<p>ಬೆಂಗಳೂರು: `ಕನ್ನಡದಲ್ಲಿ ನಾಟಕಕಾರರ ಪಟ್ಟಿಯಲ್ಲಿ ಪರ್ವತವಾಣಿ ಅವರ ಹೆಸರೇ ಇಲ್ಲ. ವಿಮರ್ಶಕರು ನಾಲ್ಕೈದು ಮಂದಿ ನಾಟಕಕಾರರ ಹೆಸರನ್ನು ಹೆಸರಿಸುತ್ತಾರೆ. ಅಲ್ಲಿಯೂ ಪರ್ವತವಾಣಿ ಅವರನ್ನು ನೆನಪಿಸಿಕೊಳ್ಳುವುದಿಲ್ಲ~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ವಿಷಾದಿಸಿದರು.<br /> <br /> ನಟ, ನಾಟಕಕಾರ, ನಿರ್ದೇಶಕ ಪರ್ವತವಾಣಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಟಕೋತ್ಸವದಲ್ಲಿ ಮಾತನಾಡಿದ ಅವರು, `ಕನ್ನಡ ನಾಟಕಗಳ ಚರಿತ್ರೆಯ ಬಗ್ಗೆ ಯಾರಾದರೂ ಕೃತಿ ರಚನೆ ಮಾಡುವದಾದರೆ ಅದರಲ್ಲಿ ಒಂದು ಅಧ್ಯಾಯವನ್ನೇ ಪರ್ವತವಾಣಿ ಅವರು ರಂಗಭೂಮಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಚರ್ಚಿಸಬೇಕಾಗುತ್ತದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ ಪರ್ವತವಾಣಿ ನನ್ನ ಒಡನಾಡಿಯಾಗಿದ್ದರು. <br /> <br /> ಅವರೊಂದಿಗೆ ಮಾತನಾಡುವುದೆಂದರೆ ವಿದ್ವಾಂಸರೊಂದಿಗೆ ಮಾತನಾಡಿದಂತಾಗುತ್ತಿತ್ತು~ ಎಂದರು.<br /> ಹಿರಿಯ ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್ ಮಾತನಾಡಿ, `ಪರ್ವತವಾಣಿ ಅವರು ಕನ್ನಡ ನಾಟಕಕಗಳಿಗೆ ಲವಲವಿಕೆ, ಚೈತನ್ಯವನ್ನು ತಂದುಕೊಟ್ಟವರು. ಆಗಷ್ಟೇ ಆರಂಭವಾಗಿದ್ದ ಸಿನಿಮಾ ಸವಾಲನ್ನು ಎದುರಿಸಿ ರಂಗಭೂಮಿಯ ಅಸ್ತಿತ್ವವನ್ನು ಉಳಿಸಿದರು~ ಎಂದರು.<br /> <br /> ಹಿರಿಯ ಆಕಾಶವಾಣಿ ರಂಗ ಕಲಾವಿದೆ ಯಮುನಾ ಮೂರ್ತಿ, ಚಿತ್ರನಟ ಶ್ರೀನಾಥ್ ಪರ್ವತವಾಣಿ ಅವರೊಂದಿಗಿನ ತಮ್ಮ ಅನುಭವಗಳನ್ನು ಸ್ಮರಿಸಿದರು. ಗ್ರೀನ್ ರೂಂ ತಂಡ ಅಭಿನಯಿಸಿದ, ಪರ್ವತವಾಣಿ ಅವರ `ಉಂಡಾಡಿ ಗುಂಡ~ ನಾಟಕ ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಕನ್ನಡದಲ್ಲಿ ನಾಟಕಕಾರರ ಪಟ್ಟಿಯಲ್ಲಿ ಪರ್ವತವಾಣಿ ಅವರ ಹೆಸರೇ ಇಲ್ಲ. ವಿಮರ್ಶಕರು ನಾಲ್ಕೈದು ಮಂದಿ ನಾಟಕಕಾರರ ಹೆಸರನ್ನು ಹೆಸರಿಸುತ್ತಾರೆ. ಅಲ್ಲಿಯೂ ಪರ್ವತವಾಣಿ ಅವರನ್ನು ನೆನಪಿಸಿಕೊಳ್ಳುವುದಿಲ್ಲ~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ವಿಷಾದಿಸಿದರು.<br /> <br /> ನಟ, ನಾಟಕಕಾರ, ನಿರ್ದೇಶಕ ಪರ್ವತವಾಣಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಟಕೋತ್ಸವದಲ್ಲಿ ಮಾತನಾಡಿದ ಅವರು, `ಕನ್ನಡ ನಾಟಕಗಳ ಚರಿತ್ರೆಯ ಬಗ್ಗೆ ಯಾರಾದರೂ ಕೃತಿ ರಚನೆ ಮಾಡುವದಾದರೆ ಅದರಲ್ಲಿ ಒಂದು ಅಧ್ಯಾಯವನ್ನೇ ಪರ್ವತವಾಣಿ ಅವರು ರಂಗಭೂಮಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಚರ್ಚಿಸಬೇಕಾಗುತ್ತದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ ಪರ್ವತವಾಣಿ ನನ್ನ ಒಡನಾಡಿಯಾಗಿದ್ದರು. <br /> <br /> ಅವರೊಂದಿಗೆ ಮಾತನಾಡುವುದೆಂದರೆ ವಿದ್ವಾಂಸರೊಂದಿಗೆ ಮಾತನಾಡಿದಂತಾಗುತ್ತಿತ್ತು~ ಎಂದರು.<br /> ಹಿರಿಯ ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್ ಮಾತನಾಡಿ, `ಪರ್ವತವಾಣಿ ಅವರು ಕನ್ನಡ ನಾಟಕಕಗಳಿಗೆ ಲವಲವಿಕೆ, ಚೈತನ್ಯವನ್ನು ತಂದುಕೊಟ್ಟವರು. ಆಗಷ್ಟೇ ಆರಂಭವಾಗಿದ್ದ ಸಿನಿಮಾ ಸವಾಲನ್ನು ಎದುರಿಸಿ ರಂಗಭೂಮಿಯ ಅಸ್ತಿತ್ವವನ್ನು ಉಳಿಸಿದರು~ ಎಂದರು.<br /> <br /> ಹಿರಿಯ ಆಕಾಶವಾಣಿ ರಂಗ ಕಲಾವಿದೆ ಯಮುನಾ ಮೂರ್ತಿ, ಚಿತ್ರನಟ ಶ್ರೀನಾಥ್ ಪರ್ವತವಾಣಿ ಅವರೊಂದಿಗಿನ ತಮ್ಮ ಅನುಭವಗಳನ್ನು ಸ್ಮರಿಸಿದರು. ಗ್ರೀನ್ ರೂಂ ತಂಡ ಅಭಿನಯಿಸಿದ, ಪರ್ವತವಾಣಿ ಅವರ `ಉಂಡಾಡಿ ಗುಂಡ~ ನಾಟಕ ಪ್ರದರ್ಶಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>