<p><strong>ಕೆಂಭಾವಿ</strong>: ಪಡಿತರ ಚೀಟಿ ಭಾವಚಿತ್ರ ಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಮುದನೂರ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡುತ್ತಿರುವ ಸಮೀಪದ ಯಡಿಯಾಪುರ ಗ್ರಾಮಸ್ಥರು, ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿ ಕೊನೆಗೆ ಶುಕ್ರವಾರ ಧರಣಿ ಅಂತ್ಯಗೊಳಿಸಿದ್ದಾರೆ.<br /> <br /> ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಮಳೆಯನ್ನು ಲೆಕ್ಕಿಸದೇ ಗುರುವಾರ ರಾತ್ರಿಯಿಂದ ಶುಕ್ರವಾರದ ಬೆಳಿಗ್ಗೆವರೆಗೆ ಪಂಚಾಯಿತಿ ಎದುರೇ ಕುಳಿತಿದ್ದರು.<br /> <br /> ಆದರೆ ಯಾವ ಅಧಿಕಾರಿಗಳಾಗಲಿ, ಕಂಪ್ಯೂಟರ್ ಆಪರೇಟರ್ಗಳಾಗಲಿ ಇರಲಿಲ್ಲ. ಈ ಮೊದಲು ಇದ್ದ ಪಡಿತರ ಚೀಟಿ ರದ್ದಾಗಿದ್ದು, ಹೊಸ ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಸಿಕೊಳ್ಳಲು ಸರ್ಕಾರ ಸೂಚಿಸಿದೆ. ಹಳೇ ಪಡಿತರ ಚೀಟಿಯಿಂದ ಅಕ್ಕಿ, ಗೋಧಿ ಸಿಗುತ್ತಿಲ್ಲ. ಹೀಗಾಗಿ ಬಡಜನರು ತೊಂದರೆ ಅನುಭವಿಸುವಂತಾಗಿದೆ.<br /> <br /> `ಪಂಚಾಯಿತಿ ಸಿಬ್ಬಂದಿ ಒಂದು ಫೋಟೋ ತೆಗಿಲಾಕ್ ನೂರು ರುಪಾಯಿ ತಗೊಂತಾರ. ಒಂದು ಕಾರ್ಡ ಮಾಡಿಕೊಟ್ಟರ, ಅದನ್ನು ಮತ್ತೊಬ್ರ ಹೆಸರಿಗೆ ಮಾಡಿಕೊಡ್ತಾರ' ಎಂದು ಶರಣಪ್ಪ ನೆಗ್ಗಿನಾಳ ದೂರುತ್ತಾರೆ.<br /> ಪಂಚಾಯಿತಿ ಬಿಲ್ ಕಲೆಕ್ಟರ್ ಬೈಲಪ್ಪ ಶಾಖಾಪುರ, ಆಶ್ರಯ ಮನೆಯ ಚೆಕ್ ನೀಡುವುದಕ್ಕೂ ಹಣ ಕೇಳುತ್ತಾರೆ. ಆಸ್ತಿ ವರ್ಗಾವಣೆ ಮಾಡಿಸಲು ಹಣ ಕೊಡಬೇಕು.<br /> <br /> ಕೇಳಿದರೆ ವಿದ್ಯುತ್ ಸಮಸ್ಯೆ ಎನ್ನುತ್ತಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಣ ಮಾಡುವುದಕ್ಕೆ ಕುಳಿತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.<br /> <br /> `ನನ್ನ ಗಂಡ, ಮಕ್ಕಳ ಜೋಡಿ ಬೆಂಗಳೂರ, ಮುಂಬೈಕ್ ದುಡಿಲಾಕ್ ಹೋಗಿದ್ವಿ. ರೇಶನ್ ಕಾರ್ಡಿನ ಫೋಟೋ ತೆಗಿತಾರಂತ ಇಲ್ಲಿಗಿ ಬಂದೀವ್ರಿ. ಆದ್ರ ಹಗಲ ರಾತ್ರಿ ಕುಂತರೂ ಫೋಟೊ ತೆಗಾಲ್ಯಾಗರಿ' ಎಂದು ಗ್ರಾಮದ ಬಸಮ್ಮ ಜಹಾಗೀರದಾರ ಹೇಳುತ್ತಾರೆ.<br /> <br /> ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕ್ಯೆಗೊಂಡು ಬಡಜನರಿಗೆ ನ್ಯಾಯ ಒದಗಿಸಬೇಕು.<br /> <br /> ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಕ್ಷಣಾ ವೇದಿಕೆಯ ವಿದ್ಯಾರ್ಥಿ ವಿಭಾಗದ ತಾಲ್ಲೂಕು ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ ಎಚ್ಚರಿಸಿದ್ದಾರೆ.