<p><strong>ವಿರಾಜಪೇಟೆ:</strong> ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ಜೀರ್ಣೋದ್ಧಾರಗೊಂಡ ಅಂಗಾಳಪರಮೇಶ್ವರಿ ದೇವಾಲಯದ ನೂತನ ಗರ್ಭಗುಡಿಯಲ್ಲಿ ಗುರುವಾರ ರಾತ್ರಿ ದೇವಿ ವಿಗ್ರಹ ಪ್ರತಿಷ್ಠಾಪನೆ ನಡೆಯಿತು.<br /> <br /> ತಮಿಳುನಾಡಿನ ತಂತ್ರಿಗಳು ಸಾಂಪ್ರದಾಯಿಕ ಪೂಜೆ ವೇದ ಮಂತ್ರಗಳೊಂದಿಗೆ ಅಂಗಾಳಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ನಡೆಸಿಕೊಟ್ಟರು.<br /> <br /> ವಿರಾಜಪೇಟೆಯ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಬುಧವಾರದಿಂದ ಆರಂಭಗೊಂಡಿದ್ದ ದೇವಿಯ ಪ್ರತಿಷ್ಠಾಪನಾ ಮಹೋತ್ಸವ, ಶುಕ್ರವಾರ ದೇವಾಲಯದ ಗೋಪುರದ ಕಳಶ ಸ್ಥಾಪನೆ, ಕುಂಭಾಭಿಷೇಕ ಹಾಗೂ ಶಡದ್ವ ಹೋಮದೊಂದಿಗೆ ತೆರೆ ಕಂಡಿತು.<br /> <br /> ದೇವಿಯ ಪ್ರತಿಷ್ಠಾಪನೋತ್ಸವ ಅಂಗವಾಗಿ ಗುರುವಾರ ಮಧ್ಯಾಹ್ನ ಇಲ್ಲಿಯ ಮಾರಿಗುಡಿಯಿಂದ ಮಲಬಾರ್ ರಸ್ತೆಯ ಮೀನುಪೇಟೆಯ ತನಕ ದೇವಿಯ ನಗರ ಪ್ರದಕ್ಷಿಣೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. <br /> <br /> ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಆನೆ ಅಂಬಾರಿ, ಅಶ್ವ ಸವಾರಿ, ಗೋ ಕರು, ಎತ್ತಿನ ಗಾಡಿಯಲ್ಲಿ ದೇವಿಯ ವಿಗ್ರಹ, ತಮಿಳುನಾಡಿನ ಬ್ಯಾಂಡ್, ಕೇರಳದ ಚಂಡೆ ಮದ್ದಳೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.<br /> <br /> ವಿರಾಜಪೇಟೆಯ ತೆಲುಗರಬೀದಿ, ಜೈನರಬೀದಿ, ಫೀಲ್ಡ್ಮಾರ್ಷಲ್ ಕಾರ್ಯಪ್ಪ ರಸ್ತೆ ಮುಖ್ಯರಸ್ತೆಯ ಮೂಲಕ ಸಾಗಿದ ಮೆರವಣಿಗೆ ಸಂಜೆ 6.30ರ ವೇಳೆಗೆ ದೇವಾಲಯಕ್ಕೆ ಹಿಂತಿರುಗಿತು. ರಾತ್ರಿ 7ಕ್ಕೆ ಆರಂಭಗೊಂಡ ಪ್ರತಿಷ್ಠಾಪನೆ ಕಾರ್ಯ ರಾತ್ರಿ12. 30ರವರೆಗೂ ಜರುಗಿತು.<br /> <br /> ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶುಕ್ರವಾರ ಬೆಳಿಗ್ಗೆ ಕುಂಭಾಭಿಷೇಕ ನೆರವೇರಿಸಿದರು.<br /> <br /> ಪ್ರತಿಷ್ಠಾಪನೆಯ ಅಂಗವಾಗಿ ಭಕ್ತಾದಿಗಳಿಗೆ ಮೂರು ದಿನಗಳಿಂದಲು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.