<p>ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನವನ್ನು ಪ್ರವೇಶಿಸುವ ದ್ವಾರ ಚಿಕ್ಕದಾದ ಕಾರಣ ದೂರದ ಊರುಗಳಿಂದ ಸಾಹಿತ್ಯ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿ ಪಡಿಪಾಟಲು ಅನುಭವಿಸುವಂತಾಯಿತು.<br /> <br /> ಸಮ್ಮೇಳನ ನಡೆಯುತ್ತಿರುವ ಮೈದಾನದೊಳಕ್ಕೆ ಹೋಗುವ ಮತ್ತು ಅಲ್ಲಿಂದ ಬೇರೆಡೆ ತೆರಳುವ ಸಾಹಿತ್ಯಾಸಕ್ತರೆಲ್ಲರೂ ಒಂದೇ ದ್ವಾರವನ್ನು ಬಳಸುತ್ತಿದ್ದ ಕಾರಣ, ಅಲ್ಲಿ ತೀವ್ರ ನೂಕುನುಗ್ಗಲು ಸಂಭವಿಸುತ್ತಿತ್ತು. ಶುಕ್ರವಾರದಂದು ಇಡೀ ದಿನ ಈ ಪರಿಸ್ಥಿತಿ ಇತ್ತು.<br /> <br /> ಕನ್ನಡದ ಪ್ರಸಿದ್ಧ ಗಾಯಕಿಯೊಬ್ಬರು ಈ ನೂಕುನುಗ್ಗಲಿನಲ್ಲಿ ಸಿಕ್ಕು ಪಡಿಪಾಟಲು ಅನುಭವಿಸುವಂತಾಗಿತ್ತು.<br /> <br /> <strong>ಕಸಾಪ ಎದುರು ಪ್ರತಿಭಟನೆ:<br /> </strong>ಸಾಹಿತ್ಯ ಸಮ್ಮೇಳನದ ಆರಂಭದ ದಿನವಾದ ಶುಕ್ರವಾರದಂದು ಕಸಾಪದ ಎದುರು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.<br /> <br /> ಬೆಳಿಗ್ಗೆ 11ಗಂಟೆಯ ವೇಳೆಗೆ ಪ್ರತಿನಿಧಿಗಳ ನೋಂದಣಿ ಕಾರ್ಯವನ್ನು ನಿಲ್ಲಿಸಿದ ಕಾರಣ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ನಮ್ಮ ಬಳಿ ನೋಂದಣಿ ಮಾಡಿಸಿದ ರಶೀದಿ ಇದೆ, ಆದರೂ ನಮಗೆ ಸಾಹಿತ್ಯ ಸಮ್ಮೇಳನದ ಕಿಟ್ ಕೊಟ್ಟಿಲ್ಲ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವರು ‘ನಾವು ಹಣ ನೀಡಲು ಸಿದ್ಧರಿದ್ದೇವೆ, ಆದರೆ ನಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಿದ್ದರು.<br /> <br /> <strong>ಎಲ್ಸಿಡಿ ಪರದೆ ಬೇಕಿತ್ತು<br /> </strong>ನಾಡಪ್ರಭು ಕೆಂಪೇಗೌಡ ಮಹಾಮಂಟಪ ಸಾಕಷ್ಟು ದೊಡ್ಡದಾಗಿಯೇ ಇತ್ತು. ಸಹಸ್ರಾರು ಮಂದಿ ಸಾಹಿತ್ಯಾಸಕ್ತರಿಗೆ ಆಸನ ವ್ಯವಸ್ಥೆಯೂ ಇತ್ತು.<br /> <br /> ಆದರೆ ಸಭಾಂಗಣದ ಹಿಂಭಾಗದಲ್ಲಿ ಕುಳಿತವರಿಗೆ ವೇದಿಕೆಯ ಮೇಲೆ ಏನು ನಡೆಯುತ್ತಿದೆ ಎಂಬುದೇ ಕಾಣದಂತಹ ಪರಿಸ್ಥಿತಿ ಇತ್ತು. ಸಭಾಂಗಣದ ಮುಂಭಾಗದಲ್ಲಿ ಒಂದಿಷ್ಟು ಸಾಲುಗಳನ್ನು ಹೊರತುಪಡಿಸಿದರೆ, ಹಿಂಭಾಗದಲ್ಲಿ ಕುಳಿತಿದ್ದ ಸಾಹಿತ್ಯಾಸಕ್ತರೆಲ್ಲ ವೇದಿಕೆಯ ಮೇಲೆ ಏನು ನಡೆಯುತ್ತಿದೆ ಎಂದು ನೋಡಲು ತಿಣುಕಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.