<p>ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನ ಆವರ ಣದಲ್ಲಿ ಶುಕ್ರವಾರ ಮುಂಜಾನೆ ಉಪನ್ಯಾಸಕರು ಕಾಲೇಜಿನ ವಿದ್ಯಾರ್ಥಿಗಳನ್ನು ನಾಚಿಸುವಷ್ಟು ಉತ್ಸಾ ಹದಿಂದ ಓಡಾಡುತ್ತಿದ್ದರು. ಪರಸ್ಪರರಿಗೆ ಅಭಿನಂದನೆ ಹೇಳುತ್ತ, ಸಿಹಿ ತಿನ್ನಿಸುತ್ತ, ಕೈ ಕುಲು ಕುತ್ತ ಪಾದರಸ ದಂತೆ ಓಡಾಡುತ್ತಿದ್ದರು.<br /> <br /> ನ್ಯಾಕ್ ಸಮಿತಿ ಕಾಲೇಜಿಗೆ `ಎ~ ಗ್ರೇಡ್ ಕೊಟ್ಟಿರು ವುದೇ ಈ ಉತ್ಸಾಹಕ್ಕೆ ಕಾರಣವಾಗಿತ್ತು. ಇಡೀ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗ ಳಲ್ಲಿ `ಎ~ ಗ್ರೇಡ್ ಪಡೆದ ಏಕೈಕ ಕಾಲೇಜು ಎಂಬ ಹೆಗ್ಗ ಳಿಕೆ ಈ ಬಾರಿ ಹಾಸನದ ಕಲಾ ಕಾಲೇಜಿಗೆ ಸಂದಿದೆ.<br /> <br /> `66 ವರ್ಷ ಹಳೆಯದಾಗಿರುವ ಈ ಸರ್ಕಾರಿ ಕಲಾ ಕಾಲೇಜು, ಈ ಭಾಗದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಅಕ್ಕಪಕ್ಕದಲ್ಲಿ ಇನ್ನೂ ಅನೇಕ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಪಠ್ಯೇತರವಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ, ಮಕ್ಕಳನ್ನು ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದೆ. ಆ ಮೂಲಕ ವಿಶ್ವವಿದ್ಯಾಲಯಕ್ಕೇ ಮಾದರಿಯಾಗಿದೆ ಎಂದು ಕಳೆದ ಏಪ್ರಿಲ್ ತಿಂಗಳಲ್ಲಿ ಕಾಲೇಜಿಗೆ ಭೇಟಿನೀಡಿದ್ದ ನ್ಯಾಕ್ ಸಮಿತಿಯವರು ವರದಿ ನೀಡಿದ್ದರು. `ಎ~ ಗ್ರೇಡ್ ಬರಲು ಇದೇ ಕಾರಣ ಎಂದು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಹಾಸನದ ಸರ್ಕಾರಿ ಕಲಾ ಕಾಲೇಜಿನ ಶಿಕ್ಷಕರು ಮಾತ್ರವಲ್ಲ ವಿದ್ಯಾರ್ಥಿಗಳೂ ಸಂಶೋಧನಾ ಕಾರ್ಯ ದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕಾಲೇಜಿನ ವಿದ್ಯಾ ರ್ಥಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ತಮ್ಮ ಸುತ್ತಲಿನ ಸಮಾಜ, ಉದ್ಯಮಿಗಳ, ರೈತರ, ಆಟೋ ಚಾಲಕರ ಸಮಸ್ಯೆಗಳು, ಸುಖ- ದುಃಖಗಳ ಬಗ್ಗೆ ಅಧ್ಯಯನ ಮಾಡಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 150ಕ್ಕೂ ಹೆಚ್ಚು ಪ್ರಾಜೆಕ್ಟ್ಗಳನ್ನು ಮಾಡಿದ್ದಾರೆ. ಉಪನ್ಯಾಸಕರೇ 87 ಪುಸ್ತಕ ಹಾಗೂ 100 ಪ್ರಬಂಧ ಮಂಡಿಸಿದ್ದಾರೆ. ವಿಶ್ವವಿದ್ಯಾ ಲಯದ ಇತರ ಯಾವ ಕಾಲೇಜಿನಲ್ಲೂ ಇಂಥ ಸಾಧನೆ ನಡೆದಿಲ್ಲ.