<p><strong>ದಾವಣಗೆರೆ: </strong>ರಾಜ್ಯ ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ವತಿಯಿಂದ `ಸುವರ್ಣ ಕರ್ನಾಟಕ ಡಿಜಿಟಲ್ ಲೈಬ್ರರಿ ಯೋಜನೆ~ಯಡಿ ಒಂದು ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಣದ ಮೂಲಕ ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯಕ್ರಮ ನೆನೆಗುದಿಗೆ ಬಿದ್ದಿದೆ.<br /> <br /> `ಸುವರ್ಣ ಕರ್ನಾಟಕ~ ವರ್ಷಾಚರಣೆ ಹಿನ್ನೆಲೆಯಲ್ಲಿ 2006ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಪ್ರಪಂಚದಾದ್ಯಂತ ಕನ್ನಡ ಪುಸ್ತಕಗಳು ಓದುವುದಕ್ಕೆ ದೊರೆಯುವಂತಾಗಬೇಕು. <br /> <br /> ಇದಕ್ಕಾಗಿ ಅಂತರ್ಜಾಲದಲ್ಲಿ ಪುಸ್ತಕಗಳನ್ನು ಅಳವಡಿಸಬೇಕು ಎಂಬ ಮಹತ್ವದ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಒಂದು ವರ್ಷದ ಒಳಗೆ ಅಂತರ್ಜಾಲಕ್ಕೆ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸ್ದ್ದಿದರು. ಆದರೆ, ಐದು ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಂಡಿಲ್ಲ! <br /> ಪಿ.ವೈ. ರಾಜೇಂದ್ರಕುಮಾರ್ ಅವರು ಇಲಾಖೆಯ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿತ್ತು. ಅಮೆರಿಕಾದ ವಿಶ್ವವಿದ್ಯಾಲಯ ಒಂದರ ಸಹಯೋಗದಲ್ಲಿ ಅನುಷ್ಠಾನಕ್ಕೆ ಉದ್ದೇಶಿಸಲಾಗಿತ್ತು. <br /> <br /> ಬೆಂಗಳೂರಿನ ಪಶ್ಚಿಮ ಗ್ರಂಥಾಲಯ ಹಾಗೂ ಕಬ್ಬನ್ಪಾರ್ಕ್ನಲ್ಲಿರುವ ಗ್ರಂಥಾಲಯದಲ್ಲಿ ಈ ಸಂಬಂಧ ಚಟುವಟಿಕೆಗಳು ಆರಂಭವಾಗಿದ್ದವು. ಕೆಲ ತಿಂಗಳ ಕಾಲ ಈ ಗಣಕೀಕರಣ ಕಾರ್ಯ ನಡೆದಿತ್ತು. ಸುಮಾರು 36 ಸಾವಿರ ಪುಸ್ತಕಗಳ 49 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಿ, ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿತ್ತು. <br /> <br /> ಇದಕ್ಕಾಗಿ 26 ಕಂಪ್ಯೂಟರ್ಗಳು ಹಾಗೂ ರೂ 18 ಲಕ್ಷ ಮಾಲ್ಯದ 10 ಸ್ಕ್ಯಾನರ್ಗಳನ್ನು ಖರೀದಿಸಲಾಗಿತ್ತು. ಕೇಂದ್ರ ಸರ್ಕಾರದಿಂದಲೂ ಇದಕ್ಕಾಗಿ ನೆರವು ಪಡೆಯಲು ಉದ್ದೇಶಿಸಲಾಗಿತ್ತು. <br /> <br /> `ಗಣಕೀಕರಣ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಲ್ಲಿ ಒಂದು ಲಕ್ಷ ಪುಸ್ತಕಗಳನ್ನು ಪ್ರಪಂಚದ ಯಾವುದೇ ಭಾಗದವರು ಅಂತರ್ಜಾಲದಲ್ಲಿ ಓದಬಹುದಾಗಿತ್ತು. ಯೋಜನೆ ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ. <br /> <br /> ಯೋಜನೆಗಾಗಿ ಖರೀದಿಸಿದ ಸ್ಕ್ಯಾನರ್ಗಳು ದೂಳು ತಿನ್ನುತ್ತಿವೆ. ಉತ್ತಮ ಯೋಜನೆಯೊಂದು ಪೂರ್ಣಗೊಳ್ಳಲಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.