<p><strong>ಕೊಳ್ಳೇಗಾಲ: </strong>`ದೇಶದಲ್ಲಿ ಪೋಲಿಯೊ ನಿರ್ಮೂಲನೆ ರೋಟರಿಯ ಮಹಾನ್ ಸಾಧನೆ' ಎಂದು ರೋಟರಿ ಮಾಜಿ ಗವರ್ನರ್ ಲಕ್ಷ್ಮೀನಾರಾಯಣ್ ತಿಳಿಸಿದರು.<br /> <br /> ವಾಸವಿ ಮಹಲ್ನಲ್ಲಿ ರೋಟರಿ ಸಂಸ್ಥೆ ಮತ್ತು ಇನ್ನರ್ವೀಲ್ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಸಮುದಾಯದ ಅಗತ್ಯತೆಗಳನ್ನು ಮೊದಲು ಕಂಡುಕೊಂಡು, ನಂತರ ಅವುಗಳನ್ನು ಪೂರೈಸಲು ತಮ್ಮ ಮಾನವಶಕ್ತಿ ಹಾಗೂ ಭೌತಿಕ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ರೋಟರಿ ಕ್ಲಬ್ಗಳು ನಿರ್ಧರಿಸಲಿವೆ ಎಂದರು.<br /> <br /> ನಾವೆಲ್ಲ ರೋಟರಿಗೆ ಸೇರಿರುವುದು ಕ್ರಿಯಾಶೀಲರಾಗಿ, ಬದುಕಿನಲ್ಲಿ ಬದಲಾವಣೆ ತರುವುದಕ್ಕಾಗಿ. ರೋಟರಿ ಸೇವೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಹೆಜ್ಜೆ ಇಡಬೇಕಿದೆ ಎಂದರು.<br /> <br /> <strong>ಅಧ್ಯಕ್ಷರ ಆಯ್ಕೆ</strong><br /> ಇನ್ನರ್ವೀಲ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣವನ್ನು ಮಾಜಿ ಅಧ್ಯಕ್ಷೆ ಇಂದ್ರಾಣಿ ನಾಯ್ಡು ಪ್ರತಿಷ್ಠಾಪಿಸಿದರು.<br /> ಇನ್ನರ್ವೀಲ್ ನೂತನ ಅಧ್ಯಕ್ಷರಾಗಿ ಗೀತಾಂಜಲಿ ಅವರು ಮಾಜಿ ಅಧ್ಯಕ್ಷೆ ಕರುಣಾಶ್ರೀ ಕಿರಣ್ ಅವರಿಂದ ಅಧಿಕಾರ ವಹಿಸಿಕೊಂಡರು. ರೋಟರಿ ನೂತನ ಅಧ್ಯಕ್ಷರಾಗಿ ಬಿ.ಕೆ. ಪ್ರಕಾಶ್ ಅವರು ಮಾಜಿ ಅಧ್ಯಕ್ಷ ದಿನೇಶ್ಗುಪ್ತ ಅವರಿಂದ ಅಧಿಕಾರ ವಹಿಸಿಕೊಂಡರು.<br /> <br /> ಪರಿಸರ ಅರಿವು ಜಾಗೃತಿ ಅಂಗವಾಗಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು..<br /> <br /> ಅಸಿಸ್ಟೆಂಟ್ ಗವರ್ನರ್ ಕೆ.ಎಸ್. ಜಗದೀಶ್ ರೋಟರಿ ವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.<br /> ಜೋನಲ್ ಲೆಫ್ಟಿನೆಂಟ್ ಎಂ. ನಂಜುಂಡಯ್ಯ, ಕೆ. ಪುಟ್ಟರಸಶೆಟ್ಟಿ, ನರೇಂದ್ರನಾಥ್, ಕುಮಾರಸ್ವಾಮಿ, ಪಿ. ಈಶ್ವರ್, ಪದ್ಮ ಅನಂತ್, ಪಂಕಜಾ ಶಿವಕುಮಾರ್, ಶೈಲಜಾ ವೀರಭದ್ರಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ: </strong>`ದೇಶದಲ್ಲಿ ಪೋಲಿಯೊ ನಿರ್ಮೂಲನೆ ರೋಟರಿಯ ಮಹಾನ್ ಸಾಧನೆ' ಎಂದು ರೋಟರಿ ಮಾಜಿ ಗವರ್ನರ್ ಲಕ್ಷ್ಮೀನಾರಾಯಣ್ ತಿಳಿಸಿದರು.