<p><strong>ಬೆಂಗಳೂರು: </strong>ರಾಜ್ಯದ ಗ್ರಾಮೀಣ ಪ್ರದೇಶಗಳ ದಕ್ಷ ಕುಶಲಕರ್ಮಿಗಳನ್ನು ಗುರುತಿಸಿ, ಅವರ ಕೌಶಲವನ್ನು ಪಟ್ಟಣ ಮತ್ತು ಅರೆಪಟ್ಟಣಗಳಲ್ಲಿ ಬಳಸಿಕೊಳ್ಳುವ ನೂತನ ಯೋಜನೆಯೊಂದನ್ನು ಮುಂದಿನ ದಿನಗಳಲ್ಲಿ ಆರಂಭಿಸುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಘೋಷಿಸಿದರು.<br /> <br /> ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್ಕೆಸಿಸಿಐ) ಸಂಸ್ಥಾಪಕರ ದಿನಾಚರಣೆಯಲ್ಲಿ `ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ~ ಸ್ವೀಕರಿಸಿ ಮಾತನಾಡಿದ ಅವರು, `ಈ ಯೋಜನೆಯ ಕುರಿತು ಎಫ್ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಅವರೊಂದಿಗೆ ಚರ್ಚಿಸಿದ್ದೇನೆ. ಧರ್ಮಸ್ಥಳ ಕ್ಷೇತ್ರ, ಎಫ್ಕೆಸಿಸಿಐ ಒಟ್ಟಾಗಿ ಈ ಯೋಜನೆಗೆ ಚಾಲನೆ ನೀಡಲಿವೆ~ ಎಂದು ತಿಳಿಸಿದರು.<br /> <br /> <strong>ರುಡ್ಸೆಟ್ ಸಾಧನೆ: </strong>ಧರ್ಮಸ್ಥಳ ಕ್ಷೇತ್ರ ನಡೆಸುತ್ತಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಯೋಜನೆಯ (ರುಡ್ಸೆಟ್) ಕುರಿತು ಮಾಹಿತಿ ಹಂಚಿಕೊಂಡ ಅವರು, `ದೇಶದ ವಿವಿಧ ಭಾಗಗಳಲ್ಲಿರುವ ರುಡ್ಸೆಟ್ ಕೇಂದ್ರಗಳ ಮೂಲಕ ಇದುವರೆಗೆ 1.27 ಲಕ್ಷ ಜನರಿಗೆ ಸ್ವಉದ್ಯೋಗ ಕುರಿತ ತರಬೇತಿ ನೀಡಲಾಗಿದೆ. ಅವರಲ್ಲಿ 93 ಸಾವಿರ ಮಂದಿ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ~ ಎಂದು ತಿಳಿಸಿದರು.<br /> <br /> ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ರುಡ್ಸೆಟ್ ಕೇಂದ್ರ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆ ಕೇಂದ್ರಗಳ ಉಸ್ತುವಾರಿಯನ್ನು ಧರ್ಮಸ್ಥಳ ಕ್ಷೇತ್ರವೇ ವಹಿಸಿಕೊಳ್ಳಲಿದೆ ಎಂದರು.<br /> <br /> `ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ~ಯ ಮೂಲಕ ಇದುವರೆಗೆ ಒಟ್ಟು ರೂ. 1,200 ಕೋಟಿ ಕಿರುಸಾಲ ವಿತರಿಸಲಾಗಿದೆ. ಈ ಯೋಜನೆಯ ವಾರ್ಷಿಕ ವ್ಯವಹಾರ ಈಗ ರೂ. 3,000 ಕೋಟಿ ತಲುಪಿದೆ ಎಂದರು. ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ, ಸಚಿವರಾದ ಮುರುಗೇಶ ನಿರಾಣಿ, ಎಸ್. ಸುರೇಶ್ಕುಮಾರ್, ಎಫ್ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಇದ್ದರು.</p>.<p><strong>ಹೆಗ್ಗಡೆ ಹೇಳಿದ ಸರ್.ಎಂ.ವಿ ದೃಷ್ಟಾಂತ<br /> ಬೆಂಗಳೂರು:</strong> ವಿಶ್ವೇಶ್ವರಯ್ಯ ಅವರ ಜೀವನ ಕ್ರಮದ ಕುರಿತು ಭಾಷಣದ ಮಧ್ಯೆ ಪ್ರಸ್ತಾಪಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು, `ವಿಶ್ವೇಶ್ವರಯ್ಯನವರು ದಿವಾನರಾಗಿ ಅಧಿಕಾರ ಸ್ವೀಕರಿಸಲು ಎರಡು ದಿನ ಇರುವಾಗ ತಮ್ಮ ಸಂಬಂಧಿಕರನ್ನು ಕರೆದು ಮನೆಯಲ್ಲಿ ಊಟ ಹಾಕಿಸಿದರಂತೆ. ಊಟದ ನಂತರ, ನಾನು ಮೈಸೂರು ಸರ್ಕಾರದ ಅಧಿಕಾರಿಯಾದ ನಂತರ ಯಾರೂ ನನ್ನ ಮನೆಗೆ ಬರಬೇಡಿ, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಸೂಚಿಸಿದರಂತೆ~ ಎಂದು ಹೆಗ್ಗಡೆ ಹೇಳಿದರು.<br /> <br /> ನಂತರ ವೇದಿಕೆಯ ಮೇಲೆ ಕುಳಿತಿದ್ದವರತ್ತ ನಗುಮುಖದಿಂದಲೇ ತಿರುಗಿದ ಅವರು, `ವಿಶ್ವೇಶ್ವರಯ್ಯ ಅವರ ಜೀವನದ ಈ ದೃಷ್ಟಾಂತವನ್ನು ನಮ್ಮ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಅಳವಡಿಸಿಕೊಂಡರೆ ಚೆನ್ನಾಗಿತ್ತು~ ಎಂದರು. ಹೆಗ್ಗಡೆಯವರ ಮಾತಿಗೆ ಮುರುಗೇಶ ನಿರಾಣಿ, ಸದಾನಂದ ಗೌಡ, ಜೆ.ಆರ್. ಬಂಗೇರ ಮತ್ತಿತರರೂ ನಕ್ಕರು!<br /> <br /> ಹೆಗ್ಗಡೆಯವರ ಮಾತಿಗೆ ತಮ್ಮ ಭಾಷಣದಲ್ಲಿ ದನಿಗೂಡಿಸಿದ ಗೌಡ ಅವರು, `ಇಂದು ಅಧಿಕಾರ ಸ್ವೀಕರಿಸುವವರೂ ಔತಣಕೂಟ ಏರ್ಪಡಿಸುತ್ತಾರೆ. ನೀವು ಸ್ವಲ್ಪ ಮಾಡಿಕೊಳ್ಳಿ, ನಮಗೂ ಸ್ವಲ್ಪ ಕೊಡಿ ಎನ್ನಲು~ ಎಂದು ಚಟಾಕಿ ಹಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದ ಗ್ರಾಮೀಣ ಪ್ರದೇಶಗಳ ದಕ್ಷ ಕುಶಲಕರ್ಮಿಗಳನ್ನು ಗುರುತಿಸಿ, ಅವರ ಕೌಶಲವನ್ನು ಪಟ್ಟಣ ಮತ್ತು ಅರೆಪಟ್ಟಣಗಳಲ್ಲಿ ಬಳಸಿಕೊಳ್ಳುವ ನೂತನ ಯೋಜನೆಯೊಂದನ್ನು ಮುಂದಿನ ದಿನಗಳಲ್ಲಿ ಆರಂಭಿಸುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಘೋಷಿಸಿದರು.<br /> <br /> ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್ಕೆಸಿಸಿಐ) ಸಂಸ್ಥಾಪಕರ ದಿನಾಚರಣೆಯಲ್ಲಿ `ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ~ ಸ್ವೀಕರಿಸಿ ಮಾತನಾಡಿದ ಅವರು, `ಈ ಯೋಜನೆಯ ಕುರಿತು ಎಫ್ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಅವರೊಂದಿಗೆ ಚರ್ಚಿಸಿದ್ದೇನೆ. ಧರ್ಮಸ್ಥಳ ಕ್ಷೇತ್ರ, ಎಫ್ಕೆಸಿಸಿಐ ಒಟ್ಟಾಗಿ ಈ ಯೋಜನೆಗೆ ಚಾಲನೆ ನೀಡಲಿವೆ~ ಎಂದು ತಿಳಿಸಿದರು.<br /> <br /> <strong>ರುಡ್ಸೆಟ್ ಸಾಧನೆ: </strong>ಧರ್ಮಸ್ಥಳ ಕ್ಷೇತ್ರ ನಡೆಸುತ್ತಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಯೋಜನೆಯ (ರುಡ್ಸೆಟ್) ಕುರಿತು ಮಾಹಿತಿ ಹಂಚಿಕೊಂಡ ಅವರು, `ದೇಶದ ವಿವಿಧ ಭಾಗಗಳಲ್ಲಿರುವ ರುಡ್ಸೆಟ್ ಕೇಂದ್ರಗಳ ಮೂಲಕ ಇದುವರೆಗೆ 1.27 ಲಕ್ಷ ಜನರಿಗೆ ಸ್ವಉದ್ಯೋಗ ಕುರಿತ ತರಬೇತಿ ನೀಡಲಾಗಿದೆ. ಅವರಲ್ಲಿ 93 ಸಾವಿರ ಮಂದಿ ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ~ ಎಂದು ತಿಳಿಸಿದರು.