<p><strong>ನವದೆಹಲಿ(ಪಿಟಿಐ): </strong>`ಹಣಕಾಸು ಸಚಿವನಾಗಿ ಮಂಗಳವಾರ ನನ್ನ ಕೊನೆಯ ಸಂದೇಶ ನೀಡುವೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.</p>.<p>ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು 24 ಗಂಟೆಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಸೋಮವಾರ ಇಲ್ಲಿ ವರದಿಗಾರರು ಅವರನ್ನು ಸುತ್ತುವರೆದಾಗ ಪ್ರಣವ್ ಮೇಲಿನಂತೆ ಉತ್ತರಿಸಿದರು.</p>.<p>ನಾರ್ಥ್ ಬ್ಲಾಕ್ನಲ್ಲಿರುವ ಪ್ರಣವ್ ಅವರ ಕಚೇರಿ ಹೊರಗೆ ಸದಾ ದೇಶದ ಆರ್ಥಿಕ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ಪಡೆಯಲು ನಿಲ್ಲುತ್ತಿದ್ದ ಸುದ್ದಿಗಾರರನ್ನು ಅವರು ಯಾವತ್ತೂ ನಿರಾಶೆ ಗೊಳಿಸುತ್ತಿರಲಿಲ್ಲ. ಆದರೆ, ಸೋಮವಾರ ಬೆಳಿಗ್ಗೆ ಪ್ರತಿಕ್ರಿಯೆಗಾಗಿ ಕಾಯುತ್ತಾ ನಿಂತ ವರದಿಗಾರರು ನಿರಾಶೆ ಅನುಭವಿಸಬೇಕಾಯಿತು. <br /> ಯಾವುದೇ ಪ್ರಶ್ನೆಗೂ ಉತ್ತರಿಸದ ಪ್ರಣವ್, ಹಣಕಾಸು ಸಚಿವನಾಗಿ ನಾಳೆ ನನ್ನ ಕೊನೆಯ ಸಂದೇಶ ನೀಡುವೆ ಎಂದಷ್ಟೇ ಹೇಳಿ ಹೊರಟುಹೋದರು.</p>.<p>ಕಾಂಗ್ರೆಸ್ ಕಾರ್ಯಕಾರಿಣಿ(ಸಿಡಬ್ಲ್ಯುಸಿ)ಯ ವಿಶೇಷ ಸಭೆ ಮುಗಿಸಿಕೊಂಡು ಮಧ್ಯಾಹ್ನ ಮತ್ತೆ ಕಚೇರಿಗೆ ಅವರು ಮರಳಿದಾಗಲೂ ವರದಿಗಾರರು ಅವರನ್ನು ಆರ್ಥಿಕ ಸುಧಾರಣಾ ಕ್ರಮಗಳ ಕುರಿತು ಪ್ರಶ್ನಿಸಿದರು. `ಪ್ರಕಟಣೆ ಇನ್ನೇನು ಹೊರಬೀಳಲಿದೆ~ ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯಿಸಿದರು. ಆದರೆ, ಸಿಡಬ್ಲ್ಯುಸಿ ಜತೆಗಿನ 32 ವರ್ಷಗಳ ಬಾಂಧವ್ಯವನ್ನು ಪ್ರೀತಿಯಿಂದ ಸ್ಮರಿಸಿದರು. `ಈಗಷ್ಟೇ ಬೀಳ್ಕೊಡುಗೆ ಮುಗಿಸಿಕೊಂಡು ಬಂದೆ~ ಎಂದು ಒಳನಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ): </strong>`ಹಣಕಾಸು ಸಚಿವನಾಗಿ ಮಂಗಳವಾರ ನನ್ನ ಕೊನೆಯ ಸಂದೇಶ ನೀಡುವೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.</p>.<p>ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು 24 ಗಂಟೆಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಸೋಮವಾರ ಇಲ್ಲಿ ವರದಿಗಾರರು ಅವರನ್ನು ಸುತ್ತುವರೆದಾಗ ಪ್ರಣವ್ ಮೇಲಿನಂತೆ ಉತ್ತರಿಸಿದರು.</p>.<p>ನಾರ್ಥ್ ಬ್ಲಾಕ್ನಲ್ಲಿರುವ ಪ್ರಣವ್ ಅವರ ಕಚೇರಿ ಹೊರಗೆ ಸದಾ ದೇಶದ ಆರ್ಥಿಕ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ಪಡೆಯಲು ನಿಲ್ಲುತ್ತಿದ್ದ ಸುದ್ದಿಗಾರರನ್ನು ಅವರು ಯಾವತ್ತೂ ನಿರಾಶೆ ಗೊಳಿಸುತ್ತಿರಲಿಲ್ಲ. ಆದರೆ, ಸೋಮವಾರ ಬೆಳಿಗ್ಗೆ ಪ್ರತಿಕ್ರಿಯೆಗಾಗಿ ಕಾಯುತ್ತಾ ನಿಂತ ವರದಿಗಾರರು ನಿರಾಶೆ ಅನುಭವಿಸಬೇಕಾಯಿತು. <br /> ಯಾವುದೇ ಪ್ರಶ್ನೆಗೂ ಉತ್ತರಿಸದ ಪ್ರಣವ್, ಹಣಕಾಸು ಸಚಿವನಾಗಿ ನಾಳೆ ನನ್ನ ಕೊನೆಯ ಸಂದೇಶ ನೀಡುವೆ ಎಂದಷ್ಟೇ ಹೇಳಿ ಹೊರಟುಹೋದರು.</p>.<p>ಕಾಂಗ್ರೆಸ್ ಕಾರ್ಯಕಾರಿಣಿ(ಸಿಡಬ್ಲ್ಯುಸಿ)ಯ ವಿಶೇಷ ಸಭೆ ಮುಗಿಸಿಕೊಂಡು ಮಧ್ಯಾಹ್ನ ಮತ್ತೆ ಕಚೇರಿಗೆ ಅವರು ಮರಳಿದಾಗಲೂ ವರದಿಗಾರರು ಅವರನ್ನು ಆರ್ಥಿಕ ಸುಧಾರಣಾ ಕ್ರಮಗಳ ಕುರಿತು ಪ್ರಶ್ನಿಸಿದರು. `ಪ್ರಕಟಣೆ ಇನ್ನೇನು ಹೊರಬೀಳಲಿದೆ~ ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯಿಸಿದರು. ಆದರೆ, ಸಿಡಬ್ಲ್ಯುಸಿ ಜತೆಗಿನ 32 ವರ್ಷಗಳ ಬಾಂಧವ್ಯವನ್ನು ಪ್ರೀತಿಯಿಂದ ಸ್ಮರಿಸಿದರು. `ಈಗಷ್ಟೇ ಬೀಳ್ಕೊಡುಗೆ ಮುಗಿಸಿಕೊಂಡು ಬಂದೆ~ ಎಂದು ಒಳನಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>