<p><strong>ಓಡಿಶಾ(ಪಿಟಿಐ): </strong>ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಮಹಿಳಾ ಮಾವೋವಾದಿ ಶನಿವಾರ ಪೊಲೀಸರಿಗೆ ಶರಣಾಗಿದ್ದಾಳೆ. ಪೊಲೀಸರು ಈಕೆಯ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.</p>.<p>ಹೊಸದಾಗಿ ರಚನೆಯಾದ ಮಾವೋವಾದಿ ಗುಪ್ತೇಶ್ವರಂ ದಳಂನ ಉಪ ದಂಡನಾಯಕಿಯಾಗಿದ್ದ (ಡೆಪ್ಯುಟಿ ಕಮಾಂಡರ್ ) ದೇವೆ ಪದ್ಯಾಮಿ ಅಲಿಯಾಸ್ ಸಂಧ್ಯಾ ಎರಡು ದಿನಗಳ ಹಿಂದೆ ದಳವನ್ನು ತ್ಯಜಿಸಿ ಪೊಲೀಸ್ ಮಹಾನಿರೀಕ್ಷಕ ವೈ. ಕೆ. ಜೆತ್ವಾ ಮತ್ತು ಪೊಲೀಸ್ ಅಧೀಕ್ಷಕ ಅಖಿಲೇಶ್ವರ್ ಸಿಂಗ್ ಎದುರು ಶರಣಾಗಿದ್ದಾಳೆ.</p>.<p>‘‘ಎರಡು ತಿಂಗಳ ಹಿಂದೆ ರಾಜ್ಯ ಮಾವೋವಾದಿ ಸಮಿತಿ ಸದಸ್ಯನಾಗಿದ್ದ ಆಕೆಯ ಗಂಡ ಕೇಲ ಅನಿಲ್ ಕುಮಾರ್ ಅಲಿಯಾಸ್ ಚಂದು ಬಂಧನದ ನಂತರ ನಕ್ಸಲ್ ಶಿಬಿರವನ್ನು ತೊರೆಯಲು ಸೂಕ್ತ ಸಮಯಕ್ಕಾಗಿ ಸಂಧ್ಯಾ ಕಾಯುತ್ತಿದ್ದಳು’’ ಎಂದು ಸಿಂಗ್ ತಿಳಿಸಿದರು.</p>.<p>ಮಹಿಳಾ ನಾಯಕಿಯಾಗಿದ್ದರಿಂದ ಸಂಘಟನೆಯಲ್ಲಿದ್ದ ಭಯವು ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಮಾಡಿರಬಹುದು ಎಂದರು.</p>.<p>ಸರ್ಕಾರದ ನೀತಿಗೆ ಅನುಗುಣವಾಗಿ ಶರಣಾಗತ ಮಾವೋವಾದಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆಕೆಗೂ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸಿಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಓಡಿಶಾ(ಪಿಟಿಐ): </strong>ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಮಹಿಳಾ ಮಾವೋವಾದಿ ಶನಿವಾರ ಪೊಲೀಸರಿಗೆ ಶರಣಾಗಿದ್ದಾಳೆ. ಪೊಲೀಸರು ಈಕೆಯ ತಲೆಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.</p>.<p>ಹೊಸದಾಗಿ ರಚನೆಯಾದ ಮಾವೋವಾದಿ ಗುಪ್ತೇಶ್ವರಂ ದಳಂನ ಉಪ ದಂಡನಾಯಕಿಯಾಗಿದ್ದ (ಡೆಪ್ಯುಟಿ ಕಮಾಂಡರ್ ) ದೇವೆ ಪದ್ಯಾಮಿ ಅಲಿಯಾಸ್ ಸಂಧ್ಯಾ ಎರಡು ದಿನಗಳ ಹಿಂದೆ ದಳವನ್ನು ತ್ಯಜಿಸಿ ಪೊಲೀಸ್ ಮಹಾನಿರೀಕ್ಷಕ ವೈ. ಕೆ. ಜೆತ್ವಾ ಮತ್ತು ಪೊಲೀಸ್ ಅಧೀಕ್ಷಕ ಅಖಿಲೇಶ್ವರ್ ಸಿಂಗ್ ಎದುರು ಶರಣಾಗಿದ್ದಾಳೆ.</p>.<p>‘‘ಎರಡು ತಿಂಗಳ ಹಿಂದೆ ರಾಜ್ಯ ಮಾವೋವಾದಿ ಸಮಿತಿ ಸದಸ್ಯನಾಗಿದ್ದ ಆಕೆಯ ಗಂಡ ಕೇಲ ಅನಿಲ್ ಕುಮಾರ್ ಅಲಿಯಾಸ್ ಚಂದು ಬಂಧನದ ನಂತರ ನಕ್ಸಲ್ ಶಿಬಿರವನ್ನು ತೊರೆಯಲು ಸೂಕ್ತ ಸಮಯಕ್ಕಾಗಿ ಸಂಧ್ಯಾ ಕಾಯುತ್ತಿದ್ದಳು’’ ಎಂದು ಸಿಂಗ್ ತಿಳಿಸಿದರು.</p>.<p>ಮಹಿಳಾ ನಾಯಕಿಯಾಗಿದ್ದರಿಂದ ಸಂಘಟನೆಯಲ್ಲಿದ್ದ ಭಯವು ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಮಾಡಿರಬಹುದು ಎಂದರು.</p>.<p>ಸರ್ಕಾರದ ನೀತಿಗೆ ಅನುಗುಣವಾಗಿ ಶರಣಾಗತ ಮಾವೋವಾದಿಗಳಿಗೆ ಪುನರ್ವಸತಿ ಕಲ್ಪಿಸುವಂತೆ ಆಕೆಗೂ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸಿಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>