<p><strong>ಕುಂದಾಪುರ:</strong> ಭಾರತದಲ್ಲಿ 1990ರ ದಶಕದಲ್ಲಿ ತರಲಾದ ನೂತನ ಆರ್ಥಿಕ ನೀತಿ ಇಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾವನ್ನು ಬೀರಿದೆ.<br /> <br /> ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಸ್ವಲ್ಪ ಮಟ್ಟಿನ ರಾಜಕೀಯ ಶಕ್ತಿ ಪಡೆಯುತ್ತಿದ್ದ ಅಂಚಿನ ಸಮುದಾಯಗಳ ಮೇಲೆ ಈ ಆರ್ಥಿಕ ನೀತಿ ಆಗಾಧ ಪರಿಣಾಮ ಬೀರಿದ್ದರಿಂದ, ಅಭಿವೃದ್ಧಿಯಲ್ಲಿ ಚೇತರಿಕೆ ಕಾಣುತ್ತಿದ್ದ ಈ ಸಮುದಾಯಗಳು ಮತ್ತೆ ಹಿನ್ನಡೆ ಕಾಣುವಂತಾಗಿದೆ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಪ್ರೊ. ವಲೇರಿಯನ್ ರಾಡ್ರಿಗಸ್ ಹೇಳಿದರು.<br /> <br /> ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಅಧ್ಯಾಪಕರ ಸಂಘದ ಸಹಭಾಗಿತ್ವ ದೊಂದಿಗೆ ನಡೆದ `ಲಿಬ್ರಲೈಸ್ಡ್ ಇಂಡಿಯಾ : ಪೊಲಿಟಿಕ್ಸ್, ಸೊಸೈಟಿ ಎಂಡ್ ಇಕಾನಮಿ' ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬದಲಾಗುತ್ತಿರುವ ಜಾಗತೀಕರಣ ಹಾಗೂ ಇದಕ್ಕೆ ಪೂರಕವಾಗುತ್ತಿರುವ ಖಾಸಗೀಕರಣದಿಂದ ಸಾರ್ವಜನಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳು ಕ್ಷೀಣಿಸುತ್ತಿದೆ. ಈ ರೀತಿಯ ಬದಲಾವಣೆ ಯಿಂದ ಸಮಾಜದ ಅಂಚಿನ ಸಮುದಾ ಯಗಳು ಉದ್ಯೋಗ ಹಾಗೂ ಬದುಕಿನ ಹಕ್ಕಿಗಾಗಿ ಮೇಲ್ವರ್ಗದ ಸಮುದಾ ಯಗಳೊಂದಿಗೆ ಪೈಪೋಟಿಗೆ ಇಳಿಯು ವಂತಾಗಿದೆ ಎಂದು ವಿಶ್ಲೇಷಣೆ ಮಾಡಿದ ಅವರು, ಈ ನೀತಿಯ ಅನುಷ್ಠಾನ ದಿಂದಾಗಿ ಆರೋಗ್ಯ ಹಾಗೂ ಶಿಕ್ಷಣ ದಂತಹ ಮೂಲಭೂತ ಕ್ಷೇತ್ರಗಳಲ್ಲಿಯೂ ಹೋರಾಟ ಮಾಡ ಬೇಕಾದ ಅನಿವಾರ್ಯತೆ ತಲೆದೋರಿದೆ ಎಂದು ಅವರು ಹೇಳಿದರು.<br /> <br /> ವಿಚಾರ ಸಂಕಿರಣದ ಸಂಯೋಜಕ ಡಾ.ಎಂ.ದಿನೇಶ್ ಹೆಗ್ಡೆ ರಚಿಸಿ, ದೆಹಲಿಯ ಜವಾಹರಲಾಲ್ ಪಬ್ಲಿಷರ್ಸ್ ಪ್ರಕಟಿಸಿದ `ಬ್ಯಾಕ್ವರ್ಡ್ ಕ್ಲಾಸ್ ಮೂವ್ಮೆಂಟ್ ಇನ್ ಇಂಡಿಯಾ' ಗ್ರಂಥವನ್ನು ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.<br /> <br /> ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ.ಎಂ. ಚಂದ್ರಪ್ರಭಾ ಆರ್.ಹೆಗ್ಡೆ ಸ್ವಾಗತಿಸಿದರು. ಉಪನ್ಯಾಸಕ ರಾಧಾ ಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಹೆಚ್.