<p>`ನೀವು ಪ್ರಚಾರಕ್ಕೆ ಬರುತ್ತಿಲ್ಲ ಎಂಬ ದೂರು ಬಂದಿದೆ ಎಂದು ನಿರ್ಮಾಪಕರ ಸಂಘದಿಂದ ಕರೆ ಬಂದಾಗ ಆಘಾತವಾಯಿತು. ನಟಿಯಾಗಿ ನನ್ನ ಚಿತ್ರಕ್ಕೆ ಎಂದಿಗೂ ಮೋಸ ಮಾಡಿಲ್ಲ. ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ಮಾಡಿದ್ದೇನೆ. ಈ ಘಟನೆ ನನಗೆ ತುಂಬಾ ನೋವುಂಟುಮಾಡಿದೆ~- ನಟಿ ಪೂಜಾ ಗಾಂಧಿ ಬೇಸರದಿಂದ ಹೇಳಿದರು.<br /> <br /> `ದೂರು ನೀಡಿಲ್ಲ. ನಿರ್ಮಾಪಕ ಮುನಿರತ್ನ ಅವರ ಬಳಿ ಪೂಜಾ ಗಾಂಧಿ ಅವರಿಗೆ ಒಂದು ಮಾತು ಹೇಳಿ ಎಂದು ಕೇಳಿದ್ದಷ್ಟೇ. ಇದು ತಪ್ಪು ಗ್ರಹಿಕೆಯಿಂದ ಆದ ಲೋಪವಷ್ಟೇ~- ನಿರ್ಮಾಪಕ ಮೇಜರ್ ಶ್ರೀನಿವಾಸ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.<br /> ಇಬ್ಬರ ಮಾತುಗಳಲ್ಲೂ ವೈರುಧ್ಯವಿತ್ತು. ಅದು ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದ ವಿವಾದ. <br /> <br /> `ಜೈಹಿಂದ್~ ಚಿತ್ರದ ಪ್ರಚಾರಕ್ಕೆ ಪೂಜಾಗಾಂಧಿ ಬಂದಿಲ್ಲ ಎಂದು ನಿರ್ಮಾಪಕ ಮೇಜರ್ ಶ್ರೀನಿವಾಸ್ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನೆತ್ತಿದಾಗ ಪೂಜಾಗಾಂಧಿ ಮತ್ತು ಶ್ರೀನಿವಾಸ ಪೂಜಾರಿ ಇಬ್ಬರೂ ನೀಡಿದ ಹೇಳಿಕೆಗಳು ತದ್ವಿರುದ್ಧವಾಗಿದ್ದವು. <br /> <br /> ದೂರೇ ನೀಡಿಲ್ಲ ಎನ್ನುವುದು ನಿರ್ಮಾಪಕರ ವಾದ. ದೂರು ನೀಡಲಾಗಿದೆ ಎಂಬುದು ನನಗೆ ತಿಳಿದ ವಿಚಾರ ಎನ್ನುವುದು ಪೂಜಾ ಗಾಂಧಿ ಪ್ರತಿವಾದ. ಇದು ವೇದಿಕೆಯ್ಲ್ಲಲಿ ದೊಡ್ಡದಾಗುವುದು ಬೇಡ ಎಂದು ತಣ್ಣಗಾಗಿಸುವ ಪ್ರಯತ್ನವನ್ನು ಇಬ್ಬರೂ ಮಾಡಿದರು.<br /> <br /> `ಪ್ರಚಾರಕ್ಕೆ ಪಾಲ್ಗೊಳ್ಳುವಂತೆ ಪೂಜಾಗಾಂಧಿ ಅವರಿಗೆ ಮೊಬೈಲ್ ಫೋನ್ನಲ್ಲಿ ಮೆಸೇಜ್ ಕಳುಹಿಸಲಾಗಿತ್ತು. ಆದರೆ ಅವರಿಗೆ ಮೆಸೇಜ್ ತಲುಪಿಲ್ಲ ಎನ್ನುವುದು ತಡವಾಗಿ ತಿಳಿಯಿತು. ಅವರಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನಿರ್ಮಾಪಕ ಮುನಿರತ್ನ ಅವರ ಬಳಿ ಹೇಳಲಾಯಿತು. ದೂರನ್ನೇನೂ ನೀಡಿಲ್ಲ.<br /> <br /> ಚಿಕ್ಕ ಗೊಂದಲದಿಂದ ಈ ವಿವಾದ ಸೃಷ್ಟಿಯಾಗಿದೆ ಹೊರತು ಬೇರೇನಿಲ್ಲ~ ಎಂದು ಸಮಜಾಯಿಷಿ ನೀಡಿದರು ಶ್ರೀನಿವಾಸ್.