<br /> ‘ವೇದಿಕೆಯ ಮೇಲೆ ಎಲ್ಇಡಿ ಪರದೆಯನ್ನು ಅಳವಡಿಸಿರುವುದರ ಜೊತೆಗೆ, ಸಭಾಂಗಣದ ಎರಡೂ ಕಡೆಗಳಲ್ಲಿ ಎಲ್ಸಿಡಿ ಪರದೆಗಳನ್ನು ಇಟ್ಟಿದ್ದರೆ ಎಲ್ಲರಿಗೂ ಕಾರ್ಯಕ್ರಮ ನೋಡಲು ಅನುಕೂಲವಾಗುತ್ತಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.<br /> <br /> <strong>ವಸತಿ ವ್ಯವಸ್ಥೆ ಸರಿ ಇಲ್ಲ<br /> </strong>ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿರುವವರಿಗೆ ವಸತಿ ವ್ಯವಸ್ಥೆ ಸರಿಯಾಗಿ ಆಗಿಲ್ಲ ಎಂದು ಆರೋಪಿಸಿ ಹಾವೇರಿ, ದಾವಣಗೆರೆ ಕಡೆಯಿಂದ ಬಂದಿದ್ದ ಪ್ರತಿನಿಧಿಗಳು ಶುಕ್ರವಾರ ಬೆಳಿಗ್ಗೆ ‘ಕೆಂಪೇಗೌಡ ಮಹಾಮಂಟಪ’ದ ಎದುರು ಪ್ರತಿಭಟನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನವನ್ನು ಪ್ರವೇಶಿಸುವ ದ್ವಾರ ಚಿಕ್ಕದಾದ ಕಾರಣ ದೂರದ ಊರುಗಳಿಂದ ಸಾಹಿತ್ಯ ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಮಂದಿ ಪಡಿಪಾಟಲು ಅನುಭವಿಸುವಂತಾಯಿತು.<br /> <br /> ಸಮ್ಮೇಳನ ನಡೆಯುತ್ತಿರುವ ಮೈದಾನದೊಳಕ್ಕೆ ಹೋಗುವ ಮತ್ತು ಅಲ್ಲಿಂದ ಬೇರೆಡೆ ತೆರಳುವ ಸಾಹಿತ್ಯಾಸಕ್ತರೆಲ್ಲರೂ ಒಂದೇ ದ್ವಾರವನ್ನು ಬಳಸುತ್ತಿದ್ದ ಕಾರಣ, ಅಲ್ಲಿ ತೀವ್ರ ನೂಕುನುಗ್ಗಲು ಸಂಭವಿಸುತ್ತಿತ್ತು. ಶುಕ್ರವಾರದಂದು ಇಡೀ ದಿನ ಈ ಪರಿಸ್ಥಿತಿ ಇತ್ತು.<br /> <br /> ಕನ್ನಡದ ಪ್ರಸಿದ್ಧ ಗಾಯಕಿಯೊಬ್ಬರು ಈ ನೂಕುನುಗ್ಗಲಿನಲ್ಲಿ ಸಿಕ್ಕು ಪಡಿಪಾಟಲು ಅನುಭವಿಸುವಂತಾಗಿತ್ತು.<br /> <br /> <strong>ಕಸಾಪ ಎದುರು ಪ್ರತಿಭಟನೆ:<br /> </strong>ಸಾಹಿತ್ಯ ಸಮ್ಮೇಳನದ ಆರಂಭದ ದಿನವಾದ ಶುಕ್ರವಾರದಂದು ಕಸಾಪದ ಎದುರು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.