<p><strong>ಗಂಗಾವತಿ:</strong> ನಗರಸಭೆ ನಿಗದಿ ಪಡಿಸಿದ 35 ಅಡಿಕ್ಕಿಂತಲೂ ಕಡಿಮೆ ಪ್ರಮಾಣ ರಸ್ತೆಯ ಮಧ್ಯ ಭಾಗದಿಂದ ಹಿಂದಕ್ಕೆ ಸರಿದು ನಿಯಮ ಉಲ್ಲಂಘಿಸಿದ `ಫುಡ್ ಬಜಾರ್~ ಪ್ರಕರಣ ಶನಿವಾರ ನಡೆದ ನಗರಸಭಾ ಸದಸ್ಯರ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಪ್ರತಿಧ್ವನಿಸಿತು.<br /> <br /> ನಗರಸಭೆ ವಿಧಿಸಿದ 35ಅಡಿಯ ಬದಲಿಗೆ ಪ್ರಭಾವಿಯೊಬ್ಬರಿಗೆ ಸೇರಿದ `ಫುಡ್ಬಜಾರ~ ಬಹು ವ್ಯಾಪಾರ ಮಳಿಗೆಯ ಮಾಲಿಕ 34ಅಡಿಗೆ ತೆರವು ಸೀಮಿತಗೊಳಿಸಿದ್ದರ ಬಗ್ಗೆ `ಪ್ರಜಾವಾಣಿ~ ಶನಿವಾರ `ಎಲ್ಲರಿಗೊಂದು ಫುಡ್ ಬಜಾರಿಗೊಂದು ಕಾಯ್ದೆ.?~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.<br /> <br /> ಸಭೆ ಆರಂಭವಾಗುತ್ತಿದ್ದಂತೆಯೆ ನಗರಸಭೆಯ ವಿರೋಧ ಪಕ್ಷದ ನಾಯಕ ಮನೋಹರ ಹೇರೂರು, `ಫುಡ್ಬಜಾರ~ ಪ್ರಕರಣದ ವಿಷಯ ಪ್ರಸ್ತಾಪಿಸಿದರು. ವಾಸ್ತವವಾಗಿ ಎಲ್ಲ ವರ್ತಕರಿಗೆ ರಸ್ತೆಯಿಂದ ಎಷ್ಟುಅಡಿ ಹಿಂದಕ್ಕೆ ಸರಿಯಲು ಸೂಚಿಸಿದ್ದೀರಿ ತಿಳಿಸಿ ಎಂದು ಪೌರಾಯುಕ್ತರನ್ನು ಒತ್ತಾಯಿಸಿದರು.<br /> <br /> ರಸ್ತೆ ವಿಸ್ತರಣೆಯಲ್ಲಿ ನಡೆಯುತ್ತಿರುವ ಪಕ್ಷಪಾತ ಧೋರಣೆ, ನಗರಸಭಾ ಸಿಬ್ಬಂದಿ ಅನುಸರಿಸುತ್ತಿರುವ ಸ್ವಜನ ಪಾತ, ಮೇಲಧಿಕಾರಿಗಳ ನಿರ್ಲಕ್ಷ್ಯ ಜನ ಸಾಮಾನ್ಯರಿಗೆ ಗೊತ್ತಾಗುವಂತಾಗಿದೆ. ಈ ಬಗೆಗಿನ `ಪ್ರಜಾವಾಣಿ~ ವರದಿ ನೋಡಿದ್ದೀರಾ ಎಂದರು. <br /> <br /> ಮನೋಹರ ಹೇರೂರು ಅವರ ಪ್ರಶ್ನೆಗೆ ಧ್ವನಿಗೂಡಿಸಿದ ಜೆಡಿಎಸ್ ಸದಸ್ಯ ಕಾಮದೊಡ್ಡಿ ದೇವಪ್ಪ, ರಸ್ತೆ ವಿಸ್ತರಣೆಯಲ್ಲಿ ಗೋಲ್ಮಾಲ್ ನಡೆಯುತ್ತಿರುವ ಬಗ್ಗೆ ಈ ಹಿಂದೆಯೆ ವಾಸನೆ ಬಂದಿತ್ತು. ಪತ್ರಿಕೆಯಲ್ಲಿ ಬಂದ ವರದಿ ಈಗ ಆ ಎಲ್ಲವನ್ನೂ ಬಹಿರಂಗಗೊಳಿಸಿದೆ ಎಂದರು. <br /> <br /> <strong>40 ಅಡಿಗೆ ಒಡೆಸಿ</strong>: ಆಡಳಿತ ಪಕ್ಷದ ಸದಸ್ಯ ಶಾಮಿದ ಮನಿಯಾರ ಮಾತನಾಡಿ, ಮಾರುಕಟ್ಟೆಯಲ್ಲಿರುವ ಏಕೈಕ ಅಲ್ಪಸಂಖ್ಯಾತ ವ್ಯಾಪಾರಿಯ ಕಟ್ಟಡದ ಮೇಲೆ ವಿಪಕ್ಷದವರ ಕಣ್ಣು ಬಿದ್ದಿದೆ. ನೀವೇ ಮುಂದು ನಿಂತು 35 ಅಲ್ಲ, 40-45 ಅಡಿ ಕಟ್ಟಡ ತೆರವು ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಈ ಹಿಂದೆ ನಗರಸಭೆಯಲ್ಲಿ ಚರ್ಚಿಸಿ 40 ಅಡಿ ತೆರವಿಗೆ ಠರಾವು ಪಾಸು ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ, ಸಂಸದ, ಶಾಸಕರೆ ಮುಂದೆ ನಿಂತು 40 ಅಡಿಯ ಬದಲಿಗೆ 35 ಅಡಿಗೆ ನಿಗದಿ ಮಾಡಿದರು. ಈಗಲೂ ಆಡಳಿತರೂಢರಿಗೆ ಅವಕಾಶವಿದೆ. 35ರ ಬದಲಿಗೆ 40ಕ್ಕೇ ಏರಿಸಿ ಎಂದರು.<br /> <br /> <strong>ಜಿಲ್ಲಾಧಿಕಾರಿ ವಿನಾಯ್ತಿ: </strong>ಈ ಬಗ್ಗೆ ಸಭೆಗೆ ಸ್ಪಷ್ಟನೆ ನೀಡಿದ ಪೌರಾಯುಕ್ತ ನಿಂಗಣ್ಣ ಎಚ್. ಕುಮ್ಮಣ್ಣನವರ್, ನಗರಸಭೆ 40 ಅಡಿ ನಿಗದಿ ಮಾಡಿತ್ತು. ಆದರೆ ವರ್ತಕ ಮತ್ತು ಜಿಲ್ಲಾಧಿಕಾರಿ ಮಧ್ಯೆ ನಡೆದ ಸಂಧಾನ ಸಭೆಯ ಬಳಿಕ 35 ಅಡಿಗೆ ವಿಸ್ತರಣೆ ಕಾರ್ಯ ಮಿತಿಗೊಳಿಸಲಾಯಿತು. <br /> <br /> ಹಾಲಿ ಚಾಲ್ತಿಯಲ್ಲಿರುವ 35 ಅಡಿಯ ಆಚೀಚೆ 4ರಿಂದ 8 ಇಂಚುಗಳ ವ್ಯಾಪ್ತಿಯಲ್ಲಿ ಕಟ್ಟಡದ ಮುಖ್ಯ ಪಿಲ್ಲರ್ ಬಂದಲ್ಲಿ ತೆರವು ಮಾಡದಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ ಎಂದು ಪೌರಾಯುಕ್ತರು ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದರು.<br /> <br /> ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು, ಪೌರಾಯುಕ್ತರ ಹೇಳಿಕೆಯನ್ನು ರೆಕಾರ್ಡ್ ಮಾಡಿ ಎಂದು ಒತ್ತಾಯಿಸಿ, ಕಾನೂನು ಹೋರಾಟ ಮಾಡುವುದಾಗಿ ಹೇಳಿದರು. ಪಾಪಣ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುನಿತಾ ಶ್ಯಾವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ನಗರಸಭೆ ನಿಗದಿ ಪಡಿಸಿದ 35 ಅಡಿಕ್ಕಿಂತಲೂ ಕಡಿಮೆ ಪ್ರಮಾಣ ರಸ್ತೆಯ ಮಧ್ಯ ಭಾಗದಿಂದ ಹಿಂದಕ್ಕೆ ಸರಿದು ನಿಯಮ ಉಲ್ಲಂಘಿಸಿದ `ಫುಡ್ ಬಜಾರ್~ ಪ್ರಕರಣ ಶನಿವಾರ ನಡೆದ ನಗರಸಭಾ ಸದಸ್ಯರ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಪ್ರತಿಧ್ವನಿಸಿತು.<br /> <br /> ನಗರಸಭೆ ವಿಧಿಸಿದ 35ಅಡಿಯ ಬದಲಿಗೆ ಪ್ರಭಾವಿಯೊಬ್ಬರಿಗೆ ಸೇರಿದ `ಫುಡ್ಬಜಾರ~ ಬಹು ವ್ಯಾಪಾರ ಮಳಿಗೆಯ ಮಾಲಿಕ 34ಅಡಿಗೆ ತೆರವು ಸೀಮಿತಗೊಳಿಸಿದ್ದರ ಬಗ್ಗೆ `ಪ್ರಜಾವಾಣಿ~ ಶನಿವಾರ `ಎಲ್ಲರಿಗೊಂದು ಫುಡ್ ಬಜಾರಿಗೊಂದು ಕಾಯ್ದೆ.?~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.<br /> <br /> ಸಭೆ ಆರಂಭವಾಗುತ್ತಿದ್ದಂತೆಯೆ ನಗರಸಭೆಯ ವಿರೋಧ ಪಕ್ಷದ ನಾಯಕ ಮನೋಹರ ಹೇರೂರು, `ಫುಡ್ಬಜಾರ~ ಪ್ರಕರಣದ ವಿಷಯ ಪ್ರಸ್ತಾಪಿಸಿದರು. ವಾಸ್ತವವಾಗಿ ಎಲ್ಲ ವರ್ತಕರಿಗೆ ರಸ್ತೆಯಿಂದ ಎಷ್ಟುಅಡಿ ಹಿಂದಕ್ಕೆ ಸರಿಯಲು ಸೂಚಿಸಿದ್ದೀರಿ ತಿಳಿಸಿ ಎಂದು ಪೌರಾಯುಕ್ತರನ್ನು ಒತ್ತಾಯಿಸಿದರು.<br /> <br /> ರಸ್ತೆ ವಿಸ್ತರಣೆಯಲ್ಲಿ ನಡೆಯುತ್ತಿರುವ ಪಕ್ಷಪಾತ ಧೋರಣೆ, ನಗರಸಭಾ ಸಿಬ್ಬಂದಿ ಅನುಸರಿಸುತ್ತಿರುವ ಸ್ವಜನ ಪಾತ, ಮೇಲಧಿಕಾರಿಗಳ ನಿರ್ಲಕ್ಷ್ಯ ಜನ ಸಾಮಾನ್ಯರಿಗೆ ಗೊತ್ತಾಗುವಂತಾಗಿದೆ. ಈ ಬಗೆಗಿನ `ಪ್ರಜಾವಾಣಿ~ ವರದಿ ನೋಡಿದ್ದೀರಾ ಎಂದರು. <br /> <br /> ಮನೋಹರ ಹೇರೂರು ಅವರ ಪ್ರಶ್ನೆಗೆ ಧ್ವನಿಗೂಡಿಸಿದ ಜೆಡಿಎಸ್ ಸದಸ್ಯ ಕಾಮದೊಡ್ಡಿ ದೇವಪ್ಪ, ರಸ್ತೆ ವಿಸ್ತರಣೆಯಲ್ಲಿ ಗೋಲ್ಮಾಲ್ ನಡೆಯುತ್ತಿರುವ ಬಗ್ಗೆ ಈ ಹಿಂದೆಯೆ ವಾಸನೆ ಬಂದಿತ್ತು. ಪತ್ರಿಕೆಯಲ್ಲಿ ಬಂದ ವರದಿ ಈಗ ಆ ಎಲ್ಲವನ್ನೂ ಬಹಿರಂಗಗೊಳಿಸಿದೆ ಎಂದರು. <br /> <br /> <strong>40 ಅಡಿಗೆ ಒಡೆಸಿ</strong>: ಆಡಳಿತ ಪಕ್ಷದ ಸದಸ್ಯ ಶಾಮಿದ ಮನಿಯಾರ ಮಾತನಾಡಿ, ಮಾರುಕಟ್ಟೆಯಲ್ಲಿರುವ ಏಕೈಕ ಅಲ್ಪಸಂಖ್ಯಾತ ವ್ಯಾಪಾರಿಯ ಕಟ್ಟಡದ ಮೇಲೆ ವಿಪಕ್ಷದವರ ಕಣ್ಣು ಬಿದ್ದಿದೆ. ನೀವೇ ಮುಂದು ನಿಂತು 35 ಅಲ್ಲ, 40-45 ಅಡಿ ಕಟ್ಟಡ ತೆರವು ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಈ ಹಿಂದೆ ನಗರಸಭೆಯಲ್ಲಿ ಚರ್ಚಿಸಿ 40 ಅಡಿ ತೆರವಿಗೆ ಠರಾವು ಪಾಸು ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ, ಸಂಸದ, ಶಾಸಕರೆ ಮುಂದೆ ನಿಂತು 40 ಅಡಿಯ ಬದಲಿಗೆ 35 ಅಡಿಗೆ ನಿಗದಿ ಮಾಡಿದರು. ಈಗಲೂ ಆಡಳಿತರೂಢರಿಗೆ ಅವಕಾಶವಿದೆ. 35ರ ಬದಲಿಗೆ 40ಕ್ಕೇ ಏರಿಸಿ ಎಂದರು.<br /> <br /> <strong>ಜಿಲ್ಲಾಧಿಕಾರಿ ವಿನಾಯ್ತಿ: </strong>ಈ ಬಗ್ಗೆ ಸಭೆಗೆ ಸ್ಪಷ್ಟನೆ ನೀಡಿದ ಪೌರಾಯುಕ್ತ ನಿಂಗಣ್ಣ ಎಚ್. ಕುಮ್ಮಣ್ಣನವರ್, ನಗರಸಭೆ 40 ಅಡಿ ನಿಗದಿ ಮಾಡಿತ್ತು. ಆದರೆ ವರ್ತಕ ಮತ್ತು ಜಿಲ್ಲಾಧಿಕಾರಿ ಮಧ್ಯೆ ನಡೆದ ಸಂಧಾನ ಸಭೆಯ ಬಳಿಕ 35 ಅಡಿಗೆ ವಿಸ್ತರಣೆ ಕಾರ್ಯ ಮಿತಿಗೊಳಿಸಲಾಯಿತು. <br /> <br /> ಹಾಲಿ ಚಾಲ್ತಿಯಲ್ಲಿರುವ 35 ಅಡಿಯ ಆಚೀಚೆ 4ರಿಂದ 8 ಇಂಚುಗಳ ವ್ಯಾಪ್ತಿಯಲ್ಲಿ ಕಟ್ಟಡದ ಮುಖ್ಯ ಪಿಲ್ಲರ್ ಬಂದಲ್ಲಿ ತೆರವು ಮಾಡದಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ ಎಂದು ಪೌರಾಯುಕ್ತರು ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದರು.<br /> <br /> ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು, ಪೌರಾಯುಕ್ತರ ಹೇಳಿಕೆಯನ್ನು ರೆಕಾರ್ಡ್ ಮಾಡಿ ಎಂದು ಒತ್ತಾಯಿಸಿ, ಕಾನೂನು ಹೋರಾಟ ಮಾಡುವುದಾಗಿ ಹೇಳಿದರು. ಪಾಪಣ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುನಿತಾ ಶ್ಯಾವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>