`ನಾನು ಕೇರಳದಲ್ಲಿ ಮಲಯಾಳಂ ಚಿತ್ರವೊಂದರ ಚಿತ್ರೀಕರಣದಲ್ಲಿದ್ದೆ. ನನ್ನ ಫೋನ್ ತಂದೆಯ ಬಳಿ ಇತ್ತು. ಚಿತ್ರತಂಡದಿಂದ ಯಾವ ಕರೆಯಾಗಲೀ ಅಥವಾ ಮೆಸೇಜ್ ಆಗಲೀ ಬಂದಿಲ್ಲ. ನಿರ್ಮಾಪಕರ ಸಂಘದಿಂದ ಕರೆ ಬಂದಾಗಲೇ ಈ ಬಗ್ಗೆ ಗೊತ್ತಾಗಿದ್ದು.<br /> <br /> ನನ್ನ ಎಲ್ಲಾ ಚಿತ್ರಗಳ ಪ್ರಚಾರದಲ್ಲೂ ಇದುವರೆಗೆ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ಹಾಗಿರುವಾಗ ಈ ರೀತಿ ಆರೋಪ ಬಂದಿದ್ದು ಬೇಸರ ತಂದಿದೆ ಎಂದ ಪೂಜಾಗಾಂಧಿ, ಈಗ ಇದೆಲ್ಲಾ ಬಗೆಹರಿದಿದೆ ಎಂದು ಚರ್ಚೆಗೆ ತಿಲಾಂಜಲಿ ಇಟ್ಟರು.ಆದರೂ ಇಬ್ಬರ ಮಾತಿನಲ್ಲೂ ಪರಸ್ಪರ ಅಸಮಾಧಾನ ಸಣ್ಣನೆ ವ್ಯಕ್ತವಾಗಿದ್ದು ಸ್ಪಷ್ಟವಾಗಿತ್ತು. <br /> <br /> ಅಂದಹಾಗೆ, ಪೂಜಾಗಾಂಧಿ `ದಂಡುಪಾಳ್ಯ~ದ ಯಶಸ್ಸಿನ ಗುಂಗಲ್ಲಿ ತೇಲಾಡುತ್ತಿದ್ದಾರೆ. ಮಹಿಳೆಯರು, ಕುಟುಂಬವಿಡೀ ಒಟ್ಟಿಗೆ ಕೂತು ನೋಡಲು ಹಿಂಜರಿಯುವಂತಹ ಸಿನಿಮಾವನ್ನು ಪೂಜಾ ಗಾಂಧಿ ಈಗಾಗಲೇ ಏಳು ಬಾರಿ ನೋಡಿದ್ದಾರಂತೆ. ಗೆಲುವನ್ನು ಮತ್ತೆ ಮತ್ತೆ ಆಸ್ವಾದಿಸುತ್ತಾ ಅವರು ಸಂಭ್ರಮಿಸುತ್ತಿದ್ದಾರೆ. `ದಂಡುಪಾಳ್ಯ~ದ ಗೆಲುವಿನ ಬೆನ್ನಲ್ಲಿ ಅದರ ಎರಡನೇ ಭಾಗದಲ್ಲೂ ನಟಿಸಲು ಅವರು ಹುಮ್ಮಸ್ಸಿನಿಂದ ಸಿದ್ಧರಾಗುತ್ತಿದ್ದಾರೆ. <br /> <br /> ಸಾಲು ಸಾಲು ಸೋಲಿನ ಬಳಿಕ ಭರ್ಜರಿ ಗೆಲುವು ದಕ್ಕಿದ ನಂತರ ಪೂಜಾ ಬದಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. `ಹೂವಿ~ ಚಿತ್ರದಿಂದ ಅವರು ಹೊರಬಂದಿದ್ದಾರೆ ಎಂಬ ಸುದ್ದಿಯೂ ಇತ್ತು. ಅದೆಲ್ಲಾ ಸುಳ್ಳು ಎಂದು ಪೂಜಾ ಹೇಳಿದ್ದಾರೆ. ಗೆಲುವು ಬೆನ್ನೇರುತ್ತಿದ್ದಂತೆ `ಮಳೆ ಹುಡುಗಿ~ ವಿವಾದದಲ್ಲಿ ನೆನೆಯುತ್ತಿರುವುದು ತುಸು ಜಾಸ್ತಿ ಆಗಿದೆ ಎನ್ನುವುದು ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತು.</p>.<p> <strong>ಚಿತ್ರಗಳು- ಕೆ.ಎನ್.