<p><strong>ಬೆಂಗಳೂರು:</strong> ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವಯಸ್ಸನ್ನು 58 ರಿಂದ 60ಕ್ಕೆ ಏರಿಸುವ ಸಂಬಂಧ ಸಿಬ್ಬಂದಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.<br /> <br /> ಪಿ.ಎನ್.ಬಸವರಾಜು ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಕಾಯ್ದೆಯ ಅನುಸಾರ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಸಿಬ್ಬಂದಿಗೆ ಒಂದೇ ತರನಾದ ವೇತನ, ನೇಮಕಾತಿ ಪ್ರಕ್ರಿಯೆ ಎಲ್ಲವೂ ಇದೆ. ಆದರೆ ತಮಗೆ ಮಾತ್ರ ನಿವೃತ್ತಿ ವಯಸ್ಸು ಏರಿಕೆ ಮಾಡಿಲ್ಲ ಎನ್ನುವುದು ಅವರ ವಾದ.<br /> <br /> ಪೆಟ್ರೋಲ್ ಬಂಕ್ಗೆ ಜಾಗ ವಿವಾದ: ಕಲ್ಯಾಣನಗರದ ಎಚ್ಆರ್ಬಿಆರ್ ಲೇಔಟ್ನ 3ನೇ ಬ್ಲಾಕ್ ಬಳಿ 2006ರಲ್ಲಿ ನಿರ್ಮಾಣಗೊಂಡಿರುವ ಪೆಟ್ರೊಲ್ ಬಂಕ್ `ಭವಿಷ್ಯ~ ಇನ್ನು ಮೂರು ತಿಂಗಳಿನಲ್ಲಿ ನಿರ್ಧಾರವಾಗಲಿದೆ. ಕಾರಣ, ಬ್ಯಾಂಕ್ ಹಾಗೂ ಉದ್ಯಾನಕ್ಕೆ ಮೀಸಲು ಇರಿಸಿರುವ ಜಾಗದಲ್ಲಿ ಇದನ್ನು ನಿರ್ಮಾಣ ಮಾಡಿರುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.<br /> <br /> ಈ ಆದೇಶವನ್ನು ಸಂಬಂಧಿತ ಕೋರ್ಟ್ ಮುಂದೆ ಪ್ರಶ್ನಿಸಲು ಪೆಟ್ರೋಲ್ ಬಂಕ್ ಮಾಲೀಕ ಪುರುಷೋತ್ತಮ ಅವರು ಬಯಸಿರುವ ಹಿನ್ನೆಲೆಯಲ್ಲಿ, ತನ್ನ ಆದೇಶವನ್ನು ಹೈಕೋರ್ಟ್ ಮೂರು ತಿಂಗಳ ಮಟ್ಟಿಗೆ ಅಮಾನತಿನಲ್ಲಿ ಇಟ್ಟಿದೆ. <br /> <br /> ಆದರೆ ಈ ಅವಧಿಯ ಒಳಗೆ ಬೇರೆ ಯಾವುದೇ ಕೋರ್ಟ್ಗಳಿಂದ ಆದೇಶ ಪಡೆಯುವಲ್ಲಿ ಮಾಲೀಕರು ವಿಫಲರಾದರೆ ಈ ಜಾಗವನ್ನು ಮೊದಲಿನ ಸ್ಥಿತಿಗೇ ತರುವಂತೆ (ಬ್ಯಾಂಕ್ ಹಾಗೂ ಉದ್ಯಾನಕ್ಕೆ ಮೀಸಲು ಇರಿಸುವಂತೆ) ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ. ಪೆಟ್ರೋಲ್ ಬಂಕ್ಗೆ ಜಾಗ ನೀಡಿರುವ ಕ್ರಮ ಪ್ರಶ್ನಿಸಿ ಸುಬ್ರಹ್ಮಣ್ಯ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾ. ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.<br /> <br /> <strong>ವಸ್ತುಸ್ಥಿತಿಗೆ ಆದೇಶ: </strong>ಆರ್ಥಿಕವಾಗಿ ಹಿಂದುಳಿದವರಿಗಾಗಿ ಈಜಿಪುರದ ಬಳಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ವಸ್ತುಸ್ಥಿತಿ ಕುರಿತು ಎರಡು ವಾರಗಳಲ್ಲಿ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.<br /> <br /> ಈ ಕಟ್ಟಡದ ಅಡಿಪಾಯ ಸರಿಯಿಲ್ಲ ಎಂಬ ಕುರಿತು `ಟಾರ್ಸ್ಟೀಲ್ ಸಂಶೋಧನಾ ಸಂಸ್ಥೆ~ ವರದಿ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ರಮಾದೇವಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾ. ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. <br /> <br /> <strong>ಎಪಿಎಂಸಿಗೆ ಜಾಗ- ಊರ್ಜಿತ:</strong> ಆನೇಕಲ್ನ ಸರ್ಜಾಪುರ ಹೋಬಳಿಯ ಗೂಳಿಮಂಗಲದ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾರಾಟ ಸಮಿತಿಗೆ (ಎಪಿಎಂಸಿ) ಜಾಗ ಮಂಜೂರು ಮಾಡಿ ಹೊರಡಿಸಲಾದ 2002ರ ಮೇ ತಿಂಗಳ ಪ್ರಾಥಮಿಕ ಹಾಗೂ 2003ರ ಆಗಸ್ಟ್ ಅಂತಿಮ ಅಧಿಸೂಚನೆಯನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ. ಈ ಅಧಿಸೂಚನೆಯನ್ನು ಹಲವು ಭೂಮಾಲೀಕರು ಪ್ರಶ್ನಿಸಿದ್ದರು. <br /> <br /> ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ. ಆದರೆ ಅರ್ಜಿದಾರ ಭೂಮಾಲೀಕರಿಗೆ ಭೂಮಿ ಸ್ವಾಧೀನಪಡಿಸಿಕೊಂಡ ದಿನಕ್ಕೆ ಅನ್ವಯ ಆಗುವಂತೆ (2010ರ ಅಕ್ಟೋಬರ್) ಅಂದಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡುವಂತೆ ಪೀಠ ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯ ವಯಸ್ಸನ್ನು 58 ರಿಂದ 60ಕ್ಕೆ ಏರಿಸುವ ಸಂಬಂಧ ಸಿಬ್ಬಂದಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.<br /> <br /> ಪಿ.ಎನ್.ಬಸವರಾಜು ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಈ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಕಾಯ್ದೆಯ ಅನುಸಾರ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಸಿಬ್ಬಂದಿಗೆ ಒಂದೇ ತರನಾದ ವೇತನ, ನೇಮಕಾತಿ ಪ್ರಕ್ರಿಯೆ ಎಲ್ಲವೂ ಇದೆ. ಆದರೆ ತಮಗೆ ಮಾತ್ರ ನಿವೃತ್ತಿ ವಯಸ್ಸು ಏರಿಕೆ ಮಾಡಿಲ್ಲ ಎನ್ನುವುದು ಅವರ ವಾದ.<br /> <br /> ಪೆಟ್ರೋಲ್ ಬಂಕ್ಗೆ ಜಾಗ ವಿವಾದ: ಕಲ್ಯಾಣನಗರದ ಎಚ್ಆರ್ಬಿಆರ್ ಲೇಔಟ್ನ 3ನೇ ಬ್ಲಾಕ್ ಬಳಿ 2006ರಲ್ಲಿ ನಿರ್ಮಾಣಗೊಂಡಿರುವ ಪೆಟ್ರೊಲ್ ಬಂಕ್ `ಭವಿಷ್ಯ~ ಇನ್ನು ಮೂರು ತಿಂಗಳಿನಲ್ಲಿ ನಿರ್ಧಾರವಾಗಲಿದೆ. ಕಾರಣ, ಬ್ಯಾಂಕ್ ಹಾಗೂ ಉದ್ಯಾನಕ್ಕೆ ಮೀಸಲು ಇರಿಸಿರುವ ಜಾಗದಲ್ಲಿ ಇದನ್ನು ನಿರ್ಮಾಣ ಮಾಡಿರುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.