<p><strong>ಬಾದಾಮಿ:</strong> ಭಾನುವಾರ ಸಂಜೆ ಇಲ್ಲಿನ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಯಿಂದ ಅಗಸ್ತ್ಯತೀರ್ಥ (ಭೂತನಾಥ) ಕೆರೆಯ ಪೂರ್ವ ದಿಕ್ಕಿನ ಬಂಡೆಯ ಮೇಲಿಂದ ಜೋಡಿ ಜಲಧಾರೆಗಳು ಧುಮ್ಮಿಕ್ಕಿದ ನೋಟ ನಯನ ಮನೋಹರವಾಗಿತ್ತು.<br /> <br /> ವಿಶಾಲವಾದ ಅಗಸ್ತ್ಯತೀರ್ಥ ಕೆರೆಯಲ್ಲಿ ಮಳೆ ಯಿಂದಾಗಿ ಒಂದು ಅಡಿಯಷ್ಟು ನೀರು ಸಂಗ್ರಹ ವಾಗಿದೆ.<br /> ಮಳೆಗಾಲ ಆರಂಭವಾದಾಗಿನಿಂದ ಮಳೆಯ ಕೊರತೆಯಿಂದ ಈ ಜೋಡಿ ಜಲಪಾತಗಳು ರಸಿಕರ ಮನದಿಂದ ದೂರವಾಗಿದ್ದವು. <br /> <br /> ನೀರು ಧುಮ್ಮಿಕ್ಕದ ಕಾರಣ ಈ ಬಾರಿ ಮಳೆಗಾಲದಲ್ಲಿ ಇಲ್ಲಿನ ಜನತೆ ಹಾಗೂ ಪ್ರವಾಸಿಗರಿಗೆ ಜಲಪಾತವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಭಾನುವಾರದ ಮಳೆಯಿಂದ ಜೋಡಿ ಜಲಪಾತದ ನಯನಮನೋಹರ ದೃಶ್ಯ ಮತ್ತೆ ಕಣ್ಣಿಗೆ ಕಟ್ಟಿತು. ಜನರು ಇದನ್ನು ವೀಕ್ಷಿಸಿ ಸಂಭ್ರಮಿಸಿದರು.<br /> <br /> ಪಟ್ಟದಕಲ್ಲು, ನಂದಿಕೇಶ್ವರ ಹಾಗೂ ಮಹಾಕೂಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಹಿಂಗಾರು ಬಿತ್ತನೆಗೆ ರೈತರಿಗೆ ಅನುಕೂಲವಾಗಿದೆ. ಆದರೆ ಇನ್ನೂ ಮಳೆಯಾಗಬೇಕು ಎಂಬುದು ರೈತರ ಆಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಭಾನುವಾರ ಸಂಜೆ ಇಲ್ಲಿನ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಯಿಂದ ಅಗಸ್ತ್ಯತೀರ್ಥ (ಭೂತನಾಥ) ಕೆರೆಯ ಪೂರ್ವ ದಿಕ್ಕಿನ ಬಂಡೆಯ ಮೇಲಿಂದ ಜೋಡಿ ಜಲಧಾರೆಗಳು ಧುಮ್ಮಿಕ್ಕಿದ ನೋಟ ನಯನ ಮನೋಹರವಾಗಿತ್ತು.<br /> <br /> ವಿಶಾಲವಾದ ಅಗಸ್ತ್ಯತೀರ್ಥ ಕೆರೆಯಲ್ಲಿ ಮಳೆ ಯಿಂದಾಗಿ ಒಂದು ಅಡಿಯಷ್ಟು ನೀರು ಸಂಗ್ರಹ ವಾಗಿದೆ.<br /> ಮಳೆಗಾಲ ಆರಂಭವಾದಾಗಿನಿಂದ ಮಳೆಯ ಕೊರತೆಯಿಂದ ಈ ಜೋಡಿ ಜಲಪಾತಗಳು ರಸಿಕರ ಮನದಿಂದ ದೂರವಾಗಿದ್ದವು. <br /> <br /> ನೀರು ಧುಮ್ಮಿಕ್ಕದ ಕಾರಣ ಈ ಬಾರಿ ಮಳೆಗಾಲದಲ್ಲಿ ಇಲ್ಲಿನ ಜನತೆ ಹಾಗೂ ಪ್ರವಾಸಿಗರಿಗೆ ಜಲಪಾತವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಭಾನುವಾರದ ಮಳೆಯಿಂದ ಜೋಡಿ ಜಲಪಾತದ ನಯನಮನೋಹರ ದೃಶ್ಯ ಮತ್ತೆ ಕಣ್ಣಿಗೆ ಕಟ್ಟಿತು. ಜನರು ಇದನ್ನು ವೀಕ್ಷಿಸಿ ಸಂಭ್ರಮಿಸಿದರು.<br /> <br /> ಪಟ್ಟದಕಲ್ಲು, ನಂದಿಕೇಶ್ವರ ಹಾಗೂ ಮಹಾಕೂಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಹಿಂಗಾರು ಬಿತ್ತನೆಗೆ ರೈತರಿಗೆ ಅನುಕೂಲವಾಗಿದೆ. ಆದರೆ ಇನ್ನೂ ಮಳೆಯಾಗಬೇಕು ಎಂಬುದು ರೈತರ ಆಸೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>