<p><strong>ಮಲೇಬೆನ್ನೂರು: </strong>ಹೋಬಳಿ ವ್ಯಾಪ್ತಿಯ ಹರಳಹಳ್ಳಿ, ಮೂಡಲ ಬಸವಾಪುರ ಗ್ರಾಮದ ಜಮೀನುಗಳಲ್ಲಿ ಹರಿಹರ - ಶಿವಮೊಗ್ಗ ರೈಲುಮಾರ್ಗದ ಅಂತಿಮ ಹಂತದ ಸರ್ವೆ ಕಾರ್ಯ ಶುಕ್ರವಾರ ಭರದಿಂದ ಸಾಗಿದೆ.<br /> <br /> ಪೂನಾ ಮೂಲದ ಆದಿತ್ಯ ಸಂಸ್ಥೆ ಸರ್ವೆ ಕಾರ್ಯ ಕೈಗೆತ್ತಿಕೊಂಡಿದೆ. ಈಗಾಗಲೇ ಮೊದಲ ಹಂತದ ಸರ್ವೆ ಕೆಲಸ 2 ವರ್ಷದ ಹಿಂದೆ ಮುಕ್ತಾಯವಾಗಿದೆ. ನಾಲ್ಕಾರು ಸಿಬ್ಬಂದಿ ಸ್ವಯಂಚಾಲಿತ ಯಂತ್ರದೊಂದಿಗೆ ಅಂತಿಮ ಹಂತದ ಭೂಮಾಪನಾ ಕಾರ್ಯ ನಡೆಸುತ್ತಿದ್ದಾರೆ.<br /> <br /> <strong>ಆತಂಕ: </strong>ಭದ್ರಾ ನಾಲೆಯ ಕೃಪೆಯಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರವ ಭತ್ತದ ಗದ್ದೆಗಳಲ್ಲಿ ರೈಲು ಮಾರ್ಗದ ಭೂಮಾಪನ ಕೆಲಸ ರೈತರಲ್ಲಿ ಆತಂಕ ಮೂಡಿಸಿದೆ. ಯೋಜನೆಗೆ ಎಷ್ಟು ಜಮೀನು ರೈಲ್ವೆ ಇಲಾಖೆ ವಶಪಡಿಸಿಕೊಳ್ಳುತ್ತಿದೆ. ಯಾವ ಭಾಗದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ವಿವರ ಈವರೆಗೆ ತಿಳಿದಿಲ್ಲ. <br /> <br /> ಈಗಾಗಲೇ ಭದ್ರಾ ನಾಲೆಗೆ 60ರ ದಶಕದಲ್ಲಿ ಸಾಕಷ್ಟು ಜಮೀನು ವಶಪಡಿಸಿಕೊಳ್ಳಲಾಗಿದೆ.<br /> ಈಗ ಪುನಃ ರೈಲು ಮಾರ್ಗ ನಿರ್ಮಾಣಕ್ಕೆ ಜಮೀನು ನೀಡಬೇಕಾಗುತ್ತದೆ. ಜತೆಗೆ ಕೂಡು ರಸ್ತೆ ನಿಲ್ದಾಣದಕ್ಕೂ ಜಮೀನು ಭೂಸ್ವಾಧೀನವಾಗಲಿದೆ. <br /> <br /> ಯೋಜನೆಯಿಂದ ಜನತೆಗೆ ಅನುಕೂಲವಾಗಲಿದೆ. ಆದರೆ, ಕೃಷಿಕರಿಗೆ ಮಾತ್ರ ನಷ್ಟವಾಗಲಿದೆ. ಸರ್ಕಾರದ ಭೂಸ್ವಾಧೀನದ ಯೋಜನೆ ಕುರಿತು ಸರಿಯಾದ ಮಾಹಿತಿ ಯಾವ ಅಧಿಕಾರಿಯೂ ನೀಡುತ್ತಿಲ್ಲ. ರೈಲುಮಾರ್ಗದ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿ ಗೊಂದಲ ನಿವಾರಿಸುವಂತೆ ರೈತರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಹೋಬಳಿ ವ್ಯಾಪ್ತಿಯ ಹರಳಹಳ್ಳಿ, ಮೂಡಲ ಬಸವಾಪುರ ಗ್ರಾಮದ ಜಮೀನುಗಳಲ್ಲಿ ಹರಿಹರ - ಶಿವಮೊಗ್ಗ ರೈಲುಮಾರ್ಗದ ಅಂತಿಮ ಹಂತದ ಸರ್ವೆ ಕಾರ್ಯ ಶುಕ್ರವಾರ ಭರದಿಂದ ಸಾಗಿದೆ.