<p><strong>ಮುಂಬೈ (ಪಿಟಿಐ): </strong>ಇಲ್ಲಿನ ಶಕ್ತಿಮಿಲ್ ಆವರಣದಲ್ಲಿ ಕಾಲ್ಸೆಂಟರ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ನಾಲ್ವರು ಅಪರಾಧಿಗಳಿಗೆ ತ್ವರಿತ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.<br /> <br /> ಈ ನಾಲ್ವರು ಅಪರಾಧಿಗಳು ಗಂಭೀರ ಕೃತ್ಯವೆಸಗಿದ್ದಾರೆ, ಇದು ವ್ಯಕ್ತಿಯೊಬ್ಬರ ಜೀವಿಸುವ ಮೂಲಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿದಂತೆ ಎಂದು ತ್ವರಿತ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಶಾಲಿನಿ ಫನ್ಸಲ್ಕರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ‘ಅತ್ಯಾಚಾರಕ್ಕೆ ಒಳಗಾದ ಯುವತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ ಎಂಬುದನ್ನು ನಾವು ಮರೆಯಬಾರದು. ಅಪರಾಧಿಗಳಾದ ವಿಜಯ್ ಜಾಧವ್ (19), ಮೊಹಮದ್ ಕ್ವಾಸಿಮ್ ಹಫೀಜ್ ಶೇಖ್ ಅಲಿಯಾಸ್ ಕ್ವಾಸಿಮ್ ಬೆಂಗಾಲಿ (21), ಮೊಹಮದ್ ಅನ್ಸಾರಿ (28) ಮತ್ತು ಮೊಹಮದ್ ಅಶ್ಫಕ್ ನಡೆಸಿದ್ದು ಪೂರ್ವ ನಿಯೋಜಿತ ಸಂಚು’ ಎಂದು ಅವರು ತಿಳಿಸಿದ್ದಾರೆ.<br /> <br /> <strong>ಪ್ರಕರಣ 24ಕ್ಕೆ: </strong>ಶಕ್ತಿಮಿಲ್ ಆವರಣದಲ್ಲಿಯೇ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲೂ ಇದೇ ಆರೋಪಿಗಳು (ವಿಜಯ್ ಜಾಧವ್, ಕ್ವಾಸಿಮ್ ಬೆಂಗಾಲಿ ಮತ್ತು ಮೊಹಮದ್ ಅನ್ಸಾರಿ) ಪಾಲ್ಗೊಂಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಅಪರಾಧ ಪುನರಾವರ್ತನೆಗೆ ಸಂಬಂಧಿಸಿದಂತೆ ಐಪಿಸಿ ಕಲಂ 376 (ಇ) ಅನ್ವಯ ಹೆಚ್ಚುವರಿ ದೋಷಾರೋಪ ದಾಖಲಿಸಿಕೊಳ್ಳುವಂತೆ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅರ್ಜಿ ಸಲ್ಲಿಸಿದರು.<br /> <br /> ಐಪಿಸಿ ಕಲಂ 376 (ಇ) ಅಡಿಯಲ್ಲಿ ಈ ದೋಷಾರೋಪಕ್ಕೆ ಗರಿಷ್ಠ ಶಿಕ್ಷೆ ಎಂದರೆ ಮರಣದಂಡನೆ. ಇದರ ಬಗ್ಗೆ ಮಾ. 24ರಂದು ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.2013ರ ಜುಲೈ ಮತ್ತು ಆಗಸ್ಟ್ನಲ್ಲಿ ನಡೆದಿದ್ದ ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 18 ವರ್ಷದ ಒಳಗಿನ ಇಬ್ಬರು ಬಾಲಕರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಮೂವರು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಬಾಲಾರೋಪಿಗಳ ಬಗ್ಗೆ ಬಾಲಾಪರಾಧ ನ್ಯಾಯ-ಮಂಡಳಿಯು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ. ಅಪರಾಧವೆಸಗುವುದು ಇವರ ಹವ್ಯಾಸವಾಗಿರುವುದರಿಂದ ಇವರಿಗೆ ಗರಿಷ್ಠ ಶಿಕ್ಷೆಯಾದ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬೇಕು ಎಂದು ನಿಕಮ್ ವಾದಿಸಿದ್ದರು.</p>.<p>ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದಾಗ ಪ್ರಕರಣದ ಉಸ್ತುವಾರಿ ವಹಿಸಿದ್ದ ಈಗಿನ ಎಟಿಎಸ್ ಮುಖ್ಯಸ್ಥ ಹಿಮಾಂಶು ರಾಯ್ ಸಹ ತೀರ್ಪನ್ನು ಸ್ವಾಗತಿಸಿದ್ದಾರೆ.ಕಾಲ್ ಸೆಂಟರ್ ಉದ್ಯೋಗಿ ಘಟನೆ ನಡೆದು ಒಂದು ತಿಂಗಳ ನಂತರ ದೂರು ನೀಡಿದ್ದರಿಂದ ಸಾಕ್ಷಾಧಾರಗಳನ್ನು ಕಲೆ ಹಾಕುವುದು ದೊಡ್ಡ ಸವಾಲಾಗಿತ್ತು. ಆದರೆ ಶಕ್ತಿಮಿಲ್ ಆವರಣ ನಿರ್ಜನ ಪ್ರದೇಶವಾಗಿದ್ದರಿಂದ ಘಟನೆ ನಡೆದ ಸ್ಥಳದಲ್ಲಿ ಕೆಲವು ಸಾಕ್ಷಾಧಾರಗಳು ಸಿಕ್ಕಿದ್ದರಿಂದ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಇಲ್ಲಿನ ಶಕ್ತಿಮಿಲ್ ಆವರಣದಲ್ಲಿ ಕಾಲ್ಸೆಂಟರ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ನಾಲ್ವರು ಅಪರಾಧಿಗಳಿಗೆ ತ್ವರಿತ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.