<p>ಅರಸೀಕೆರೆ: `ದೇವತೆಗಳ ಆರಾಧನೆ ಹಾಗೂ ಧಾರ್ಮಿಕ ನಂಬಿಕೆಯಿಂದ ಜನರಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ ಸಾಧ್ಯವಾಗಿದೆ~ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ನುಡಿದರು.<br /> <br /> ತಾಲ್ಲೂಕಿನ ಯಳವಾರೆ ಗ್ರಾಮದಲ್ಲಿ ಸೋಮವಾರನಡೆದ ಗ್ರಾಮ ದೇವತೆ ಹುಚ್ಚಮ್ಮ ದೇವಿ ದೇವಾಲಯದ ವಿಮಾನ ಗೋಪುರ ಕಲಶ ಸ್ಥಾಪನೆ, ಮಹಾದ್ವಾರ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>`ಸನಾತನ ಧರ್ಮ ಪರಂಪರೆಯಲ್ಲಿ ಸಾಧು-ಸಂತರು, ಋಷಿ ಮುನಿಗಳು ಯಜ್ಞ-ಯಾಗಾದಿಗಳನ್ನು ಮಾಡುತ್ತ ಬಂದಿದ್ದು, ಇದರ ಮೂಲ ಉದ್ದೇಶ ಮನುಷ್ಯ ಜೀವನ ಜಂಜಾಟಗಳಿಂದ ದೂರ ಬಂದು ಸಮೃದ್ಧಿಯಿಂದ ಜೀವನ ಸಾಗಿಸಲು ದಾರಿ ಮಾಡಿ ಕೊಡುವುದಾಗಿದೆ~ ಎಂದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಅನಾದಿ ಕಾಲದಿಂದಲೂ ನಾವು ಭಗವಂತನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆವು. ಆಗಲೂ ದೇವರನ್ನು ಅಲ್ಲಗಳೆಯುವವರು ಇದ್ದರು, ಈಗಲೂ ಇದ್ದಾರೆ. ರಾವಣ ಕಂಸನನ್ನು ಬಿಟ್ಟು ರಾಮನನ್ನು ಅನುಕರಣೆ ಮಾಡುವುದು ಒಳಿತು~ ಎಂದರು.<br /> <br /> ಇದಕ್ಕೂ ಮೊದಲು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗೀ ರಾಜೇಂದ್ರ ಸ್ವಾಮೀಜಿ ಹಾಗೂ ಬೆಲಗೂರು ಬಿಂದು ಮಾಧವ ಶರ್ಮಾ ದೇವಾಲಯಕ್ಕೆ ಆಗಮಿಸಿ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ ಕಾರ್ಯ ನಡೆಸಿಕೊಟ್ಟರು.<br /> <br /> ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ತಾ.ಪಂ. ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಸೀಕೆರೆ: `ದೇವತೆಗಳ ಆರಾಧನೆ ಹಾಗೂ ಧಾರ್ಮಿಕ ನಂಬಿಕೆಯಿಂದ ಜನರಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ ಸಾಧ್ಯವಾಗಿದೆ~ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ನುಡಿದರು.<br /> <br /> ತಾಲ್ಲೂಕಿನ ಯಳವಾರೆ ಗ್ರಾಮದಲ್ಲಿ ಸೋಮವಾರನಡೆದ ಗ್ರಾಮ ದೇವತೆ ಹುಚ್ಚಮ್ಮ ದೇವಿ ದೇವಾಲಯದ ವಿಮಾನ ಗೋಪುರ ಕಲಶ ಸ್ಥಾಪನೆ, ಮಹಾದ್ವಾರ ಉದ್ಘಾಟನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>`ಸನಾತನ ಧರ್ಮ ಪರಂಪರೆಯಲ್ಲಿ ಸಾಧು-ಸಂತರು, ಋಷಿ ಮುನಿಗಳು ಯಜ್ಞ-ಯಾಗಾದಿಗಳನ್ನು ಮಾಡುತ್ತ ಬಂದಿದ್ದು, ಇದರ ಮೂಲ ಉದ್ದೇಶ ಮನುಷ್ಯ ಜೀವನ ಜಂಜಾಟಗಳಿಂದ ದೂರ ಬಂದು ಸಮೃದ್ಧಿಯಿಂದ ಜೀವನ ಸಾಗಿಸಲು ದಾರಿ ಮಾಡಿ ಕೊಡುವುದಾಗಿದೆ~ ಎಂದರು.<br /> <br /> ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ, ಅನಾದಿ ಕಾಲದಿಂದಲೂ ನಾವು ಭಗವಂತನ ಮೇಲೆ ನಂಬಿಕೆ ಇಟ್ಟುಕೊಂಡಿದ್ದೆವು. ಆಗಲೂ ದೇವರನ್ನು ಅಲ್ಲಗಳೆಯುವವರು ಇದ್ದರು, ಈಗಲೂ ಇದ್ದಾರೆ. ರಾವಣ ಕಂಸನನ್ನು ಬಿಟ್ಟು ರಾಮನನ್ನು ಅನುಕರಣೆ ಮಾಡುವುದು ಒಳಿತು~ ಎಂದರು.<br /> <br /> ಇದಕ್ಕೂ ಮೊದಲು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗೀ ರಾಜೇಂದ್ರ ಸ್ವಾಮೀಜಿ ಹಾಗೂ ಬೆಲಗೂರು ಬಿಂದು ಮಾಧವ ಶರ್ಮಾ ದೇವಾಲಯಕ್ಕೆ ಆಗಮಿಸಿ ವಿಮಾನ ಗೋಪುರ ಕಲಶ ಪ್ರತಿಷ್ಠಾಪನೆ ಕಾರ್ಯ ನಡೆಸಿಕೊಟ್ಟರು.<br /> <br /> ಶಾಸಕ ಕೆ.ಎಂ.ಶಿವಲಿಂಗೇಗೌಡ, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ತಾ.ಪಂ. ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಹಾರನಹಳ್ಳಿ ಶಿವಮೂರ್ತಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>