<br /> <br /> ಪೂನಾ ಮೂಲದ ಆದಿತ್ಯ ಸಂಸ್ಥೆ ಸರ್ವೆ ಕಾರ್ಯ ಕೈಗೆತ್ತಿಕೊಂಡಿದೆ. ಈಗಾಗಲೇ ಮೊದಲ ಹಂತದ ಸರ್ವೆ ಕೆಲಸ 2 ವರ್ಷದ ಹಿಂದೆ ಮುಕ್ತಾಯವಾಗಿದೆ. ನಾಲ್ಕಾರು ಸಿಬ್ಬಂದಿ ಸ್ವಯಂಚಾಲಿತ ಯಂತ್ರದೊಂದಿಗೆ ಅಂತಿಮ ಹಂತದ ಭೂಮಾಪನಾ ಕಾರ್ಯ ನಡೆಸುತ್ತಿದ್ದಾರೆ.<br /> <br /> <strong>ಆತಂಕ: </strong>ಭದ್ರಾ ನಾಲೆಯ ಕೃಪೆಯಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರವ ಭತ್ತದ ಗದ್ದೆಗಳಲ್ಲಿ ರೈಲು ಮಾರ್ಗದ ಭೂಮಾಪನ ಕೆಲಸ ರೈತರಲ್ಲಿ ಆತಂಕ ಮೂಡಿಸಿದೆ. ಯೋಜನೆಗೆ ಎಷ್ಟು ಜಮೀನು ರೈಲ್ವೆ ಇಲಾಖೆ ವಶಪಡಿಸಿಕೊಳ್ಳುತ್ತಿದೆ. ಯಾವ ಭಾಗದಲ್ಲಿ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ವಿವರ ಈವರೆಗೆ ತಿಳಿದಿಲ್ಲ. <br /> <br /> ಈಗಾಗಲೇ ಭದ್ರಾ ನಾಲೆಗೆ 60ರ ದಶಕದಲ್ಲಿ ಸಾಕಷ್ಟು ಜಮೀನು ವಶಪಡಿಸಿಕೊಳ್ಳಲಾಗಿದೆ.<br /> ಈಗ ಪುನಃ ರೈಲು ಮಾರ್ಗ ನಿರ್ಮಾಣಕ್ಕೆ ಜಮೀನು ನೀಡಬೇಕಾಗುತ್ತದೆ. ಜತೆಗೆ ಕೂಡು ರಸ್ತೆ ನಿಲ್ದಾಣದಕ್ಕೂ ಜಮೀನು ಭೂಸ್ವಾಧೀನವಾಗಲಿದೆ. <br /> <br /> ಯೋಜನೆಯಿಂದ ಜನತೆಗೆ ಅನುಕೂಲವಾಗಲಿದೆ. ಆದರೆ, ಕೃಷಿಕರಿಗೆ ಮಾತ್ರ ನಷ್ಟವಾಗಲಿದೆ. ಸರ್ಕಾರದ ಭೂಸ್ವಾಧೀನದ ಯೋಜನೆ ಕುರಿತು ಸರಿಯಾದ ಮಾಹಿತಿ ಯಾವ ಅಧಿಕಾರಿಯೂ ನೀಡುತ್ತಿಲ್ಲ. ರೈಲುಮಾರ್ಗದ ಕುರಿತು ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿ ಗೊಂದಲ ನಿವಾರಿಸುವಂತೆ ರೈತರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>