<br /> ದೇವಿಯ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಶ್ರೀನಿವಾಸ್, ಖಜಾಂಚಿ ಟಿ.ಡಿ.ಗುರುನಾಥ್, ಟಿ.ಅಂಗುಮುತ್ತು, ಟಿ.ಕೆ.ಜನಾರ್ಧನ ಹಾಗೂ ಟಿ.ಜೆ.ದಿವಾಕರ್ ವಿಶೇಷವಾಗಿ ಶ್ರಮಿಸಿದರು.<br /> <br /> ಪ್ರತಿಷ್ಠಾಪನಾ ಮಹೋತ್ಸವಕ್ಕೆ ಗುರುವಾರ ಮಧ್ಯಾಹ್ನ ಆಗಮಿಸಿದ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ದೇವಿಯ ನಗರ ಪ್ರದಕ್ಷಿಣೆ ಮೆರವಣಿಗೆಗೆ ಚಾಲನೆ ನೀಡಿ ಕೇರಳದ ಚಂಡೆ ಮದ್ದಳೆ ತಂಡದ ನೃತ್ಯ ವೀಕ್ಷಿಸಿದರು. <br /> <br /> ಬೋಪಯ್ಯ ಅವರು ದೇವಾಲಯದ ಭೇಟಿ ಸಂದರ್ಭದಲ್ಲಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಜಾ ಕುಶಾಲಪ್ಪ, ಆರ್.ಎಂ.ಸಿ ಅಧ್ಯಕ್ಷ ರಘು ನಾಣಯ್ಯ ಜಿಲ್ಲಾ ಪಂಚಾಯಿತಿ ಸದಸ್ಯೆ ಮಣಿನಂಜಪ್ಪ ಇತರರು ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿರಾಜಪೇಟೆ:</strong> ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ಜೀರ್ಣೋದ್ಧಾರಗೊಂಡ ಅಂಗಾಳಪರಮೇಶ್ವರಿ ದೇವಾಲಯದ ನೂತನ ಗರ್ಭಗುಡಿಯಲ್ಲಿ ಗುರುವಾರ ರಾತ್ರಿ ದೇವಿ ವಿಗ್ರಹ ಪ್ರತಿಷ್ಠಾಪನೆ ನಡೆಯಿತು.<br /> <br /> ತಮಿಳುನಾಡಿನ ತಂತ್ರಿಗಳು ಸಾಂಪ್ರದಾಯಿಕ ಪೂಜೆ ವೇದ ಮಂತ್ರಗಳೊಂದಿಗೆ ಅಂಗಾಳಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ನಡೆಸಿಕೊಟ್ಟರು.<br /> <br /> ವಿರಾಜಪೇಟೆಯ ಮಾರಿಯಮ್ಮ ಹಾಗೂ ಅಂಗಾಳಪರಮೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಬುಧವಾರದಿಂದ ಆರಂಭಗೊಂಡಿದ್ದ ದೇವಿಯ ಪ್ರತಿಷ್ಠಾಪನಾ ಮಹೋತ್ಸವ, ಶುಕ್ರವಾರ ದೇವಾಲಯದ ಗೋಪುರದ ಕಳಶ ಸ್ಥಾಪನೆ, ಕುಂಭಾಭಿಷೇಕ ಹಾಗೂ ಶಡದ್ವ ಹೋಮದೊಂದಿಗೆ ತೆರೆ ಕಂಡಿತು.