<p>ಕೊಪ್ಪಳ: ಜಿಲ್ಲೆಯಲ್ಲಿ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಜಿಲ್ಲಾ ಪಂಚಾಯಿತಿ ಎಲ್ಲ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಿದೆ. ಅಲ್ಲದೇ, ಕೊಳವೆ ಬಾವಿಗಳ ತುರ್ತು ದುರಸ್ತಿಗಾಗಿ ಎಲ್ಲ ಸಲಕರಣೆ ಹಾಗೂ ಪರಿಣತಿ ಹೊಂದಿದ ಸಿಬ್ಬಂದಿ ಇರುವ ಎರಡು ವಾಹನಗಳನ್ನು ಸಹ ಸಿದ್ಧಗೊಳಿಸಲಾಗಿದೆ.<br /> <br /> ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಆರಂಭಿಸಲಾಗಿರುವ ದೂರು ಸ್ವೀಕೃತಿ ಕೇಂದ್ರಗಳಲ್ಲಿ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿವೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಒಂದು ಸಹಾಯವಾಣಿಯನ್ನು ಸಹ ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ತಿಳಿಸಿದ್ದಾರೆ.<br /> <br /> ಮಂಗಳವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಈ ಕೇಂದ್ರಗಳಲ್ಲಿ ಸ್ವೀಕರಿಸಲಾಗುವ ದೂರುಗಳನ್ನು ಅಯಾ ತಾಲ್ಲೂಕುಗಳಲ್ಲಿರುವ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗುವುದು. ಈ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ಹೇಳಿದರು.<br /> ಸಾರ್ವಜನಿಕರು ಈ ಸಹಾಯವಾಣಿಗಳಿಗೆ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆ ವರೆಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಹೇಳಿದರು.<br /> <br /> <strong>ಸುಸಜ್ಜಿತ ವಾಹನ:</strong> ಕೊಳವೆ ಬಾವಿಗಳ ದುರಸ್ತಿಗೆ ಬೇಕಾದ ಎಲ್ಲ ಸಲಕರಣೆ, ಬಿಡಿ ಭಾಗಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದ ಹಾಗೂ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ವಾಹನಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಸಾರಿಗೆ ಸಂಸ್ಥೆಯಿಂದ 3.7 ಲಕ್ಷ ಹಾಗೂ 3.16 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಟ್ರಕ್ಗಳನ್ನು ಖರೀದಿ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ವಾಹನಗಳು ಜಿಲ್ಲೆಯಲ್ಲಿ ಸೇವೆಗೆ ಲಭ್ಯವಾಗಲಿವೆ ಎಂದು ವಿವರಿಸಿದರು. <br /> <br /> ಕನಕಗಿರಿ ಹಾಗೂ ಅಳವಂಡಿ ಗ್ರಾಮಗಳಲ್ಲಿ ತಲಾ ಒಂದು ವಾಹನವನ್ನು ನಿಯೋಜನೆ ಮಾಡಲಾಗುವುದು. ಕನಕಗಿರಿಯಲ್ಲಿರುವ ವಾಹನ ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ ಕೊಳವೆಬಾವಿಗಳ ದುರಸ್ತಿಗೆ ಬಳಕೆಯಾಗಲಿದೆ. ಅದೇ ರೀತಿ ಅಳವಂಡಿಯಲ್ಲಿರಿಸಲಾಗುವ ವಾಹನವನ್ನು ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದೂ ವಿವರಿಸಿದರು.