<p><strong>ಸೆಮಿಫೈನಲ್ಗೆ ಬೆಂಗಳೂರು ದಕ್ಷಿಣ, ಬಳ್ಳಾರಿ </strong></p>.<p><strong><br /> ಬಳ್ಳಾರಿ: </strong>ಬೆಂಗಳೂರು ದಕ್ಷಿಣ ತಂಡದವರು ಇಲ್ಲಿ ನಡೆದಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಹಾಕಿ ಟೂರ್ನಿಯ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.<br /> <br /> ಇಲ್ಲಿನ ಸ್ವತಂತ್ರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬೆಂಗಳೂರು ದಕ್ಷಿಣ ತಂಡ 6-0 ಗೋಲುಗಳಿಂದ ಚಿತ್ರದುರ್ಗ ಜಿಲ್ಲಾ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು. <br /> <br /> ಬೆಂಗಳೂರು ತಂಡದ ಗೆಲುವಿಗೆ ರಾಹಿಲ್ ಅಹ್ಮದ್ ಅವರ ಹ್ಯಾಟ್ರಿಕ್ ಗೋಲುಗಳು ನೆರವಾದವು. ತಂಡದ ಪರ ಸೋಮಣ್ಣ ಎರಡು ಹಾಗೂ ಅಚ್ಚಪ್ಪ ಒಂದು ಗೋಲು ಗಳಿಸಿದರು.<br /> <br /> ಗದಗ, ಬಾಗಲಕೋಟೆ, ಬೆಂಗಳೂರು ಉತ್ತರ, ದಾವಣಗೆರೆ, ಧಾರವಾಡ ಮತ್ತು ಮಂಗಳೂರು ಜಿಲ್ಲಾ ತಂಡಗಳು ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಸೆಣೆಸಲಿವೆ. <br /> <br /> ಸೆಮಿಫೈನಲ್ಗೆ ಬಳ್ಳಾರಿ: ಆತಿಥೇಯ ಬಳ್ಳಾರಿ, ಮೈಸೂರು ಹಾಗು ಕೊಡಗು ತಂಡಗಳು ಬಾಲಕಿಯರ ವಿಭಾಗದಲ್ಲಿ ಸೆಮಿಫೈನಲ್ಗೆ ಅರ್ಹತೆ ಗಳಿಸಿವೆ.<br /> <br /> ಬೆಳಿಗ್ಗೆ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಬಳ್ಳಾರಿ ತಂಡವು ತನುಜಾ ಅವರು ಗಳಿಸಿದ ಏಕೈಕ ಗೋಲಿನ ನೆರವಿನೊಂದಿಗೆ ಧಾರವಾಡ ತಂಡದ ವಿರುದ್ಧ ಜಯಿಸಿತು.</p>.<p><strong>ಟೇಬಲ್ ಟೆನಿಸ್: ಸುನಂದ್ ವಾಸನ್ಗೆ ಪ್ರಶಸ್ತಿ</strong></p>.<p><strong>ಪ್ರಜಾವಾಣಿ ವಾರ್ತೆ<br /> ಬೆಂಗಳೂರು:</strong> ಸುನಂದ್ ವಾಸನ್ ಇಲ್ಲಿ ನಡೆಯುತ್ತಿರುವ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.<br /> <br /> ಮಲ್ಲೇಶ್ವರಂ ಸಂಸ್ಥೆ ಹಾಲ್ನಲ್ಲಿ ಶುಕ್ರವಾರ ನಡೆದ ಫೈನಲ್ನಲ್ಲಿ ಸುನಂದ್ 12-10, 11-9, 6-11, 5-11, 11-8, 12-10 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ಅವರನ್ನು ಮಣಿಸಿದರು.<br /> <br /> ಸೆಮಿಫೈನಲ್ ಪಂದ್ಯಗಳಲ್ಲಿ ಸುನಂದ್ 11-9, 11-7, 6-11, 12-10, 11-3 ರಲ್ಲಿ ಕೇಶವರಾಜ್ ವಿರುದ್ಧ ಗೆಲುವು ಪಡೆದಿದ್ದರೆ, ಶ್ರೇಯಲ್ 9-11, 11-2, 15-13, 7-11, 9-11, 11-9, 11-8 ರಲ್ಲಿ ವಿ.ಪಿ. ಚರಣ್ ಅವರನ್ನು ಸೋಲಿಸಿದ್ದರು. <br /> <br /> ಕರಣ್ ಜಿ. ನಾನ್ ಮೆಡಲಿಸ್ಟ್ ವಿಭಾಗದ ಪ್ರಶಸ್ತಿ ಗೆದ್ದರು. ಅವರು ಫೈನಲ್ನಲ್ಲಿ 11-4, 11-6, 11-9 ರಲ್ಲಿ ದಿನಕರ ನಾಯ್ಡು ವಿರುದ್ಧ ಗೆದ್ದರು. ಎಂ. ಮಾಧುರ್ಯ ಹಾಗೂ ಮೈತ್ರೇಯಿ ಬೈಲೂರ್ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೆಮಿಫೈನಲ್ಗೆ ಬೆಂಗಳೂರು ದಕ್ಷಿಣ, ಬಳ್ಳಾರಿ </strong></p>.