<p><strong>ನವದೆಹಲಿ (ಪಿಟಿಐ): </strong>ಭ್ರಷ್ಟಾಚಾರದ ಪ್ರಮುಖ ಪ್ರಕರಣಗಳ ಬಗ್ಗೆ ತನಿಖೆ ನಡೆಸಲೆಂದೇ ಪ್ರತ್ಯೇಕವಾದ ತನಿಖಾ ತಂಡ ಬೇಕು ಮತ್ತು ಭ್ರಷ್ಟರ ವಿರುದ್ಧ ಕ್ರಮಕ್ಕೆ ಸರ್ಕಾರದ ಹಸ್ತಕ್ಷೇಪ ಇಲ್ಲದಂತೆ ಅಧಿಕಾರ ಚಲಾಯಿಸಲು ಆಯೋಗಕ್ಕೆ ಸ್ವಾಯತ್ತತೆ ನೀಡಬೇಕು ಎಂದು ಕೇಂದ್ರೀಯ ಜಾಗೃತ ಆಯುಕ್ತ ಪ್ರದೀಪ್ಕುಮಾರ್ ಭಾನುವಾರ ಸರ್ಕಾರವನ್ನು ಕೋರಿದರು.<br /> <br /> ಕೇಂದ್ರೀಯ ಜಾಗೃತ ಆಯೋಗದಲ್ಲಿ (ಸಿವಿಸಿ) ಸಿಬ್ಬಂದಿ ಕೊರತೆ ಇರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.<br /> <br /> `ಕೆಲವು ಪ್ರಮುಖ ಪ್ರಕರಣಗಳನ್ನು ಆಯೋಗದಿಂದಲೇ ನೇರವಾಗಿ ತನಿಖೆ ನಡೆಸುವ ಕಾರಣ ಇದಕ್ಕೆಂದೇ ಮೀಸಲಾದ ಪ್ರತ್ಯೇಕ ತನಿಖಾ ತಂಡ ಅಗತ್ಯ~ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.<br /> <br /> `ಇಡೀ ಜಾಗೃತ ವ್ಯವಸ್ಥೆಯ ಆಡಳಿತದ ಬಗ್ಗೆ ಮೇಲ್ವಿಚಾರಣೆ ನಡೆಸಲು ಕಾಯಿದೆ ಪ್ರಕಾರ ಸಿವಿಸಿಗೆ ಅಧಿಕಾರ ಇದೆ. ಆದರೆ ಸಿವಿಸಿ ಈ ಕಾರ್ಯವನ್ನು ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಮಾಡಬೇಕೆಂದು ಕಾಯಿದೆ ಹೇಳಿದ್ದು ಇದು ಆಯೋಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ~ ಎಂದು ಕುಮಾರ್ ಅಭಿಪ್ರಾಯ ಪಟ್ಟರು.<br /> <br /> 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತ ಆಯೋಗದ ವರದಿಯನ್ನು ಮತ್ತಷ್ಟು ತನಿಖೆಗಾಗಿ ಸಿಬಿಐಗೆ ಸಲ್ಲಿಸಲಾಗಿದೆ ಎಂದರು.<br /> <br /> `2ಜಿ ತರಂಗಾಂತರ ಹಂಚಿಕೆಯಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಿವಿಸಿ ತನಿಖೆ ನಡೆಸಿದೆ. 2009ರ ಸೆಪ್ಟೆಂಬರ್ನಲ್ಲಿ ವರದಿ ಸಿದ್ಧವಾಗಿತ್ತು. 2ಜಿ ಪರವಾನಗಿಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಕೆಲವು ದೋಷಗಳಿರುವ ಬಗ್ಗೆ ವರದಿಯಲ್ಲಿ ಸೂಚಿಸಿದ್ದು ಮುಂದಿನ ತನಿಖೆಗೆ ಸಿಬಿಐಗೆ ಒಪ್ಪಿಸಲಾಗಿದೆ. ಈಗ ಸಿಬಿಐ ತನಿಖೆ ನಡೆಸುತ್ತಿದೆ~ ಎಂದು ಕುಮಾರ್ ಹೇಳಿದರು.<br /> <br /> `3ಜಿ ಹಂಚಿಕೆ ಕುರಿತು ನಾವು ಯಾವುದೇ ತನಿಖೆ ನಡೆಸುತ್ತಿಲ್ಲ~ ಎಂದರು.ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಯೋಜನೆಗಳ ತನಿಖೆ ಬಗ್ಗೆ ಅವರು, ಸುಮಾರು ರೂ 3,300 ಕೋಟಿ ಮೊತ್ತದ ಅವ್ಯವಹಾರವನ್ನು ಆಯೋಗ ಪತ್ತೆ ಹಚ್ಚಿದೆ ಎಂದು ತಿಳಿಸಿದರು.