<br /> <br /> ಈ ನಾಲ್ವರು ಅಪರಾಧಿಗಳು ಗಂಭೀರ ಕೃತ್ಯವೆಸಗಿದ್ದಾರೆ, ಇದು ವ್ಯಕ್ತಿಯೊಬ್ಬರ ಜೀವಿಸುವ ಮೂಲಭೂತ ಹಕ್ಕಿಗೆ ಧಕ್ಕೆ ಉಂಟು ಮಾಡಿದಂತೆ ಎಂದು ತ್ವರಿತ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಶಾಲಿನಿ ಫನ್ಸಲ್ಕರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ‘ಅತ್ಯಾಚಾರಕ್ಕೆ ಒಳಗಾದ ಯುವತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ ಎಂಬುದನ್ನು ನಾವು ಮರೆಯಬಾರದು. ಅಪರಾಧಿಗಳಾದ ವಿಜಯ್ ಜಾಧವ್ (19), ಮೊಹಮದ್ ಕ್ವಾಸಿಮ್ ಹಫೀಜ್ ಶೇಖ್ ಅಲಿಯಾಸ್ ಕ್ವಾಸಿಮ್ ಬೆಂಗಾಲಿ (21), ಮೊಹಮದ್ ಅನ್ಸಾರಿ (28) ಮತ್ತು ಮೊಹಮದ್ ಅಶ್ಫಕ್ ನಡೆಸಿದ್ದು ಪೂರ್ವ ನಿಯೋಜಿತ ಸಂಚು’ ಎಂದು ಅವರು ತಿಳಿಸಿದ್ದಾರೆ.<br /> <br /> <strong>ಪ್ರಕರಣ 24ಕ್ಕೆ: </strong>ಶಕ್ತಿಮಿಲ್ ಆವರಣದಲ್ಲಿಯೇ ಪತ್ರಿಕಾ ಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲೂ ಇದೇ ಆರೋಪಿಗಳು (ವಿಜಯ್ ಜಾಧವ್, ಕ್ವಾಸಿಮ್ ಬೆಂಗಾಲಿ ಮತ್ತು ಮೊಹಮದ್ ಅನ್ಸಾರಿ) ಪಾಲ್ಗೊಂಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಅಪರಾಧ ಪುನರಾವರ್ತನೆಗೆ ಸಂಬಂಧಿಸಿದಂತೆ ಐಪಿಸಿ ಕಲಂ 376 (ಇ) ಅನ್ವಯ ಹೆಚ್ಚುವರಿ ದೋಷಾರೋಪ ದಾಖಲಿಸಿಕೊಳ್ಳುವಂತೆ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅರ್ಜಿ ಸಲ್ಲಿಸಿದರು.<br /> <br /> ಐಪಿಸಿ ಕಲಂ 376 (ಇ) ಅಡಿಯಲ್ಲಿ ಈ ದೋಷಾರೋಪಕ್ಕೆ ಗರಿಷ್ಠ ಶಿಕ್ಷೆ ಎಂದರೆ ಮರಣದಂಡನೆ. ಇದರ ಬಗ್ಗೆ ಮಾ. 24ರಂದು ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.2013ರ ಜುಲೈ ಮತ್ತು ಆಗಸ್ಟ್ನಲ್ಲಿ ನಡೆದಿದ್ದ ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ 18 ವರ್ಷದ ಒಳಗಿನ ಇಬ್ಬರು ಬಾಲಕರು ಸೇರಿದಂತೆ ಏಳು ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಮೂವರು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರು ಬಾಲಾರೋಪಿಗಳ ಬಗ್ಗೆ ಬಾಲಾಪರಾಧ ನ್ಯಾಯ-ಮಂಡಳಿಯು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದೆ. ಅಪರಾಧವೆಸಗುವುದು ಇವರ ಹವ್ಯಾಸವಾಗಿರುವುದರಿಂದ ಇವರಿಗೆ ಗರಿಷ್ಠ ಶಿಕ್ಷೆಯಾದ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬೇಕು ಎಂದು ನಿಕಮ್ ವಾದಿಸಿದ್ದರು.</p>.<p>ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದಾಗ ಪ್ರಕರಣದ ಉಸ್ತುವಾರಿ ವಹಿಸಿದ್ದ ಈಗಿನ ಎಟಿಎಸ್ ಮುಖ್ಯಸ್ಥ ಹಿಮಾಂಶು ರಾಯ್ ಸಹ ತೀರ್ಪನ್ನು ಸ್ವಾಗತಿಸಿದ್ದಾರೆ.ಕಾಲ್ ಸೆಂಟರ್ ಉದ್ಯೋಗಿ ಘಟನೆ ನಡೆದು ಒಂದು ತಿಂಗಳ ನಂತರ ದೂರು ನೀಡಿದ್ದರಿಂದ ಸಾಕ್ಷಾಧಾರಗಳನ್ನು ಕಲೆ ಹಾಕುವುದು ದೊಡ್ಡ ಸವಾಲಾಗಿತ್ತು. ಆದರೆ ಶಕ್ತಿಮಿಲ್ ಆವರಣ ನಿರ್ಜನ ಪ್ರದೇಶವಾಗಿದ್ದರಿಂದ ಘಟನೆ ನಡೆದ ಸ್ಥಳದಲ್ಲಿ ಕೆಲವು ಸಾಕ್ಷಾಧಾರಗಳು ಸಿಕ್ಕಿದ್ದರಿಂದ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>