<p><strong>ಬೆಂಗಳೂರು: </strong>ಸತ್ಯ ಸಾಯಿ ಬಾಬಾ ಅವರ ನಿಧನದ ಸುದ್ದಿ ಭಾನುವಾರ ಹರಡುತ್ತಿದಂತೆ ರಾಜಧಾನಿಯಲ್ಲಿರುವ ಬಾಬಾ ಭಕ್ತರಲ್ಲಿ ದುಃಖ ಮಡುಗಟ್ಟಿತು. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಬಾಬಾ ಅಸ್ತಂಗತರಾದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಬಾಬಾ ಆತ್ಮಕ್ಕೆ ಶಾಂತಿ ಕೋರಲು ಭಜನೆ ಆರಂಭಿಸಿದರು.<br /> ಭಕ್ತಾದಿಗಳು ಸಮೀಪದ ಸಾಯಿ ಬಾಬಾ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.<br /> <br /> ವೈಟ್ಫೀಲ್ಡ್ನಲ್ಲಿರುವ ಬೃಂದಾವನ ಸಾಯಿ ಬಾಬಾ ಆಶ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಬಾಬಾ ನಿಧನಕ್ಕೆ ಕಂಬನಿ ಮಿಡಿಯಿತು. ಬೆಳಿಗ್ಗೆಯಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಭಕ್ತರು ‘ಬಾಬಾ ಮತ್ತೆ ಹುಟ್ಟಿಬರಲಿ’ ಎಂದು ಹಾರೈಸಿದರು.<br /> <br /> ಬಾಬಾ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದ ಜರ್ಮನಿಯ ಸ್ವಾಮಿ ನಂದಾ, ‘ಬಾಬಾ ಅವರು ದೈಹಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಆಧ್ಯಾತ್ಮಿಕವಾಗಿ ನಮ್ಮನೆಂದೂ ಅಗಲುವುದಿಲ್ಲ. ಬಾಬಾ ತನ್ನ ಭಕ್ತರಿಗಾಗಿ ಮತ್ತೆ ಅವತರಿಸಲಿದ್ದಾರೆ’ ಎಂದು ಭಾವುಕರಾಗಿ ನುಡಿದರು.<br /> ‘ಬಾಬಾ ಬೆಂಗಳೂರಿನ ಆಶ್ರಮಕ್ಕೆ ಆಗಾಗ್ಗೆ ಬರುತ್ತಿದ್ದರು. ಬಾಬಾ ಸಾವಿನಿಂದ ಭಕ್ತ ಸಮೂಹ ಅನಾಥವಾಗಿದೆ. ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಎಲ್ಲಾ ಧರ್ಮೀಯರ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಬಾಬಾ ವಿಧಿವಶರಾಗಿರುವುದು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಭಕ್ತರೊಬ್ಬರು ಅಳಲು ತೋಡಿಕೊಂಡರು.<br /> <br /> ಬಾಬಾ ಭಕ್ತರಾದ ಶ್ರೀನಿವಾಸ್, ‘ಬಾಬಾ ಇನ್ನೂ ಜೀವಂತವಗಿದ್ದಾರೆ. ಎರಡೇ ದಿನಗಳಲ್ಲಿ ಮತ್ತೆ ಹುಟ್ಟಿಬಂದು ಭಕ್ತರನ್ನು ಆಶೀರ್ವದಿಸಲಿದ್ದಾರೆ’ ಎಂದು ಹೇಳಿದರು. ಬಾಬಾ ಸಾವಿನ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವೈಟ್ಫೀಲ್ಡ್ನಲ್ಲಿರುವ ಆಶ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.<br /> <br /> <strong>ಭಾವಚಿತ್ರದಲ್ಲಿ ವಿಭೂತಿ!