<br /> <br /> `ಆಯೋಗವು ತನಿಖೆಗಾಗಿ ಐದು ಕಾಮಗಾರಿಗಳನ್ನು ಸಿಬಿಐಗೆ ಹಸ್ತಾಂತರಿಸಿದ್ದು ಆರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. ಒಂದು ಕಾಮಗಾರಿಯಲ್ಲಿ ಸಿವಿಸಿಯಿಂದಲೇ ನೇರ ತನಿಖೆ ನಡೆಯುತ್ತಿದೆ~ ಎಂದು ವಿವರಿಸಿದರು.<br /> <br /> `ಈ ಪ್ರಕರಣಗಳಲ್ಲಿ ಕಾಮಗಾರಿಗಳನ್ನು ಗುತ್ತಿಗೆ ನೀಡುವಲ್ಲಿ ಗುತ್ತಿಗೆದಾರರಿಗೆ ಅನಾವಶ್ಯಕವಾಗಿ ಲಾಭ ಮಾಡಿಕೊಡಲಾಗಿದೆ, ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಆ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದು ನಮ್ಮ ಪ್ರಮುಖ ಅಭಿಪ್ರಾಯ~ ಎಂದರು.<br /> <br /> ಕೇಂದ್ರೀಯ ಜಾಗೃತ ಆಯೋಗಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಕೋರಿದರು.<br /> <br /> `ಆಯೋಗದಲ್ಲಿ ಕೆಲಸದ ಪ್ರಮಾಣ ಹೆಚ್ಚುತ್ತಿದ್ದು ಸಿಬ್ಬಂದಿ ಸಾಕಾಗುತ್ತಿಲ್ಲ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಸಿವಿಸಿಗೆ ಕಾಯಿದೆ ನೀಡಿಲ್ಲದ ಕಾರಣ ನಾವು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ~ ಎಂದು ಆಯುಕ್ತರು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಭ್ರಷ್ಟಾಚಾರದ ಪ್ರಮುಖ ಪ್ರಕರಣಗಳ ಬಗ್ಗೆ ತನಿಖೆ ನಡೆಸಲೆಂದೇ ಪ್ರತ್ಯೇಕವಾದ ತನಿಖಾ ತಂಡ ಬೇಕು ಮತ್ತು ಭ್ರಷ್ಟರ ವಿರುದ್ಧ ಕ್ರಮಕ್ಕೆ ಸರ್ಕಾರದ ಹಸ್ತಕ್ಷೇಪ ಇಲ್ಲದಂತೆ ಅಧಿಕಾರ ಚಲಾಯಿಸಲು ಆಯೋಗಕ್ಕೆ ಸ್ವಾಯತ್ತತೆ ನೀಡಬೇಕು ಎಂದು ಕೇಂದ್ರೀಯ ಜಾಗೃತ ಆಯುಕ್ತ ಪ್ರದೀಪ್ಕುಮಾರ್ ಭಾನುವಾರ ಸರ್ಕಾರವನ್ನು ಕೋರಿದರು.<br /> <br /> ಕೇಂದ್ರೀಯ ಜಾಗೃತ ಆಯೋಗದಲ್ಲಿ (ಸಿವಿಸಿ) ಸಿಬ್ಬಂದಿ ಕೊರತೆ ಇರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.<br /> <br /> `ಕೆಲವು ಪ್ರಮುಖ ಪ್ರಕರಣಗಳನ್ನು ಆಯೋಗದಿಂದಲೇ ನೇರವಾಗಿ ತನಿಖೆ ನಡೆಸುವ ಕಾರಣ ಇದಕ್ಕೆಂದೇ ಮೀಸಲಾದ ಪ್ರತ್ಯೇಕ ತನಿಖಾ ತಂಡ ಅಗತ್ಯ~ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.<br /> <br /> `ಇಡೀ ಜಾಗೃತ ವ್ಯವಸ್ಥೆಯ ಆಡಳಿತದ ಬಗ್ಗೆ ಮೇಲ್ವಿಚಾರಣೆ ನಡೆಸಲು ಕಾಯಿದೆ ಪ್ರಕಾರ ಸಿವಿಸಿಗೆ ಅಧಿಕಾರ ಇದೆ. ಆದರೆ ಸಿವಿಸಿ ಈ ಕಾರ್ಯವನ್ನು ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಮಾಡಬೇಕೆಂದು ಕಾಯಿದೆ ಹೇಳಿದ್ದು ಇದು ಆಯೋಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ~ ಎಂದು ಕುಮಾರ್ ಅಭಿಪ್ರಾಯ ಪಟ್ಟರು.