<p><strong>ಮುಂಬೈ: </strong>`ಸಾಹಿತ್ಯ ಎಂದೂ ನಿಂತ ನೀರಲ್ಲ. ಅಲ್ಲಿ ಏರಿಳಿತ ಇದ್ದದ್ದೇ. ಇದನ್ನು ನಾವು ಎಲ್ಲ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು. ಭಾಷೆ, ಸಾಹಿತ್ಯದ ಬಗೆಗೆ ಆತಂಕ ಇದ್ದಾಗಲೇ ಆ ಕುರಿತು ಕಾಳಜಿ , ಕ್ರಿಯಾಶೀಲತೆ ಸಾಧ್ಯವಾಗುತ್ತದೆ. ಪ್ರತಿಭೆಗೆ ಕಾಲಮಾನ ಎಂಬುದಿಲ್ಲ. ಪಂಪನಿಂದ ತೊಡಗಿ ಕುವೆಂಪು ಅವರ ವರೆಗೆ ಕನ್ನಡ ಮಹಾನ್ ಪ್ರತಿಭೆಗಳನ್ನು ಕಂಡಿದೆ ಎಂದು ಲೇಖಕ ಡಾ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.<br /> <br /> ಅವರು ಮುಂಬೈ ವಿಶ್ವವಿದ್ಯಾಲಯ ಏರ್ಪಡಿಸಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. `ಅಸಮಾನತೆಯ ವಿರುದ್ಧ, ಶೋಷಣೆಯ ವಿರುದ್ಧ ಕನ್ನಡ ಸಾಹಿತ್ಯದಲ್ಲಿ ಉದ್ದಕ್ಕೂ ಪ್ರತಿಭಟನೆ ವ್ಯಕ್ತವಾದುದುನ್ನು ನಾವು ಕಾಣಬಹುದು. ವಚನಕಾರರು ಬದುಕು ದೊಡ್ಡದೆಂದು ಭಾವಿಸಿ ಬರೆದರು. ಜನಭಾಷೆಯಲ್ಲಿ ಬರೆದರು. <br /> <br /> ಆದರೆ ಇಂದು ವಿಜ್ಞಾನಿಗಳು, ವೈದ್ಯರು, ವಿವಿಧ ಕ್ಷೇತ್ರಗಳ ಪರಿಣತರು ಜನಭಾಷೆಯಲ್ಲಿ ಏನನ್ನೂ ಬರೆಯುತ್ತಿಲ್ಲ ಎಂಬುದು ಖೇದದ ಸಂಗತಿ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>`ಸಾಹಿತ್ಯ ಎಂದೂ ನಿಂತ ನೀರಲ್ಲ. ಅಲ್ಲಿ ಏರಿಳಿತ ಇದ್ದದ್ದೇ. ಇದನ್ನು ನಾವು ಎಲ್ಲ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು. ಭಾಷೆ, ಸಾಹಿತ್ಯದ ಬಗೆಗೆ ಆತಂಕ ಇದ್ದಾಗಲೇ ಆ ಕುರಿತು ಕಾಳಜಿ , ಕ್ರಿಯಾಶೀಲತೆ ಸಾಧ್ಯವಾಗುತ್ತದೆ. ಪ್ರತಿಭೆಗೆ ಕಾಲಮಾನ ಎಂಬುದಿಲ್ಲ. ಪಂಪನಿಂದ ತೊಡಗಿ ಕುವೆಂಪು ಅವರ ವರೆಗೆ ಕನ್ನಡ ಮಹಾನ್ ಪ್ರತಿಭೆಗಳನ್ನು ಕಂಡಿದೆ ಎಂದು ಲೇಖಕ ಡಾ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.<br /> <br /> ಅವರು ಮುಂಬೈ ವಿಶ್ವವಿದ್ಯಾಲಯ ಏರ್ಪಡಿಸಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. `ಅಸಮಾನತೆಯ ವಿರುದ್ಧ, ಶೋಷಣೆಯ ವಿರುದ್ಧ ಕನ್ನಡ ಸಾಹಿತ್ಯದಲ್ಲಿ ಉದ್ದಕ್ಕೂ ಪ್ರತಿಭಟನೆ ವ್ಯಕ್ತವಾದುದುನ್ನು ನಾವು ಕಾಣಬಹುದು. ವಚನಕಾರರು ಬದುಕು ದೊಡ್ಡದೆಂದು ಭಾವಿಸಿ ಬರೆದರು. ಜನಭಾಷೆಯಲ್ಲಿ ಬರೆದರು. <br /> <br /> ಆದರೆ ಇಂದು ವಿಜ್ಞಾನಿಗಳು, ವೈದ್ಯರು, ವಿವಿಧ ಕ್ಷೇತ್ರಗಳ ಪರಿಣತರು ಜನಭಾಷೆಯಲ್ಲಿ ಏನನ್ನೂ ಬರೆಯುತ್ತಿಲ್ಲ ಎಂಬುದು ಖೇದದ ಸಂಗತಿ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>