<br /> <br /> ದೇಶದ ಪ್ರತಿ ಜಿಲ್ಲೆಯಲ್ಲೂ ಒಂದು ರುಡ್ಸೆಟ್ ಕೇಂದ್ರ ಆರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆ ಕೇಂದ್ರಗಳ ಉಸ್ತುವಾರಿಯನ್ನು ಧರ್ಮಸ್ಥಳ ಕ್ಷೇತ್ರವೇ ವಹಿಸಿಕೊಳ್ಳಲಿದೆ ಎಂದರು.<br /> <br /> `ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ~ಯ ಮೂಲಕ ಇದುವರೆಗೆ ಒಟ್ಟು ರೂ. 1,200 ಕೋಟಿ ಕಿರುಸಾಲ ವಿತರಿಸಲಾಗಿದೆ. ಈ ಯೋಜನೆಯ ವಾರ್ಷಿಕ ವ್ಯವಹಾರ ಈಗ ರೂ. 3,000 ಕೋಟಿ ತಲುಪಿದೆ ಎಂದರು. ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ, ಸಚಿವರಾದ ಮುರುಗೇಶ ನಿರಾಣಿ, ಎಸ್. ಸುರೇಶ್ಕುಮಾರ್, ಎಫ್ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರ ಇದ್ದರು.</p>.<p><strong>ಹೆಗ್ಗಡೆ ಹೇಳಿದ ಸರ್.ಎಂ.ವಿ ದೃಷ್ಟಾಂತ<br /> ಬೆಂಗಳೂರು:</strong> ವಿಶ್ವೇಶ್ವರಯ್ಯ ಅವರ ಜೀವನ ಕ್ರಮದ ಕುರಿತು ಭಾಷಣದ ಮಧ್ಯೆ ಪ್ರಸ್ತಾಪಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು, `ವಿಶ್ವೇಶ್ವರಯ್ಯನವರು ದಿವಾನರಾಗಿ ಅಧಿಕಾರ ಸ್ವೀಕರಿಸಲು ಎರಡು ದಿನ ಇರುವಾಗ ತಮ್ಮ ಸಂಬಂಧಿಕರನ್ನು ಕರೆದು ಮನೆಯಲ್ಲಿ ಊಟ ಹಾಕಿಸಿದರಂತೆ. ಊಟದ ನಂತರ, ನಾನು ಮೈಸೂರು ಸರ್ಕಾರದ ಅಧಿಕಾರಿಯಾದ ನಂತರ ಯಾರೂ ನನ್ನ ಮನೆಗೆ ಬರಬೇಡಿ, ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಸೂಚಿಸಿದರಂತೆ~ ಎಂದು ಹೆಗ್ಗಡೆ ಹೇಳಿದರು.<br /> <br /> ನಂತರ ವೇದಿಕೆಯ ಮೇಲೆ ಕುಳಿತಿದ್ದವರತ್ತ ನಗುಮುಖದಿಂದಲೇ ತಿರುಗಿದ ಅವರು, `ವಿಶ್ವೇಶ್ವರಯ್ಯ ಅವರ ಜೀವನದ ಈ ದೃಷ್ಟಾಂತವನ್ನು ನಮ್ಮ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಅಳವಡಿಸಿಕೊಂಡರೆ ಚೆನ್ನಾಗಿತ್ತು~ ಎಂದರು. ಹೆಗ್ಗಡೆಯವರ ಮಾತಿಗೆ ಮುರುಗೇಶ ನಿರಾಣಿ, ಸದಾನಂದ ಗೌಡ, ಜೆ.ಆರ್. ಬಂಗೇರ ಮತ್ತಿತರರೂ ನಕ್ಕರು!<br /> <br /> ಹೆಗ್ಗಡೆಯವರ ಮಾತಿಗೆ ತಮ್ಮ ಭಾಷಣದಲ್ಲಿ ದನಿಗೂಡಿಸಿದ ಗೌಡ ಅವರು, `ಇಂದು ಅಧಿಕಾರ ಸ್ವೀಕರಿಸುವವರೂ ಔತಣಕೂಟ ಏರ್ಪಡಿಸುತ್ತಾರೆ. ನೀವು ಸ್ವಲ್ಪ ಮಾಡಿಕೊಳ್ಳಿ, ನಮಗೂ ಸ್ವಲ್ಪ ಕೊಡಿ ಎನ್ನಲು~ ಎಂದು ಚಟಾಕಿ ಹಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>