<p><strong>ಕೃಷ್ಣರಾಜಪುರ: </strong>ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ `ನೆಮ್ಮದಿ~ ಕೇಂದ್ರವು ಅವ್ಯವಸ್ಥೆಯ ಆಗರವಾಗಿರುವುದರಿಂದ ಪಡಿತರ ಚೀಟಿ, ಆದಾಯ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ನಾಗರಿಕರು ಹಾಗೂ ವಿದ್ಯಾರ್ಥಿಗಳು ಪರಿಪಾಟಲು ಪಡುವಂತಾಗಿದೆ.<br /> <br /> `ನೆಮ್ಮದಿ~ ಕೇಂದ್ರದ ಎಡ ಬದಿಯಲ್ಲಿ ಪಡಿತರ ಚೀಟಿ, ಆದಾಯ ಪತ್ರ ಪಡೆಯಲು ನಾಗರಿಕರು ಉದ್ದನೆಯ ಸಾಲಿನಲ್ಲಿ ನಿಂತರೆ, ಬಲ ಬದಿಯಲ್ಲಿ ವಿದ್ಯಾರ್ಥಿಗಳು ಆದಾಯ ಮತ್ತು ಜಾತಿ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸರದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. <br /> <br /> ಒಂದೇ ಕಂಪ್ಯೂಟರ್ ಹಾಗೂ ಒಂದೇ ಕೌಂಟರ್ ತೆರೆದಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.<br /> `ಎರಡು ದಿನಗಳೊಳಗೆ ಕಾಲೇಜಿಗೆ ಆದಾಯ ದೃಢೀಕರಣ ಪತ್ರ ನೀಡದಿದ್ದರೆ ಪ್ರವೇಶಕ್ಕೆ ತೊಂದರೆಯಾಗುತ್ತದೆ. ತಹಶೀಲ್ದಾರ್ ಕೆಲಸದ ಮೇಲೆ ಹೊರ ಹೋಗಿದ್ದಾರಂತೆ. ನಾವು ಮುಂದೇನು ಮಾಡಬೇಕು ಗೊತ್ತಿಲ್ಲ~ ಎಂದು ವಿದ್ಯಾರ್ಥಿನಿ ಮಂಜುಳಾ ವಿಷಾದ ವ್ಯಕ್ತಪಡಿಸಿದರು.<br /> <br /> `ನಾನು ಆದಾಯ ದೃಢೀಕರಣ ಪತ್ರ ಪಡೆಯಲು ಬಂದಿದ್ದೆ. ಎಲ್ಲ ವಿವರ ಒಳಗೊಂಡ ಪತ್ರಗಳನ್ನು ಪ್ರಮಾಣೀಕರಿಸಿ ಅರ್ಜಿ ಸಲ್ಲಿಸಲು ನಿಂತಿದ್ದೆ. ಆದರೆ ನೂಕು ನುಗ್ಗಲಿನಿಂದ ಹಿಂದಕ್ಕೆ ಹೋಗುತ್ತಿದ್ದೇನೆ~ ಎಂದು ವಯೋವೃದ್ಧ ಮುನಿಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.<br /> <br /> `ಯಾವುದೇ ನೆಮ್ಮದಿ ಕೇಂದ್ರಗಳಲ್ಲಿ ಅವಶ್ಯವಾದ ಪ್ರಮಾಣ ಪತ್ರಗಳನ್ನು ಪಡೆದು ಹಿಂದಿರುಗಲು ಸಾಧ್ಯವಿಲ್ಲ. ಅತ್ತಿಂದಿತ್ತ ಅಲೆದಾಟ, ಅವ್ಯವಸ್ಥೆ ಎದುರಾಗಿ ಯಾವ ಕೆಲಸಗಳೂ ಆಗುತ್ತಿಲ್ಲ~ ಎಂದು ಸಿದ್ದಪ್ಪ ಹೇಳಿದರು. <br /> ಕೊನೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ನೆಮ್ಮದಿ ಕೇಂದ್ರದಲ್ಲಾದರೂ ಬೇಗ ಕೆಲಸವಾಗಿ ನೆಮ್ಮದಿಯಿಂದ ಮನೆಗೆ ಹೋಗಬಹುದೆಂದು ಭಾವಿಸಿ ನಿತ್ಯದ ಕೆಲಸಗಳನ್ನು ಬದಿಗೊತ್ತಿ ಬಂದರೆ ಇಲ್ಲೂ ಅದೇ ಗೋಳು~ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣರಾಜಪುರ: </strong>ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ `ನೆಮ್ಮದಿ~ ಕೇಂದ್ರವು ಅವ್ಯವಸ್ಥೆಯ ಆಗರವಾಗಿರುವುದರಿಂದ ಪಡಿತರ ಚೀಟಿ, ಆದಾಯ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ನಾಗರಿಕರು ಹಾಗೂ ವಿದ್ಯಾರ್ಥಿಗಳು ಪರಿಪಾಟಲು ಪಡುವಂತಾಗಿದೆ.<br /> <br /> `ನೆಮ್ಮದಿ~ ಕೇಂದ್ರದ ಎಡ ಬದಿಯಲ್ಲಿ ಪಡಿತರ ಚೀಟಿ, ಆದಾಯ ಪತ್ರ ಪಡೆಯಲು ನಾಗರಿಕರು ಉದ್ದನೆಯ ಸಾಲಿನಲ್ಲಿ ನಿಂತರೆ, ಬಲ ಬದಿಯಲ್ಲಿ ವಿದ್ಯಾರ್ಥಿಗಳು ಆದಾಯ ಮತ್ತು ಜಾತಿ ದೃಢೀಕರಣ ಪ್ರಮಾಣ ಪತ್ರ ಪಡೆಯಲು ಸರದಿಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. <br /> <br /> ಒಂದೇ ಕಂಪ್ಯೂಟರ್ ಹಾಗೂ ಒಂದೇ ಕೌಂಟರ್ ತೆರೆದಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ.<br /> `ಎರಡು ದಿನಗಳೊಳಗೆ ಕಾಲೇಜಿಗೆ ಆದಾಯ ದೃಢೀಕರಣ ಪತ್ರ ನೀಡದಿದ್ದರೆ ಪ್ರವೇಶಕ್ಕೆ ತೊಂದರೆಯಾಗುತ್ತದೆ. ತಹಶೀಲ್ದಾರ್ ಕೆಲಸದ ಮೇಲೆ ಹೊರ ಹೋಗಿದ್ದಾರಂತೆ. ನಾವು ಮುಂದೇನು ಮಾಡಬೇಕು ಗೊತ್ತಿಲ್ಲ~ ಎಂದು ವಿದ್ಯಾರ್ಥಿನಿ ಮಂಜುಳಾ ವಿಷಾದ ವ್ಯಕ್ತಪಡಿಸಿದರು.<br /> <br /> `ನಾನು ಆದಾಯ ದೃಢೀಕರಣ ಪತ್ರ ಪಡೆಯಲು ಬಂದಿದ್ದೆ. ಎಲ್ಲ ವಿವರ ಒಳಗೊಂಡ ಪತ್ರಗಳನ್ನು ಪ್ರಮಾಣೀಕರಿಸಿ ಅರ್ಜಿ ಸಲ್ಲಿಸಲು ನಿಂತಿದ್ದೆ. ಆದರೆ ನೂಕು ನುಗ್ಗಲಿನಿಂದ ಹಿಂದಕ್ಕೆ ಹೋಗುತ್ತಿದ್ದೇನೆ~ ಎಂದು ವಯೋವೃದ್ಧ ಮುನಿಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.<br /> <br /> `ಯಾವುದೇ ನೆಮ್ಮದಿ ಕೇಂದ್ರಗಳಲ್ಲಿ ಅವಶ್ಯವಾದ ಪ್ರಮಾಣ ಪತ್ರಗಳನ್ನು ಪಡೆದು ಹಿಂದಿರುಗಲು ಸಾಧ್ಯವಿಲ್ಲ. ಅತ್ತಿಂದಿತ್ತ ಅಲೆದಾಟ, ಅವ್ಯವಸ್ಥೆ ಎದುರಾಗಿ ಯಾವ ಕೆಲಸಗಳೂ ಆಗುತ್ತಿಲ್ಲ~ ಎಂದು ಸಿದ್ದಪ್ಪ ಹೇಳಿದರು. <br /> ಕೊನೆಗೆ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ನೆಮ್ಮದಿ ಕೇಂದ್ರದಲ್ಲಾದರೂ ಬೇಗ ಕೆಲಸವಾಗಿ ನೆಮ್ಮದಿಯಿಂದ ಮನೆಗೆ ಹೋಗಬಹುದೆಂದು ಭಾವಿಸಿ ನಿತ್ಯದ ಕೆಲಸಗಳನ್ನು ಬದಿಗೊತ್ತಿ ಬಂದರೆ ಇಲ್ಲೂ ಅದೇ ಗೋಳು~ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>