<p>ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಇಂಟರ್ಸಿಟಿ ರೈಲಿಗೆ ಯಶವಂತಪುರದಲ್ಲಿ ನಿಲುಗಡೆ ಕೊಡುವುದಿಲ್ಲ. ಬೆಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಹೆಚ್ಚುತ್ತಿರುವ ಒತ್ತಡದಿಂದಾಗಿ ಬಹಳಷ್ಟು ರೈಲುಗಳನ್ನು ಯಶವಂತಪುರದಿಂದಲೇ ಆರಂಭಿಸಲಾಗುತ್ತಿದೆ.<br /> <br /> ಉತ್ತರಭಾರತದ ಅನೇಕ ಕಡೆ ತೆರಳುವ ಪ್ರಯಾಣಿಕರು ಇದರಿಂದಾಗಿ ಕಷ್ಟ ಅನುಭವಿಸಬೇಕಾಗಿದೆ. ಹಾಗೆಯೇ ಉತ್ತರಭಾರತದಿಂದ ಆಗಮಿಸಿದ ಚಿಕ್ಕಮಗಳೂರು, ಶಿವಮೊಗ್ಗದೆಡೆಗೆ ತೆರಳುವ ಪ್ರಯಾಣಿಕರು ಯಶವಂತಪುರದಿಂದ ಕೇಂದ್ರ ರೈಲು ನಿಲ್ದಾಣಕ್ಕೆ ಬಂದು ಶಿವಮೊಗ್ಗ ಇಂಟರ್ಸಿಟಿ ಹತ್ತಬೇಕಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.<br /> <br /> ಯಶವಂತಪುರದಲ್ಲಿ ಕೇವಲ ಒಂದೆರಡು ನಿಮಿಷದ ನಿಲುಗಡೆ ಕೊಟ್ಟಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ವಾರದಲ್ಲಿ ಕನಿಷ್ಠ ಐದು ಬಾರಿ ಈ ರೈಲಿಗೆ ಅನಧಿಕೃತವಾಗಿ ನಿಲ್ದಾಣದಲ್ಲಿ ಇಲ್ಲವೇ, ಸಿಗ್ನಲ್ ನಿರೀಕ್ಷೆಯಲ್ಲಿ ನಿಲ್ದಾಣದ ಹೊರಭಾಗದಲ್ಲಿ ನಿಲುಗಡೆ ಕೊಡಲಾಗುತ್ತಿದೆ.<br /> <br /> ನಿಲುಗಡೆಯಾಗುತ್ತದೋ ಇಲ್ಲವೋ ಎಂಬ ಧಾವಂತದಲ್ಲಿ ಪ್ರಯಾಣಿಕರು ರೈಲಿನ ಬಾಗಿಲ ಬಳಿ ಬಂದು ನಿರೀಕ್ಷಿಸುವುದನ್ನು ನೋಡಬಹುದು. ಕೆಲವರು ಕೆಟ್ಟ ಧೈರ್ಯ ಮಾಡಿ ನಿಧಾನವಾಗಿ ಚಲಿಸುತ್ತಿರುವ ರೈಲಿಂದ ಜಿಗಿಯುವುದೂ ಇದೆ. ಪ್ರಯಾಣಿಕರ ಹಿತದೃಷ್ಟಿಯಿಂದ ನಿಲುಗಡೆಗೆ ಇಲಾಖೆ ಗಮನಹರಿಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಇಂಟರ್ಸಿಟಿ ರೈಲಿಗೆ ಯಶವಂತಪುರದಲ್ಲಿ ನಿಲುಗಡೆ ಕೊಡುವುದಿಲ್ಲ. ಬೆಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಹೆಚ್ಚುತ್ತಿರುವ ಒತ್ತಡದಿಂದಾಗಿ ಬಹಳಷ್ಟು ರೈಲುಗಳನ್ನು ಯಶವಂತಪುರದಿಂದಲೇ ಆರಂಭಿಸಲಾಗುತ್ತಿದೆ.<br /> <br /> ಉತ್ತರಭಾರತದ ಅನೇಕ ಕಡೆ ತೆರಳುವ ಪ್ರಯಾಣಿಕರು ಇದರಿಂದಾಗಿ ಕಷ್ಟ ಅನುಭವಿಸಬೇಕಾಗಿದೆ. ಹಾಗೆಯೇ ಉತ್ತರಭಾರತದಿಂದ ಆಗಮಿಸಿದ ಚಿಕ್ಕಮಗಳೂರು, ಶಿವಮೊಗ್ಗದೆಡೆಗೆ ತೆರಳುವ ಪ್ರಯಾಣಿಕರು ಯಶವಂತಪುರದಿಂದ ಕೇಂದ್ರ ರೈಲು ನಿಲ್ದಾಣಕ್ಕೆ ಬಂದು ಶಿವಮೊಗ್ಗ ಇಂಟರ್ಸಿಟಿ ಹತ್ತಬೇಕಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.<br /> <br /> ಯಶವಂತಪುರದಲ್ಲಿ ಕೇವಲ ಒಂದೆರಡು ನಿಮಿಷದ ನಿಲುಗಡೆ ಕೊಟ್ಟಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ವಾರದಲ್ಲಿ ಕನಿಷ್ಠ ಐದು ಬಾರಿ ಈ ರೈಲಿಗೆ ಅನಧಿಕೃತವಾಗಿ ನಿಲ್ದಾಣದಲ್ಲಿ ಇಲ್ಲವೇ, ಸಿಗ್ನಲ್ ನಿರೀಕ್ಷೆಯಲ್ಲಿ ನಿಲ್ದಾಣದ ಹೊರಭಾಗದಲ್ಲಿ ನಿಲುಗಡೆ ಕೊಡಲಾಗುತ್ತಿದೆ.<br /> <br /> ನಿಲುಗಡೆಯಾಗುತ್ತದೋ ಇಲ್ಲವೋ ಎಂಬ ಧಾವಂತದಲ್ಲಿ ಪ್ರಯಾಣಿಕರು ರೈಲಿನ ಬಾಗಿಲ ಬಳಿ ಬಂದು ನಿರೀಕ್ಷಿಸುವುದನ್ನು ನೋಡಬಹುದು. ಕೆಲವರು ಕೆಟ್ಟ ಧೈರ್ಯ ಮಾಡಿ ನಿಧಾನವಾಗಿ ಚಲಿಸುತ್ತಿರುವ ರೈಲಿಂದ ಜಿಗಿಯುವುದೂ ಇದೆ. ಪ್ರಯಾಣಿಕರ ಹಿತದೃಷ್ಟಿಯಿಂದ ನಿಲುಗಡೆಗೆ ಇಲಾಖೆ ಗಮನಹರಿಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>