<p><strong>ಭದ್ರಾವತಿ: </strong>ಪರೀಕ್ಷೆ ಸಮಯಕ್ಕೆ ಶಾರದಾ ಪೂಜೆ ನಡೆಸಿ ಕೋಸಂಬರಿ, ಪಾನಕ ನೀಡುವ ಮೂಲಕ ಮಕ್ಕಳಿಗೆ ಶುಭ ಹಾರೈಸುವುದು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಪದ್ಧತಿ. ಆದರೆ, ಇದಕ್ಕೆ ಹೊರತಾಗಿ ಇಲ್ಲಿನ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಪೋಷಕರ ಪಾದಪೂಜೆಗೆ ಮುಂದಾಗಿದ್ದು ವಿಶೇಷ.<br /> <br /> ಹೌದು! -ಇದು ಆಶ್ಚರ್ಯವಾದರು ಸತ್ಯ. ಶುಕ್ರವಾರ ಇಲ್ಲಿನ ಸಭಾಂಗಣದಲ್ಲಿ ಶಾರದಾಪೂಜೆ ಉತ್ಸವ, ಅದರ ನಂತರ ಕುರ್ಚಿಯಲ್ಲಿ ಸಾಲಾಗಿ ಕುಳಿತ ತಂದೆ, ತಾಯಿ ಅವರ ಮುಂದಿದ್ದ ಮಕ್ಕಳ ಕೈಯಲ್ಲಿ ಅರಿಷಿಣ, ಕುಂಕುಮ, ಹೂವು ಹಾಗೂ ತಾಂಬೂಲದ ತಟ್ಟೆ. <br /> <br /> ವೇದಿಕೆಯ ಮಂತ್ರೋಚ್ಛಾರಣೆಗೆ ತಕ್ಕಂತೆ ಮಕ್ಕಳು ಪೋಷಕರ ಕಾಲು ತೊಳೆದು, ಅರಷಿಣ-ಕುಂಕುಮ, ಹೂವು ಇಟ್ಟು, ಮಂಗಳಾರತಿ ಬೆಳಗಿ, ಕಾಲುಮುಟ್ಟಿ ನಮಸ್ಕರಿಸಿ, ಅವರನ್ನು ತಾಂಬೂಲ ನೀಡಿ ಎಬ್ಬಿಸುವ ಮನ ತುಂಬಿದ ಸಂದರ್ಭ ನಡೆದದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಂದ. <br /> <br /> ಈ ಅಭೂತಪೂರ್ವ ಸನ್ನಿವೇಶ ಸೃಷ್ಟಿ ಮಾಡಿದ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ವಿಐಎಸ್ಎಲ್ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ `ಮಕ್ಕಳಲ್ಲಿ ಆತ್ಮವಿಶ್ವಾಸದ ಬದುಕನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಹಿರಿದು. ಇದಕ್ಕೆ ಗೌರವ ನೀಡುವ ರೀತಿಯನ್ನು ಈ ಕಾರ್ಯಕ್ರಮ ಒದಗಿಸಿ ಪರೀಕ್ಷಾರ್ಥಿಗಳ ಸ್ಥೈರ್ಯ ಹೆಚ್ಚಿಸಿದೆ~ ಎಂದು ಪ್ರಶಂಸಿಸಿದರು.<br /> <br /> ಶಿವಮೊಗ್ಗ-ಚಿಕ್ಕಮಗಳೂರು ರಾಮಕೃಷ್ಣಾಶ್ರಮದ ಧೀರಾನಂದಾಜಿ ಸ್ವಾಮೀಜಿ ಮಾತನಾಡಿ, `ಸಾಧಿಸಬೇಕೆಂಬ ಛಲವಿದ್ದಾಗ ಎಲ್ಲವನ್ನೂ ಗೆಲ್ಲಬಹುದು. ವಿದ್ಯೆ ಎಂಬ ವಸ್ತು ರಾಜ್ಯಾಧಿಕಾರಕ್ಕಿಂತ ದೊಡ್ಡದು ಎಂಬಂತೆ ತಂದೆ-ತಾಯಿ ಆಶೀರ್ವಾದ ಇದ್ದಲ್ಲಿ ಎಲ್ಲವನ್ನು ಸಾಧಿಸಬಹುದು~ ಎಂದರು.