<p><strong>ಚಿಕ್ಕಬಳ್ಳಾಪುರ:</strong> ಸುಮಾರು ಒಂದು ತಿಂಗಳ ಹಿಂದೆ ನೀರು ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನೀಡಲು ಜನರು ಚಿಕ್ಕಬಳ್ಳಾಪುರ ನಗರಸಭೆ ಕಚೇರಿಗೆ ಹೋದರೆ, ನಗರಸಭೆ ಸದಸ್ಯರು ಕಾಣಸಿಗುತ್ತಿರಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗದ ಸದಸ್ಯರನ್ನು ಹುಡುಕುವುದೇ ದುಸ್ತರವಾಗಿತ್ತು. <br /> <br /> ಆದರೆ ಈಗ ನಗರಸಭೆ ಸದಸ್ಯರು ಎಲ್ಲಿ ಬೇಕೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರವು ತೀರ ಹಿಂದುಳಿದಿದೆ ಎಂಬುದು ಸದಸ್ಯರಿಗೆ ದಿಢೀರ್ `ಜ್ಞಾನೋದಯ~ವಾಗಿದ್ದು, ಅಭಿವೃದ್ಧಿಗಾಗಿ ಪದೇ ಪದೇ ಒತ್ತಾಯಿಸುತ್ತಿದ್ದಾರೆ.<br /> ಅವಿಶ್ವಾಸ ಮಂಡನೆ ಮಾಡುವ ಮೂಲಕ ಬಿ.ಎ.ಲೋಕೇಶ್ಕುಮಾರ್ ಅವರನ್ನು ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೇ ತಡ, ಬಹುತೇಕ ಸದಸ್ಯರು ಅಭಿವೃದ್ಧಿಯ ಮಂತ್ರ ಜಪಿಸತೊಡಗಿದ್ದಾರೆ. ನಗರವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೆ ಇರುವುದಕ್ಕೆ ಅಧಿಕಾರಿಗಳೇ ಕಾರಣವೆಂದು ಸದಸ್ಯರು ದೂಷಿಸುತ್ತಿದ್ದಾರೆ.<br /> <br /> `ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ~ ಎಂದು ಆರೋಪಿಸುವ ಸದಸ್ಯರು ಅವಕಾಶ ಸಿಕ್ಕಾಗಲೆಲ್ಲ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಿದ್ದಾರೆ.ಪ್ರಭಾರಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದ ತುರ್ತು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಒಬ್ಬೊಬ್ಬರಾಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.<br /> <br /> `ವಾರ್ಡ್ ಗಳಲ್ಲಿ ತಲೆ ಎತ್ತಿಕೊಂಡು ತಿರುಗಾಡಲಾರದ ಪರಿಸ್ಥಿತಿಯಿದೆ. ವಾರ್ಡ್ನ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದಲೇ ನಮ್ಮ ಸ್ಥಿತಿ ಹೀಗಾಗಿದೆ~ ಎಂದು ಸದಸ್ಯ ಎಂ.ಪ್ರಕಾಶ್ ಸೇರಿದಂತೆ ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು.<br /> <br /> ನಗರದ ಟಿ.ಚನ್ನಯ್ಯ ಉದ್ಯಾನಕ್ಕೆ ಗುರುವಾರ ಭೇಟಿ ನೀಡಿದ ಕೆಲ ಸದಸ್ಯರು ಉದ್ಯಾನದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. `ಉದ್ಯಾನ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಈ ಕಾರಣದಿಂದಲೇ ಉದ್ಯಾನ ಕಳೆಗುಂದಿದೆ. ನೀರು ಪೂರೈಕೆಯಿಲ್ಲದೆ ಹೂಗಿಡಗಳು ಒಣಗಿವೆ. <br /> <br /> ಈ ಸಮಸ್ಯೆಯನ್ನು ಬೇಗನೇ ಪರಿಹರಿಸಬೇಕು. ಕಾಮಗಾರಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು~ ಎಂದು ಅಧಿಕಾರಿಗಳಿಗೆ ತಾಕೀತು ಕೂಡ ಮಾಡಿದರು. ನಗರಸಭೆ ಸದಸ್ಯರು ಈಗ ದಿಢೀರನೇ ಚುರುಕಾಗಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.<br /> <br /> `ಬಿ.ಎ.ಲೋಕೇಶ್ಕುಮಾರ್ ಅಧ್ಯಕ್ಷರಾಗಿದ್ದ ವೇಳೆ ಈ ಪರಿ ಚುರುಕುತನ ತೋರದ ಸದಸ್ಯರು ಈಗ ಅಭಿವೃದ್ಧಿಯ ಬಗ್ಗೆ ಆಸಕ್ತಿ ತೋರುತ್ತಿರುವುದು ಅಚ್ಚರಿ ಮೂಡಿಸಿದೆ. ಇದೇ ಚುರುಕುತನ ಮೊದಲೇ ತೋರಿಸಿದ್ದರೆ, ಈ ಹೊತ್ತಿಗೆ ಚಿಕ್ಕಬಳ್ಳಾಪುರ ನಗರಸಭೆಯು ಚಿಂತಾಮಣಿ ನಗರಸಭೆ ಹಾಗೆ ಅತ್ಯುತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿತ್ತು, ಚಿಕ್ಕಬಳ್ಳಾಪುರ ಕೂಡ ಅಭಿವೃದ್ಧಿಯಾಗುತ್ತಿತ್ತು~ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಎನ್.