<br /> <br /> ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಂದು ವರ್ಷದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಸ್ತರಣಾ ಯೋಜ ನೆಗಳಾದ ಎನ್.ಎಸ್.ಎಸ್, ಎನ್ಸಿಸಿಗಳಲ್ಲೂ ಈ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. <br /> <br /> ಎನ್ಎಸ್ಎಸ್ನ ಇಬ್ಬರು ಹಾಗೂ ಎನ್ಸಿಸಿಯ 13 ವಿದ್ಯಾರ್ಥಿಗಳು ಗಣರಾಜ್ಯೋತ್ಸವ ದಿನದ ಪರೇಡ್ನಲ್ಲಿ ಪಾಲ್ಗೊಂಡಿದ್ದಾರೆ. ಈ ಕಾಲೇಜಿನ ಅಂಗವಿಕಲ ವಿದ್ಯಾರ್ಥಿಯೊಬ್ಬ ಲಂಡನ್ನಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಬಂದಿದ್ದಾರೆ.<br /> <br /> ಹೀಗೆ ಆರು ದಶಕ ಕಂಡಿರುವ ಈ ಕಾಲೇಜಿನ ಹೆಗ್ಗಳಿಕೆಗಳೇ ಅನೇಕನೀ ಕಾಲೇಜಿನಲ್ಲಿ ನಗರದ ವಿದ್ಯಾರ್ಥಿಗಳಷ್ಟೇ, ಕೆಲವೊಮ್ಮೆ ಅವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿರುತ್ತಾರೆ. ಇಂಗ್ಲಿಷ್ ಸೇರಿದಂತೆ ಕೆಲವು ವಿಷಯಗಳಲ್ಲಿ ಗ್ರಾಮೀಣ ಮಕ್ಕಳು ಸ್ವಲ್ಪ ಹಿಂದೆ ಇರುತ್ತಾರೆ. ಅಂಥವರಿಗೆ ನೆರವಾಗಲು ಕಾಲೇಜಿನಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ.<br /> <br /> ಇಲ್ಲಿ ಅತ್ಯುತ್ತಮ ಎನ್ನಬಹುದಾದ ಉದ್ಯೋಗ ಮಾಹಿತಿ ಕೇಂದ್ರ ವಿದೆ. ಕಾಲೇಜಿನಲ್ಲೇ ಉಪನ್ಯಾಸಕ ಮುರಳೀಧರ ಅವರ ನೇತೃತ್ವದ `ಗುಣಮಟ್ಟ ಕಾಯ್ದುಕೊಳ್ಳುವ ಘಟಕ~ವಿದೆ. ಈ ಎಲ್ಲ ವಿಚಾರಗಳನ್ನು ನ್ಯಾಕ್ ಪರಿಗ ಣಿಸಿದೆ ಎಂದು ಲಕ್ಷ್ಮೀನಾರಾಯಣ ನುಡಿಯುತ್ತಾರೆ.<br /> <br /> ಪಿ.ಜಿ ಯಲ್ಲೂ ಮುಂದೆ: ಪ್ರಸಕ್ತ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಅವಕಾಶ ಇದೆ. ಎರಡೂ ವಿಭಾಗಗಳು ಅತ್ಯುನ್ನತ ಸಾಧನೆ ಮಾಡುತ್ತಿವೆ. ಅರ್ಥಶಾಸ್ತ್ರ ವಿಭಾಗದದಲ್ಲಿ ಮೈಸೂರು ವಿ.