<p><strong><br /> ಬಳ್ಳಾರಿ: </strong>ಬೆಂಗಳೂರು ದಕ್ಷಿಣ ತಂಡದವರು ಇಲ್ಲಿ ನಡೆದಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಹಾಕಿ ಟೂರ್ನಿಯ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.<br /> <br /> ಇಲ್ಲಿನ ಸ್ವತಂತ್ರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬೆಂಗಳೂರು ದಕ್ಷಿಣ ತಂಡ 6-0 ಗೋಲುಗಳಿಂದ ಚಿತ್ರದುರ್ಗ ಜಿಲ್ಲಾ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು. <br /> <br /> ಬೆಂಗಳೂರು ತಂಡದ ಗೆಲುವಿಗೆ ರಾಹಿಲ್ ಅಹ್ಮದ್ ಅವರ ಹ್ಯಾಟ್ರಿಕ್ ಗೋಲುಗಳು ನೆರವಾದವು. ತಂಡದ ಪರ ಸೋಮಣ್ಣ ಎರಡು ಹಾಗೂ ಅಚ್ಚಪ್ಪ ಒಂದು ಗೋಲು ಗಳಿಸಿದರು.<br /> <br /> ಗದಗ, ಬಾಗಲಕೋಟೆ, ಬೆಂಗಳೂರು ಉತ್ತರ, ದಾವಣಗೆರೆ, ಧಾರವಾಡ ಮತ್ತು ಮಂಗಳೂರು ಜಿಲ್ಲಾ ತಂಡಗಳು ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಸೆಣೆಸಲಿವೆ. <br /> <br /> ಸೆಮಿಫೈನಲ್ಗೆ ಬಳ್ಳಾರಿ: ಆತಿಥೇಯ ಬಳ್ಳಾರಿ, ಮೈಸೂರು ಹಾಗು ಕೊಡಗು ತಂಡಗಳು ಬಾಲಕಿಯರ ವಿಭಾಗದಲ್ಲಿ ಸೆಮಿಫೈನಲ್ಗೆ ಅರ್ಹತೆ ಗಳಿಸಿವೆ.<br /> <br /> ಬೆಳಿಗ್ಗೆ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಬಳ್ಳಾರಿ ತಂಡವು ತನುಜಾ ಅವರು ಗಳಿಸಿದ ಏಕೈಕ ಗೋಲಿನ ನೆರವಿನೊಂದಿಗೆ ಧಾರವಾಡ ತಂಡದ ವಿರುದ್ಧ ಜಯಿಸಿತು.</p>.<p><strong>ಟೇಬಲ್ ಟೆನಿಸ್: ಸುನಂದ್ ವಾಸನ್ಗೆ ಪ್ರಶಸ್ತಿ</strong></p>.<p><strong>ಪ್ರಜಾವಾಣಿ ವಾರ್ತೆ<br /> ಬೆಂಗಳೂರು:</strong> ಸುನಂದ್ ವಾಸನ್ ಇಲ್ಲಿ ನಡೆಯುತ್ತಿರುವ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.<br /> <br /> ಮಲ್ಲೇಶ್ವರಂ ಸಂಸ್ಥೆ ಹಾಲ್ನಲ್ಲಿ ಶುಕ್ರವಾರ ನಡೆದ ಫೈನಲ್ನಲ್ಲಿ ಸುನಂದ್ 12-10, 11-9, 6-11, 5-11, 11-8, 12-10 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ಅವರನ್ನು ಮಣಿಸಿದರು.<br /> <br /> ಸೆಮಿಫೈನಲ್ ಪಂದ್ಯಗಳಲ್ಲಿ ಸುನಂದ್ 11-9, 11-7, 6-11, 12-10, 11-3 ರಲ್ಲಿ ಕೇಶವರಾಜ್ ವಿರುದ್ಧ ಗೆಲುವು ಪಡೆದಿದ್ದರೆ, ಶ್ರೇಯಲ್ 9-11, 11-2, 15-13, 7-11, 9-11, 11-9, 11-8 ರಲ್ಲಿ ವಿ.ಪಿ. ಚರಣ್ ಅವರನ್ನು ಸೋಲಿಸಿದ್ದರು. <br /> <br /> ಕರಣ್ ಜಿ. ನಾನ್ ಮೆಡಲಿಸ್ಟ್ ವಿಭಾಗದ ಪ್ರಶಸ್ತಿ ಗೆದ್ದರು. ಅವರು ಫೈನಲ್ನಲ್ಲಿ 11-4, 11-6, 11-9 ರಲ್ಲಿ ದಿನಕರ ನಾಯ್ಡು ವಿರುದ್ಧ ಗೆದ್ದರು. ಎಂ. ಮಾಧುರ್ಯ ಹಾಗೂ ಮೈತ್ರೇಯಿ ಬೈಲೂರ್ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>