<p><strong>ಮಸೂದೆಗೆ ರಾಜ್ಯಸಭೆ ಅಸ್ತು; ಹೆಚ್ಚಿನ ಸ್ವಾಯತ್ತತೆ<br /> <br /> ನವದೆಹಲಿ: </strong>ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ರಾಷ್ಟ್ರೀಯ ಮಾನ್ಯತೆ ಮತ್ತು ಹೆಚ್ಚಿನ ಸ್ವಾಯತ್ತತೆ ನೀಡುವ ಮಸೂದೆಗೆ ರಾಜ್ಯಸಭೆ ಸೋಮವಾರ ಅಂಗೀಕಾರ ನೀಡಿದೆ.<br /> <br /> `ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು ಮಸೂದೆ- 2010~ರಲ್ಲಿ ಹೆಚ್ಚಿನ ಸ್ವಾಯತ್ತತೆ ಕಲ್ಪಿಸಲಾಗಿದೆ. ಪಠ್ಯಕ್ರಮ ರೂಪಿಸುವುದು, ಪದವಿ ಪ್ರದಾನ, ಹೊಸ ಕೋರ್ಸ್ ಆರಂಭ, ಸೀಟು ಸಂಖ್ಯೆ ಹೆಚ್ಚಳ ಮತ್ತು ಸಿಬ್ಬಂದಿ ನೇಮಕಾತಿಯನ್ನು `ನಿಮ್ಹಾನ್ಸ್~ ನೇರವಾಗಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿಯ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ.<br /> <br /> ಈ ಮಸೂದೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್, ` ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯಂತೆ `ನಿಮ್ಹಾನ್ಸ್ಗೆ~ ಸ್ವಾಯತ್ತತೆ ಇರುತ್ತದೆ. ಪದವಿ ಪ್ರದಾನ, ಆಡಳಿತ ನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಯ ಅಧಿಕಾರವನ್ನು ನೀಡುವ ಮಸೂದೆ ಇದಾಗಿದೆ~ ಎಂದರು.<br /> <br /> `ಈ ಸಂಸ್ಥೆಯಲ್ಲಿ ಪ್ರತಿ ವರ್ಷ 4.5 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. `ನಿಮ್ಹಾನ್ಸ್~ಗೆ ರಾಷ್ಟ್ರೀಯ ಮಾನ್ಯತೆ ದೊರಕಿದ ನಂತರವೂ ಈ ಸೇವೆ ಮುಂದುವರಿಯಲಿದೆ~ ಎಂದರು.<br /> <br /> `135 ಎಕರೆಗಳಲ್ಲಿ ಚಾಚಿಕೊಂಡಿರುವ ಈ ಸಂಸ್ಥೆಯಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ನೇರವಾಗಿ `ನಿಮ್ಹಾನ್ಸ್~ ಆವರಣಕ್ಕೆ ಕರೆತಂದು ಶೀಘ್ರದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಈ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ~ ಎಂದು ಆಜಾದ್ ಹೇಳಿದರು.<br /> <br /> `ಸದ್ಯ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಆಡಳಿತ, ಬೋಧಕ ಮತ್ತು ಇತರ ಸಿಬ್ಬಂದಿ ವರ್ಗದವರು ಸೇವೆಯಲ್ಲಿ ಮುಂದುವರಿಯುವರು. ಅಗತ್ಯಕ್ಕೆ ತಕ್ಕಂತೆ ಹೊಸ ನೇಮಕಾತಿಯನ್ನು ಮಾಡಿಕೊಳ್ಳುವ ಅಧಿಕಾರ `ನಿಮ್ಹಾನ್ಸ್~ಗೆ ಇರುತ್ತದೆ~ ಎಂದರು.