<p>ಹೊಸಪೇಟೆ: ಪುರಂದರ ಸೇವಾ ಮಂಡಳಿ ವತಿಯಿಂದ ಹಂಪಿಯ ಪುರಂದರ ಮಂಟಪದಲ್ಲಿ ಸೋಮವಾರ ಪುರಂದರದಾಸರ ಆರಾಧನೋತ್ಸವ ಆಚರಿಸಲಾಯಿತು.<br /> ಆರಾಧನೋತ್ಸವದ ಪ್ರಯುಕ್ತ ಸಾಮೂಹಿಕ ಭಜನೆ, ಗೀತಗೋಷ್ಠಿ , ಕಾರ್ಯಕ್ರಮ ಏರ್ಪಡಿಸಲಾಗಿತ್ತು.<br /> <br /> ಕೋಟೆ ದತ್ತಮಂಡಳಿ: ಹೊಸಪೇಟೆಯ ಕೋಟೆ ದತ್ತ ಮಂಡಳಿ ಪುರಂದರರ ಆರಾಧನೋತ್ಸವ ಕಾರ್ಯಕ್ರಮವನ್ನು ಭಾವಚಿತ್ರ ಮೆರವಣಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೈಭವದಿಂದ ಆಚರಿಸಲಾಯಿತು.<br /> ಬೆಳಿಗ್ಗೆ ಧನ್ವಂತ್ರಿ ಹೋಮ, ವಿಶೇಷ ಪೂಜೆ ಮತ್ತು ಪುರಂದರರ ಗೀತಗಾಯನ, ಅನ್ನಸಂತರ್ಪಣೆ ನಡೆಯಿತು.<br /> ದಾಸ ಸಾಹಿತ್ಯ ಪ್ರವಚನ<br /> <br /> <strong>ಸಿರುಗುಪ್ಪ: </strong>ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಪ್ರ ಸಮಾಜದ ವತಿಯಿಂದ ಪುರಂದರ ದಾಸರ ಆರಾಧನಾ ಮಹೋತ್ಸವ ನಡೆಯಿತು. ಆರಾಧನೆ ಪ್ರಯುಕ್ತ ಬೆಂಗಳೂರಿನ ವಿದ್ವಾನ್ ಟಿ. ಮುರಳೀಧರ ಆಚಾರ್ ದಾಸ ಸಾಹಿತ್ಯ ಕುರಿತು ಪ್ರವಚನ ನೀಡಿದರು. <br /> <br /> ಪುರಂದರದಾಸರು ಜನರ ಮಾತನ್ನೇ ಸಾಹಿತ್ಯ ರೂಪಕ್ಕಿಳಿಸಿ ಸಂಗೀತದ ಮೆರಗು ಕೊಟ್ಟರು. ವ್ಯಾಸ-ದಾಸ ಸಾಹಿತ್ಯಗಳೆಂಬ ಎರಡು ದಾರಿಗಳು ಪರಮಾತ್ಮನನ್ನು ಹೊಂದಲು ಯೋಗ್ಯವಾಗಿವೆ ಎಂದು ತಿಳಿಸಿದರು.<br /> ದಾಸರ, ದೇವರನಾಮ ಸ್ಮರಣೆ, ಭಜನೆ ನಡೆದವು. ಇದೇ ಸಂದರ್ಭದಲ್ಲಿ ವಿದ್ವಾನ್ ಮುರಳೀಧರ ಆಚಾರ್ ಅವರನ್ನು ಗೌರವಿಸಲಾಯಿತು.<br /> <br /> ವಿಪ್ರ ಸಮಾಜದ ಮುಖಂಡರಾದ ಬಿ. ಗುಂಡಾಚಾರ್, ಜೆ. ರಾಮಮೂರ್ತಿ ಆಚಾರ್, ಭುಜಂಗರಾವ್, ಶಾಮಾಚಾರ್, ಗೋಪಾಲರಾವ್, ಎಚ್.ಕೆ. ಗೋಪಾಲರಾವ್, ಕೃಷ್ಣಮೂರ್ತಿ ಕುಲಕರ್ಣಿ, ಎಚ್.ಕೆ. ವಸುಧೇಂದ್ರರಾವ್ ಮತ್ತು ವೇಣುಗೋಪಾಲಸ್ವಾಮಿ ಸತ್ಸಂಗದ ಸದಸ್ಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ: ಪುರಂದರ ಸೇವಾ ಮಂಡಳಿ ವತಿಯಿಂದ ಹಂಪಿಯ ಪುರಂದರ ಮಂಟಪದಲ್ಲಿ ಸೋಮವಾರ ಪುರಂದರದಾಸರ ಆರಾಧನೋತ್ಸವ ಆಚರಿಸಲಾಯಿತು.