ವಿಯ ಮೊದಲ 9 ರ್ಯಾಂಕ್ಗಳಲ್ಲಿ ಐದು ರ್ಯಾಂಕ್ ಈ ಕಾಲೇಜಿಗೆ ಸಂದಿವೆ.<br /> <br /> ಅಷ್ಟೆಲ್ಲ ಹೊಗಳಿಕೆಗಳ ಜತೆಗೇ ಕಾಲೇಜಿಗೆ ಕೆಲವು ಸಲಹೆಗಳನ್ನೂ ನೀಡಿರುವ ನ್ಯಾಕ್, ಒಂದೆರಡು ಕೊರತೆಗಳನ್ನೂ ಎತ್ತಿ ತೋರಿಸಿದೆ. ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಕ್ಲಬ್ ಆರಂಭಿಸಬೇಕು ಜತೆಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಬೇಕು ಎಂದಿದೆ.<br /> <br /> ಕಾಲೇಜಿನಲ್ಲಿ ಪ್ರಸಕ್ತ 2067 ವಿದ್ಯಾರ್ಥಿಗ ಳಿದ್ದಾರೆ. ಸಾಕಷ್ಟು ಕೊಠಡಿಗಳಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕಾಲೇಜಿಗೆ ಒಳ್ಳೆ ರಸ್ತೆ ಇಲ್ಲ ಎಂಬ ಕೊರತೆಗಳನ್ನೂ ಬೊಟ್ಟು ಮಾಡಿದೆ. ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸು ವುದರ ಜತೆಗೆ ಈ ವರ್ಷ ದಿಂದಲೇ ರಾಜ್ಯಶಾಸ್ತ್ರ ದಲ್ಲೂ ಸ್ನಾತಕೋತ್ತರ ಅಧ್ಯಯನ ಆರಂಭವಾಗ ಲಿದೆ. ಇದೇ ಜು.9ರಿಂದ ಇದಕ್ಕೆ ಅರ್ಜಿಗಳನ್ನು ನೀಡ ಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ: ನಗರದ ಸರ್ಕಾರಿ ಕಲಾ ಕಾಲೇಜಿನ ಆವರ ಣದಲ್ಲಿ ಶುಕ್ರವಾರ ಮುಂಜಾನೆ ಉಪನ್ಯಾಸಕರು ಕಾಲೇಜಿನ ವಿದ್ಯಾರ್ಥಿಗಳನ್ನು ನಾಚಿಸುವಷ್ಟು ಉತ್ಸಾ ಹದಿಂದ ಓಡಾಡುತ್ತಿದ್ದರು. ಪರಸ್ಪರರಿಗೆ ಅಭಿನಂದನೆ ಹೇಳುತ್ತ, ಸಿಹಿ ತಿನ್ನಿಸುತ್ತ, ಕೈ ಕುಲು ಕುತ್ತ ಪಾದರಸ ದಂತೆ ಓಡಾಡುತ್ತಿದ್ದರು.<br /> <br /> ನ್ಯಾಕ್ ಸಮಿತಿ ಕಾಲೇಜಿಗೆ `ಎ~ ಗ್ರೇಡ್ ಕೊಟ್ಟಿರು ವುದೇ ಈ ಉತ್ಸಾಹಕ್ಕೆ ಕಾರಣವಾಗಿತ್ತು. ಇಡೀ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗ ಳಲ್ಲಿ `ಎ~ ಗ್ರೇಡ್ ಪಡೆದ ಏಕೈಕ ಕಾಲೇಜು ಎಂಬ ಹೆಗ್ಗ ಳಿಕೆ ಈ ಬಾರಿ ಹಾಸನದ ಕಲಾ ಕಾಲೇಜಿಗೆ ಸಂದಿದೆ.