<p><strong>ಬೆಂಗಳೂರು:</strong> `ಠೇವಣಿ ಸಂಗ್ರಹದಾರರನ್ನು ಬ್ಯಾಂಕ್ ಕಾರ್ಮಿಕರಂತೆ ಪರಿಗಣಿಸಿ, ನಿರ್ದಿಷ್ಟ ವೇತನವನ್ನು ನಿಗದಿಪಡಿಸಬೇಕು~ ಎಂದು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ರಾಮಕೃಷ್ಣ ಪೂಂಜಾ ಆಗ್ರಹಿಸಿದರು. <br /> ಆಲ್ ಇಂಡಿಯಾ ಬ್ಯಾಂಕ್ ಡಿಪಾಸಿಟ್ ಕಲೆಕ್ಟರ್ ವರ್ಕಮನ್ ಯೂನಿಯನ್ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ 4ನೇ ರಾಷ್ಟ್ರೀಯ ಅಧಿವೇಶನದಲ್ಲಿ ಅವರು ಮಾತನಾಡಿದರು.<br /> <br /> `ಹಗಲಿರುಳನ್ನದೆ ಠೇವಣಿ ಸಂಗ್ರಹ ಮಾಡುವ ಕಾರ್ಮಿಕರ ಮಾಸಿಕ ಇಂಧನ ಭತ್ಯೆ 100ರಿಂದ 3 ಸಾವಿರ ರೂಪಾಯಿಗೆ ಏರಿಸಬೇಕು. ಇತರೆ ಕಾರ್ಮಿಕರಿಗೆ ನೀಡುವಂತೆ ಬ್ಯಾಂಕ್ ವಿಮೆ, ಆರೋಗ್ಯ ಭತ್ಯೆ, ಭವಿಷ್ಯ ನಿಧಿಯ ಸೌಲಭ್ಯವನ್ನು ಒದಗಿಸಬೇಕು~ ಎಂದು ಒತ್ತಾಯಿಸಿದರು.<br /> <br /> ಮಾಜಿ ಸಂಸದ ಶಿವಣ್ಣ, ` ಠೇವಣಿ ಸಂಗ್ರಹದಾರರು ಜಾಗತೀಕರಣದ ಭರಾಟೆಯಿಂದ ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರ ಈ ಕಡೆ ಗಮನ ಹರಿಸಬೇಕು~ ಎಂದು ಹೇಳಿದರು. ಯೂನಿಯನ್ ಅಧ್ಯಕ್ಷ ಎನ್. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ಅಶೋಕ್ಕುಮಾರ್ ಇತರರು ಉಪಸ್ಥಿತರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಠೇವಣಿ ಸಂಗ್ರಹದಾರರನ್ನು ಬ್ಯಾಂಕ್ ಕಾರ್ಮಿಕರಂತೆ ಪರಿಗಣಿಸಿ, ನಿರ್ದಿಷ್ಟ ವೇತನವನ್ನು ನಿಗದಿಪಡಿಸಬೇಕು~ ಎಂದು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ರಾಮಕೃಷ್ಣ ಪೂಂಜಾ ಆಗ್ರಹಿಸಿದರು. <br /> ಆಲ್ ಇಂಡಿಯಾ ಬ್ಯಾಂಕ್ ಡಿಪಾಸಿಟ್ ಕಲೆಕ್ಟರ್ ವರ್ಕಮನ್ ಯೂನಿಯನ್ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ 4ನೇ ರಾಷ್ಟ್ರೀಯ ಅಧಿವೇಶನದಲ್ಲಿ ಅವರು ಮಾತನಾಡಿದರು.<br /> <br /> `ಹಗಲಿರುಳನ್ನದೆ ಠೇವಣಿ ಸಂಗ್ರಹ ಮಾಡುವ ಕಾರ್ಮಿಕರ ಮಾಸಿಕ ಇಂಧನ ಭತ್ಯೆ 100ರಿಂದ 3 ಸಾವಿರ ರೂಪಾಯಿಗೆ ಏರಿಸಬೇಕು. ಇತರೆ ಕಾರ್ಮಿಕರಿಗೆ ನೀಡುವಂತೆ ಬ್ಯಾಂಕ್ ವಿಮೆ, ಆರೋಗ್ಯ ಭತ್ಯೆ, ಭವಿಷ್ಯ ನಿಧಿಯ ಸೌಲಭ್ಯವನ್ನು ಒದಗಿಸಬೇಕು~ ಎಂದು ಒತ್ತಾಯಿಸಿದರು.<br /> <br /> ಮಾಜಿ ಸಂಸದ ಶಿವಣ್ಣ, ` ಠೇವಣಿ ಸಂಗ್ರಹದಾರರು ಜಾಗತೀಕರಣದ ಭರಾಟೆಯಿಂದ ಹೊಸ ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರ ಈ ಕಡೆ ಗಮನ ಹರಿಸಬೇಕು~ ಎಂದು ಹೇಳಿದರು. ಯೂನಿಯನ್ ಅಧ್ಯಕ್ಷ ಎನ್. ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ಅಶೋಕ್ಕುಮಾರ್ ಇತರರು ಉಪಸ್ಥಿತರಿದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>