<br /> ಆರಾಧನೋತ್ಸವದ ಪ್ರಯುಕ್ತ ಸಾಮೂಹಿಕ ಭಜನೆ, ಗೀತಗೋಷ್ಠಿ , ಕಾರ್ಯಕ್ರಮ ಏರ್ಪಡಿಸಲಾಗಿತ್ತು.<br /> <br /> ಕೋಟೆ ದತ್ತಮಂಡಳಿ: ಹೊಸಪೇಟೆಯ ಕೋಟೆ ದತ್ತ ಮಂಡಳಿ ಪುರಂದರರ ಆರಾಧನೋತ್ಸವ ಕಾರ್ಯಕ್ರಮವನ್ನು ಭಾವಚಿತ್ರ ಮೆರವಣಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೈಭವದಿಂದ ಆಚರಿಸಲಾಯಿತು.<br /> ಬೆಳಿಗ್ಗೆ ಧನ್ವಂತ್ರಿ ಹೋಮ, ವಿಶೇಷ ಪೂಜೆ ಮತ್ತು ಪುರಂದರರ ಗೀತಗಾಯನ, ಅನ್ನಸಂತರ್ಪಣೆ ನಡೆಯಿತು.<br /> ದಾಸ ಸಾಹಿತ್ಯ ಪ್ರವಚನ<br /> <br /> <strong>ಸಿರುಗುಪ್ಪ: </strong>ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಪ್ರ ಸಮಾಜದ ವತಿಯಿಂದ ಪುರಂದರ ದಾಸರ ಆರಾಧನಾ ಮಹೋತ್ಸವ ನಡೆಯಿತು. ಆರಾಧನೆ ಪ್ರಯುಕ್ತ ಬೆಂಗಳೂರಿನ ವಿದ್ವಾನ್ ಟಿ. ಮುರಳೀಧರ ಆಚಾರ್ ದಾಸ ಸಾಹಿತ್ಯ ಕುರಿತು ಪ್ರವಚನ ನೀಡಿದರು. <br /> <br /> ಪುರಂದರದಾಸರು ಜನರ ಮಾತನ್ನೇ ಸಾಹಿತ್ಯ ರೂಪಕ್ಕಿಳಿಸಿ ಸಂಗೀತದ ಮೆರಗು ಕೊಟ್ಟರು. ವ್ಯಾಸ-ದಾಸ ಸಾಹಿತ್ಯಗಳೆಂಬ ಎರಡು ದಾರಿಗಳು ಪರಮಾತ್ಮನನ್ನು ಹೊಂದಲು ಯೋಗ್ಯವಾಗಿವೆ ಎಂದು ತಿಳಿಸಿದರು.<br /> ದಾಸರ, ದೇವರನಾಮ ಸ್ಮರಣೆ, ಭಜನೆ ನಡೆದವು. ಇದೇ ಸಂದರ್ಭದಲ್ಲಿ ವಿದ್ವಾನ್ ಮುರಳೀಧರ ಆಚಾರ್ ಅವರನ್ನು ಗೌರವಿಸಲಾಯಿತು.<br /> <br /> ವಿಪ್ರ ಸಮಾಜದ ಮುಖಂಡರಾದ ಬಿ. ಗುಂಡಾಚಾರ್, ಜೆ. ರಾಮಮೂರ್ತಿ ಆಚಾರ್, ಭುಜಂಗರಾವ್, ಶಾಮಾಚಾರ್, ಗೋಪಾಲರಾವ್, ಎಚ್.ಕೆ. ಗೋಪಾಲರಾವ್, ಕೃಷ್ಣಮೂರ್ತಿ ಕುಲಕರ್ಣಿ, ಎಚ್.ಕೆ. ವಸುಧೇಂದ್ರರಾವ್ ಮತ್ತು ವೇಣುಗೋಪಾಲಸ್ವಾಮಿ ಸತ್ಸಂಗದ ಸದಸ್ಯರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>