</strong><br /> ಬಾಬಾ ಭಕ್ತರಾದ ಚಿತ್ರ ನಿರ್ಮಾಪಕ ಸಾಯಿಪ್ರಕಾಶ್ ಮನೆಯಲ್ಲಿ ಬಾಬಾ ಅವರ ಭಾವಚಿತ್ರದಿಂದ ವಿಭೂತಿ ಉದುರುತ್ತಿತ್ತು ಎನ್ನಲಾಗಿದೆ. <br /> <br /> ‘1994ರಲ್ಲಿ ನಾನು ನಿರ್ದೇಶಿಸಿ ‘ಸಾಯಿಬಾಬಾ’ ಚಿತ್ರದ ಬಿಡುಗಡೆ ವೇಳೆ ಸ್ವತಃ ಸಾಯಿಬಾಬಾ ಅವರೇ ಒಂದು ವಿಗ್ರಹ ನೀಡಿ ಆಶೀರ್ವದಿಸಿದ್ದರು. 15 ವರ್ಷಗಳ ಹಿಂದೆಯೇಬಾಬಾ ವಿಗ್ರಹದಿಂದ ವಿಭೂತಿ ಉದುರುತ್ತಿತ್ತುಈ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿಟ್ಟಿದೆ’ ಎಂದು ನಿರ್ದೇಶಕ ಸಾಯಿಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘ಬಾಬಾ ಭಾವಚಿತ್ರದಲ್ಲಿ ವರ್ಷಗಳ ಹಿಂದೆ ವಿಭೂತಿಯಿಂದ ಕೆಲ ಅಕ್ಷರಗಳು ಮೂಡಿದ್ದವು. ಆದರೆ ಆ ಅಕ್ಷರಗಳು ಏನೆಂಬುದು ಸರಿಯಾಗಿ ತಿಳಿಯಲಿಲ್ಲ. ಬಾಬಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ದಿನದಿಂದ ಭಾವಚಿತ್ರದಲ್ಲಿ ವಿಭೂತಿ ಅಲ್ಪ ಪ್ರಮಾಣದಲ್ಲಿ ಉದುರುತ್ತಿತ್ತು. ಕೆಲವು ದಿನಗಳಿಂದ ಪೂರ್ಣವಾಗಿ ಭಾವಚಿತ್ರಕ್ಕೆ ವಿಭೂತಿ ಆವರಿಸಿಕೊಂಡಿತು’ ಎಂದು ತಿಳಿಸಿದರು. <br /> <br /> ಭಾನುವಾರ ಬಾಬಾ ನಿಧನರಾಗುತ್ತಿದ್ದಂತೆಯೇ ಭಾವಚಿತ್ರದಿಂದ ವಿಭೂತಿ ಅಧಿಕ ಪ್ರಮಾಣದಲ್ಲಿ ಉದುರುತ್ತಿದ್ದು, ಇದನ್ನು ನೋಡಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಸತ್ಯ ಸಾಯಿ ಬಾಬಾ ಅವರ ನಿಧನದ ಸುದ್ದಿ ಭಾನುವಾರ ಹರಡುತ್ತಿದಂತೆ ರಾಜಧಾನಿಯಲ್ಲಿರುವ ಬಾಬಾ ಭಕ್ತರಲ್ಲಿ ದುಃಖ ಮಡುಗಟ್ಟಿತು. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಬಾಬಾ ಅಸ್ತಂಗತರಾದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರು ಬಾಬಾ ಆತ್ಮಕ್ಕೆ ಶಾಂತಿ ಕೋರಲು ಭಜನೆ ಆರಂಭಿಸಿದರು.<br /> ಭಕ್ತಾದಿಗಳು ಸಮೀಪದ ಸಾಯಿ ಬಾಬಾ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.<br /> <br /> ವೈಟ್ಫೀಲ್ಡ್ನಲ್ಲಿರುವ ಬೃಂದಾವನ ಸಾಯಿ ಬಾಬಾ ಆಶ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ಬಾಬಾ ನಿಧನಕ್ಕೆ ಕಂಬನಿ ಮಿಡಿಯಿತು. ಬೆಳಿಗ್ಗೆಯಿಂದ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಭಕ್ತರು ‘ಬಾಬಾ ಮತ್ತೆ ಹುಟ್ಟಿಬರಲಿ’ ಎಂದು ಹಾರೈಸಿದರು.<br /> <br /> ಬಾಬಾ ನಿಧನದ ಸುದ್ದಿ ತಿಳಿದು ಆಘಾತಗೊಂಡಿದ್ದ ಜರ್ಮನಿಯ ಸ್ವಾಮಿ ನಂದಾ, ‘ಬಾಬಾ ಅವರು ದೈಹಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ. ಆದರೆ ಅವರು ಆಧ್ಯಾತ್ಮಿಕವಾಗಿ ನಮ್ಮನೆಂದೂ ಅಗಲುವುದಿಲ್ಲ. ಬಾಬಾ ತನ್ನ ಭಕ್ತರಿಗಾಗಿ ಮತ್ತೆ ಅವತರಿಸಲಿದ್ದಾರೆ’ ಎಂದು ಭಾವುಕರಾಗಿ ನುಡಿದರು.