<br /> <br /> ವಿದ್ಯುತ್ ಸಮಸ್ಯೆ ಹಿನ್ನೆಲೆಯಲ್ಲಿ ಜನರೇಟರ್ ಬಳಸಿ ಭಾವಚಿತ್ರ ನೀಡಲು ಪ್ರಾರಂಭಿಸಿದ್ದರಿಂದ ಶುಕ್ರವಾರ ಸಂಜೆ ಧರಣಿ ಹಿಂತೆಗೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ</strong>: ಪಡಿತರ ಚೀಟಿ ಭಾವಚಿತ್ರ ಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಮುದನೂರ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡುತ್ತಿರುವ ಸಮೀಪದ ಯಡಿಯಾಪುರ ಗ್ರಾಮಸ್ಥರು, ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿ ಕೊನೆಗೆ ಶುಕ್ರವಾರ ಧರಣಿ ಅಂತ್ಯಗೊಳಿಸಿದ್ದಾರೆ.<br /> <br /> ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು ಮಳೆಯನ್ನು ಲೆಕ್ಕಿಸದೇ ಗುರುವಾರ ರಾತ್ರಿಯಿಂದ ಶುಕ್ರವಾರದ ಬೆಳಿಗ್ಗೆವರೆಗೆ ಪಂಚಾಯಿತಿ ಎದುರೇ ಕುಳಿತಿದ್ದರು.<br /> <br /> ಆದರೆ ಯಾವ ಅಧಿಕಾರಿಗಳಾಗಲಿ, ಕಂಪ್ಯೂಟರ್ ಆಪರೇಟರ್ಗಳಾಗಲಿ ಇರಲಿಲ್ಲ. ಈ ಮೊದಲು ಇದ್ದ ಪಡಿತರ ಚೀಟಿ ರದ್ದಾಗಿದ್ದು, ಹೊಸ ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಸಿಕೊಳ್ಳಲು ಸರ್ಕಾರ ಸೂಚಿಸಿದೆ. ಹಳೇ ಪಡಿತರ ಚೀಟಿಯಿಂದ ಅಕ್ಕಿ, ಗೋಧಿ ಸಿಗುತ್ತಿಲ್ಲ. ಹೀಗಾಗಿ ಬಡಜನರು ತೊಂದರೆ ಅನುಭವಿಸುವಂತಾಗಿದೆ.<br /> <br /> `ಪಂಚಾಯಿತಿ ಸಿಬ್ಬಂದಿ ಒಂದು ಫೋಟೋ ತೆಗಿಲಾಕ್ ನೂರು ರುಪಾಯಿ ತಗೊಂತಾರ. ಒಂದು ಕಾರ್ಡ ಮಾಡಿಕೊಟ್ಟರ, ಅದನ್ನು ಮತ್ತೊಬ್ರ ಹೆಸರಿಗೆ ಮಾಡಿಕೊಡ್ತಾರ' ಎಂದು ಶರಣಪ್ಪ ನೆಗ್ಗಿನಾಳ ದೂರುತ್ತಾರೆ.<br /> ಪಂಚಾಯಿತಿ ಬಿಲ್ ಕಲೆಕ್ಟರ್ ಬೈಲಪ್ಪ ಶಾಖಾಪುರ, ಆಶ್ರಯ ಮನೆಯ ಚೆಕ್ ನೀಡುವುದಕ್ಕೂ ಹಣ ಕೇಳುತ್ತಾರೆ. ಆಸ್ತಿ ವರ್ಗಾವಣೆ ಮಾಡಿಸಲು ಹಣ ಕೊಡಬೇಕು.<br /> <br /> ಕೇಳಿದರೆ ವಿದ್ಯುತ್ ಸಮಸ್ಯೆ ಎನ್ನುತ್ತಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಣ ಮಾಡುವುದಕ್ಕೆ ಕುಳಿತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.<br /> <br /> `ನನ್ನ ಗಂಡ, ಮಕ್ಕಳ ಜೋಡಿ ಬೆಂಗಳೂರ, ಮುಂಬೈಕ್ ದುಡಿಲಾಕ್ ಹೋಗಿದ್ವಿ. ರೇಶನ್ ಕಾರ್ಡಿನ ಫೋಟೋ ತೆಗಿತಾರಂತ ಇಲ್ಲಿಗಿ ಬಂದೀವ್ರಿ. ಆದ್ರ ಹಗಲ ರಾತ್ರಿ ಕುಂತರೂ ಫೋಟೊ ತೆಗಾಲ್ಯಾಗರಿ' ಎಂದು ಗ್ರಾಮದ ಬಸಮ್ಮ ಜಹಾಗೀರದಾರ ಹೇಳುತ್ತಾರೆ.<br /> <br /> ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕ್ಯೆಗೊಂಡು ಬಡಜನರಿಗೆ ನ್ಯಾಯ ಒದಗಿಸಬೇಕು.<br /> <br /> ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಕ್ಷಣಾ ವೇದಿಕೆಯ ವಿದ್ಯಾರ್ಥಿ ವಿಭಾಗದ ತಾಲ್ಲೂಕು ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ ಎಚ್ಚರಿಸಿದ್ದಾರೆ.<br /> <br /> ವಿದ್ಯುತ್ ಸಮಸ್ಯೆ ಹಿನ್ನೆಲೆಯಲ್ಲಿ ಜನರೇಟರ್ ಬಳಸಿ ಭಾವಚಿತ್ರ ನೀಡಲು ಪ್ರಾರಂಭಿಸಿದ್ದರಿಂದ ಶುಕ್ರವಾರ ಸಂಜೆ ಧರಣಿ ಹಿಂತೆಗೆದುಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>