<br /> <br /> `ದೇಶದ ಇತರೆಡೆಯಲ್ಲೂ `ನಿಮ್ಹಾನ್ಸ್~ನಂತಹ ಸಂಸ್ಥೆಗಳ ಅವಶ್ಯಕತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವೆ. ಆದರೆ, ಇದಕ್ಕೆ ಅಗತ್ಯವಿರುವ ತಜ್ಞರ ಕೊರತೆ ತೀವ್ರ ಸ್ವರೂಪದಲ್ಲಿ ಇದೆ. 11,500 ಮನೋವೈದ್ಯರ ಅಗತ್ಯವಿದ್ದು, ಸದ್ಯ 3,500 ಮಂದಿ ಮಾತ್ರ ದೇಶದಲ್ಲಿದ್ದಾರೆ~ ಎಂದರು.<br /> <br /> ಈ ಮಸೂದೆಯ ಅನ್ವಯ ನಿಮ್ಹಾನ್ಸ್ಗೆ ಆಡಳಿತ ಮಂಡಳಿ ರಚನೆ ಆಗಲಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಅಧ್ಯಕ್ಷರಾಗಿರುತ್ತಾರೆ. ಕರ್ನಾಟಕದ ಆರೋಗ್ಯ ಖಾತೆ ಸಚಿವರೂ ಸೇರಿದಂತೆ 21 ಸದಸ್ಯರಿರುತ್ತಾರೆ. ಇದರಲ್ಲಿ ಮೂವರು ಸಂಸತ್ ಸದಸ್ಯರು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರು ಇರುತ್ತಾರೆ.<br /> <br /> ರಾಜ್ಯಸಭೆ ಅಂಗೀಕರಿಸಿರುವ ಈ ಮಸೂದೆಯನ್ನು ಲೋಕಸಭೆಯ ಒಪ್ಪಿಗೆಗಾಗಿ ಆ ಸದನದಲ್ಲಿ ಮಂಡಿಸಬೇಕಿದೆ.<br /> ಎಐಐಎಂಎಸ್ ಹೊರತಾಗಿ ಚಂಡೀಗಡದ `ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ~, ಪುದಚೇರಿಯ `ಜವಾಹರಲಾಲ್ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ~ಗಳಿಗೆ ದೇಶದಲ್ಲಿ ರಾಷ್ಟ್ರೀಯ ಮಾನ್ಯತೆ ದೊರಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸೂದೆಗೆ ರಾಜ್ಯಸಭೆ ಅಸ್ತು; ಹೆಚ್ಚಿನ ಸ್ವಾಯತ್ತತೆ<br /> <br /> ನವದೆಹಲಿ: </strong>ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ರಾಷ್ಟ್ರೀಯ ಮಾನ್ಯತೆ ಮತ್ತು ಹೆಚ್ಚಿನ ಸ್ವಾಯತ್ತತೆ ನೀಡುವ ಮಸೂದೆಗೆ ರಾಜ್ಯಸಭೆ ಸೋಮವಾರ ಅಂಗೀಕಾರ ನೀಡಿದೆ.<br /> <br /> `ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು ಮಸೂದೆ- 2010~ರಲ್ಲಿ ಹೆಚ್ಚಿನ ಸ್ವಾಯತ್ತತೆ ಕಲ್ಪಿಸಲಾಗಿದೆ. ಪಠ್ಯಕ್ರಮ ರೂಪಿಸುವುದು, ಪದವಿ ಪ್ರದಾನ, ಹೊಸ ಕೋರ್ಸ್ ಆರಂಭ, ಸೀಟು ಸಂಖ್ಯೆ ಹೆಚ್ಚಳ ಮತ್ತು ಸಿಬ್ಬಂದಿ ನೇಮಕಾತಿಯನ್ನು `ನಿಮ್ಹಾನ್ಸ್~ ನೇರವಾಗಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿಯ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ.<br /> <br /> ಈ ಮಸೂದೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್, ` ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯಂತೆ `ನಿಮ್ಹಾನ್ಸ್ಗೆ~ ಸ್ವಾಯತ್ತತೆ ಇರುತ್ತದೆ. ಪದವಿ ಪ್ರದಾನ, ಆಡಳಿತ ನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಯ ಅಧಿಕಾರವನ್ನು ನೀಡುವ ಮಸೂದೆ ಇದಾಗಿದೆ~ ಎಂದರು.