<p>ನಾಳೆಯ ಹುಣ್ಣಿಮೆಯಂದು ಚಂದ್ರ ಭೂಮಿಗೆ ಬಹಳ ಹತ್ತಿರ ಬರುತ್ತಾನೆ. ಇದರಿಂದ ಪ್ರಳಯವಾಗುತ್ತದೆ ಎಂದೆಲ್ಲ ಭಯ ಹುಟ್ಟಿಸುವವರ ಮಾತನ್ನು ನಂಬಬೇಕಾಗಿಲ್ಲ. ಜಪಾನ್ನಲ್ಲಿ ಉಂಟಾಗಿರುವ ಭೂಕಂಪ- ಸುನಾಮಿಯಿಂದ ಜನರಲ್ಲಿ ಭೀತಿ ಹುಟ್ಟಿರುವುದು ನಿಜ. ಇದನ್ನೇ ದೊಡ್ಡದು ಮಾಡಿಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಾ ಜ್ಯೋತಿಷಿಗಳು ಜನರನ್ನು ಅಧೀರರನ್ನಾಗಿ ಮಾಡುತ್ತಿರುವುದು ದುರದೃಷ್ಟಕರ. <br /> <br /> ಈಗಿನಂತೆಯೇ ಚಂದ್ರ 1955, 1974, 1992 ಮತ್ತು 2005ರಲ್ಲಿ ಭೂಮಿಗೆ ಬಹಳ ಹತ್ತಿರ ಬಂದಿದ್ದ. ಆಗೆಲ್ಲ ಅನಾಹುತಗಳು ಸಂಭವಿಸಿವೆ ಎಂದು ಕಣಿ ಹೇಳುವವರು ಕೆಲ ಘಟನೆಗಳನ್ನು ಹೆಣೆಯುತ್ತಿದ್ದಾರೆ. ಆದರೆ ಆಗ ಮುಳುಗದ ಜಗತ್ತು ಈಗ ಮುಳುಗುತ್ತದೆಯೇ ಎಂದು ಆಲೋಚಿಸಬೇಕು. ಚಂದ್ರ ಭೂಮಿಗೆ ಹತ್ತಿರವಾದಾಗ ಏನಾದರೂ ಅವಘಡ ಸಂಭವಿಸಿದ್ದಲ್ಲಿ ಅದು ಕಾಕತಾಳೀಯವೇ ಹೊರತು ಬೇರೆ ಕಾರಣವಿಲ್ಲ. <br /> <br /> ಜ್ಯೋತಿಷಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಈ ಮುಂಚೆಯೇ ಜಪಾನ್ ದುರಂತವನ್ನು ಮುಂಗಾಣುವವರಿದ್ದರೆ ಅದನ್ನು ತಪ್ಪಿಸಲು ಪ್ರಯತ್ನಿಸಬಹುದಿತ್ತಲ್ಲವೇ? ಸುಮ್ಮನೆ ಭಯ ಪಡುವುದನ್ನು ಬಿಟ್ಟು ಭೂಮಿಯ ಹತ್ತಿರ ಬರುವ ಪೂರ್ಣಚಂದ್ರನ ದೃಶ್ಯವೈಭವ ನೋಡಿ ಸವಿಯೋಣ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಳೆಯ ಹುಣ್ಣಿಮೆಯಂದು ಚಂದ್ರ ಭೂಮಿಗೆ ಬಹಳ ಹತ್ತಿರ ಬರುತ್ತಾನೆ. ಇದರಿಂದ ಪ್ರಳಯವಾಗುತ್ತದೆ ಎಂದೆಲ್ಲ ಭಯ ಹುಟ್ಟಿಸುವವರ ಮಾತನ್ನು ನಂಬಬೇಕಾಗಿಲ್ಲ. ಜಪಾನ್ನಲ್ಲಿ ಉಂಟಾಗಿರುವ ಭೂಕಂಪ- ಸುನಾಮಿಯಿಂದ ಜನರಲ್ಲಿ ಭೀತಿ ಹುಟ್ಟಿರುವುದು ನಿಜ. ಇದನ್ನೇ ದೊಡ್ಡದು ಮಾಡಿಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಾ ಜ್ಯೋತಿಷಿಗಳು ಜನರನ್ನು ಅಧೀರರನ್ನಾಗಿ ಮಾಡುತ್ತಿರುವುದು ದುರದೃಷ್ಟಕರ. <br /> <br /> ಈಗಿನಂತೆಯೇ ಚಂದ್ರ 1955, 1974, 1992 ಮತ್ತು 2005ರಲ್ಲಿ ಭೂಮಿಗೆ ಬಹಳ ಹತ್ತಿರ ಬಂದಿದ್ದ. ಆಗೆಲ್ಲ ಅನಾಹುತಗಳು ಸಂಭವಿಸಿವೆ ಎಂದು ಕಣಿ ಹೇಳುವವರು ಕೆಲ ಘಟನೆಗಳನ್ನು ಹೆಣೆಯುತ್ತಿದ್ದಾರೆ. ಆದರೆ ಆಗ ಮುಳುಗದ ಜಗತ್ತು ಈಗ ಮುಳುಗುತ್ತದೆಯೇ ಎಂದು ಆಲೋಚಿಸಬೇಕು. ಚಂದ್ರ ಭೂಮಿಗೆ ಹತ್ತಿರವಾದಾಗ ಏನಾದರೂ ಅವಘಡ ಸಂಭವಿಸಿದ್ದಲ್ಲಿ ಅದು ಕಾಕತಾಳೀಯವೇ ಹೊರತು ಬೇರೆ ಕಾರಣವಿಲ್ಲ. <br /> <br /> ಜ್ಯೋತಿಷಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಈ ಮುಂಚೆಯೇ ಜಪಾನ್ ದುರಂತವನ್ನು ಮುಂಗಾಣುವವರಿದ್ದರೆ ಅದನ್ನು ತಪ್ಪಿಸಲು ಪ್ರಯತ್ನಿಸಬಹುದಿತ್ತಲ್ಲವೇ? ಸುಮ್ಮನೆ ಭಯ ಪಡುವುದನ್ನು ಬಿಟ್ಟು ಭೂಮಿಯ ಹತ್ತಿರ ಬರುವ ಪೂರ್ಣಚಂದ್ರನ ದೃಶ್ಯವೈಭವ ನೋಡಿ ಸವಿಯೋಣ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>