<br /> <br /> ಬೆಳಿಗ್ಗೆ 11ಗಂಟೆಯ ವೇಳೆಗೆ ಪ್ರತಿನಿಧಿಗಳ ನೋಂದಣಿ ಕಾರ್ಯವನ್ನು ನಿಲ್ಲಿಸಿದ ಕಾರಣ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತ್ಯ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದರು.<br /> <br /> ‘ನಮ್ಮ ಬಳಿ ನೋಂದಣಿ ಮಾಡಿಸಿದ ರಶೀದಿ ಇದೆ, ಆದರೂ ನಮಗೆ ಸಾಹಿತ್ಯ ಸಮ್ಮೇಳನದ ಕಿಟ್ ಕೊಟ್ಟಿಲ್ಲ’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವರು ‘ನಾವು ಹಣ ನೀಡಲು ಸಿದ್ಧರಿದ್ದೇವೆ, ಆದರೆ ನಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿಲ್ಲ’ ಎಂದು ನೋವು ತೋಡಿಕೊಳ್ಳುತ್ತಿದ್ದರು.<br /> <br /> <strong>ಎಲ್ಸಿಡಿ ಪರದೆ ಬೇಕಿತ್ತು<br /> </strong>ನಾಡಪ್ರಭು ಕೆಂಪೇಗೌಡ ಮಹಾಮಂಟಪ ಸಾಕಷ್ಟು ದೊಡ್ಡದಾಗಿಯೇ ಇತ್ತು. ಸಹಸ್ರಾರು ಮಂದಿ ಸಾಹಿತ್ಯಾಸಕ್ತರಿಗೆ ಆಸನ ವ್ಯವಸ್ಥೆಯೂ ಇತ್ತು.<br /> <br /> ಆದರೆ ಸಭಾಂಗಣದ ಹಿಂಭಾಗದಲ್ಲಿ ಕುಳಿತವರಿಗೆ ವೇದಿಕೆಯ ಮೇಲೆ ಏನು ನಡೆಯುತ್ತಿದೆ ಎಂಬುದೇ ಕಾಣದಂತಹ ಪರಿಸ್ಥಿತಿ ಇತ್ತು. ಸಭಾಂಗಣದ ಮುಂಭಾಗದಲ್ಲಿ ಒಂದಿಷ್ಟು ಸಾಲುಗಳನ್ನು ಹೊರತುಪಡಿಸಿದರೆ, ಹಿಂಭಾಗದಲ್ಲಿ ಕುಳಿತಿದ್ದ ಸಾಹಿತ್ಯಾಸಕ್ತರೆಲ್ಲ ವೇದಿಕೆಯ ಮೇಲೆ ಏನು ನಡೆಯುತ್ತಿದೆ ಎಂದು ನೋಡಲು ತಿಣುಕಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.<br /> ‘ವೇದಿಕೆಯ ಮೇಲೆ ಎಲ್ಇಡಿ ಪರದೆಯನ್ನು ಅಳವಡಿಸಿರುವುದರ ಜೊತೆಗೆ, ಸಭಾಂಗಣದ ಎರಡೂ ಕಡೆಗಳಲ್ಲಿ ಎಲ್ಸಿಡಿ ಪರದೆಗಳನ್ನು ಇಟ್ಟಿದ್ದರೆ ಎಲ್ಲರಿಗೂ ಕಾರ್ಯಕ್ರಮ ನೋಡಲು ಅನುಕೂಲವಾಗುತ್ತಿತ್ತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.<br /> <br /> <strong>ವಸತಿ ವ್ಯವಸ್ಥೆ ಸರಿ ಇಲ್ಲ<br /> </strong>ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿರುವವರಿಗೆ ವಸತಿ ವ್ಯವಸ್ಥೆ ಸರಿಯಾಗಿ ಆಗಿಲ್ಲ ಎಂದು ಆರೋಪಿಸಿ ಹಾವೇರಿ, ದಾವಣಗೆರೆ ಕಡೆಯಿಂದ ಬಂದಿದ್ದ ಪ್ರತಿನಿಧಿಗಳು ಶುಕ್ರವಾರ ಬೆಳಿಗ್ಗೆ ‘ಕೆಂಪೇಗೌಡ ಮಹಾಮಂಟಪ’ದ ಎದುರು ಪ್ರತಿಭಟನೆ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>