<p><strong>ಬೆಂಗಳೂರು:</strong> ಲೇಖಕ ಡಾ.ಎಂ.ಬೈರೇಗೌಡ ಅವರು ರಚಿಸಿದ, ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ `ವೇಷದ ಹುಲಿ~ ನಾಟಕದ ಮೊದಲ ಪ್ರದರ್ಶನವು ಮಂಗಳವಾರ (ಅ. 11) ಸಂಜೆ 6.30ಕ್ಕೆ ನಗರದ ಹಂಪಿನಗರದ ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನಡೆಯಲಿದೆ. ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಈ ಪ್ರಯೋಗವನ್ನು ಸಿದ್ಧಪಡಿಸಿದೆ.<br /> <br /> `ಕ್ರಿ.ಶ. 15ನೇ ಶತಮಾನದಲ್ಲಿ ನಡೆದಿರಬಹುದಾದ ಪ್ರಸಂವನ್ನಾಧರಿಸಿದ ಈ ನಾಟಕವು, ಪ್ರಭುತ್ವ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚುವಂತೆ ಜನಸಾಮಾನ್ಯರ ಮದುವೆಯ ವಿಚಾರದಲ್ಲೂ ತಲೆಹಾಕಿ, ನಡೆವ ಮದುವೆಗಳನ್ನು ನಿಲ್ಲಿಸಿ ವಧುವನ್ನು ತನ್ನ ಕೈವಶ ಮಾಡಿಕೊಳ್ಳುವ ಕಥೆ ಹೊಂದಿದೆ~ ಎಂದು ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.<br /> <br /> `ಮನುಷ್ಯ ಮೃಗವಾಗಿ, ಮತ್ತೆ ಮೃಗವೇ ಮನುಷ್ಯನಾಗುವ ಪರಿವರ್ತನೆಯ ಕಥೆಯನ್ನು ನಾಟಕ ಹೊಂದಿದೆ. <br /> ವರ್ತಮಾನದ ಎಲ್ಲ ತಲ್ಲಣಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಇದೊಂದು ವಿಭಿನ್ನ ಮತ್ತು ವಿನೂತನ ಪ್ರಯೋಗವಾಗಿದೆ~ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಲೇಖಕ ಡಾ.ಎಂ.ಬೈರೇಗೌಡ ಅವರು ರಚಿಸಿದ, ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ `ವೇಷದ ಹುಲಿ~ ನಾಟಕದ ಮೊದಲ ಪ್ರದರ್ಶನವು ಮಂಗಳವಾರ (ಅ. 11) ಸಂಜೆ 6.30ಕ್ಕೆ ನಗರದ ಹಂಪಿನಗರದ ನಗರದ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ನಡೆಯಲಿದೆ. ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಈ ಪ್ರಯೋಗವನ್ನು ಸಿದ್ಧಪಡಿಸಿದೆ.<br /> <br /> `ಕ್ರಿ.ಶ. 15ನೇ ಶತಮಾನದಲ್ಲಿ ನಡೆದಿರಬಹುದಾದ ಪ್ರಸಂವನ್ನಾಧರಿಸಿದ ಈ ನಾಟಕವು, ಪ್ರಭುತ್ವ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚುವಂತೆ ಜನಸಾಮಾನ್ಯರ ಮದುವೆಯ ವಿಚಾರದಲ್ಲೂ ತಲೆಹಾಕಿ, ನಡೆವ ಮದುವೆಗಳನ್ನು ನಿಲ್ಲಿಸಿ ವಧುವನ್ನು ತನ್ನ ಕೈವಶ ಮಾಡಿಕೊಳ್ಳುವ ಕಥೆ ಹೊಂದಿದೆ~ ಎಂದು ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.<br /> <br /> `ಮನುಷ್ಯ ಮೃಗವಾಗಿ, ಮತ್ತೆ ಮೃಗವೇ ಮನುಷ್ಯನಾಗುವ ಪರಿವರ್ತನೆಯ ಕಥೆಯನ್ನು ನಾಟಕ ಹೊಂದಿದೆ. <br /> ವರ್ತಮಾನದ ಎಲ್ಲ ತಲ್ಲಣಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಇದೊಂದು ವಿಭಿನ್ನ ಮತ್ತು ವಿನೂತನ ಪ್ರಯೋಗವಾಗಿದೆ~ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>