಕ್ಕ ಮೆಚ್ಚುಗೆ ಏಕದಿನ ಕ್ರಿಕೆಟ್ನಲ್ಲಿ ಅವರಿಗೆ ಸಿಗಲಿಲ್ಲ. ಬದಲಾಗಿ ಪ್ರತಿ ಹಂತದಲ್ಲೂ ಅವರು ತಮ್ಮ ಸಾಮರ್ಥ್ಯ ತೋರಿಸುತ್ತಾ ಸಾಗಬೇಕಾಯಿತು. ದಾರಿಯುದ್ದಕ್ಕೂ ಟೀಕೆಗಳನ್ನು ಎದುರಿಸಿ ನಿಲ್ಲಬೇಕಾಯಿತು. <br /> <br /> `ಟೆಸ್ಟ್ಗಿಂತ ಏಕದಿನ ಕ್ರಿಕೆಟ್ಗೆ ನಾನು ಹೆಚ್ಚು ಶ್ರಮ ಹಾಕಬೇಕಾಯಿತು~ ಎಂದು ದ್ರಾವಿಡ್ ಹೇಳಿರುವ ಮಾತೇ ಅದಕ್ಕೆ ಸಾಕ್ಷಿ.ಆದರೆ ಭಾರತ ತಂಡ ಸಂಕಷ್ಟದಲ್ಲಿದ್ದಾಗಲೆಲ್ಲಾ ಆಯ್ಕೆದಾರರಿಗೆ ಹಾಗೂ ನಾಯಕನಿಗೆ ನೆನಪಾಗುತ್ತ್ದ್ದಿದದ್ದು ದ್ರಾವಿಡ್. <br /> <br /> ವೇಗದ ಬೌಲರ್ಗಳಿಗೆ ನೆರವಾಗುವ ವಿದೇಶದ ಪಿಚ್ಗಳಲ್ಲಿ ತಂಡವನ್ನು ಮುಜುಗರದಿಂದ ಪಾರು ಮಾಡಲು ಇವರಿಗೆ ರಾಹುಲ್ ಬೇಕಾಗುತಿತ್ತು. ಹಾಗಾಗಿಯೇ `ವಿದ್ಯುತ್ ಕೈಕೊಟ್ಟಾಗ ಕೈಗೆ ಸಿಗುತಿದ್ದ ಟಾರ್ಚ್ ಈ ದ್ರಾವಿಡ್~ ಎನ್ನಲಾಗುತ್ತದೆ.<br /> <br /> ಹಾಗೇ, ತಂಡದಲ್ಲಿ ಯಾರಾದರೂ ಗಾಯಗೊಂಡಾಗ ನಾಯಕನಿಗೆ ನೆನಪಾಗುತ್ತ್ದ್ದಿದದ್ದು ದ್ರಾವಿಡ್. ಆರಂಭಿಕ ಬ್ಯಾಟ್ಸ್ಮನ್ ಆಗಿಯೂ ಅವರನ್ನು ಬ್ಯಾಟಿಂಗ್ಗೆ ಕಳುಹಿಸುತ್ತಿದ್ದರು.<br /> <br /> ಒತ್ತಡದ ಸನ್ನಿವೇಶದಲ್ಲಿ ಕೆಳ ಕ್ರಮಾಂಕದಲ್ಲೂ ಬ್ಯಾಟ್ ಮಾಡಲು ಬಂದ ಉದಾಹರಣೆ ಇದೆ. ತಮ್ಮ ಎಂದಿನ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮಾನಸಿಕವಾಗಿ ಸಜ್ಜಾಗಿರುತ್ತಿದ್ದ ಅವರಿಗೆ ಇದು ಕೊಂಚ ಕಿರಿಕಿರಿ ಎನಿಸುತಿತ್ತು. <br /> <br /> ಆದರೆ ತಂಡದ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ಹಾಗೇ, ಫೈನಲ್ ತಲುಪಿದ್ದ 2003ರ ಏಕದಿನ ವಿಶ್ವಕಪ್ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರು. <br /> <br /> ದ್ರಾವಿಡ್ ಕ್ರಿಕೆಟ್ ಜೀವನ ಎಂಬುದು ಒಂದು ಚುಕ್ಕೆಯೂ ಇಲ್ಲದ ಬಿಳಿ ಹಾಳೆ ಎನ್ನಬಹುದು. ಅವರದ್ದು ಸ್ವಾರ್ಥ ರಹಿತ ಆಟ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗಬಹುದು. <br /> <br /> ಆದರೆ ದ್ರಾವಿಡ್ ಕ್ರೀಸ್ನಲ್ಲಿದ್ದಾಗ ಏನೋ ಒಂಥರಾ ಭರವಸೆ. `ದ್ರಾವಿಡ್ ಜನಿಸಿದ್ದು ಟೆಸ್ಟ್ ಆಡಲು. ಆದರೆ ಏಕದಿನ ಕ್ರಿಕೆಟ್ಗೂ ಹೊಂದಿಕೊಂಡರು~ ಎಂಬ ಮಾತು ಸತ್ಯ.