ಶ್ರೀನಿವಾಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಸುಮಾರು ಒಂದು ತಿಂಗಳ ಹಿಂದೆ ನೀರು ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ದೂರು ನೀಡಲು ಜನರು ಚಿಕ್ಕಬಳ್ಳಾಪುರ ನಗರಸಭೆ ಕಚೇರಿಗೆ ಹೋದರೆ, ನಗರಸಭೆ ಸದಸ್ಯರು ಕಾಣಸಿಗುತ್ತಿರಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗದ ಸದಸ್ಯರನ್ನು ಹುಡುಕುವುದೇ ದುಸ್ತರವಾಗಿತ್ತು. <br /> <br /> ಆದರೆ ಈಗ ನಗರಸಭೆ ಸದಸ್ಯರು ಎಲ್ಲಿ ಬೇಕೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರವು ತೀರ ಹಿಂದುಳಿದಿದೆ ಎಂಬುದು ಸದಸ್ಯರಿಗೆ ದಿಢೀರ್ `ಜ್ಞಾನೋದಯ~ವಾಗಿದ್ದು, ಅಭಿವೃದ್ಧಿಗಾಗಿ ಪದೇ ಪದೇ ಒತ್ತಾಯಿಸುತ್ತಿದ್ದಾರೆ.<br /> ಅವಿಶ್ವಾಸ ಮಂಡನೆ ಮಾಡುವ ಮೂಲಕ ಬಿ.ಎ.ಲೋಕೇಶ್ಕುಮಾರ್ ಅವರನ್ನು ನಗರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೇ ತಡ, ಬಹುತೇಕ ಸದಸ್ಯರು ಅಭಿವೃದ್ಧಿಯ ಮಂತ್ರ ಜಪಿಸತೊಡಗಿದ್ದಾರೆ. ನಗರವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದೆ ಇರುವುದಕ್ಕೆ ಅಧಿಕಾರಿಗಳೇ ಕಾರಣವೆಂದು ಸದಸ್ಯರು ದೂಷಿಸುತ್ತಿದ್ದಾರೆ.<br /> <br /> `ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ~ ಎಂದು ಆರೋಪಿಸುವ ಸದಸ್ಯರು ಅವಕಾಶ ಸಿಕ್ಕಾಗಲೆಲ್ಲ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಿದ್ದಾರೆ.ಪ್ರಭಾರಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದ ತುರ್ತು ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ಒಬ್ಬೊಬ್ಬರಾಗಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.<br /> <br /> `ವಾರ್ಡ್ ಗಳಲ್ಲಿ ತಲೆ ಎತ್ತಿಕೊಂಡು ತಿರುಗಾಡಲಾರದ ಪರಿಸ್ಥಿತಿಯಿದೆ. ವಾರ್ಡ್ನ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದಲೇ ನಮ್ಮ ಸ್ಥಿತಿ ಹೀಗಾಗಿದೆ~ ಎಂದು ಸದಸ್ಯ ಎಂ.ಪ್ರಕಾಶ್ ಸೇರಿದಂತೆ ಅನೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರು.<br /> <br /> ನಗರದ ಟಿ.ಚನ್ನಯ್ಯ ಉದ್ಯಾನಕ್ಕೆ ಗುರುವಾರ ಭೇಟಿ ನೀಡಿದ ಕೆಲ ಸದಸ್ಯರು ಉದ್ಯಾನದ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದರು. `ಉದ್ಯಾನ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಈ ಕಾರಣದಿಂದಲೇ ಉದ್ಯಾನ ಕಳೆಗುಂದಿದೆ. ನೀರು ಪೂರೈಕೆಯಿಲ್ಲದೆ ಹೂಗಿಡಗಳು ಒಣಗಿವೆ. <br /> <br /> ಈ ಸಮಸ್ಯೆಯನ್ನು ಬೇಗನೇ ಪರಿಹರಿಸಬೇಕು. ಕಾಮಗಾರಿ ಮತ್ತು ಅಭಿವೃದ್ಧಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು~ ಎಂದು ಅಧಿಕಾರಿಗಳಿಗೆ ತಾಕೀತು ಕೂಡ ಮಾಡಿದರು. ನಗರಸಭೆ ಸದಸ್ಯರು ಈಗ ದಿಢೀರನೇ ಚುರುಕಾಗಿದ್ದು, ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.<br /> <br /> `ಬಿ.ಎ.ಲೋಕೇಶ್ಕುಮಾರ್ ಅಧ್ಯಕ್ಷರಾಗಿದ್ದ ವೇಳೆ ಈ ಪರಿ ಚುರುಕುತನ ತೋರದ ಸದಸ್ಯರು ಈಗ ಅಭಿವೃದ್ಧಿಯ ಬಗ್ಗೆ ಆಸಕ್ತಿ ತೋರುತ್ತಿರುವುದು ಅಚ್ಚರಿ ಮೂಡಿಸಿದೆ. ಇದೇ ಚುರುಕುತನ ಮೊದಲೇ ತೋರಿಸಿದ್ದರೆ, ಈ ಹೊತ್ತಿಗೆ ಚಿಕ್ಕಬಳ್ಳಾಪುರ ನಗರಸಭೆಯು ಚಿಂತಾಮಣಿ ನಗರಸಭೆ ಹಾಗೆ ಅತ್ಯುತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿತ್ತು, ಚಿಕ್ಕಬಳ್ಳಾಪುರ ಕೂಡ ಅಭಿವೃದ್ಧಿಯಾಗುತ್ತಿತ್ತು~ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ಎನ್.ಶ್ರೀನಿವಾಸ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>