<p>ನವದೆಹಲಿ (ಐಎಎನ್ಎಸ್): ಶಿಕ್ಷೆ ಪೂರ್ಣಗೊಳಿಸಿದ್ದರೂ ದೇಶದ ಕಾರಾಗೃಹಗಳಲ್ಲಿ ಕಾಲ ತಳ್ಳುತ್ತಿರುವ ಪಾಕಿಸ್ತಾನದ 54 ಕೈದಿಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.<br /> <br /> ಕೈದಿಗಳನ್ನು ಬಿಡುಗಡೆ ಮಾಡಿ ಅವರ ದೇಶಗಳಿಗೆ ಗೌರವದಿಂದ ಕಳುಹಿಸಿಕೊಡುವ ಕಾರ್ಯವನ್ನು ಒಂದು ತಿಂಗಳ ಒಳಗೆ ಮುಗಿಸಬೇಕು ಎಂದು ನಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಚ್.ಎಲ್. ಗೋಖಲೆ ಅವರನ್ನೊಳಗೊಂಡ ನ್ಯಾಯ ಪೀಠವು ಹೇಳಿದೆ.<br /> <br /> `ಅಲ್ಲದೇ ದೇಶದಲ್ಲಿರುವ ಬಾಂಗ್ಲಾ, ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ಕೈದಿಗಳಿಗೂ ಈ ತೀರ್ಪು ಅನ್ವಯಿಸುತ್ತದೆ~ ಎಂದು ಕೋರ್ಟ್ ತಿಳಿಸಿತು.<br /> <br /> `ಶಿಕ್ಷೆಯ ಅವಧಿ ಮುಗಿಸಿರುವ ಈ ಕೈದಿಗಳ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರದ ಸರ್ಕಾರ, ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ವಿಫಲವಾಗಿದೆ~ ಎಂದು ಹರಿಹಾಯ್ದ ಪೀಠವು, ` ಮಾನವ ಹಕ್ಕುಗಳನ್ನು ಗೌರವಿಸಿ ಅದಕ್ಕೆ ಬದ್ಧರಾಗಿರಬೇಕಲ್ಲದೆ, ವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಿಧಾನದ 21ನೇ ಅನುಚ್ಛೇದವನ್ನು ಎತ್ತಿ ಹಿಡಿಯಬೇಕು~ ಎಂದು ಅಭಿಪ್ರಾಯಪಟ್ಟಿದೆ. <br /> <br /> ಈಗಾಗಲೇ ಸೆರೆವಾಸವನ್ನು ಪೂರೈಸಿರುವ 365 ಪಾಕ್ ಕೈದಿಗಳ ಪಟ್ಟಿಯನ್ನು ಕಳೆದ ನ. 28 ರಂದು ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ಶಿಕ್ಷೆ ಪೂರ್ಣಗೊಳಿಸಿದ್ದರೂ ದೇಶದ ಕಾರಾಗೃಹಗಳಲ್ಲಿ ಕಾಲ ತಳ್ಳುತ್ತಿರುವ ಪಾಕಿಸ್ತಾನದ 54 ಕೈದಿಗಳನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.<br /> <br /> ಕೈದಿಗಳನ್ನು ಬಿಡುಗಡೆ ಮಾಡಿ ಅವರ ದೇಶಗಳಿಗೆ ಗೌರವದಿಂದ ಕಳುಹಿಸಿಕೊಡುವ ಕಾರ್ಯವನ್ನು ಒಂದು ತಿಂಗಳ ಒಳಗೆ ಮುಗಿಸಬೇಕು ಎಂದು ನಾಯಮೂರ್ತಿಗಳಾದ ಆರ್.ಎಂ. ಲೋಧಾ ಮತ್ತು ಎಚ್.ಎಲ್. ಗೋಖಲೆ ಅವರನ್ನೊಳಗೊಂಡ ನ್ಯಾಯ ಪೀಠವು ಹೇಳಿದೆ.<br /> <br /> `ಅಲ್ಲದೇ ದೇಶದಲ್ಲಿರುವ ಬಾಂಗ್ಲಾ, ಆಫ್ಘಾನಿಸ್ತಾನ ಮತ್ತು ಇರಾನ್ ದೇಶಗಳ ಕೈದಿಗಳಿಗೂ ಈ ತೀರ್ಪು ಅನ್ವಯಿಸುತ್ತದೆ~ ಎಂದು ಕೋರ್ಟ್ ತಿಳಿಸಿತು.<br /> <br /> `ಶಿಕ್ಷೆಯ ಅವಧಿ ಮುಗಿಸಿರುವ ಈ ಕೈದಿಗಳ ಬಗ್ಗೆ ಯಾವುದೇ ರೀತಿಯ ಕಾಳಜಿ ತೋರದ ಸರ್ಕಾರ, ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ವಿಫಲವಾಗಿದೆ~ ಎಂದು ಹರಿಹಾಯ್ದ ಪೀಠವು, ` ಮಾನವ ಹಕ್ಕುಗಳನ್ನು ಗೌರವಿಸಿ ಅದಕ್ಕೆ ಬದ್ಧರಾಗಿರಬೇಕಲ್ಲದೆ, ವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಿಧಾನದ 21ನೇ ಅನುಚ್ಛೇದವನ್ನು ಎತ್ತಿ ಹಿಡಿಯಬೇಕು~ ಎಂದು ಅಭಿಪ್ರಾಯಪಟ್ಟಿದೆ. <br /> <br /> ಈಗಾಗಲೇ ಸೆರೆವಾಸವನ್ನು ಪೂರೈಸಿರುವ 365 ಪಾಕ್ ಕೈದಿಗಳ ಪಟ್ಟಿಯನ್ನು ಕಳೆದ ನ. 28 ರಂದು ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>