<p><strong>ಶ್ರೀನಗರ (ಪಿಟಿಐ): </strong>ಗೃಹ ಬಂಧನದಲ್ಲಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳಾದ ಮಿರ್ವಾಯಿಜ್ ಉಮರ್ ಫಾರೂಕ್ ಮತ್ತು ಸೈಯದ್ ಅಲಿ ಷಾ ಗಿಲಾನಿ ಅವರು ನಡೆಸಲು ಉದ್ದೇಶಿಸಿದ್ದ ಜಾಥಾವನ್ನು ಪೊಲೀಸರು ಶನಿವಾರ ವಿಫಲಗೊಳಿಸಿದರು.<br /> <br /> ಹುರಿಯತ್ ಕಾನ್ಫರೆನ್ಸ್ ನಾಯಕ ಮಿರ್ವಾಯಿಜ್ ಅವರು ಶ್ರೀನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಿಂದ ಹೊರ ಬರಲು ಶನಿವಾರ ಮಧ್ಯಾಹ್ನ ಯತ್ನಿಸಿದರು. ತಕ್ಷಣ ಅವರನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆದೊಯ್ದರು.<br /> <br /> ಹೈದರ್ಪೊರ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ ಗಿಲಾನಿ ಹೊರಬರುತ್ತಿದ್ದಂತೆ, ಪೊಲೀಸರು ಅವರನ್ನು ತಡೆದರು. ಆಗ ಗಿಲಾನಿ ತಮ್ಮ ಬೆಂಬಲಿಗರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಧರಣಿ ನಡೆಸಿದರು.<br /> <br /> ಹುರಿಯತ್ ಕಾನ್ಫರೆನ್ಸ್ ಮತ್ತು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆಗಳು ಲಾಲ್ ಚೌಕ ಜಾಥಾಕ್ಕೆ ಕರೆ ನೀಡಿದ್ದವು.<br /> ಕಾಶ್ಮೀರದ ವಾಸ್ತವ ಸ್ಥಿತಿಯನ್ನು ಮುಚ್ಚಿಟ್ಟು ಕೇಂದ್ರ ಸರ್ಕಾರವು ದೇಶದ ಜನ ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ವಂಚಿಸಲು ಯತ್ನಿಸುತ್ತಿದೆ ಎಂದು ಮಿರ್ವಾಯಿಜ್ ಅವರು ಬಂಧನಕ್ಕೂ ಮೊದಲು ಆರೋಪಿಸಿದರು.<br /> <br /> ‘ಕಾಶ್ಮೀರದ ಕೆಲವರು ದಾರಿತಪ್ಪಿದ್ದಾರೆ ಎಂದು ಕೇಂದ್ರ ಹೇಳುತ್ತಿದೆ. ಈಗ ಕಾಶ್ಮೀರದ ಜನರ ಆಲೋಚನೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಜನಮತ ಗಣನೆ ನಡೆಸುವ ದೊಡ್ಡ ಅವಕಾಶ ಕೇಂದ್ರಕ್ಕೆ ಇದೆ’ ಎಂದು ಅವರು ಹೇಳಿದರು.<br /> ‘ಕಾಶ್ಮೀರದ ಜನ ಉದ್ಯೋಗ, ಗುತ್ತಿಗೆ ಅಥವಾ ಸಬ್ಸಿಡಿ ಕೇಳುತ್ತಿಲ್ಲ. ಅವರು ಸ್ವಾತಂತ್ರ್ಯ ಮತ್ತು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.<br /> <br /> ‘ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಯಾರದ್ದೋ ಚಿತಾವಣೆಯಿಂದ ಆಗುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಇದು ಕಾಶ್ಮೀರದ ಜನರ ಚಳವಳಿ. ಇದು ಇಂದು ಅಥವಾ 1947ರಲ್ಲಿ ಆರಂಭವಾಗಿದ್ದಲ್ಲ. ಇದು 1931ರಿಂದಲೂ ನಡೆದು ಬಂದಿದೆ’ ಎಂದು ಹೇಳಿದರು.<br /> <br /> <strong>ಕಾಶ್ಮೀರಿಗಳೂ ನಮ್ಮವರು ಬಿಜೆಪಿ (ನವದೆಹಲಿ ವರದಿ): </strong> ‘ಕಾಶ್ಮೀರ ನಮ್ಮದು ಎನ್ನುವ ಮಾತಿನಲ್ಲಿ, ಕಾಶ್ಮೀರಿಗಳು ನಮ್ಮವರು ಎಂಬ ಅರ್ಥವೂ ಇದೆ. ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇದು ಸಕಾಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.<br /> ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಅಲ್ಲಿನ ಜನರಿಗೆ ಸಂಕಷ್ಟ ತಂದಿವೆ. ಅಲ್ಲಿನ ಜನರ ನೋವಿಗೆ ಇಡೀ ದೇಶ ಮಿಡಿಯುತ್ತದೆ ಎಂದು ಮಾಧವ್ ಅವರು ಕಾಶ್ಮೀರ ಸಮಸ್ಯೆ ಕುರಿತ ಸರ್ವಪಕ್ಷ ಸಭೆಗಾಗಿ ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ ಹೇಳಿದ್ದಾರೆ.</p>.<p><strong>ಶ್ರೀನಗರ: ಕರ್ಫ್ಯೂ ಮುಂದುವರಿಕೆ</strong><br /> <strong>ಶ್ರೀನಗರ (ಪಿಟಿಐ)</strong>: ಪ್ರತ್ಯೇಕತಾವಾದಿಗಳ ಧರಣಿ ವಿಫಲಗೊಳಿಸುವ ಉದ್ದೇಶದಿಂದ ಶ್ರೀನಗರ ಜಿಲ್ಲೆ ಮತ್ತು ಅನಂತನಾಗ್ ಪಟ್ಟಣದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.<br /> <br /> ಇದೇ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿದೆ. ಹಿಂಸಾಚಾರದ ವೇಳೆ ಪೊಲೀಸ್ ಗುಂಡಿಗೆ ತುತ್ತಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.<br /> <br /> ಜನಮತಗಣನೆ ಪರವಾಗಿ ಶ್ರೀನಗರದ ಲಾಲ್ ಚೌಕ್ನಲ್ಲಿ ಶನಿವಾರ ಮತ್ತು ಭಾನುವಾರ ಜಾಥಾ ನಡೆಸಬೇಕು ಎಂದು ಪ್ರತ್ಯೇಕತಾವಾದಿಗಳಾದ ಸೈಯದ್ ಅಲಿ ಷಾ ಗಿಲಾನಿ ಮತ್ತಿತರರು ಕರೆ ನೀಡಿದ್ದರು.<br /> <br /> ಶನಿವಾರ ಕೂಡ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲೆ, ಕಾಲೇಜು, ವಾಣಿಜ್ಯ ಸಂಕೀರ್ಣ, ಪೆಟ್ರೋಲ್ ಬಂಕ್ಗಳು ಮತ್ತು ಖಾಸಗಿ ಕಚೇರಿಗಳು ಮುಚ್ಚಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ (ಪಿಟಿಐ): </strong>ಗೃಹ ಬಂಧನದಲ್ಲಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳಾದ ಮಿರ್ವಾಯಿಜ್ ಉಮರ್ ಫಾರೂಕ್ ಮತ್ತು ಸೈಯದ್ ಅಲಿ ಷಾ ಗಿಲಾನಿ ಅವರು ನಡೆಸಲು ಉದ್ದೇಶಿಸಿದ್ದ ಜಾಥಾವನ್ನು ಪೊಲೀಸರು ಶನಿವಾರ ವಿಫಲಗೊಳಿಸಿದರು.<br /> <br /> ಹುರಿಯತ್ ಕಾನ್ಫರೆನ್ಸ್ ನಾಯಕ ಮಿರ್ವಾಯಿಜ್ ಅವರು ಶ್ರೀನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಿಂದ ಹೊರ ಬರಲು ಶನಿವಾರ ಮಧ್ಯಾಹ್ನ ಯತ್ನಿಸಿದರು. ತಕ್ಷಣ ಅವರನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆದೊಯ್ದರು.<br /> <br /> ಹೈದರ್ಪೊರ ಪ್ರದೇಶದಲ್ಲಿರುವ ತಮ್ಮ ನಿವಾಸದಿಂದ ಗಿಲಾನಿ ಹೊರಬರುತ್ತಿದ್ದಂತೆ, ಪೊಲೀಸರು ಅವರನ್ನು ತಡೆದರು. ಆಗ ಗಿಲಾನಿ ತಮ್ಮ ಬೆಂಬಲಿಗರ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಧರಣಿ ನಡೆಸಿದರು.<br /> <br /> ಹುರಿಯತ್ ಕಾನ್ಫರೆನ್ಸ್ ಮತ್ತು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಸಂಘಟನೆಗಳು ಲಾಲ್ ಚೌಕ ಜಾಥಾಕ್ಕೆ ಕರೆ ನೀಡಿದ್ದವು.<br /> ಕಾಶ್ಮೀರದ ವಾಸ್ತವ ಸ್ಥಿತಿಯನ್ನು ಮುಚ್ಚಿಟ್ಟು ಕೇಂದ್ರ ಸರ್ಕಾರವು ದೇಶದ ಜನ ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ವಂಚಿಸಲು ಯತ್ನಿಸುತ್ತಿದೆ ಎಂದು ಮಿರ್ವಾಯಿಜ್ ಅವರು ಬಂಧನಕ್ಕೂ ಮೊದಲು ಆರೋಪಿಸಿದರು.<br /> <br /> ‘ಕಾಶ್ಮೀರದ ಕೆಲವರು ದಾರಿತಪ್ಪಿದ್ದಾರೆ ಎಂದು ಕೇಂದ್ರ ಹೇಳುತ್ತಿದೆ. ಈಗ ಕಾಶ್ಮೀರದ ಜನರ ಆಲೋಚನೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಜನಮತ ಗಣನೆ ನಡೆಸುವ ದೊಡ್ಡ ಅವಕಾಶ ಕೇಂದ್ರಕ್ಕೆ ಇದೆ’ ಎಂದು ಅವರು ಹೇಳಿದರು.<br /> ‘ಕಾಶ್ಮೀರದ ಜನ ಉದ್ಯೋಗ, ಗುತ್ತಿಗೆ ಅಥವಾ ಸಬ್ಸಿಡಿ ಕೇಳುತ್ತಿಲ್ಲ. ಅವರು ಸ್ವಾತಂತ್ರ್ಯ ಮತ್ತು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.<br /> <br /> ‘ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಯಾರದ್ದೋ ಚಿತಾವಣೆಯಿಂದ ಆಗುತ್ತಿವೆ ಎಂದು ಹೇಳಲಾಗುತ್ತಿದೆ. ಆದರೆ ಇದು ಕಾಶ್ಮೀರದ ಜನರ ಚಳವಳಿ. ಇದು ಇಂದು ಅಥವಾ 1947ರಲ್ಲಿ ಆರಂಭವಾಗಿದ್ದಲ್ಲ. ಇದು 1931ರಿಂದಲೂ ನಡೆದು ಬಂದಿದೆ’ ಎಂದು ಹೇಳಿದರು.<br /> <br /> <strong>ಕಾಶ್ಮೀರಿಗಳೂ ನಮ್ಮವರು ಬಿಜೆಪಿ (ನವದೆಹಲಿ ವರದಿ): </strong> ‘ಕಾಶ್ಮೀರ ನಮ್ಮದು ಎನ್ನುವ ಮಾತಿನಲ್ಲಿ, ಕಾಶ್ಮೀರಿಗಳು ನಮ್ಮವರು ಎಂಬ ಅರ್ಥವೂ ಇದೆ. ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇದು ಸಕಾಲ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.<br /> ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳು ಅಲ್ಲಿನ ಜನರಿಗೆ ಸಂಕಷ್ಟ ತಂದಿವೆ. ಅಲ್ಲಿನ ಜನರ ನೋವಿಗೆ ಇಡೀ ದೇಶ ಮಿಡಿಯುತ್ತದೆ ಎಂದು ಮಾಧವ್ ಅವರು ಕಾಶ್ಮೀರ ಸಮಸ್ಯೆ ಕುರಿತ ಸರ್ವಪಕ್ಷ ಸಭೆಗಾಗಿ ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ ಹೇಳಿದ್ದಾರೆ.</p>.<p><strong>ಶ್ರೀನಗರ: ಕರ್ಫ್ಯೂ ಮುಂದುವರಿಕೆ</strong><br /> <strong>ಶ್ರೀನಗರ (ಪಿಟಿಐ)</strong>: ಪ್ರತ್ಯೇಕತಾವಾದಿಗಳ ಧರಣಿ ವಿಫಲಗೊಳಿಸುವ ಉದ್ದೇಶದಿಂದ ಶ್ರೀನಗರ ಜಿಲ್ಲೆ ಮತ್ತು ಅನಂತನಾಗ್ ಪಟ್ಟಣದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.<br /> <br /> ಇದೇ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿದೆ. ಹಿಂಸಾಚಾರದ ವೇಳೆ ಪೊಲೀಸ್ ಗುಂಡಿಗೆ ತುತ್ತಾಗಿದ್ದ ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.<br /> <br /> ಜನಮತಗಣನೆ ಪರವಾಗಿ ಶ್ರೀನಗರದ ಲಾಲ್ ಚೌಕ್ನಲ್ಲಿ ಶನಿವಾರ ಮತ್ತು ಭಾನುವಾರ ಜಾಥಾ ನಡೆಸಬೇಕು ಎಂದು ಪ್ರತ್ಯೇಕತಾವಾದಿಗಳಾದ ಸೈಯದ್ ಅಲಿ ಷಾ ಗಿಲಾನಿ ಮತ್ತಿತರರು ಕರೆ ನೀಡಿದ್ದರು.<br /> <br /> ಶನಿವಾರ ಕೂಡ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲೆ, ಕಾಲೇಜು, ವಾಣಿಜ್ಯ ಸಂಕೀರ್ಣ, ಪೆಟ್ರೋಲ್ ಬಂಕ್ಗಳು ಮತ್ತು ಖಾಸಗಿ ಕಚೇರಿಗಳು ಮುಚ್ಚಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>