<br /> <br /> <br /> <strong>ದೂರು ಸ್ವೀಕೃತಿ ಕೇಂದ್ರ-ಅಧಿಕಾರಿಗಳ ವಿವರ</strong><br /> ಕೊಪ್ಪಳ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದೂರು ದಾಖಲಿಸಲು ಜಿಲ್ಲಾ ಪಂಚಾಯಿತಿ ಆರಂಭಿಸಿರುವ ದೂರು ಸ್ವೀಕೃತಿ ಕೇಂದ್ರ, ಸಹಾಯವಾಣಿ ಸಂಖ್ಯೆ ಹಾಗೂ ನಿಯೋಜಿತ ಅಧಿಕಾರಿಗಳ ವಿವರ ಹೀಗಿದೆ:<br /> <br /> ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಟ್ಟದ ದೂರು ಸ್ವೀಕೃತಿ ಕೇಂದ್ರ: 08539-221207<br /> <br /> ಆಯಾ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆಗಳು: ಕೊಪ್ಪಳ- 220399, ಯಲಬುರ್ಗಾ-220136, ಕುಷ್ಟಗಿ- 267028, ಗಂಗಾವತಿ- 230230. ಜಿಲ್ಲಾ ಕೇಂದ್ರದಲ್ಲಿ ಮೇಲುಸ್ತುವಾರಿಗಾಗಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಕೆ.ಬಿ.ಬಸಪ್ಪ ಅವರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸುವ ಸಲುವಾಗಿ ಪಾಳಿಯ ಆಧಾರದಲ್ಲಿ ನಿಯೋಜನೆಗೊಂಡ ನೌಕರರ ವಿವರ ಹೀಗಿದೆ:<br /> <br /> ಬಿ.ಬಸವರಾಜ, ಕಲ್ಲಪ್ಪ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಬಿ.ವಿ.ಮಠ ಹಾಗೂ ಶರಣಪ್ಪ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಸೋಮವಾರ, ಜಿ.ಎಸ್.ಕುಲಕರ್ಣಿ ಹಾಗೂ ರಮೇಶ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಮಾತಂಗೆಪ್ಪ ಹಾಗೂ ಭೋಗೇಶ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಮಂಗಳವಾರ, ಕುಮಾರಸ್ವಾಮಿ ಹಾಗೂ ಮಲ್ಲಿಕಾರ್ಜುನ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಅಶೋಕ ಹಾಗೂ ಮನೋಜ್ಕುಮಾರ್ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಬುಧವಾರ, ಚಂದ್ರಶೇಖರ ಹಾಗೂ ಕೊಟ್ರೇಶ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಎಚ್ಚರಪ್ಪ ಹಾಗೂ ದೇವೇಂದ್ರಪ್ಪ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಗುರುವಾರ, ಮೊಹ್ಮದ್ ಖಾಜಿ ಹಾಗೂ ವಿನಾಯಕ ಹೊಂಗಲ್ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಜಿ.ಮಂಜುನಾಥ ಹಾಗೂ ವಿ.ವಿ.ಗಾರವಾಡ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಶುಕ್ರವಾರ, ಕೆ.ಗಾಳಿನಾಥ ಹಾಗೂ ಪಿ.ಬಿ.ಕಾಳಗೆ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಪ್ರಸನ್ನ ಹಾಗೂ ಚಂದ್ರಶೇಖರ ತಾಳಿಕೋಟೆ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಶನಿವಾರ, ಶರಣಪ್ಪ ಜಾಲಗಾರ ಹಾಗೂ ಮೆಹಬೂಬ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಮುಕುಂದಕೃಷ್ಣ ಹಾಗೂ ಗಿರಿಗೌಡರ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಭಾನುವಾರ. ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ದೂರು ಸ್ವೀಕೃತಿ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆ ವರೆಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿ: ಕೊಪ್ಪಳ- ಹುಸೇನಸಾಬ ಕಾಯ್ಗಡ್ಡಿ ಹಾಗೂ ಚಂದ್ರಶೇಖರ, ಕುಷ್ಟಗಿ- ಬಸವರಾಜ ಎಂ.