<p><strong>ಬೆಂಗಳೂರು:</strong> ‘ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಪೋಷಕರೇ ಮಕ್ಕಳ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಸಾಹಿತಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.<br /> <br /> ಅನಕೃ ಕನ್ನಡ ಸಂಘವು ಭಾನುವಾರ ಏರ್ಪಡಿಸಿದ್ದ ಡಾ.ಎಂ.ಚಿದಾನಂದಮೂರ್ತಿ, ಡಾ.ಸಾ.ಶಿ. ಮರುಳಯ್ಯ ಮತ್ತು ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ತಮ್ಮ ಮಕ್ಕಳು ಏನು ಮಾಡಿದರೂ ಅಡ್ಡಿಯಿಲ್ಲ, ಹಣ ಸಂಪಾದಿಸಿದರೆ ಸಾಕು ಎಂದು ಪೋಷಕರೇ ಹರಸುತ್ತಿದ್ದಾರೆ. ಇದರಿಂದಲೇ ನಡೆಯಬಾರದ್ದು ನಡೆಯುತ್ತಿವೆ, ಆಗಬಾರದ್ದು ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ‘ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರೇ ಪರೀಕ್ಷಾ ಅಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಿದರೆ ನೈತಿಕ ಮೌಲ್ಯಗಳ ಸ್ಥಿತಿ ಏನೆಂದು ತಿಳಿಯುತ್ತದೆ. ದಾಕ್ಷಿಣ್ಯವೇ ನೈತಿಕತೆಗೆ ಅಡಚಣೆ ಉಂಟು ಮಾಡುತ್ತದೆ. ಹೀಗಾಗಿ ಅವ್ಯವಹಾರವನ್ನು ಎಡಗಾಲ ಮೆಟ್ಟಿನಿಂದ ಹೊಡೆಯುವ ಸ್ಥೈರ್ಯ ಜನರಲ್ಲಿ ಕಾಣುತ್ತಿಲ್ಲ’ ಎಂದರು.<br /> <br /> ಡಾ.ಎಂ.ಚಿದಾನಂದಮೂರ್ತಿ, ಡಾ. ಸಾ.ಶಿ.ಮರುಳಯ್ಯ ಮತ್ತು ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ ಅವರಿಗೆ 84 ವರ್ಷ ತುಂಬಿದ ಸಂಭ್ರಮಕ್ಕಾಗಿ ಕಾರ್ಯಕ್ರಮ-ದಲ್ಲಿ ಅವರನ್ನು ಅಭಿನಂದಿಸಲಾಯಿತು.<br /> <br /> ಡಾ.ಎಂ. ಚಿದಾನಂದಮೂರ್ತಿ ಅವರನ್ನು ಕುರಿತು ಮಾತನಾಡಿದ ಚಿಂತಕ ರಾ.ನಂ.ಚಂದ್ರಶೇಖರ್, ‘ಅನಕೃ ಮತ್ತು ಚಿದಾನಂದಮೂರ್ತಿ ಅವರ ನಡುವೆ ಒಂದು ಸಾಮ್ಯತೆಯಿದೆ. ಇಬ್ಬರೂ ಕನ್ನಡಕ್ಕಾಗಿ ಚಳವಳಿಯ ಮಾರ್ಗ ಹಿಡಿದು ಹಲವು ಚಳವಳಿಗಳನ್ನು ಮುನ್ನಡೆಸಿದ ಹೋರಾಟಗಾರರು’ ಎಂದರು.<br /> <br /> ಸಹಕಾರ ಇಲಾಖೆ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಮಾತನಾಡಿ, ‘ಕನ್ನಡಿಗರಲ್ಲಿ ಕನ್ನಡಕ್ಕಾಗಿ ಹೋರಾಡುವ ಮನೋಭಾವ ಕಾಣೆಯಾಗುತ್ತಿದೆ. ಹಿಂದಿನವರ ಹೋರಾಟದಿಂದಲೇ ಕನ್ನಡ ಇಂದಿಗೂ ಉಳಿದಿದೆ’ ಎಂದರು.