<br /> ಏಕದಿನ ಕ್ರಿಕೆಟ್ನಲ್ಲಿ ರಾಹುಲ್ ಎಷ್ಟು ಸಲ ಯಾತನದಾಯಕ ಕ್ಷಣಗಳನ್ನು ಎದುರಿಸಿಲ್ಲ ಹೇಳಿ? ಕಾರಣ ಹೇಳದೇ ಅವರನ್ನು ಕೈಬಿಡಲಾಗುತಿತ್ತು. <br /> <br /> ಆದರೆ ಪ್ರತಿ ಬಾರಿ ಫಿನಿಕ್ಸ್ನಂತೆ ಎ್ದ್ದದು ಬರುತಿದ್ದರು. `ನೀವು ನನ್ನನ್ನು ಕೈಬಿಟ್ಟಿದ್ದು ತಪ್ಪು~ ಎಂಬುದನ್ನು ತಮ್ಮ ಪ್ರದರ್ಶನದ ಮೂಲಕವೇ ಹೇಳುತ್ತಿದ್ದರು. ವಿಶ್ವ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿದ್ರಾವಿಡ್ ಏಳನೇ ಸ್ಥಾನದಲ್ಲಿದ್ದಾರೆ. <br /> <br /> ಅದೇ ಅವರ ಶ್ರೇಷ್ಠತೆಗೆ ಸಾಕ್ಷಿ. `ಏಕದಿನ ಕ್ರಿಕೆಟ್ನಲ್ಲಿ ಇಷ್ಟು ಸಾಧನೆ ಮಾಡುತ್ತೇನೆ ಎಂಬುದು ಖಂಡಿತ ನನಗೆ ಗೊತ್ತಿರಲಿಲ್ಲ~ ಎನ್ನುತ್ತಾರೆ ಬೆಂಗಳೂರಿನ ಈ ಬ್ಯಾಟ್ಸ್ಮನ್.<br /> <br /> ಆಡಿದ್ದು ಏಕೈಕ ಟ್ವೆಂಟಿ-20 ಪಂದ್ಯ. ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಎತ್ತಿ ಮಿಂಚಿದರು. ಅದು ಟೀಕಾಕಾರರಿಗೆ ನೀಡಿದ ಉತ್ತರ ಕೂಡ. `ಒಬ್ಬ ವ್ಯಕ್ತಿ ಯಾವ ರೀತಿ ಶಿಖರವೇರಿದ ಎಂಬುದು ಯಶಸ್ಸು ಆಗಲಾರದು. <br /> <br /> ಕೆಳಗೆ ಬಿದ್ದಾಗ ಮತ್ತೆ ಮೇಲೆದ್ದು ನಿಲ್ಲುವುದಕ್ಕೆ ನಡೆಸುವ ಪ್ರಯತ್ನವಿದೆಯಲ್ಲ, ಅದು ನಿಜವಾದ ಯಶಸ್ಸು~ ಎನ್ನುವ ನುಡಿಯನ್ನು ದ್ರಾವಿಡ್ ಕ್ರಿಕೆಟ್ ಜೀವನಕ್ಕೆ ಅನ್ವಯಿಸಬಹುದು. <br /> <br /> ದ್ರಾವಿಡ್ ಏಕದಿನ ಕ್ರಿಕೆಟ್ಗೆ 1996ರಲ್ಲಿ ಶ್ರೀಲಂಕಾ ಎದುರು ಪದಾರ್ಪಣೆ ಮಾಡಿದ್ದರು. 