<br /> <br /> ದೇವಿಯ ಪ್ರತಿಷ್ಠಾಪನೋತ್ಸವ ಅಂಗವಾಗಿ ಗುರುವಾರ ಮಧ್ಯಾಹ್ನ ಇಲ್ಲಿಯ ಮಾರಿಗುಡಿಯಿಂದ ಮಲಬಾರ್ ರಸ್ತೆಯ ಮೀನುಪೇಟೆಯ ತನಕ ದೇವಿಯ ನಗರ ಪ್ರದಕ್ಷಿಣೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. <br /> <br /> ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, ಆನೆ ಅಂಬಾರಿ, ಅಶ್ವ ಸವಾರಿ, ಗೋ ಕರು, ಎತ್ತಿನ ಗಾಡಿಯಲ್ಲಿ ದೇವಿಯ ವಿಗ್ರಹ, ತಮಿಳುನಾಡಿನ ಬ್ಯಾಂಡ್, ಕೇರಳದ ಚಂಡೆ ಮದ್ದಳೆ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.<br /> <br /> ವಿರಾಜಪೇಟೆಯ ತೆಲುಗರಬೀದಿ, ಜೈನರಬೀದಿ, ಫೀಲ್ಡ್ಮಾರ್ಷಲ್ ಕಾರ್ಯಪ್ಪ ರಸ್ತೆ ಮುಖ್ಯರಸ್ತೆಯ ಮೂಲಕ ಸಾಗಿದ ಮೆರವಣಿಗೆ ಸಂಜೆ 6.30ರ ವೇಳೆಗೆ ದೇವಾಲಯಕ್ಕೆ ಹಿಂತಿರುಗಿತು. ರಾತ್ರಿ 7ಕ್ಕೆ ಆರಂಭಗೊಂಡ ಪ್ರತಿಷ್ಠಾಪನೆ ಕಾರ್ಯ ರಾತ್ರಿ12. 30ರವರೆಗೂ ಜರುಗಿತು.<br /> <br /> ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಶುಕ್ರವಾರ ಬೆಳಿಗ್ಗೆ ಕುಂಭಾಭಿಷೇಕ ನೆರವೇರಿಸಿದರು.<br /> <br /> ಪ್ರತಿಷ್ಠಾಪನೆಯ ಅಂಗವಾಗಿ ಭಕ್ತಾದಿಗಳಿಗೆ ಮೂರು ದಿನಗಳಿಂದಲು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.<br /> ದೇವಿಯ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಟ್ರಸ್ಟ್ ಅಧ್ಯಕ್ಷ ಟಿ.ಕೆ.ಶ್ರೀನಿವಾಸ್, ಖಜಾಂಚಿ ಟಿ.ಡಿ.ಗುರುನಾಥ್, ಟಿ.ಅಂಗುಮುತ್ತು, ಟಿ.ಕೆ.ಜನಾರ್ಧನ ಹಾಗೂ ಟಿ.ಜೆ.ದಿವಾಕರ್ ವಿಶೇಷವಾಗಿ ಶ್ರಮಿಸಿದರು.<br /> <br /> ಪ್ರತಿಷ್ಠಾಪನಾ ಮಹೋತ್ಸವಕ್ಕೆ ಗುರುವಾರ ಮಧ್ಯಾಹ್ನ ಆಗಮಿಸಿದ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ದೇವಿಯ ನಗರ ಪ್ರದಕ್ಷಿಣೆ ಮೆರವಣಿಗೆಗೆ ಚಾಲನೆ ನೀಡಿ ಕೇರಳದ ಚಂಡೆ ಮದ್ದಳೆ ತಂಡದ ನೃತ್ಯ ವೀಕ್ಷಿಸಿದರು. <br /> <br /> ಬೋಪಯ್ಯ ಅವರು ದೇವಾಲಯದ ಭೇಟಿ ಸಂದರ್ಭದಲ್ಲಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಜಾ ಕುಶಾಲಪ್ಪ, ಆರ್.ಎಂ.ಸಿ ಅಧ್ಯಕ್ಷ ರಘು ನಾಣಯ್ಯ ಜಿಲ್ಲಾ ಪಂಚಾಯಿತಿ ಸದಸ್ಯೆ ಮಣಿನಂಜಪ್ಪ ಇತರರು ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>