<br /> ‘ಬಾಬಾ ಬೆಂಗಳೂರಿನ ಆಶ್ರಮಕ್ಕೆ ಆಗಾಗ್ಗೆ ಬರುತ್ತಿದ್ದರು. ಬಾಬಾ ಸಾವಿನಿಂದ ಭಕ್ತ ಸಮೂಹ ಅನಾಥವಾಗಿದೆ. ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಎಲ್ಲಾ ಧರ್ಮೀಯರ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಬಾಬಾ ವಿಧಿವಶರಾಗಿರುವುದು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಭಕ್ತರೊಬ್ಬರು ಅಳಲು ತೋಡಿಕೊಂಡರು.<br /> <br /> ಬಾಬಾ ಭಕ್ತರಾದ ಶ್ರೀನಿವಾಸ್, ‘ಬಾಬಾ ಇನ್ನೂ ಜೀವಂತವಗಿದ್ದಾರೆ. ಎರಡೇ ದಿನಗಳಲ್ಲಿ ಮತ್ತೆ ಹುಟ್ಟಿಬಂದು ಭಕ್ತರನ್ನು ಆಶೀರ್ವದಿಸಲಿದ್ದಾರೆ’ ಎಂದು ಹೇಳಿದರು. ಬಾಬಾ ಸಾವಿನ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವೈಟ್ಫೀಲ್ಡ್ನಲ್ಲಿರುವ ಆಶ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.<br /> <br /> <strong>ಭಾವಚಿತ್ರದಲ್ಲಿ ವಿಭೂತಿ!</strong><br /> ಬಾಬಾ ಭಕ್ತರಾದ ಚಿತ್ರ ನಿರ್ಮಾಪಕ ಸಾಯಿಪ್ರಕಾಶ್ ಮನೆಯಲ್ಲಿ ಬಾಬಾ ಅವರ ಭಾವಚಿತ್ರದಿಂದ ವಿಭೂತಿ ಉದುರುತ್ತಿತ್ತು ಎನ್ನಲಾಗಿದೆ. <br /> <br /> ‘1994ರಲ್ಲಿ ನಾನು ನಿರ್ದೇಶಿಸಿ ‘ಸಾಯಿಬಾಬಾ’ ಚಿತ್ರದ ಬಿಡುಗಡೆ ವೇಳೆ ಸ್ವತಃ ಸಾಯಿಬಾಬಾ ಅವರೇ ಒಂದು ವಿಗ್ರಹ ನೀಡಿ ಆಶೀರ್ವದಿಸಿದ್ದರು. 15 ವರ್ಷಗಳ ಹಿಂದೆಯೇಬಾಬಾ ವಿಗ್ರಹದಿಂದ ವಿಭೂತಿ ಉದುರುತ್ತಿತ್ತುಈ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿಟ್ಟಿದೆ’ ಎಂದು ನಿರ್ದೇಶಕ ಸಾಯಿಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ‘ಬಾಬಾ ಭಾವಚಿತ್ರದಲ್ಲಿ ವರ್ಷಗಳ ಹಿಂದೆ ವಿಭೂತಿಯಿಂದ ಕೆಲ ಅಕ್ಷರಗಳು ಮೂಡಿದ್ದವು. ಆದರೆ ಆ ಅಕ್ಷರಗಳು ಏನೆಂಬುದು ಸರಿಯಾಗಿ ತಿಳಿಯಲಿಲ್ಲ. ಬಾಬಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ದಿನದಿಂದ ಭಾವಚಿತ್ರದಲ್ಲಿ ವಿಭೂತಿ ಅಲ್ಪ ಪ್ರಮಾಣದಲ್ಲಿ ಉದುರುತ್ತಿತ್ತು. ಕೆಲವು ದಿನಗಳಿಂದ ಪೂರ್ಣವಾಗಿ ಭಾವಚಿತ್ರಕ್ಕೆ ವಿಭೂತಿ ಆವರಿಸಿಕೊಂಡಿತು’ ಎಂದು ತಿಳಿಸಿದರು. <br /> <br /> ಭಾನುವಾರ ಬಾಬಾ ನಿಧನರಾಗುತ್ತಿದ್ದಂತೆಯೇ ಭಾವಚಿತ್ರದಿಂದ ವಿಭೂತಿ ಅಧಿಕ ಪ್ರಮಾಣದಲ್ಲಿ ಉದುರುತ್ತಿದ್ದು, ಇದನ್ನು ನೋಡಲು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>