ನಾಗೇಶ್ ಕುಮಾರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ನೀವು ಪ್ರಚಾರಕ್ಕೆ ಬರುತ್ತಿಲ್ಲ ಎಂಬ ದೂರು ಬಂದಿದೆ ಎಂದು ನಿರ್ಮಾಪಕರ ಸಂಘದಿಂದ ಕರೆ ಬಂದಾಗ ಆಘಾತವಾಯಿತು. ನಟಿಯಾಗಿ ನನ್ನ ಚಿತ್ರಕ್ಕೆ ಎಂದಿಗೂ ಮೋಸ ಮಾಡಿಲ್ಲ. ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ಮಾಡಿದ್ದೇನೆ. ಈ ಘಟನೆ ನನಗೆ ತುಂಬಾ ನೋವುಂಟುಮಾಡಿದೆ~- ನಟಿ ಪೂಜಾ ಗಾಂಧಿ ಬೇಸರದಿಂದ ಹೇಳಿದರು.<br /> <br /> `ದೂರು ನೀಡಿಲ್ಲ. ನಿರ್ಮಾಪಕ ಮುನಿರತ್ನ ಅವರ ಬಳಿ ಪೂಜಾ ಗಾಂಧಿ ಅವರಿಗೆ ಒಂದು ಮಾತು ಹೇಳಿ ಎಂದು ಕೇಳಿದ್ದಷ್ಟೇ. ಇದು ತಪ್ಪು ಗ್ರಹಿಕೆಯಿಂದ ಆದ ಲೋಪವಷ್ಟೇ~- ನಿರ್ಮಾಪಕ ಮೇಜರ್ ಶ್ರೀನಿವಾಸ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.<br /> ಇಬ್ಬರ ಮಾತುಗಳಲ್ಲೂ ವೈರುಧ್ಯವಿತ್ತು. ಅದು ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದ ವಿವಾದ. <br /> <br /> `ಜೈಹಿಂದ್~ ಚಿತ್ರದ ಪ್ರಚಾರಕ್ಕೆ ಪೂಜಾಗಾಂಧಿ ಬಂದಿಲ್ಲ ಎಂದು ನಿರ್ಮಾಪಕ ಮೇಜರ್ ಶ್ರೀನಿವಾಸ್ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದರು. ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನೆತ್ತಿದಾಗ ಪೂಜಾಗಾಂಧಿ ಮತ್ತು ಶ್ರೀನಿವಾಸ ಪೂಜಾರಿ ಇಬ್ಬರೂ ನೀಡಿದ ಹೇಳಿಕೆಗಳು ತದ್ವಿರುದ್ಧವಾಗಿದ್ದವು. <br /> <br /> ದೂರೇ ನೀಡಿಲ್ಲ ಎನ್ನುವುದು ನಿರ್ಮಾಪಕರ ವಾದ. ದೂರು ನೀಡಲಾಗಿದೆ ಎಂಬುದು ನನಗೆ ತಿಳಿದ ವಿಚಾರ ಎನ್ನುವುದು ಪೂಜಾ ಗಾಂಧಿ ಪ್ರತಿವಾದ. ಇದು ವೇದಿಕೆಯ್ಲ್ಲಲಿ ದೊಡ್ಡದಾಗುವುದು ಬೇಡ ಎಂದು ತಣ್ಣಗಾಗಿಸುವ ಪ್ರಯತ್ನವನ್ನು ಇಬ್ಬರೂ ಮಾಡಿದರು.<br /> <br /> `ಪ್ರಚಾರಕ್ಕೆ ಪಾಲ್ಗೊಳ್ಳುವಂತೆ ಪೂಜಾಗಾಂಧಿ ಅವರಿಗೆ ಮೊಬೈಲ್ ಫೋನ್ನಲ್ಲಿ ಮೆಸೇಜ್ ಕಳುಹಿಸಲಾಗಿತ್ತು. ಆದರೆ ಅವರಿಗೆ ಮೆಸೇಜ್ ತಲುಪಿಲ್ಲ ಎನ್ನುವುದು ತಡವಾಗಿ ತಿಳಿಯಿತು. ಅವರಿಂದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ನಿರ್ಮಾಪಕ ಮುನಿರತ್ನ ಅವರ ಬಳಿ ಹೇಳಲಾಯಿತು. ದೂರನ್ನೇನೂ ನೀಡಿಲ್ಲ.