<br /> <br /> `66 ವರ್ಷ ಹಳೆಯದಾಗಿರುವ ಈ ಸರ್ಕಾರಿ ಕಲಾ ಕಾಲೇಜು, ಈ ಭಾಗದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಅಕ್ಕಪಕ್ಕದಲ್ಲಿ ಇನ್ನೂ ಅನೇಕ ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಪಠ್ಯೇತರವಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ, ಮಕ್ಕಳನ್ನು ಉನ್ನತ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದೆ. ಆ ಮೂಲಕ ವಿಶ್ವವಿದ್ಯಾಲಯಕ್ಕೇ ಮಾದರಿಯಾಗಿದೆ ಎಂದು ಕಳೆದ ಏಪ್ರಿಲ್ ತಿಂಗಳಲ್ಲಿ ಕಾಲೇಜಿಗೆ ಭೇಟಿನೀಡಿದ್ದ ನ್ಯಾಕ್ ಸಮಿತಿಯವರು ವರದಿ ನೀಡಿದ್ದರು. `ಎ~ ಗ್ರೇಡ್ ಬರಲು ಇದೇ ಕಾರಣ ಎಂದು ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಹಾಸನದ ಸರ್ಕಾರಿ ಕಲಾ ಕಾಲೇಜಿನ ಶಿಕ್ಷಕರು ಮಾತ್ರವಲ್ಲ ವಿದ್ಯಾರ್ಥಿಗಳೂ ಸಂಶೋಧನಾ ಕಾರ್ಯ ದಲ್ಲಿ ತೊಡಗಿಸಿಕೊಂಡಿರುತ್ತಾರೆ. ಕಾಲೇಜಿನ ವಿದ್ಯಾ ರ್ಥಿಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ತಮ್ಮ ಸುತ್ತಲಿನ ಸಮಾಜ, ಉದ್ಯಮಿಗಳ, ರೈತರ, ಆಟೋ ಚಾಲಕರ ಸಮಸ್ಯೆಗಳು, ಸುಖ- ದುಃಖಗಳ ಬಗ್ಗೆ ಅಧ್ಯಯನ ಮಾಡಿ ಪ್ರಬಂಧಗಳನ್ನು ಮಂಡಿಸಿದ್ದಾರೆ. 150ಕ್ಕೂ ಹೆಚ್ಚು ಪ್ರಾಜೆಕ್ಟ್ಗಳನ್ನು ಮಾಡಿದ್ದಾರೆ. ಉಪನ್ಯಾಸಕರೇ 87 ಪುಸ್ತಕ ಹಾಗೂ 100 ಪ್ರಬಂಧ ಮಂಡಿಸಿದ್ದಾರೆ. ವಿಶ್ವವಿದ್ಯಾ ಲಯದ ಇತರ ಯಾವ ಕಾಲೇಜಿನಲ್ಲೂ ಇಂಥ ಸಾಧನೆ ನಡೆದಿಲ್ಲ.<br /> <br /> ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಒಂದು ವರ್ಷದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಸ್ತರಣಾ ಯೋಜ ನೆಗಳಾದ ಎನ್.ಎಸ್.ಎಸ್, ಎನ್ಸಿಸಿಗಳಲ್ಲೂ ಈ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. <br /> <br /> ಎನ್ಎಸ್ಎಸ್ನ ಇಬ್ಬರು ಹಾಗೂ ಎನ್ಸಿಸಿಯ 13 ವಿದ್ಯಾರ್ಥಿಗಳು ಗಣರಾಜ್ಯೋತ್ಸವ ದಿನದ ಪರೇಡ್ನಲ್ಲಿ ಪಾಲ್ಗೊಂಡಿದ್ದಾರೆ. ಈ ಕಾಲೇಜಿನ ಅಂಗವಿಕಲ ವಿದ್ಯಾರ್ಥಿಯೊಬ್ಬ ಲಂಡನ್ನಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಬಂದಿದ್ದಾರೆ.