ಜಗದೀಶ್ ವಂದಿಸಿದರು. ಕಾಲೇ ಜಿನ ವಿದ್ಯಾರ್ಥಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಾಪುರ:</strong> ಭಾರತದಲ್ಲಿ 1990ರ ದಶಕದಲ್ಲಿ ತರಲಾದ ನೂತನ ಆರ್ಥಿಕ ನೀತಿ ಇಲ್ಲಿನ ಸಾಮಾಜಿಕ ಹಾಗೂ ರಾಜಕೀಯ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾವನ್ನು ಬೀರಿದೆ.<br /> <br /> ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಸ್ವಲ್ಪ ಮಟ್ಟಿನ ರಾಜಕೀಯ ಶಕ್ತಿ ಪಡೆಯುತ್ತಿದ್ದ ಅಂಚಿನ ಸಮುದಾಯಗಳ ಮೇಲೆ ಈ ಆರ್ಥಿಕ ನೀತಿ ಆಗಾಧ ಪರಿಣಾಮ ಬೀರಿದ್ದರಿಂದ, ಅಭಿವೃದ್ಧಿಯಲ್ಲಿ ಚೇತರಿಕೆ ಕಾಣುತ್ತಿದ್ದ ಈ ಸಮುದಾಯಗಳು ಮತ್ತೆ ಹಿನ್ನಡೆ ಕಾಣುವಂತಾಗಿದೆ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ಪ್ರೊ. ವಲೇರಿಯನ್ ರಾಡ್ರಿಗಸ್ ಹೇಳಿದರು.<br /> <br /> ಬಸ್ರೂರಿನ ಶಾರದಾ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಅಧ್ಯಾಪಕರ ಸಂಘದ ಸಹಭಾಗಿತ್ವ ದೊಂದಿಗೆ ನಡೆದ `ಲಿಬ್ರಲೈಸ್ಡ್ ಇಂಡಿಯಾ : ಪೊಲಿಟಿಕ್ಸ್, ಸೊಸೈಟಿ ಎಂಡ್ ಇಕಾನಮಿ' ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಬದಲಾಗುತ್ತಿರುವ ಜಾಗತೀಕರಣ ಹಾಗೂ ಇದಕ್ಕೆ ಪೂರಕವಾಗುತ್ತಿರುವ ಖಾಸಗೀಕರಣದಿಂದ ಸಾರ್ವಜನಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳು ಕ್ಷೀಣಿಸುತ್ತಿದೆ. ಈ ರೀತಿಯ ಬದಲಾವಣೆ ಯಿಂದ ಸಮಾಜದ ಅಂಚಿನ ಸಮುದಾ ಯಗಳು ಉದ್ಯೋಗ ಹಾಗೂ ಬದುಕಿನ ಹಕ್ಕಿಗಾಗಿ ಮೇಲ್ವರ್ಗದ ಸಮುದಾ ಯಗಳೊಂದಿಗೆ ಪೈಪೋಟಿಗೆ ಇಳಿಯು ವಂತಾಗಿದೆ ಎಂದು ವಿಶ್ಲೇಷಣೆ ಮಾಡಿದ ಅವರು, ಈ ನೀತಿಯ ಅನುಷ್ಠಾನ ದಿಂದಾಗಿ ಆರೋಗ್ಯ ಹಾಗೂ ಶಿಕ್ಷಣ ದಂತಹ ಮೂಲಭೂತ ಕ್ಷೇತ್ರಗಳಲ್ಲಿಯೂ ಹೋರಾಟ ಮಾಡ ಬೇಕಾದ ಅನಿವಾರ್ಯತೆ ತಲೆದೋರಿದೆ ಎಂದು ಅವರು ಹೇಳಿದರು.<br /> <br /> ವಿಚಾರ ಸಂಕಿರಣದ ಸಂಯೋಜಕ ಡಾ.ಎಂ.ದಿನೇಶ್ ಹೆಗ್ಡೆ ರಚಿಸಿ, ದೆಹಲಿಯ ಜವಾಹರಲಾಲ್ ಪಬ್ಲಿಷರ್ಸ್ ಪ್ರಕಟಿಸಿದ `ಬ್ಯಾಕ್ವರ್ಡ್ ಕ್ಲಾಸ್ ಮೂವ್ಮೆಂಟ್ ಇನ್ ಇಂಡಿಯಾ' ಗ್ರಂಥವನ್ನು ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.<br /> <br /> ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ.ಎಂ. ಚಂದ್ರಪ್ರಭಾ ಆರ್.ಹೆಗ್ಡೆ ಸ್ವಾಗತಿಸಿದರು. ಉಪನ್ಯಾಸಕ ರಾಧಾ ಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಹೆಚ್.ಜಗದೀಶ್ ವಂದಿಸಿದರು. ಕಾಲೇ ಜಿನ ವಿದ್ಯಾರ್ಥಿಗಳು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>