<br /> <br /> ಚಿಕ್ಕ ಗೊಂದಲದಿಂದ ಈ ವಿವಾದ ಸೃಷ್ಟಿಯಾಗಿದೆ ಹೊರತು ಬೇರೇನಿಲ್ಲ~ ಎಂದು ಸಮಜಾಯಿಷಿ ನೀಡಿದರು ಶ್ರೀನಿವಾಸ್.`ನಾನು ಕೇರಳದಲ್ಲಿ ಮಲಯಾಳಂ ಚಿತ್ರವೊಂದರ ಚಿತ್ರೀಕರಣದಲ್ಲಿದ್ದೆ. ನನ್ನ ಫೋನ್ ತಂದೆಯ ಬಳಿ ಇತ್ತು. ಚಿತ್ರತಂಡದಿಂದ ಯಾವ ಕರೆಯಾಗಲೀ ಅಥವಾ ಮೆಸೇಜ್ ಆಗಲೀ ಬಂದಿಲ್ಲ. ನಿರ್ಮಾಪಕರ ಸಂಘದಿಂದ ಕರೆ ಬಂದಾಗಲೇ ಈ ಬಗ್ಗೆ ಗೊತ್ತಾಗಿದ್ದು.<br /> <br /> ನನ್ನ ಎಲ್ಲಾ ಚಿತ್ರಗಳ ಪ್ರಚಾರದಲ್ಲೂ ಇದುವರೆಗೆ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ಹಾಗಿರುವಾಗ ಈ ರೀತಿ ಆರೋಪ ಬಂದಿದ್ದು ಬೇಸರ ತಂದಿದೆ ಎಂದ ಪೂಜಾಗಾಂಧಿ, ಈಗ ಇದೆಲ್ಲಾ ಬಗೆಹರಿದಿದೆ ಎಂದು ಚರ್ಚೆಗೆ ತಿಲಾಂಜಲಿ ಇಟ್ಟರು.ಆದರೂ ಇಬ್ಬರ ಮಾತಿನಲ್ಲೂ ಪರಸ್ಪರ ಅಸಮಾಧಾನ ಸಣ್ಣನೆ ವ್ಯಕ್ತವಾಗಿದ್ದು ಸ್ಪಷ್ಟವಾಗಿತ್ತು. <br /> <br /> ಅಂದಹಾಗೆ, ಪೂಜಾಗಾಂಧಿ `ದಂಡುಪಾಳ್ಯ~ದ ಯಶಸ್ಸಿನ ಗುಂಗಲ್ಲಿ ತೇಲಾಡುತ್ತಿದ್ದಾರೆ. ಮಹಿಳೆಯರು, ಕುಟುಂಬವಿಡೀ ಒಟ್ಟಿಗೆ ಕೂತು ನೋಡಲು ಹಿಂಜರಿಯುವಂತಹ ಸಿನಿಮಾವನ್ನು ಪೂಜಾ ಗಾಂಧಿ ಈಗಾಗಲೇ ಏಳು ಬಾರಿ ನೋಡಿದ್ದಾರಂತೆ. ಗೆಲುವನ್ನು ಮತ್ತೆ ಮತ್ತೆ ಆಸ್ವಾದಿಸುತ್ತಾ ಅವರು ಸಂಭ್ರಮಿಸುತ್ತಿದ್ದಾರೆ. `ದಂಡುಪಾಳ್ಯ~ದ ಗೆಲುವಿನ ಬೆನ್ನಲ್ಲಿ ಅದರ ಎರಡನೇ ಭಾಗದಲ್ಲೂ ನಟಿಸಲು ಅವರು ಹುಮ್ಮಸ್ಸಿನಿಂದ ಸಿದ್ಧರಾಗುತ್ತಿದ್ದಾರೆ. <br /> <br /> ಸಾಲು ಸಾಲು ಸೋಲಿನ ಬಳಿಕ ಭರ್ಜರಿ ಗೆಲುವು ದಕ್ಕಿದ ನಂತರ ಪೂಜಾ ಬದಲಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. `ಹೂವಿ~ ಚಿತ್ರದಿಂದ ಅವರು ಹೊರಬಂದಿದ್ದಾರೆ ಎಂಬ ಸುದ್ದಿಯೂ ಇತ್ತು. ಅದೆಲ್ಲಾ ಸುಳ್ಳು ಎಂದು ಪೂಜಾ ಹೇಳಿದ್ದಾರೆ. ಗೆಲುವು ಬೆನ್ನೇರುತ್ತಿದ್ದಂತೆ `ಮಳೆ ಹುಡುಗಿ~ ವಿವಾದದಲ್ಲಿ ನೆನೆಯುತ್ತಿರುವುದು ತುಸು ಜಾಸ್ತಿ ಆಗಿದೆ ಎನ್ನುವುದು ಚಿತ್ರರಂಗದಲ್ಲಿ ಕೇಳಿಬರುತ್ತಿರುವ ಮಾತು.</p>.<p> <strong>ಚಿತ್ರಗಳು- ಕೆ.ಎನ್.ನಾಗೇಶ್ ಕುಮಾರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>