<p><strong>ಮರಿಯಮ್ಮನಹಳ್ಳಿ:</strong> ಈ ಭಾಗದ ರೈತರ ಬಹುದಿನಗಳ ಕನಸಾದ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಏತ ನೀರಾವರಿ ಯೋಜನೆ ಮೂಲಕ ಡಣಾಯಕನಕೆರೆಗೆ ನೀರು ಹಾಯಿಸುವ ಕಾರ್ಯಕ್ಕೆ ಹಲವು ವಿಘ್ನ ಎದುರಾಗಿದೆ.<br /> <br /> ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆಯಾದ ಡಣಾಯಕನಕೆರೆಗೆ ಕಳೆದ ನವೆಂಬರ್ ತಿಂಗಳಲ್ಲಿ ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ ಚಾಲನೆ ನೀಡಿದ್ದರು. ಜಲಾಶಯದ ಹಿನ್ನೀರು ಸರಿಯುತ್ತಿದ್ದರಿಂದ ಕೆಲವೇ ದಿನಗಳು ಮಾತ್ರ ಏತ ನೀರಾವರಿಯಿಂದ ಕೆರೆಗೆ ನೀರು ಹಾಯಿಸಲಾತಾದರೂ ಕೆರೆಯ ಅಂಗಳ ತುಂಬಲಿಲ್ಲ.<br /> <br /> ಉತ್ತಮ ಮಳೆಯಾಗದಿದ್ದರೂ, ಮಲೆನಾಡಿನಲ್ಲಿ ಭಾರಿ ಮಳೆಯಿಂದಾಗಿ ಜುಲೈ ಆರಂಭಕ್ಕೆ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದರಿಂದ ಡಣಾಪುರ ಗ್ರಾಮದ ಬಳಿ ಏತ ನೀರಾವರಿ ಯೋಜನೆಗೆ ನಿರ್ಮಿಸಿದ ಪಂಪ್ಹೌಸ್ ಬಾವಿಗೆ ನೀರು ಹರಿದುಬಂದಿದ್ದು ಕೆರೆಗೆ ನೀರು ಹರಿದು ಬರಲಿದೆ ಎಂದು ರೈತರಲ್ಲಿ ಉತ್ಸಾಹ ಇಮ್ಮಡಿಸಿತ್ತು.<br /> <br /> ಹದಿನೈದು ದಿನಗಳ ಕೆಳಗೆ ಗಡಿಬಿಡಿಯಲ್ಲಿಯೇ ಶಾಸಕ ಭೀಮಾ ನಾಯ್ಕ ನೀರು ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಿ ಒಂದೆರಡು ದಿನ ನೀರು ಕೆರೆಗೆ ಹರಿದರೂ ಪೈಪ್ ಲೈನ್ಗಳು ಅಲ್ಲಲ್ಲಿ ಕಿತ್ತು ಹೋಗಿದ್ದರಿಂದ ಭಾರಿ ನೀರು ಸೋರುವಿಕೆಯಿಂದಾಗಿ ಸದ್ಯ ತಾತ್ಕಾಲಿಕ ನಿಲುಗಡೆಯಾಗಿದೆ.<br /> <br /> ತುಂಗಭದ್ರಾ ಜಲಾಶಯ ನಿರ್ಮಾಣ ಕಾಲಕ್ಕೆ ರೈತರ ಅನುಕೂಲಕ್ಕಾಗಿ ಜಲಾಶಯದಿಂದ ಡಣಾಯಕನಕೆರೆ ನೀರು ತುಂಬಿಸುವ ಯೋಜನೆ ಇತ್ತು. ವಿಜಯನಗರ ಅರಸರ ಕಾಲದಲ್ಲಿ ಮುದ್ದಣ್ಣ ಎಂಬ ಪಾಳೇಗಾರ ಈ ಕೆರೆಯನ್ನು ನಿರ್ಮಿಸಿದನೆಂದು ಹೇಳಲಾಗುತ್ತಿದೆ.