<br /> <br /> ವಾಸವಿ ಮಹಲ್ನಲ್ಲಿ ರೋಟರಿ ಸಂಸ್ಥೆ ಮತ್ತು ಇನ್ನರ್ವೀಲ್ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಸಮುದಾಯದ ಅಗತ್ಯತೆಗಳನ್ನು ಮೊದಲು ಕಂಡುಕೊಂಡು, ನಂತರ ಅವುಗಳನ್ನು ಪೂರೈಸಲು ತಮ್ಮ ಮಾನವಶಕ್ತಿ ಹಾಗೂ ಭೌತಿಕ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಎಂಬುದನ್ನು ರೋಟರಿ ಕ್ಲಬ್ಗಳು ನಿರ್ಧರಿಸಲಿವೆ ಎಂದರು.<br /> <br /> ನಾವೆಲ್ಲ ರೋಟರಿಗೆ ಸೇರಿರುವುದು ಕ್ರಿಯಾಶೀಲರಾಗಿ, ಬದುಕಿನಲ್ಲಿ ಬದಲಾವಣೆ ತರುವುದಕ್ಕಾಗಿ. ರೋಟರಿ ಸೇವೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಹೆಜ್ಜೆ ಇಡಬೇಕಿದೆ ಎಂದರು.<br /> <br /> <strong>ಅಧ್ಯಕ್ಷರ ಆಯ್ಕೆ</strong><br /> ಇನ್ನರ್ವೀಲ್ ಸಂಸ್ಥೆ ಪದಾಧಿಕಾರಿಗಳ ಪದಗ್ರಹಣವನ್ನು ಮಾಜಿ ಅಧ್ಯಕ್ಷೆ ಇಂದ್ರಾಣಿ ನಾಯ್ಡು ಪ್ರತಿಷ್ಠಾಪಿಸಿದರು.<br /> ಇನ್ನರ್ವೀಲ್ ನೂತನ ಅಧ್ಯಕ್ಷರಾಗಿ ಗೀತಾಂಜಲಿ ಅವರು ಮಾಜಿ ಅಧ್ಯಕ್ಷೆ ಕರುಣಾಶ್ರೀ ಕಿರಣ್ ಅವರಿಂದ ಅಧಿಕಾರ ವಹಿಸಿಕೊಂಡರು. ರೋಟರಿ ನೂತನ ಅಧ್ಯಕ್ಷರಾಗಿ ಬಿ.ಕೆ. ಪ್ರಕಾಶ್ ಅವರು ಮಾಜಿ ಅಧ್ಯಕ್ಷ ದಿನೇಶ್ಗುಪ್ತ ಅವರಿಂದ ಅಧಿಕಾರ ವಹಿಸಿಕೊಂಡರು.<br /> <br /> ಪರಿಸರ ಅರಿವು ಜಾಗೃತಿ ಅಂಗವಾಗಿ ಏರ್ಪಡಿಸಿದ್ದ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು..<br /> <br /> ಅಸಿಸ್ಟೆಂಟ್ ಗವರ್ನರ್ ಕೆ.ಎಸ್. ಜಗದೀಶ್ ರೋಟರಿ ವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು.<br /> ಜೋನಲ್ ಲೆಫ್ಟಿನೆಂಟ್ ಎಂ. ನಂಜುಂಡಯ್ಯ, ಕೆ. ಪುಟ್ಟರಸಶೆಟ್ಟಿ, ನರೇಂದ್ರನಾಥ್, ಕುಮಾರಸ್ವಾಮಿ, ಪಿ. ಈಶ್ವರ್, ಪದ್ಮ ಅನಂತ್, ಪಂಕಜಾ ಶಿವಕುಮಾರ್, ಶೈಲಜಾ ವೀರಭದ್ರಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>