<br /> ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ವೆಂಕಟೇಶ್, `ಈ ಸಂಬಂಧ ಒಂದಷ್ಟು ಕೆಲಸ ನಡೆದಿತ್ತು. ನಂತರ ಏನಾಗಿದೆ ಗೊತ್ತಿಲ್ಲ. <br /> <br /> ನಿರ್ದೇಶಕರ ಹಂತದಲ್ಲಿ ಪ್ರಕ್ರಿಯೆಗಳು ನಡೆಯುತ್ತವೆ. ಪ್ರಸ್ತುತ, ಪುಸ್ತಕಗಳ ಗಣಕೀಕರಣ ಕಾರ್ಯ ನಡೆಯುತ್ತಿಲ್ಲ~ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ರಾಜ್ಯ ಸಾರ್ವಜನಿಕ ಗ್ರಂಥಾಲಯಗಳ ಇಲಾಖೆ ವತಿಯಿಂದ `ಸುವರ್ಣ ಕರ್ನಾಟಕ ಡಿಜಿಟಲ್ ಲೈಬ್ರರಿ ಯೋಜನೆ~ಯಡಿ ಒಂದು ಲಕ್ಷ ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಣದ ಮೂಲಕ ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯಕ್ರಮ ನೆನೆಗುದಿಗೆ ಬಿದ್ದಿದೆ.<br /> <br /> `ಸುವರ್ಣ ಕರ್ನಾಟಕ~ ವರ್ಷಾಚರಣೆ ಹಿನ್ನೆಲೆಯಲ್ಲಿ 2006ರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಪ್ರಪಂಚದಾದ್ಯಂತ ಕನ್ನಡ ಪುಸ್ತಕಗಳು ಓದುವುದಕ್ಕೆ ದೊರೆಯುವಂತಾಗಬೇಕು. <br /> <br /> ಇದಕ್ಕಾಗಿ ಅಂತರ್ಜಾಲದಲ್ಲಿ ಪುಸ್ತಕಗಳನ್ನು ಅಳವಡಿಸಬೇಕು ಎಂಬ ಮಹತ್ವದ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಒಂದು ವರ್ಷದ ಒಳಗೆ ಅಂತರ್ಜಾಲಕ್ಕೆ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸ್ದ್ದಿದರು. ಆದರೆ, ಐದು ವರ್ಷ ಕಳೆದರೂ ಯೋಜನೆ ಅನುಷ್ಠಾನಗೊಂಡಿಲ್ಲ! <br /> ಪಿ.ವೈ. ರಾಜೇಂದ್ರಕುಮಾರ್ ಅವರು ಇಲಾಖೆಯ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿತ್ತು. ಅಮೆರಿಕಾದ ವಿಶ್ವವಿದ್ಯಾಲಯ ಒಂದರ ಸಹಯೋಗದಲ್ಲಿ ಅನುಷ್ಠಾನಕ್ಕೆ ಉದ್ದೇಶಿಸಲಾಗಿತ್ತು. <br /> <br /> ಬೆಂಗಳೂರಿನ ಪಶ್ಚಿಮ ಗ್ರಂಥಾಲಯ ಹಾಗೂ ಕಬ್ಬನ್ಪಾರ್ಕ್ನಲ್ಲಿರುವ ಗ್ರಂಥಾಲಯದಲ್ಲಿ ಈ ಸಂಬಂಧ ಚಟುವಟಿಕೆಗಳು ಆರಂಭವಾಗಿದ್ದವು. ಕೆಲ ತಿಂಗಳ ಕಾಲ ಈ ಗಣಕೀಕರಣ ಕಾರ್ಯ ನಡೆದಿತ್ತು. ಸುಮಾರು 36 ಸಾವಿರ ಪುಸ್ತಕಗಳ 49 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಿ, ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿತ್ತು. <br /> <br /> ಇದಕ್ಕಾಗಿ 26 ಕಂಪ್ಯೂಟರ್ಗಳು ಹಾಗೂ ರೂ 18 ಲಕ್ಷ ಮಾಲ್ಯದ 10 ಸ್ಕ್ಯಾನರ್ಗಳನ್ನು ಖರೀದಿಸಲಾಗಿತ್ತು. ಕೇಂದ್ರ ಸರ್ಕಾರದಿಂದಲೂ ಇದಕ್ಕಾಗಿ ನೆರವು ಪಡೆಯಲು ಉದ್ದೇಶಿಸಲಾಗಿತ್ತು. <br /> <br /> `ಗಣಕೀಕರಣ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡಲ್ಲಿ ಒಂದು ಲಕ್ಷ ಪುಸ್ತಕಗಳನ್ನು ಪ್ರಪಂಚದ ಯಾವುದೇ ಭಾಗದವರು ಅಂತರ್ಜಾಲದಲ್ಲಿ ಓದಬಹುದಾಗಿತ್ತು. ಯೋಜನೆ ಯಾವ ಹಂತದಲ್ಲಿದೆ ಎಂಬುದು ಗೊತ್ತಿಲ್ಲ. <br /> <br /> ಯೋಜನೆಗಾಗಿ ಖರೀದಿಸಿದ ಸ್ಕ್ಯಾನರ್ಗಳು ದೂಳು ತಿನ್ನುತ್ತಿವೆ. ಉತ್ತಮ ಯೋಜನೆಯೊಂದು ಪೂರ್ಣಗೊಳ್ಳಲಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.<br /> ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ವೆಂಕಟೇಶ್, `ಈ ಸಂಬಂಧ ಒಂದಷ್ಟು ಕೆಲಸ ನಡೆದಿತ್ತು. ನಂತರ ಏನಾಗಿದೆ ಗೊತ್ತಿಲ್ಲ. <br /> <br /> ನಿರ್ದೇಶಕರ ಹಂತದಲ್ಲಿ ಪ್ರಕ್ರಿಯೆಗಳು ನಡೆಯುತ್ತವೆ. ಪ್ರಸ್ತುತ, ಪುಸ್ತಕಗಳ ಗಣಕೀಕರಣ ಕಾರ್ಯ ನಡೆಯುತ್ತಿಲ್ಲ~ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>