<br /> <br /> ಈ ಆದೇಶವನ್ನು ಸಂಬಂಧಿತ ಕೋರ್ಟ್ ಮುಂದೆ ಪ್ರಶ್ನಿಸಲು ಪೆಟ್ರೋಲ್ ಬಂಕ್ ಮಾಲೀಕ ಪುರುಷೋತ್ತಮ ಅವರು ಬಯಸಿರುವ ಹಿನ್ನೆಲೆಯಲ್ಲಿ, ತನ್ನ ಆದೇಶವನ್ನು ಹೈಕೋರ್ಟ್ ಮೂರು ತಿಂಗಳ ಮಟ್ಟಿಗೆ ಅಮಾನತಿನಲ್ಲಿ ಇಟ್ಟಿದೆ. <br /> <br /> ಆದರೆ ಈ ಅವಧಿಯ ಒಳಗೆ ಬೇರೆ ಯಾವುದೇ ಕೋರ್ಟ್ಗಳಿಂದ ಆದೇಶ ಪಡೆಯುವಲ್ಲಿ ಮಾಲೀಕರು ವಿಫಲರಾದರೆ ಈ ಜಾಗವನ್ನು ಮೊದಲಿನ ಸ್ಥಿತಿಗೇ ತರುವಂತೆ (ಬ್ಯಾಂಕ್ ಹಾಗೂ ಉದ್ಯಾನಕ್ಕೆ ಮೀಸಲು ಇರಿಸುವಂತೆ) ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ. ಪೆಟ್ರೋಲ್ ಬಂಕ್ಗೆ ಜಾಗ ನೀಡಿರುವ ಕ್ರಮ ಪ್ರಶ್ನಿಸಿ ಸುಬ್ರಹ್ಮಣ್ಯ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾ. ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.<br /> <br /> <strong>ವಸ್ತುಸ್ಥಿತಿಗೆ ಆದೇಶ: </strong>ಆರ್ಥಿಕವಾಗಿ ಹಿಂದುಳಿದವರಿಗಾಗಿ ಈಜಿಪುರದ ಬಳಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳ ವಸ್ತುಸ್ಥಿತಿ ಕುರಿತು ಎರಡು ವಾರಗಳಲ್ಲಿ ಮಾಹಿತಿ ನೀಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.<br /> <br /> ಈ ಕಟ್ಟಡದ ಅಡಿಪಾಯ ಸರಿಯಿಲ್ಲ ಎಂಬ ಕುರಿತು `ಟಾರ್ಸ್ಟೀಲ್ ಸಂಶೋಧನಾ ಸಂಸ್ಥೆ~ ವರದಿ ನೀಡಿದ್ದು, ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸುವಂತೆ ಕೋರಿ ರಮಾದೇವಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾ. ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. <br /> <br /> <strong>ಎಪಿಎಂಸಿಗೆ ಜಾಗ- ಊರ್ಜಿತ:</strong> ಆನೇಕಲ್ನ ಸರ್ಜಾಪುರ ಹೋಬಳಿಯ ಗೂಳಿಮಂಗಲದ ಬಳಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾರಾಟ ಸಮಿತಿಗೆ (ಎಪಿಎಂಸಿ) ಜಾಗ ಮಂಜೂರು ಮಾಡಿ ಹೊರಡಿಸಲಾದ 2002ರ ಮೇ ತಿಂಗಳ ಪ್ರಾಥಮಿಕ ಹಾಗೂ 2003ರ ಆಗಸ್ಟ್ ಅಂತಿಮ ಅಧಿಸೂಚನೆಯನ್ನು ಹೈಕೋರ್ಟ್ ಊರ್ಜಿತಗೊಳಿಸಿದೆ. ಈ ಅಧಿಸೂಚನೆಯನ್ನು ಹಲವು ಭೂಮಾಲೀಕರು ಪ್ರಶ್ನಿಸಿದ್ದರು. <br /> <br /> ಅವರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ. ಆದರೆ ಅರ್ಜಿದಾರ ಭೂಮಾಲೀಕರಿಗೆ ಭೂಮಿ ಸ್ವಾಧೀನಪಡಿಸಿಕೊಂಡ ದಿನಕ್ಕೆ ಅನ್ವಯ ಆಗುವಂತೆ (2010ರ ಅಕ್ಟೋಬರ್) ಅಂದಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡುವಂತೆ ಪೀಠ ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>