<p><strong>ಮಂಗಳವಾರ, 4-6-1963<br /> <br /> ಪೋಪ್ ಜಾನ್ ನಿಧನ</strong><br /> ವಾಟಿಕನ್. ಜೂನ್ 3 - ನಾಲ್ಕು ದಿನಗಳಿಂದ ಸಾವು ಬದುಕಿನ ಹೋರಾಟದಲ್ಲಿ ತುಯ್ದಾಡುತ್ತಿದ್ದ ಪೋಪ್ಜಾನ್ರು ಇಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.<br /> <br /> ಹೊಟ್ಟೆಯಲ್ಲಿ ದುರ್ಮಾಂಸ ಬೆಳವಣಿಗೆಯೊಂದರ ಫಲವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅಸ್ವಸ್ಥರಾಗಿದ್ದ ಪೋಪ್ರ ಸ್ಥಿತಿ ಕಳೆದ ಶುಕ್ರವಾರದಿಂದ ಉಲ್ಬಣಗೊಂಡಿತ್ತು.<br /> <br /> <strong>ವಿಮಾನ ಅಪಘಾತ;29 ಮಂದಿ ಸಾವು</strong><br /> ನವದೆಹಲಿ, ಜೂನ್ 3 - ಪಠಾಣ್ ಕೋಟ್ ಬಳಿ ಇಂದು ಇಂಡಿಯನ್ ಏರ್ಲೈನ್ನ ಕಾರ್ಪೊರೇಷನ್ ವಿಮಾನವೊಂದು ಕೆಳಕ್ಕೆ ಬಿದ್ದು ಅದರಲ್ಲಿದ್ದ 29 ಮಂದಿ ಸಾವಿಗೀಡಾದರು.<br /> <br /> <strong>ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಗಳ ತಡೆಗೆ ಒತ್ತಾಯ: ದೆಹಲಿಗೆ ಪತ್ರ</strong><br /> ಬೆಂಗಳೂರು, ಜೂನ್ 3 - ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚುನಾವಣೆಗಳನ್ನು ತತ್ಕ್ಷಣ ನಿಲ್ಲಿಸಿ, ನಿಷ್ಪಕ್ಷಪಾತವಾದ ವಿಚಾರಣೆಗೆ ಆಜ್ಞೆ ಮಾಡಬೇಕೆಂದು ರಾಜ್ಯದ ಕೆಲವು ಕಾಂಗ್ರೆಸ್ ಪ್ರಮುಖರು ಎ.ಐ.ಸಿ.ಸಿ.ಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳವಾರ, 4-6-1963<br /> <br /> ಪೋಪ್ ಜಾನ್ ನಿಧನ</strong><br /> ವಾಟಿಕನ್. ಜೂನ್ 3 - ನಾಲ್ಕು ದಿನಗಳಿಂದ ಸಾವು ಬದುಕಿನ ಹೋರಾಟದಲ್ಲಿ ತುಯ್ದಾಡುತ್ತಿದ್ದ ಪೋಪ್ಜಾನ್ರು ಇಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.<br /> <br /> ಹೊಟ್ಟೆಯಲ್ಲಿ ದುರ್ಮಾಂಸ ಬೆಳವಣಿಗೆಯೊಂದರ ಫಲವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅಸ್ವಸ್ಥರಾಗಿದ್ದ ಪೋಪ್ರ ಸ್ಥಿತಿ ಕಳೆದ ಶುಕ್ರವಾರದಿಂದ ಉಲ್ಬಣಗೊಂಡಿತ್ತು.<br /> <br /> <strong>ವಿಮಾನ ಅಪಘಾತ;29 ಮಂದಿ ಸಾವು</strong><br /> ನವದೆಹಲಿ, ಜೂನ್ 3 - ಪಠಾಣ್ ಕೋಟ್ ಬಳಿ ಇಂದು ಇಂಡಿಯನ್ ಏರ್ಲೈನ್ನ ಕಾರ್ಪೊರೇಷನ್ ವಿಮಾನವೊಂದು ಕೆಳಕ್ಕೆ ಬಿದ್ದು ಅದರಲ್ಲಿದ್ದ 29 ಮಂದಿ ಸಾವಿಗೀಡಾದರು.<br /> <br /> <strong>ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಗಳ ತಡೆಗೆ ಒತ್ತಾಯ: ದೆಹಲಿಗೆ ಪತ್ರ</strong><br /> ಬೆಂಗಳೂರು, ಜೂನ್ 3 - ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚುನಾವಣೆಗಳನ್ನು ತತ್ಕ್ಷಣ ನಿಲ್ಲಿಸಿ, ನಿಷ್ಪಕ್ಷಪಾತವಾದ ವಿಚಾರಣೆಗೆ ಆಜ್ಞೆ ಮಾಡಬೇಕೆಂದು ರಾಜ್ಯದ ಕೆಲವು ಕಾಂಗ್ರೆಸ್ ಪ್ರಮುಖರು ಎ.ಐ.ಸಿ.ಸಿ.ಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>