<br /> <br /> ಕನ್ನಡದ ಹೋರಾಟಕ್ಕಾಗಿ ನಾಲ್ಕು ದಶಕಗಳಿಂದ ಶ್ರಮಿಸುತ್ತಿರುವ ರಾ. ವಿಜಯ ಸಮರ್ಥ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದ್ದು, ಪೋಷಕರೇ ಮಕ್ಕಳ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ಸಾಹಿತಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.<br /> <br /> ಅನಕೃ ಕನ್ನಡ ಸಂಘವು ಭಾನುವಾರ ಏರ್ಪಡಿಸಿದ್ದ ಡಾ.ಎಂ.ಚಿದಾನಂದಮೂರ್ತಿ, ಡಾ.ಸಾ.ಶಿ. ಮರುಳಯ್ಯ ಮತ್ತು ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ‘ತಮ್ಮ ಮಕ್ಕಳು ಏನು ಮಾಡಿದರೂ ಅಡ್ಡಿಯಿಲ್ಲ, ಹಣ ಸಂಪಾದಿಸಿದರೆ ಸಾಕು ಎಂದು ಪೋಷಕರೇ ಹರಸುತ್ತಿದ್ದಾರೆ. ಇದರಿಂದಲೇ ನಡೆಯಬಾರದ್ದು ನಡೆಯುತ್ತಿವೆ, ಆಗಬಾರದ್ದು ಆಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ‘ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರೇ ಪರೀಕ್ಷಾ ಅಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿರುವುದನ್ನು ನೋಡಿದರೆ ನೈತಿಕ ಮೌಲ್ಯಗಳ ಸ್ಥಿತಿ ಏನೆಂದು ತಿಳಿಯುತ್ತದೆ. ದಾಕ್ಷಿಣ್ಯವೇ ನೈತಿಕತೆಗೆ ಅಡಚಣೆ ಉಂಟು ಮಾಡುತ್ತದೆ. ಹೀಗಾಗಿ ಅವ್ಯವಹಾರವನ್ನು ಎಡಗಾಲ ಮೆಟ್ಟಿನಿಂದ ಹೊಡೆಯುವ ಸ್ಥೈರ್ಯ ಜನರಲ್ಲಿ ಕಾಣುತ್ತಿಲ್ಲ’ ಎಂದರು.<br /> <br /> ಡಾ.ಎಂ.ಚಿದಾನಂದಮೂರ್ತಿ, ಡಾ. ಸಾ.ಶಿ.ಮರುಳಯ್ಯ ಮತ್ತು ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ ಅವರಿಗೆ 84 ವರ್ಷ ತುಂಬಿದ ಸಂಭ್ರಮಕ್ಕಾಗಿ ಕಾರ್ಯಕ್ರಮ-ದಲ್ಲಿ ಅವರನ್ನು ಅಭಿನಂದಿಸಲಾಯಿತು.<br /> <br /> ಡಾ.ಎಂ. ಚಿದಾನಂದಮೂರ್ತಿ ಅವರನ್ನು ಕುರಿತು ಮಾತನಾಡಿದ ಚಿಂತಕ ರಾ.ನಂ.ಚಂದ್ರಶೇಖರ್, ‘ಅನಕೃ ಮತ್ತು ಚಿದಾನಂದಮೂರ್ತಿ ಅವರ ನಡುವೆ ಒಂದು ಸಾಮ್ಯತೆಯಿದೆ. ಇಬ್ಬರೂ ಕನ್ನಡಕ್ಕಾಗಿ ಚಳವಳಿಯ ಮಾರ್ಗ ಹಿಡಿದು ಹಲವು ಚಳವಳಿಗಳನ್ನು ಮುನ್ನಡೆಸಿದ ಹೋರಾಟಗಾರರು’ ಎಂದರು.<br /> <br /> ಸಹಕಾರ ಇಲಾಖೆ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಮಾತನಾಡಿ, ‘ಕನ್ನಡಿಗರಲ್ಲಿ ಕನ್ನಡಕ್ಕಾಗಿ ಹೋರಾಡುವ ಮನೋಭಾವ ಕಾಣೆಯಾಗುತ್ತಿದೆ. ಹಿಂದಿನವರ ಹೋರಾಟದಿಂದಲೇ ಕನ್ನಡ ಇಂದಿಗೂ ಉಳಿದಿದೆ’ ಎಂದರು.<br /> <br /> ಕನ್ನಡದ ಹೋರಾಟಕ್ಕಾಗಿ ನಾಲ್ಕು ದಶಕಗಳಿಂದ ಶ್ರಮಿಸುತ್ತಿರುವ ರಾ. ವಿಜಯ ಸಮರ್ಥ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>