ಪಾಟೀಲ ಹಾಗೂ ಹನುಮಪ್ಪ ಅಗಸಿಮುಂದಿನ, ಗಂಗಾವತಿ- ಚಂದ್ರಶೇಖರ ಪಾಟೀಲ ಹಾಗೂ ರಿಯಾಜ್ ಅಹ್ಮದ್, ಯಲಬುರ್ಗಾ- ಈರಣ್ಣ ಹಾಗೂ ಖಾದರ್ಸಾಬ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ಜಿಲ್ಲೆಯಲ್ಲಿ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಜಿಲ್ಲಾ ಪಂಚಾಯಿತಿ ಎಲ್ಲ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಿದೆ. ಅಲ್ಲದೇ, ಕೊಳವೆ ಬಾವಿಗಳ ತುರ್ತು ದುರಸ್ತಿಗಾಗಿ ಎಲ್ಲ ಸಲಕರಣೆ ಹಾಗೂ ಪರಿಣತಿ ಹೊಂದಿದ ಸಿಬ್ಬಂದಿ ಇರುವ ಎರಡು ವಾಹನಗಳನ್ನು ಸಹ ಸಿದ್ಧಗೊಳಿಸಲಾಗಿದೆ.<br /> <br /> ಕುಡಿಯುವ ನೀರಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಆರಂಭಿಸಲಾಗಿರುವ ದೂರು ಸ್ವೀಕೃತಿ ಕೇಂದ್ರಗಳಲ್ಲಿ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿವೆ. ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಒಂದು ಸಹಾಯವಾಣಿಯನ್ನು ಸಹ ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ತಿಳಿಸಿದ್ದಾರೆ.<br /> <br /> ಮಂಗಳವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಈ ಕೇಂದ್ರಗಳಲ್ಲಿ ಸ್ವೀಕರಿಸಲಾಗುವ ದೂರುಗಳನ್ನು ಅಯಾ ತಾಲ್ಲೂಕುಗಳಲ್ಲಿರುವ ಪಂಚಾಯತ್ರಾಜ್ ಎಂಜಿನಿಯರಿಂಗ್ ಉಪವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತಿಳಿಸಲಾಗುವುದು. ಈ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ಹೇಳಿದರು.<br /> ಸಾರ್ವಜನಿಕರು ಈ ಸಹಾಯವಾಣಿಗಳಿಗೆ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆ ವರೆಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಹೇಳಿದರು.<br /> <br /> <strong>ಸುಸಜ್ಜಿತ ವಾಹನ:</strong> ಕೊಳವೆ ಬಾವಿಗಳ ದುರಸ್ತಿಗೆ ಬೇಕಾದ ಎಲ್ಲ ಸಲಕರಣೆ, ಬಿಡಿ ಭಾಗಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿದ ಹಾಗೂ ಸದಾ ಸನ್ನದ್ಧ ಸ್ಥಿತಿಯಲ್ಲಿರುವ ವಾಹನಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಸಾರಿಗೆ ಸಂಸ್ಥೆಯಿಂದ 3.7 ಲಕ್ಷ ಹಾಗೂ 3.16 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಟ್ರಕ್ಗಳನ್ನು ಖರೀದಿ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ವಾಹನಗಳು ಜಿಲ್ಲೆಯಲ್ಲಿ ಸೇವೆಗೆ ಲಭ್ಯವಾಗಲಿವೆ ಎಂದು ವಿವರಿಸಿದರು. <br /> <br /> ಕನಕಗಿರಿ ಹಾಗೂ ಅಳವಂಡಿ ಗ್ರಾಮಗಳಲ್ಲಿ ತಲಾ ಒಂದು ವಾಹನವನ್ನು ನಿಯೋಜನೆ ಮಾಡಲಾಗುವುದು. ಕನಕಗಿರಿಯಲ್ಲಿರುವ ವಾಹನ ಗಂಗಾವತಿ ಮತ್ತು ಕುಷ್ಟಗಿ ತಾಲ್ಲೂಕುಗಳಲ್ಲಿನ ಕೊಳವೆಬಾವಿಗಳ ದುರಸ್ತಿಗೆ ಬಳಕೆಯಾಗಲಿದೆ. ಅದೇ ರೀತಿ ಅಳವಂಡಿಯಲ್ಲಿರಿಸಲಾಗುವ ವಾಹನವನ್ನು ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕುಗಳಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದೂ ವಿವರಿಸಿದರು.