344 ಏಕದಿನ ಪಂದ್ಯಗಳಿಂದ 10889 ರನ್ ಗಳಿಸಿದ್ದಾರೆ. ಅದರಲ್ಲಿ 12 ಶತಕ ಹಾಗೂ 83 ಅರ್ಧ ಶತಕಗಳು ಸೇರಿವೆ. <br /> <br /> ಎರಡು ಬಾರಿ 300ಕ್ಕೂ ಅಧಿಕ ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡ್ದ್ದಿದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ. ಟೆಸ್ಟ್ ಪರಿಣತ ರಾಹುಲ್ ಒಮ್ಮೆ 22 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದು ವಿಶೇಷ.<br /> <br /> 79 ಏಕದಿನ ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಸಚಿನ್ಗಿಂತ ಯಶಸ್ವಿ ಬ್ಯಾಟ್ಸ್ಮನ್ ಈ `ವಾಲ್~. <br /> <br /> ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಮುಗಿದ ಏಕದಿನ ಸರಣಿಗೆ ಆಯ್ಕೆ ಆದಾಗ ದ್ರಾವಿಡ್ಗೆ ಅಚ್ಚರಿಯಾಗಿತ್ತು. ಇದೇ ಅವಕಾಶ ಬಳಸಿಕೊಂಡ ಅವರು `ಇದೇ ನನ್ನ ಕೊನೆಯ ಏಕದಿನ ಸರಣಿ~ ಎಂದರು. <br /> <br /> ಅದಕ್ಕೂ ಮುನ್ನ 2009ರ ಸೆಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ವೆಸ್ಟ್ಇಂಡೀಸ್ ಎದುರು ಅವರು ಕೊನೆಯ ಪಂದ್ಯ ಆಡಿದ್ದರು. ವಿಶೇಷವೆಂದರೆ ಆ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಕೂಡ ಎರಡು ವರ್ಷಗಳ ಬಳಿಕ ವಾಪಸಾಗಿದ್ದರು. <br /> <br /> ಕಳೆದ ನಾಲ್ಕು ವರ್ಷಗಳಲ್ಲಿ ಅವರು ಆಡಿದ್ದು ಎರಡು ಸರಣಿಗಳಲ್ಲಿ ಮಾತ್ರ. ಆಗಲೇ ಅವರ ಏಕದಿನ ಬದುಕು ಬಹುತೇಕ ಅಂತ್ಯಗೊಂಡಿತ್ತು. ಅದಕ್ಕೆ ಈಗ ಅಧಿಕೃತವಾಗಿ ತೆರೆ ಎಳೆದಿದ್ದಾರೆ ಅಷ್ಟೆ. <br /> <br /> ಒಂದು ಕೊರಗು ಎಂದರೆ ದ್ರಾವಿಡ್ ಅವರಂತಹ ನಂಬಿಕಸ್ತ ಬ್ಯಾಟ್ಸ್ಮನ್ ಈಗ ಕಾಣುತ್ತಿಲ್ಲ. ಅದೇನೇ ಇರಲಿ, ಏಕದಿನ ಹಾಗೂ ಟೆಸ್ಟ್ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಪೇರಿಸಿರುವ ದ್ರಾವಿಡ್ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಅವರ ಆಟವನ್ನು ಇನ್ನು ಟೆಸ್ಟ್ನಲ್ಲಿ ಸವಿಯೋಣ...<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>