<br /> <br /> ಹೀಗೆ ಆರು ದಶಕ ಕಂಡಿರುವ ಈ ಕಾಲೇಜಿನ ಹೆಗ್ಗಳಿಕೆಗಳೇ ಅನೇಕನೀ ಕಾಲೇಜಿನಲ್ಲಿ ನಗರದ ವಿದ್ಯಾರ್ಥಿಗಳಷ್ಟೇ, ಕೆಲವೊಮ್ಮೆ ಅವರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿರುತ್ತಾರೆ. ಇಂಗ್ಲಿಷ್ ಸೇರಿದಂತೆ ಕೆಲವು ವಿಷಯಗಳಲ್ಲಿ ಗ್ರಾಮೀಣ ಮಕ್ಕಳು ಸ್ವಲ್ಪ ಹಿಂದೆ ಇರುತ್ತಾರೆ. ಅಂಥವರಿಗೆ ನೆರವಾಗಲು ಕಾಲೇಜಿನಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ.<br /> <br /> ಇಲ್ಲಿ ಅತ್ಯುತ್ತಮ ಎನ್ನಬಹುದಾದ ಉದ್ಯೋಗ ಮಾಹಿತಿ ಕೇಂದ್ರ ವಿದೆ. ಕಾಲೇಜಿನಲ್ಲೇ ಉಪನ್ಯಾಸಕ ಮುರಳೀಧರ ಅವರ ನೇತೃತ್ವದ `ಗುಣಮಟ್ಟ ಕಾಯ್ದುಕೊಳ್ಳುವ ಘಟಕ~ವಿದೆ. ಈ ಎಲ್ಲ ವಿಚಾರಗಳನ್ನು ನ್ಯಾಕ್ ಪರಿಗ ಣಿಸಿದೆ ಎಂದು ಲಕ್ಷ್ಮೀನಾರಾಯಣ ನುಡಿಯುತ್ತಾರೆ.<br /> <br /> ಪಿ.ಜಿ ಯಲ್ಲೂ ಮುಂದೆ: ಪ್ರಸಕ್ತ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಅವಕಾಶ ಇದೆ. ಎರಡೂ ವಿಭಾಗಗಳು ಅತ್ಯುನ್ನತ ಸಾಧನೆ ಮಾಡುತ್ತಿವೆ. ಅರ್ಥಶಾಸ್ತ್ರ ವಿಭಾಗದದಲ್ಲಿ ಮೈಸೂರು ವಿ.ವಿಯ ಮೊದಲ 9 ರ್ಯಾಂಕ್ಗಳಲ್ಲಿ ಐದು ರ್ಯಾಂಕ್ ಈ ಕಾಲೇಜಿಗೆ ಸಂದಿವೆ.<br /> <br /> ಅಷ್ಟೆಲ್ಲ ಹೊಗಳಿಕೆಗಳ ಜತೆಗೇ ಕಾಲೇಜಿಗೆ ಕೆಲವು ಸಲಹೆಗಳನ್ನೂ ನೀಡಿರುವ ನ್ಯಾಕ್, ಒಂದೆರಡು ಕೊರತೆಗಳನ್ನೂ ಎತ್ತಿ ತೋರಿಸಿದೆ. ಕಾಲೇಜಿನಲ್ಲಿ ಇಂಗ್ಲಿಷ್ ಭಾಷಾ ಕ್ಲಬ್ ಆರಂಭಿಸಬೇಕು ಜತೆಗೆ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಬೇಕು ಎಂದಿದೆ.<br /> <br /> ಕಾಲೇಜಿನಲ್ಲಿ ಪ್ರಸಕ್ತ 2067 ವಿದ್ಯಾರ್ಥಿಗ ಳಿದ್ದಾರೆ. ಸಾಕಷ್ಟು ಕೊಠಡಿಗಳಿಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು, ಕಾಲೇಜಿಗೆ ಒಳ್ಳೆ ರಸ್ತೆ ಇಲ್ಲ ಎಂಬ ಕೊರತೆಗಳನ್ನೂ ಬೊಟ್ಟು ಮಾಡಿದೆ. ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸು ವುದರ ಜತೆಗೆ ಈ ವರ್ಷ ದಿಂದಲೇ ರಾಜ್ಯಶಾಸ್ತ್ರ ದಲ್ಲೂ ಸ್ನಾತಕೋತ್ತರ ಅಧ್ಯಯನ ಆರಂಭವಾಗ ಲಿದೆ. ಇದೇ ಜು.9ರಿಂದ ಇದಕ್ಕೆ ಅರ್ಜಿಗಳನ್ನು ನೀಡ ಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>