<br /> <br /> ಸುಮಾರು 0.288 ಟಿಎಂಸಿ ಅಡಿ ಸಾಮರ್ಥ್ಯದ ಕೆರೆ ಪೂರ್ಣ ತುಂಬಿದರೆ ಸುಮಾರು ಮೂರು ಸಾವಿರ ಎಕರೆಗೆ ನೀರು ಒದಗಿಸಲಿದೆ. ಪೂರ್ಣ ತುಂಬಿದಾಗ ವರ್ಷ ಪೂರ್ತಿ ನೀರು ಉಣಿಸುತ್ತಿದ್ದು, ಕಬ್ಬು, ಭತ್ತ, ಶೇಂಗಾ, ಮುಸುಕಿನ ಜೋಳ ಸೇರಿದಂತೆ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯಬಹುದು.<br /> <br /> ಆದರೆ ಜಲಾಶಯಕ್ಕೆ ನೀರು ಬೇಗ ಹರಿದು ಬಂದರೂ, ಕೆರೆಗೆ ಮಾತ್ರ ನೀರು ಹರಿಯುವಲ್ಲಿ ವಿಳಂಬವಾಗುತ್ತಿದೆ. ಪೈಪ್ಲೈನ್ ಸಾಗಿರುವ ಕಡೆಗಳಲ್ಲಿ ನಿರ್ಮಿಸಿದ ಸುಮಾರು ಏಳು ಏರ್ವಾಲ್ವ್ಗಳಲ್ಲಿ ಮೂರರ ಪ್ಲೇಟ್ಗಳು, ಮತ್ತೊಂದು ಏರ್ವಾಲ್ವ್ ಮೇಲಿನ ಯೂನಿಟ್ ಅನ್ನೇ ಕಳ್ಳರು ಕದ್ದು ಒಯ್ದಿದ್ದಾರೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಅಧಿಕಾರಿಗಳು ದೂರು ಕೊಟ್ಟರೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.<br /> <br /> ಶಾಸಕ ಭೀಮಾ ನಾಯ್ಕ ಮತ್ತು ರೈತರ ಒತ್ತಡದಿಂದಾಗಿ ಅಧಿಕಾರಿಗಳು ಏರ್ವಾಲ್ವ್ ಪ್ಲೇಟ್ಗಳನ್ನು ಖರೀದಿ ಸರಿಪಡಿಸಿದ್ದಾರೆ. ನಂತರ ನೀರು ಹಾಯಿಸಲಾಯಿತಾದರೂ ಒಂದೆರಡು ದಿನಗಳಲ್ಲಿ ಸುಮಾರು ಎಂಟು ಕಡೆಗಳಲ್ಲಿ ನೀರಿನ ಪೈಪುಗಳ ಸೋರಿಕೆಯಾಗಿ ಮತ್ತೆ ಬಂದ್ ಆಗಿದೆ.<br /> <br /> ಬಿಎಂಎಂ ಕಾರ್ಖಾನೆಯ ಮೊದಲ ದ್ವಾರದಿಂದ ಸಾಗಿದ ಪೈಪ್ಲೈನ್ನಲ್ಲಿ ಅಧಿಕ ಪ್ರಮಾಣದ ಹಾನಿಯಾಗಿದೆ. `ನಾವು ಕೆರೆಗೆ ನೀರು ಬರುತ್ತದೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ. ಆದರೆ ನೀರು ಮಾತ್ರ ಹರಿಯುತ್ತಿಲ್ಲ ಎಂದು ರೈತ ದುರುಗಪ್ಪ ಹಾಗೂ ಇತರರು ಹೇಳಿದರು.<br /> <br /> ಪೈಪ್ಲೈನ್ ದುರಸ್ತಿ ಆರಂಭವಾಗಿದ್ದು ಬಿಎಂಎಂ ಕಾರ್ಖಾನೆಯವರು ಪೈಪ್ಲೈನ್ ಸರಿಪಡೆಸಲು ಸಿಮೆಂಟ್ ಹಾಗೂ ಜಲ್ಲಿಕಲ್ಲುಗಳನ್ನು ನೀಡಿದ್ದು, ಗುತ್ತಿಗೆದಾರರ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ<br /> ನೀರು ಹಾಯಿಸುವ ಕೆಲಸ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಇಮಾಂಸಾಹೇಬ್ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಿಯಮ್ಮನಹಳ್ಳಿ:</strong> ಈ ಭಾಗದ ರೈತರ ಬಹುದಿನಗಳ ಕನಸಾದ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಏತ ನೀರಾವರಿ ಯೋಜನೆ ಮೂಲಕ ಡಣಾಯಕನಕೆರೆಗೆ ನೀರು ಹಾಯಿಸುವ ಕಾರ್ಯಕ್ಕೆ ಹಲವು ವಿಘ್ನ ಎದುರಾಗಿದೆ.<br /> <br /> ಜಿಲ್ಲೆಯ ಎರಡನೇ ಅತಿ ದೊಡ್ಡ ಕೆರೆಯಾದ ಡಣಾಯಕನಕೆರೆಗೆ ಕಳೆದ ನವೆಂಬರ್ ತಿಂಗಳಲ್ಲಿ ಮಾಜಿ ಶಾಸಕ ಕೆ.ನೇಮಿರಾಜ್ ನಾಯ್ಕ ಚಾಲನೆ ನೀಡಿದ್ದರು. ಜಲಾಶಯದ ಹಿನ್ನೀರು ಸರಿಯುತ್ತಿದ್ದರಿಂದ ಕೆಲವೇ ದಿನಗಳು ಮಾತ್ರ ಏತ ನೀರಾವರಿಯಿಂದ ಕೆರೆಗೆ ನೀರು ಹಾಯಿಸಲಾತಾದರೂ ಕೆರೆಯ ಅಂಗಳ ತುಂಬಲಿಲ್ಲ.<br /> <br /> ಉತ್ತಮ ಮಳೆಯಾಗದಿದ್ದರೂ, ಮಲೆನಾಡಿನಲ್ಲಿ ಭಾರಿ ಮಳೆಯಿಂದಾಗಿ ಜುಲೈ ಆರಂಭಕ್ಕೆ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದರಿಂದ ಡಣಾಪುರ ಗ್ರಾಮದ ಬಳಿ ಏತ ನೀರಾವರಿ ಯೋಜನೆಗೆ ನಿರ್ಮಿಸಿದ ಪಂಪ್ಹೌಸ್ ಬಾವಿಗೆ ನೀರು ಹರಿದುಬಂದಿದ್ದು ಕೆರೆಗೆ ನೀರು ಹರಿದು ಬರಲಿದೆ ಎಂದು ರೈತರಲ್ಲಿ ಉತ್ಸಾಹ ಇಮ್ಮಡಿಸಿತ್ತು.<br /> <br /> ಹದಿನೈದು ದಿನಗಳ ಕೆಳಗೆ ಗಡಿಬಿಡಿಯಲ್ಲಿಯೇ ಶಾಸಕ ಭೀಮಾ ನಾಯ್ಕ ನೀರು ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಿ ಒಂದೆರಡು ದಿನ ನೀರು ಕೆರೆಗೆ ಹರಿದರೂ ಪೈಪ್ ಲೈನ್ಗಳು ಅಲ್ಲಲ್ಲಿ ಕಿತ್ತು ಹೋಗಿದ್ದರಿಂದ ಭಾರಿ ನೀರು ಸೋರುವಿಕೆಯಿಂದಾಗಿ ಸದ್ಯ ತಾತ್ಕಾಲಿಕ ನಿಲುಗಡೆಯಾಗಿದೆ.<br /> <br /> ತುಂಗಭದ್ರಾ ಜಲಾಶಯ ನಿರ್ಮಾಣ ಕಾಲಕ್ಕೆ ರೈತರ ಅನುಕೂಲಕ್ಕಾಗಿ ಜಲಾಶಯದಿಂದ ಡಣಾಯಕನಕೆರೆ ನೀರು ತುಂಬಿಸುವ ಯೋಜನೆ ಇತ್ತು. ವಿಜಯನಗರ ಅರಸರ ಕಾಲದಲ್ಲಿ ಮುದ್ದಣ್ಣ ಎಂಬ ಪಾಳೇಗಾರ ಈ ಕೆರೆಯನ್ನು ನಿರ್ಮಿಸಿದನೆಂದು ಹೇಳಲಾಗುತ್ತಿದೆ.<br /> <br /> ಸುಮಾರು 0.288 ಟಿಎಂಸಿ ಅಡಿ ಸಾಮರ್ಥ್ಯದ ಕೆರೆ ಪೂರ್ಣ ತುಂಬಿದರೆ ಸುಮಾರು ಮೂರು ಸಾವಿರ ಎಕರೆಗೆ ನೀರು ಒದಗಿಸಲಿದೆ. ಪೂರ್ಣ ತುಂಬಿದಾಗ ವರ್ಷ ಪೂರ್ತಿ ನೀರು ಉಣಿಸುತ್ತಿದ್ದು, ಕಬ್ಬು, ಭತ್ತ, ಶೇಂಗಾ, ಮುಸುಕಿನ ಜೋಳ ಸೇರಿದಂತೆ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯಬಹುದು.<br /> <br /> ಆದರೆ ಜಲಾಶಯಕ್ಕೆ ನೀರು ಬೇಗ ಹರಿದು ಬಂದರೂ, ಕೆರೆಗೆ ಮಾತ್ರ ನೀರು ಹರಿಯುವಲ್ಲಿ ವಿಳಂಬವಾಗುತ್ತಿದೆ. ಪೈಪ್ಲೈನ್ ಸಾಗಿರುವ ಕಡೆಗಳಲ್ಲಿ ನಿರ್ಮಿಸಿದ ಸುಮಾರು ಏಳು ಏರ್ವಾಲ್ವ್ಗಳಲ್ಲಿ ಮೂರರ ಪ್ಲೇಟ್ಗಳು, ಮತ್ತೊಂದು ಏರ್ವಾಲ್ವ್ ಮೇಲಿನ ಯೂನಿಟ್ ಅನ್ನೇ ಕಳ್ಳರು ಕದ್ದು ಒಯ್ದಿದ್ದಾರೆ. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಅಧಿಕಾರಿಗಳು ದೂರು ಕೊಟ್ಟರೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.<br /> <br /> ಶಾಸಕ ಭೀಮಾ ನಾಯ್ಕ ಮತ್ತು ರೈತರ ಒತ್ತಡದಿಂದಾಗಿ ಅಧಿಕಾರಿಗಳು ಏರ್ವಾಲ್ವ್ ಪ್ಲೇಟ್ಗಳನ್ನು ಖರೀದಿ ಸರಿಪಡಿಸಿದ್ದಾರೆ. ನಂತರ ನೀರು ಹಾಯಿಸಲಾಯಿತಾದರೂ ಒಂದೆರಡು ದಿನಗಳಲ್ಲಿ ಸುಮಾರು ಎಂಟು ಕಡೆಗಳಲ್ಲಿ ನೀರಿನ ಪೈಪುಗಳ ಸೋರಿಕೆಯಾಗಿ ಮತ್ತೆ ಬಂದ್ ಆಗಿದೆ.<br /> <br /> ಬಿಎಂಎಂ ಕಾರ್ಖಾನೆಯ ಮೊದಲ ದ್ವಾರದಿಂದ ಸಾಗಿದ ಪೈಪ್ಲೈನ್ನಲ್ಲಿ ಅಧಿಕ ಪ್ರಮಾಣದ ಹಾನಿಯಾಗಿದೆ. `ನಾವು ಕೆರೆಗೆ ನೀರು ಬರುತ್ತದೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೇವೆ. ಆದರೆ ನೀರು ಮಾತ್ರ ಹರಿಯುತ್ತಿಲ್ಲ ಎಂದು ರೈತ ದುರುಗಪ್ಪ ಹಾಗೂ ಇತರರು ಹೇಳಿದರು.<br /> <br /> ಪೈಪ್ಲೈನ್ ದುರಸ್ತಿ ಆರಂಭವಾಗಿದ್ದು ಬಿಎಂಎಂ ಕಾರ್ಖಾನೆಯವರು ಪೈಪ್ಲೈನ್ ಸರಿಪಡೆಸಲು ಸಿಮೆಂಟ್ ಹಾಗೂ ಜಲ್ಲಿಕಲ್ಲುಗಳನ್ನು ನೀಡಿದ್ದು, ಗುತ್ತಿಗೆದಾರರ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಮೂರು ದಿನಗಳಲ್ಲಿ<br /> ನೀರು ಹಾಯಿಸುವ ಕೆಲಸ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಇಮಾಂಸಾಹೇಬ್ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>