<br /> <br /> 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತ ಆಯೋಗದ ವರದಿಯನ್ನು ಮತ್ತಷ್ಟು ತನಿಖೆಗಾಗಿ ಸಿಬಿಐಗೆ ಸಲ್ಲಿಸಲಾಗಿದೆ ಎಂದರು.<br /> <br /> `2ಜಿ ತರಂಗಾಂತರ ಹಂಚಿಕೆಯಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸಿವಿಸಿ ತನಿಖೆ ನಡೆಸಿದೆ. 2009ರ ಸೆಪ್ಟೆಂಬರ್ನಲ್ಲಿ ವರದಿ ಸಿದ್ಧವಾಗಿತ್ತು. 2ಜಿ ಪರವಾನಗಿಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಕೆಲವು ದೋಷಗಳಿರುವ ಬಗ್ಗೆ ವರದಿಯಲ್ಲಿ ಸೂಚಿಸಿದ್ದು ಮುಂದಿನ ತನಿಖೆಗೆ ಸಿಬಿಐಗೆ ಒಪ್ಪಿಸಲಾಗಿದೆ. ಈಗ ಸಿಬಿಐ ತನಿಖೆ ನಡೆಸುತ್ತಿದೆ~ ಎಂದು ಕುಮಾರ್ ಹೇಳಿದರು.<br /> <br /> `3ಜಿ ಹಂಚಿಕೆ ಕುರಿತು ನಾವು ಯಾವುದೇ ತನಿಖೆ ನಡೆಸುತ್ತಿಲ್ಲ~ ಎಂದರು.ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದ ಯೋಜನೆಗಳ ತನಿಖೆ ಬಗ್ಗೆ ಅವರು, ಸುಮಾರು ರೂ 3,300 ಕೋಟಿ ಮೊತ್ತದ ಅವ್ಯವಹಾರವನ್ನು ಆಯೋಗ ಪತ್ತೆ ಹಚ್ಚಿದೆ ಎಂದು ತಿಳಿಸಿದರು.<br /> <br /> `ಆಯೋಗವು ತನಿಖೆಗಾಗಿ ಐದು ಕಾಮಗಾರಿಗಳನ್ನು ಸಿಬಿಐಗೆ ಹಸ್ತಾಂತರಿಸಿದ್ದು ಆರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. ಒಂದು ಕಾಮಗಾರಿಯಲ್ಲಿ ಸಿವಿಸಿಯಿಂದಲೇ ನೇರ ತನಿಖೆ ನಡೆಯುತ್ತಿದೆ~ ಎಂದು ವಿವರಿಸಿದರು.<br /> <br /> `ಈ ಪ್ರಕರಣಗಳಲ್ಲಿ ಕಾಮಗಾರಿಗಳನ್ನು ಗುತ್ತಿಗೆ ನೀಡುವಲ್ಲಿ ಗುತ್ತಿಗೆದಾರರಿಗೆ ಅನಾವಶ್ಯಕವಾಗಿ ಲಾಭ ಮಾಡಿಕೊಡಲಾಗಿದೆ, ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಆ ಮೂಲಕ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದು ನಮ್ಮ ಪ್ರಮುಖ ಅಭಿಪ್ರಾಯ~ ಎಂದರು.<br /> <br /> ಕೇಂದ್ರೀಯ ಜಾಗೃತ ಆಯೋಗಕ್ಕೆ ಅಗತ್ಯ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಒದಗಿಸಬೇಕು ಎಂದು ಸರ್ಕಾರವನ್ನು ಕೋರಿದರು.<br /> <br /> `ಆಯೋಗದಲ್ಲಿ ಕೆಲಸದ ಪ್ರಮಾಣ ಹೆಚ್ಚುತ್ತಿದ್ದು ಸಿಬ್ಬಂದಿ ಸಾಕಾಗುತ್ತಿಲ್ಲ. ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ಸಿವಿಸಿಗೆ ಕಾಯಿದೆ ನೀಡಿಲ್ಲದ ಕಾರಣ ನಾವು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ~ ಎಂದು ಆಯುಕ್ತರು ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>