<p><strong>ನವದೆಹಲಿ: </strong>ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ನಕ್ಸಲೀಯರು ಮರುಸಂಘಟಿತರಾಗಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.<br /> <br /> ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಸೇರಿ ಏಳು ಜಿಲ್ಲೆಗಳಲ್ಲಿ ಸುಮಾರು 100 ಕಿ.ಮಿ. ವ್ಯಾಪ್ತಿಯಲ್ಲಿ ನಕ್ಸಲರು ತಮ್ಮ ಚಟುವಟಿಕೆ ಹೆಚ್ಚಿಸಲು ಪ್ರಯತ್ನಿಸುತ್ತ್ದ್ದಿದಾರೆ. <br /> <br /> ಇಲ್ಲಿ ನೆಲೆ ಸ್ಥಾಪಿಸಲು ಕೇಂದ್ರ ಸಮಿತಿ ಸದಸ್ಯ, ಬೆಂಗಳೂರು ಮೂಲದ ಕುಪ್ಪು ಸ್ವಾಮಿಯನ್ನು ನಿಯೋಜಿಸಿದ್ದಾರೆ ಎಂದು ಗುಪ್ತಚರ ವರದಿಯಲ್ಲಿ ಹೇಳಲಾಗಿದೆ.<br /> <br /> ತಮಿಳುನಾಡು, ಕೇರಳ ರಾಜ್ಯಗಳ ನಕ್ಸಲ್ ಪಡೆಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಕ್ರಂ ಗೌಡ, ಲತಾ, ಮಹೇಶ್ ಹಾಗೂ ಸುಂದರಿ ನೇತೃತ್ವದ ಸ್ಥಳೀಯ ಸಂಘಟನೆಗಳ ಜತೆ ಸೇರಿಕೊಂಡು ಚಟುವಟಿಕೆ ನಡೆಸುತ್ತಿವೆ ಎಂದೂ ಎಚ್ಚರಿಸಲಾಗಿದೆ.<br /> <br /> ಕುಪ್ಪು ದೇವರಾಜ್, ರಮೇಶ್, ರಾಯಣ್ಣ, ಬಾಲಾಜಿ, ಜೋಗೇಶ್ ಹಾಗೂ ಯೋಗೇಶ್ ಹೆಸರಿನಲ್ಲಿ ವೇಷ ಮರೆಸಿಕೊಂಡಿರುವ ಕುಪ್ಪು ಸ್ವಾಮಿ ತಲೆಗೆ ಜಾರ್ಖಂಡ್ ಹಾಗು ಛತ್ತೀಸ್ಗಡ ರಾಜ್ಯಗಳು ಕ್ರಮವಾಗಿ ರೂ 7 ಹಾಗೂ 10 ಲಕ್ಷ ಬಹುಮಾನ ಘೋಷಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ನಕ್ಸಲೀಯರು ಮರುಸಂಘಟಿತರಾಗಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.<br /> <br /> ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಸೇರಿ ಏಳು ಜಿಲ್ಲೆಗಳಲ್ಲಿ ಸುಮಾರು 100 ಕಿ.ಮಿ. ವ್ಯಾಪ್ತಿಯಲ್ಲಿ ನಕ್ಸಲರು ತಮ್ಮ ಚಟುವಟಿಕೆ ಹೆಚ್ಚಿಸಲು ಪ್ರಯತ್ನಿಸುತ್ತ್ದ್ದಿದಾರೆ. <br /> <br /> ಇಲ್ಲಿ ನೆಲೆ ಸ್ಥಾಪಿಸಲು ಕೇಂದ್ರ ಸಮಿತಿ ಸದಸ್ಯ, ಬೆಂಗಳೂರು ಮೂಲದ ಕುಪ್ಪು ಸ್ವಾಮಿಯನ್ನು ನಿಯೋಜಿಸಿದ್ದಾರೆ ಎಂದು ಗುಪ್ತಚರ ವರದಿಯಲ್ಲಿ ಹೇಳಲಾಗಿದೆ.<br /> <br /> ತಮಿಳುನಾಡು, ಕೇರಳ ರಾಜ್ಯಗಳ ನಕ್ಸಲ್ ಪಡೆಗಳು ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿಕ್ರಂ ಗೌಡ, ಲತಾ, ಮಹೇಶ್ ಹಾಗೂ ಸುಂದರಿ ನೇತೃತ್ವದ ಸ್ಥಳೀಯ ಸಂಘಟನೆಗಳ ಜತೆ ಸೇರಿಕೊಂಡು ಚಟುವಟಿಕೆ ನಡೆಸುತ್ತಿವೆ ಎಂದೂ ಎಚ್ಚರಿಸಲಾಗಿದೆ.<br /> <br /> ಕುಪ್ಪು ದೇವರಾಜ್, ರಮೇಶ್, ರಾಯಣ್ಣ, ಬಾಲಾಜಿ, ಜೋಗೇಶ್ ಹಾಗೂ ಯೋಗೇಶ್ ಹೆಸರಿನಲ್ಲಿ ವೇಷ ಮರೆಸಿಕೊಂಡಿರುವ ಕುಪ್ಪು ಸ್ವಾಮಿ ತಲೆಗೆ ಜಾರ್ಖಂಡ್ ಹಾಗು ಛತ್ತೀಸ್ಗಡ ರಾಜ್ಯಗಳು ಕ್ರಮವಾಗಿ ರೂ 7 ಹಾಗೂ 10 ಲಕ್ಷ ಬಹುಮಾನ ಘೋಷಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>