<br /> <br /> <br /> <strong>ದೂರು ಸ್ವೀಕೃತಿ ಕೇಂದ್ರ-ಅಧಿಕಾರಿಗಳ ವಿವರ</strong><br /> ಕೊಪ್ಪಳ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ದೂರು ದಾಖಲಿಸಲು ಜಿಲ್ಲಾ ಪಂಚಾಯಿತಿ ಆರಂಭಿಸಿರುವ ದೂರು ಸ್ವೀಕೃತಿ ಕೇಂದ್ರ, ಸಹಾಯವಾಣಿ ಸಂಖ್ಯೆ ಹಾಗೂ ನಿಯೋಜಿತ ಅಧಿಕಾರಿಗಳ ವಿವರ ಹೀಗಿದೆ:<br /> <br /> ಜಿಲ್ಲಾ ಪಂಚಾಯಿತಿ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಟ್ಟದ ದೂರು ಸ್ವೀಕೃತಿ ಕೇಂದ್ರ: 08539-221207<br /> <br /> ಆಯಾ ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆಗಳು: ಕೊಪ್ಪಳ- 220399, ಯಲಬುರ್ಗಾ-220136, ಕುಷ್ಟಗಿ- 267028, ಗಂಗಾವತಿ- 230230. ಜಿಲ್ಲಾ ಕೇಂದ್ರದಲ್ಲಿ ಮೇಲುಸ್ತುವಾರಿಗಾಗಿ ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಕೆ.ಬಿ.ಬಸಪ್ಪ ಅವರನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ಸ್ವೀಕರಿಸುವ ಸಲುವಾಗಿ ಪಾಳಿಯ ಆಧಾರದಲ್ಲಿ ನಿಯೋಜನೆಗೊಂಡ ನೌಕರರ ವಿವರ ಹೀಗಿದೆ:<br /> <br /> ಬಿ.ಬಸವರಾಜ, ಕಲ್ಲಪ್ಪ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಬಿ.ವಿ.ಮಠ ಹಾಗೂ ಶರಣಪ್ಪ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಸೋಮವಾರ, ಜಿ.ಎಸ್.ಕುಲಕರ್ಣಿ ಹಾಗೂ ರಮೇಶ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಮಾತಂಗೆಪ್ಪ ಹಾಗೂ ಭೋಗೇಶ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಮಂಗಳವಾರ, ಕುಮಾರಸ್ವಾಮಿ ಹಾಗೂ ಮಲ್ಲಿಕಾರ್ಜುನ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಅಶೋಕ ಹಾಗೂ ಮನೋಜ್ಕುಮಾರ್ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಬುಧವಾರ, ಚಂದ್ರಶೇಖರ ಹಾಗೂ ಕೊಟ್ರೇಶ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಎಚ್ಚರಪ್ಪ ಹಾಗೂ ದೇವೇಂದ್ರಪ್ಪ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಗುರುವಾರ, ಮೊಹ್ಮದ್ ಖಾಜಿ ಹಾಗೂ ವಿನಾಯಕ ಹೊಂಗಲ್ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಜಿ.ಮಂಜುನಾಥ ಹಾಗೂ ವಿ.ವಿ.ಗಾರವಾಡ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಶುಕ್ರವಾರ, ಕೆ.ಗಾಳಿನಾಥ ಹಾಗೂ ಪಿ.ಬಿ.ಕಾಳಗೆ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಪ್ರಸನ್ನ ಹಾಗೂ ಚಂದ್ರಶೇಖರ ತಾಳಿಕೋಟೆ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಶನಿವಾರ, ಶರಣಪ್ಪ ಜಾಲಗಾರ ಹಾಗೂ ಮೆಹಬೂಬ (ಬೆ. 6ರಿಂದ ಮಧ್ಯಾಹ್ನ 2 ಗಂಟೆ), ಮುಕುಂದಕೃಷ್ಣ ಹಾಗೂ ಗಿರಿಗೌಡರ (ಮ. 2 ರಿಂದ ರಾತ್ರಿ 8 ಗಂಟೆ)- ಪ್ರತಿ ಭಾನುವಾರ. ತಾಲ್ಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ದೂರು ಸ್ವೀಕೃತಿ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 6ರಿಂದ ರಾತ್ರಿ 8 ಗಂಟೆ ವರೆಗೆ ಕಾರ್ಯ ನಿರ್ವಹಿಸುವ ಸಿಬ್ಬಂದಿ: ಕೊಪ್ಪಳ- ಹುಸೇನಸಾಬ ಕಾಯ್ಗಡ್ಡಿ ಹಾಗೂ ಚಂದ್ರಶೇಖರ, ಕುಷ್ಟಗಿ- ಬಸವರಾಜ ಎಂ.ಪಾಟೀಲ ಹಾಗೂ ಹನುಮಪ್ಪ ಅಗಸಿಮುಂದಿನ, ಗಂಗಾವತಿ- ಚಂದ್ರಶೇಖರ ಪಾಟೀಲ ಹಾಗೂ ರಿಯಾಜ್ ಅಹ್ಮದ್, ಯಲಬುರ್ಗಾ- ಈರಣ್ಣ ಹಾಗೂ ಖಾದರ್ಸಾಬ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>