<p><strong>ಬೆಂಗಳೂರು: </strong>`ಲೇಖಕಿ ಎಚ್.ಎಸ್.ಪಾರ್ವತಿ ಅವರು ಜೀವನದಲ್ಲಿ ಭೇಟಿಯಾದ ಸಾಹಿತಿಗಳು, ಗಾಯಕರು, ಶಿಲ್ಪಿಗಳು ಮುಂತಾದವರ ಬಗ್ಗೆ ಕುತೂಹಲ ಸಂಗತಿಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ~ ಎಂದು ಲೇಖಕಿ ಡಾ.ವಿಜಯಾ ಹೇಳಿದರು.<br /> <br /> ಕರ್ನಾಟಕ ಲೇಖಕಿಯರ ಸಂಘವು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾರ್ವತಿ ಅವರ `ನೆನಪಿನಂಗಳದಿಂದ~ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.<br /> ಪಾರ್ವತಿ ಅವರು ಬರವಣಿಗೆಗೆ ಪರಿಸರದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿಶೇಷತೆಯಾಗಿದೆ. ಒಟ್ಟು 49 ಮಂದಿ ವ್ಯಕ್ತಿ ಚಿತ್ರವನ್ನು ಅವರು `ನೆನಪಿನಂಗಳದಿಂದ~ ಕೃತಿಯಲ್ಲಿ ದಾಖಲಿಸಿದ್ದಾರೆ. ಪ್ರತಿ ಲೇಖನವೂ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದರು.<br /> <br /> `ಲೇಖಕಿ ಟಿ.ಸುನಂದಮ್ಮ ಅವರು ಶಾಲೆ ಬಿಟ್ಟ ಪ್ರಸಂಗವನ್ನು ಪಾರ್ವತಿ ಬರೆದಿದ್ದಾರೆ. ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದ ಸುನಂದಮ್ಮ ಅವರು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಆದರೆ ಶಾಲೆಯಲ್ಲಿದ್ದ ಹುಡುಗರಿಗೆ ಇದನ್ನು ಸಹಿಸಲಾಗಲಿಲ್ಲ. ಈ ವಿಷಯವನ್ನು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರು. ಸುನಂದಮ್ಮ ಅವರು ಶಾಲೆಯಲ್ಲಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳುತ್ತಾರೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಅವರು ಶಾಲೆ ಬಿಟ್ಟು ಮನೆಯಲ್ಲಿಯೇ ಕಲಿಯುತ್ತಾರೆ ಎಂಬ ವಿಷಯವೂ ಪುಸ್ತಕದಲ್ಲಿದೆ~ ಎಂದು ತಿಳಿಸಿದರು.<br /> <br /> `ಸಾಧನೆ ಮಾಡಿದವರು ನನ್ನ ಶ್ರಮವೇ ಸಾಧನೆಗೆ ಕಾರಣ ಎಂದು ಜಂಬ ಕೊಚ್ಚಿಕೊಳ್ಳಬಹುದು. ಆದರೆ ಯಾವುದೇ ವ್ಯಕ್ತಿಯ ಸಾಧನೆಗೆ ಬೇರೆಯವರು ನೆರವು ಯಾವುದಾದರೂ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ~ ಎಂದು ಪಾರ್ವತಿ ಹೇಳಿದರು. ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಲೇಖಕಿ ಎಚ್.ಎಸ್.ಪಾರ್ವತಿ ಅವರು ಜೀವನದಲ್ಲಿ ಭೇಟಿಯಾದ ಸಾಹಿತಿಗಳು, ಗಾಯಕರು, ಶಿಲ್ಪಿಗಳು ಮುಂತಾದವರ ಬಗ್ಗೆ ಕುತೂಹಲ ಸಂಗತಿಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ~ ಎಂದು ಲೇಖಕಿ ಡಾ.ವಿಜಯಾ ಹೇಳಿದರು.<br /> <br /> ಕರ್ನಾಟಕ ಲೇಖಕಿಯರ ಸಂಘವು ನಗರದ ನಯನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾರ್ವತಿ ಅವರ `ನೆನಪಿನಂಗಳದಿಂದ~ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.<br /> ಪಾರ್ವತಿ ಅವರು ಬರವಣಿಗೆಗೆ ಪರಿಸರದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದು ವಿಶೇಷತೆಯಾಗಿದೆ. ಒಟ್ಟು 49 ಮಂದಿ ವ್ಯಕ್ತಿ ಚಿತ್ರವನ್ನು ಅವರು `ನೆನಪಿನಂಗಳದಿಂದ~ ಕೃತಿಯಲ್ಲಿ ದಾಖಲಿಸಿದ್ದಾರೆ. ಪ್ರತಿ ಲೇಖನವೂ ಹಲವು ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ ಎಂದರು.<br /> <br /> `ಲೇಖಕಿ ಟಿ.ಸುನಂದಮ್ಮ ಅವರು ಶಾಲೆ ಬಿಟ್ಟ ಪ್ರಸಂಗವನ್ನು ಪಾರ್ವತಿ ಬರೆದಿದ್ದಾರೆ. ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದ ಸುನಂದಮ್ಮ ಅವರು ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಆದರೆ ಶಾಲೆಯಲ್ಲಿದ್ದ ಹುಡುಗರಿಗೆ ಇದನ್ನು ಸಹಿಸಲಾಗಲಿಲ್ಲ. ಈ ವಿಷಯವನ್ನು ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದರು. ಸುನಂದಮ್ಮ ಅವರು ಶಾಲೆಯಲ್ಲಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಹೇಳುತ್ತಾರೆ. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಅವರು ಶಾಲೆ ಬಿಟ್ಟು ಮನೆಯಲ್ಲಿಯೇ ಕಲಿಯುತ್ತಾರೆ ಎಂಬ ವಿಷಯವೂ ಪುಸ್ತಕದಲ್ಲಿದೆ~ ಎಂದು ತಿಳಿಸಿದರು.<br /> <br /> `ಸಾಧನೆ ಮಾಡಿದವರು ನನ್ನ ಶ್ರಮವೇ ಸಾಧನೆಗೆ ಕಾರಣ ಎಂದು ಜಂಬ ಕೊಚ್ಚಿಕೊಳ್ಳಬಹುದು. ಆದರೆ ಯಾವುದೇ ವ್ಯಕ್ತಿಯ ಸಾಧನೆಗೆ ಬೇರೆಯವರು ನೆರವು ಯಾವುದಾದರೂ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ~ ಎಂದು ಪಾರ್ವತಿ ಹೇಳಿದರು. ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಧ್ಯಕ್ಷತೆ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>