<br /> <br /> ದೃಶ್ಯ ಮಾಧ್ಯಮಗಳು 16ರಿಂದ 30ವರ್ಷ ವಯೋಮಿತಿಯ ಯುವಕರನ್ನು ನಿರ್ಲಜ್ಜರನ್ನಾಗಿ ಮಾಡಿದೆ. ಇದರಿಂದ ಹೊರ ಬರಲು ಆಧ್ಯಾತ್ಮಿಕ ಚಿಂತನೆ, ಧ್ಯಾನ, ಸಾಧಿಸಬೇಕೆಂಬ ಮನೋಭಾವ ಬರಬೇಕು. ಅದಕ್ಕೆ ಪೂರಕ ಇಂತಹ ಕಾರ್ಯಕ್ರಮ ಎಂದರು.<br /> <br /> ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಬೀರಯ್ಯ, ಚೀಲೂರಪ್ಪ, ದೇವೇಂದ್ರಪ್ಪ, ಪ್ರಾಂಶುಪಾಲರಾದ ಶಾಮಚಾರ್, ಪರಮೇಶ್ವರಪ್ಪ, ಪ್ರಸನ್ನ ಸೇರಿದಂತೆ ಹಲವರು ಹಾಜರಿದ್ದರು. ಒಟ್ಟಿನಲ್ಲಿ ಹಲವು ಆಧುನಿಕ ಮಜಲುಗಳ ನಡುವೆಯೂ ಸಹ ತಂದೆ-ತಾಯಿಯರ ಪ್ರೀತಿಗೆ ನೀಡಬೇಕಾದ ಗೌರವವನ್ನು ತೋರಿಸಿಕೊಟ್ಟ ಈ ಕಾರ್ಯಕ್ರಮ ಅಲ್ಲಿ ನೆರೆದಿದ್ದ ಹಲವು ಮಂದಿ ಹಿರಿಕರ ಕಣ್ಣಂಚಲ್ಲಿ ನೀರಿನ ಹನಿ ಮೂಡಿಸಿದ್ದು ಮಾತ್ರ ಸತ್ಯ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>ಪರೀಕ್ಷೆ ಸಮಯಕ್ಕೆ ಶಾರದಾ ಪೂಜೆ ನಡೆಸಿ ಕೋಸಂಬರಿ, ಪಾನಕ ನೀಡುವ ಮೂಲಕ ಮಕ್ಕಳಿಗೆ ಶುಭ ಹಾರೈಸುವುದು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿನ ಪದ್ಧತಿ. ಆದರೆ, ಇದಕ್ಕೆ ಹೊರತಾಗಿ ಇಲ್ಲಿನ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಪೋಷಕರ ಪಾದಪೂಜೆಗೆ ಮುಂದಾಗಿದ್ದು ವಿಶೇಷ.<br /> <br /> ಹೌದು! -ಇದು ಆಶ್ಚರ್ಯವಾದರು ಸತ್ಯ. ಶುಕ್ರವಾರ ಇಲ್ಲಿನ ಸಭಾಂಗಣದಲ್ಲಿ ಶಾರದಾಪೂಜೆ ಉತ್ಸವ, ಅದರ ನಂತರ ಕುರ್ಚಿಯಲ್ಲಿ ಸಾಲಾಗಿ ಕುಳಿತ ತಂದೆ, ತಾಯಿ ಅವರ ಮುಂದಿದ್ದ ಮಕ್ಕಳ ಕೈಯಲ್ಲಿ ಅರಿಷಿಣ, ಕುಂಕುಮ, ಹೂವು ಹಾಗೂ ತಾಂಬೂಲದ ತಟ್ಟೆ. <br /> <br /> ವೇದಿಕೆಯ ಮಂತ್ರೋಚ್ಛಾರಣೆಗೆ ತಕ್ಕಂತೆ ಮಕ್ಕಳು ಪೋಷಕರ ಕಾಲು ತೊಳೆದು, ಅರಷಿಣ-ಕುಂಕುಮ, ಹೂವು ಇಟ್ಟು, ಮಂಗಳಾರತಿ ಬೆಳಗಿ, ಕಾಲುಮುಟ್ಟಿ ನಮಸ್ಕರಿಸಿ, ಅವರನ್ನು ತಾಂಬೂಲ ನೀಡಿ ಎಬ್ಬಿಸುವ ಮನ ತುಂಬಿದ ಸಂದರ್ಭ ನಡೆದದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಂದ. <br /> <br /> ಈ ಅಭೂತಪೂರ್ವ ಸನ್ನಿವೇಶ ಸೃಷ್ಟಿ ಮಾಡಿದ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ವಿಐಎಸ್ಎಲ್ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ `ಮಕ್ಕಳಲ್ಲಿ ಆತ್ಮವಿಶ್ವಾಸದ ಬದುಕನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಹಿರಿದು. ಇದಕ್ಕೆ ಗೌರವ ನೀಡುವ ರೀತಿಯನ್ನು ಈ ಕಾರ್ಯಕ್ರಮ ಒದಗಿಸಿ ಪರೀಕ್ಷಾರ್ಥಿಗಳ ಸ್ಥೈರ್ಯ ಹೆಚ್ಚಿಸಿದೆ~ ಎಂದು ಪ್ರಶಂಸಿಸಿದರು.<br /> <br /> ಶಿವಮೊಗ್ಗ-ಚಿಕ್ಕಮಗಳೂರು ರಾಮಕೃಷ್ಣಾಶ್ರಮದ ಧೀರಾನಂದಾಜಿ ಸ್ವಾಮೀಜಿ ಮಾತನಾಡಿ, `ಸಾಧಿಸಬೇಕೆಂಬ ಛಲವಿದ್ದಾಗ ಎಲ್ಲವನ್ನೂ ಗೆಲ್ಲಬಹುದು. ವಿದ್ಯೆ ಎಂಬ ವಸ್ತು ರಾಜ್ಯಾಧಿಕಾರಕ್ಕಿಂತ ದೊಡ್ಡದು ಎಂಬಂತೆ ತಂದೆ-ತಾಯಿ ಆಶೀರ್ವಾದ ಇದ್ದಲ್ಲಿ ಎಲ್ಲವನ್ನು ಸಾಧಿಸಬಹುದು~ ಎಂದರು.<br /> <br /> ದೃಶ್ಯ ಮಾಧ್ಯಮಗಳು 16ರಿಂದ 30ವರ್ಷ ವಯೋಮಿತಿಯ ಯುವಕರನ್ನು ನಿರ್ಲಜ್ಜರನ್ನಾಗಿ ಮಾಡಿದೆ. ಇದರಿಂದ ಹೊರ ಬರಲು ಆಧ್ಯಾತ್ಮಿಕ ಚಿಂತನೆ, ಧ್ಯಾನ, ಸಾಧಿಸಬೇಕೆಂಬ ಮನೋಭಾವ ಬರಬೇಕು. ಅದಕ್ಕೆ ಪೂರಕ ಇಂತಹ ಕಾರ್ಯಕ್ರಮ ಎಂದರು.<br /> <br /> ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಬೀರಯ್ಯ, ಚೀಲೂರಪ್ಪ, ದೇವೇಂದ್ರಪ್ಪ, ಪ್ರಾಂಶುಪಾಲರಾದ ಶಾಮಚಾರ್, ಪರಮೇಶ್ವರಪ್ಪ, ಪ್ರಸನ್ನ ಸೇರಿದಂತೆ ಹಲವರು ಹಾಜರಿದ್ದರು. ಒಟ್ಟಿನಲ್ಲಿ ಹಲವು ಆಧುನಿಕ ಮಜಲುಗಳ ನಡುವೆಯೂ ಸಹ ತಂದೆ-ತಾಯಿಯರ ಪ್ರೀತಿಗೆ ನೀಡಬೇಕಾದ ಗೌರವವನ್ನು ತೋರಿಸಿಕೊಟ್ಟ ಈ ಕಾರ್ಯಕ್ರಮ ಅಲ್ಲಿ ನೆರೆದಿದ್ದ ಹಲವು ಮಂದಿ ಹಿರಿಕರ ಕಣ್ಣಂಚಲ್ಲಿ ನೀರಿನ ಹನಿ ಮೂಡಿಸಿದ್ದು ಮಾತ್ರ ಸತ್ಯ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>