<br /> <br /> `ಈ ಸಂಸ್ಥೆಯಲ್ಲಿ ಪ್ರತಿ ವರ್ಷ 4.5 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. `ನಿಮ್ಹಾನ್ಸ್~ಗೆ ರಾಷ್ಟ್ರೀಯ ಮಾನ್ಯತೆ ದೊರಕಿದ ನಂತರವೂ ಈ ಸೇವೆ ಮುಂದುವರಿಯಲಿದೆ~ ಎಂದರು.<br /> <br /> `135 ಎಕರೆಗಳಲ್ಲಿ ಚಾಚಿಕೊಂಡಿರುವ ಈ ಸಂಸ್ಥೆಯಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ನೇರವಾಗಿ `ನಿಮ್ಹಾನ್ಸ್~ ಆವರಣಕ್ಕೆ ಕರೆತಂದು ಶೀಘ್ರದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಈ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ~ ಎಂದು ಆಜಾದ್ ಹೇಳಿದರು.<br /> <br /> `ಸದ್ಯ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಆಡಳಿತ, ಬೋಧಕ ಮತ್ತು ಇತರ ಸಿಬ್ಬಂದಿ ವರ್ಗದವರು ಸೇವೆಯಲ್ಲಿ ಮುಂದುವರಿಯುವರು. ಅಗತ್ಯಕ್ಕೆ ತಕ್ಕಂತೆ ಹೊಸ ನೇಮಕಾತಿಯನ್ನು ಮಾಡಿಕೊಳ್ಳುವ ಅಧಿಕಾರ `ನಿಮ್ಹಾನ್ಸ್~ಗೆ ಇರುತ್ತದೆ~ ಎಂದರು.<br /> <br /> `ದೇಶದ ಇತರೆಡೆಯಲ್ಲೂ `ನಿಮ್ಹಾನ್ಸ್~ನಂತಹ ಸಂಸ್ಥೆಗಳ ಅವಶ್ಯಕತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವೆ. ಆದರೆ, ಇದಕ್ಕೆ ಅಗತ್ಯವಿರುವ ತಜ್ಞರ ಕೊರತೆ ತೀವ್ರ ಸ್ವರೂಪದಲ್ಲಿ ಇದೆ. 11,500 ಮನೋವೈದ್ಯರ ಅಗತ್ಯವಿದ್ದು, ಸದ್ಯ 3,500 ಮಂದಿ ಮಾತ್ರ ದೇಶದಲ್ಲಿದ್ದಾರೆ~ ಎಂದರು.<br /> <br /> ಈ ಮಸೂದೆಯ ಅನ್ವಯ ನಿಮ್ಹಾನ್ಸ್ಗೆ ಆಡಳಿತ ಮಂಡಳಿ ರಚನೆ ಆಗಲಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಅಧ್ಯಕ್ಷರಾಗಿರುತ್ತಾರೆ. ಕರ್ನಾಟಕದ ಆರೋಗ್ಯ ಖಾತೆ ಸಚಿವರೂ ಸೇರಿದಂತೆ 21 ಸದಸ್ಯರಿರುತ್ತಾರೆ. ಇದರಲ್ಲಿ ಮೂವರು ಸಂಸತ್ ಸದಸ್ಯರು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರು ಇರುತ್ತಾರೆ.<br /> <br /> ರಾಜ್ಯಸಭೆ ಅಂಗೀಕರಿಸಿರುವ ಈ ಮಸೂದೆಯನ್ನು ಲೋಕಸಭೆಯ ಒಪ್ಪಿಗೆಗಾಗಿ ಆ ಸದನದಲ್ಲಿ ಮಂಡಿಸಬೇಕಿದೆ.<br /> ಎಐಐಎಂಎಸ್ ಹೊರತಾಗಿ ಚಂಡೀಗಡದ `ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ~, ಪುದಚೇರಿಯ `ಜವಾಹರಲಾಲ್ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ~ಗಳಿಗೆ ದೇಶದಲ್ಲಿ ರಾಷ್ಟ್ರೀಯ ಮಾನ್ಯತೆ ದೊರಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>